Wednesday 11 November 2020

Specialty in Kannada.. firsts in Kannada




























 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು 

Thursday 26 September 2019

Famous in kannada.. first's in kannada..interesting things in kannada

Kannada
















Must visit places in mysore tourist places in mysore famous places in mysore

Mysore is very beautiful and calm city.. it is also heritage city.. this city also called vity of yoga, cultural capital of Karnataka, heaven of retired people , land of mysore jasmine, land of sandalwood etc....
Must visit places in mysore
• Mysore palace (Ambavilasa palace)
• Jagan mohan palace (this is a art gallery)
• KRS Dam
• Mysore zoo
• Lalith mahal palace
• Karanji lake
• Kukkarahalli lake
• Jayalakshmi vilas palace
• Sand museum
• Shell museum
• Wax museum
• Natural history museum
• Human museum
• Chamundi hill
• Mahabaleshwara temple in chamundi hill
• Bull in chamundi hill
• Rajendra vilasa palace in chamundi hill
• Karanji mansion
• Railway museum
• Postal museum
• Balamuri falls
• Rangana thittu birds sanctuary
• Somanatha pura temple
• Vodgallu ranganatha hill near bannuru
• St philomena church
• Nagarahole national park
• Arabitittu vanyadhama
• Parakala mutt
• Ganapathi sacchidananda temple
• Bonsai park in ganapathi sacchidanda temple
• Shuka vana in ganapathi sacchidananda temple
• Lokaranjan mahal (summer palace of mysore kings)
• Race cource
• Devaraja market
• Big clock ( silver jubilee click)
• Small clock ( Dafarin clock)
• K R Circle
• Dasara exhibition
• Varuna lake water games
• Uttana halli temple (sister of goddess chamundi)
• Clock in mysore university
• Vasanth Mahal
• Children park ( signal park,Gandhi vana)
• Government house

Saturday 6 July 2019

Kannada subhashitagalu ಕನ್ನಡ ಸುಭಾಷಿತಗಳು

ಸುಭಾಷಿತ

• ತೆರಿಗೆ ಕಟ್ಟಿದ ನಂತರ ಉಳಿಸುವ ಒಂದು ಕಾಸು, ನಾವು ಎರಡು ಕಾಸು ಗಳಿಸಿದ್ದಕ್ಕೆ ಸಮ.-----------------ರಂಡಿ ಥರ್ ಮನ್
• ಧ್ಯಾನವು ಅನಂತ ಆನಂದಕ್ಕೆ ಇರುವ ಹೆಬ್ಬಾಗಿಲು.-----------ಸ್ವಾಮಿ ವಿವೇಕಾನಂದ.
• ಯಾವುದನ್ನು ಆರಂಭಿಸಬೇಕಾದರೂ ಮೊದಲು ಭಂಡಾರ ಭದ್ರವಾಗಿರಬೇಕು.---------ಅರ್ಥಶಾಸ್ತ್ರ.
• ದೇವರು ನಮಗೆ ಬೇಕಾಗಿರುವುದು ನಮ್ಮ ಭದ್ರತೆಗಾಗಿ.------------ರಬ್ಬಿ ಲಿಯೋನೆಲ್ ಬ್ಲೂ.
• ನಮಗೆ ಸಿಗದೇ ಇರುವುದನ್ನು ದ್ವೇಷಿಸುವುದು ಬಹಳ ಸುಲಭ. ------------ಈಸೋಪ.
• ನಿಜವಾದ ಯಶಸ್ಸು ಇರುವುದು ಕಾರ್ಯದಕ್ಷತೆಯಲ್ಲಿ. ---------‐------- ರಾಬರ್ಟ್ ಸ್ಟೀವನ್ ಸನ್.
• ಸಿಹಿಯಲ್ಲಿ ಕಹಿ ಇದೆ , ಕೆಟ್ಟದ್ದರಲ್ಲಿ ಒಳ್ಳೆಯದಿದೆ.--------- ಎಮರ್ ಸನ್
• ರಾಜಕೀಯವನ್ನೂ ನೀತಿಯನ್ನು ಬೇರೆ ಬೇರೆ ಎಂದು ಆಶಿಸಿದವರು ಎರಡನ್ನೂ ತಿಳಿದುಕೊಳ್ಳಲಾರರು.---------------ಜಿ.ವಿ.ಮಾರ್ಲೆ.
• ನಾವಿರುವದೇ ಪ್ರಯತ್ನಿಸಲು, ಸಾಹಸ ಮಾಡಲು, ಕಾಣಲು, ಸೋಲನ್ನೊಪ್ಪದೇ ಇರಲು . ------ ----------ಲಾರ್ಡ್ ಟೆನಿಸನ್

Thursday 23 August 2018

Kannada neethikathegalu. Kannada moral stories. Kannada nudimuttugalu ಕನ್ನಡ ಸುಭಾಷಿತಗಳು ಕನ್ನಡ ನುಡಿಮುತ್ತು ಗಳು ಕನ್ನಡ ನೀತಿಕಥೆಗಳು



*1. ನಾವೆಷ್ಟೇ ಸುಂದರ ಮತ್ತು ಹ್ಯಾಂಡ್‌ಸಂ ಆಗಿದ್ದರೂ, ಬಬೂನ್‌ಗಳು ಮತ್ತು ಗೊರಿಲ್ಲಾಗಳು ಕೂಡ ಪ್ರವಾಸಿಗರನ್ನು ಆಕರ್ಷಿಸುತ್ತವೆ ಎಂಬುದನ್ನು ಮರೆಯದಿರೋಣ.*

*ನಮ್ಮನ್ನು ನಾವು ವಿಪರೀತವಾಗಿ ಹೊಗಳಿಕೊಳ್ಳುವುದನ್ನು ಬಿಟ್ಟುಬಿಡೋಣ.*

🌺🌺🌺

*2. ನಾವೆಷ್ಟೇ ಗಟ್ಟಿಯಾಗಿ ಶಕ್ತಿವಂತರಾಗಿದ್ದರೂ ಸರಿಯೇ, ನಮ್ಮನ್ನು ನಾವು ನಮ್ಮ ಸಮಾಧಿಗೆ ಹೊತ್ತುಕೊಂಡು ಹೋಗಲಾರೆವು.*

*ವಿನಮ್ರತೆಯಿಂದಿರೋಣ*

🌼🌼🌼🌼

*3. ನಾವೆಷ್ಟೇ ಎತ್ತರವಿದ್ದರೇನು ನಾಳೆಯನ್ನೆಂದೂ ನೋಡಲಾರೆವು*.

*ತಾಳ್ಮೆಯಿಂದ ಇರೋಣ.*

🌹🌹🌹

*4. ನಾವೆಷ್ಟೇ ಬಿಳುಪಾದ ಚರ್ಮ ಹೊಂದಿರುವವರಾದರೂ ಕತ್ತಲೆಯಲ್ಲಿ ನಮಗೆ ಬೆಳಕು ಬೇಕೇ ಬೇಕು.*

*ಜಾಗರೂಕರಾಗಿರೋಣ*

🌺🌺🌺
*5. ನಾವೆಷ್ಟೇ ಶ್ರೀಮಂತರಾಗಿದ್ದರೂ, ಎಷ್ಟೇ ಕಾರುಗಳನ್ನು ಹೊಂದಿದ್ದರೂ, ನಮ್ಮ ಹಾಸಿಗೆಗೆ ನಾವು ನಡೆಯಲೇಬೇಕು.*

🌼🌼🌼

*ಸಂತೃಪ್ತಿಯಿಂದಿರೋಣ. ಜೀವನವನ್ನು ಆರಾಮವಾಗಿ ತೆಗೆದುಕೊಳ್ಳೋಣ. ಜೀವನ ಬಲು ಚಿಕ್ಕದು.*

*ನಾವು ಜೀವಿಸುವ ಜೀವನ...*

🌻🌻🌻

*ನಮ್ಮನ್ನು ಈ ಬೆಳಗ್ಗೆ ಎಬ್ಬಿಸಿದ್ದು ನಮ್ಮ ಅಲಾರಂ ಗಡಿಯಾರ ಎಂದುಕೊಂಡರೆ, ಅದನ್ನು ಒಂದು ಶವದ ಪಕ್ಕದಲ್ಲಿ ಇಟ್ಟು ನೋಡಿದಾಗ, ದೇವರ ಕೃಪೆಯು ನಮ್ಮನ್ನು ಇಂದು ಎಬ್ಬಿಸಿದ್ದು ಎಂಬ ಸತ್ಯ ಹೊಳೆಯುತ್ತದೆ. ನಾವು ಬದುಕಿರುವುದೇ ಆ ದೇವದೇವನ ಕೃಪೆಯಿಂದಾಗಿ ಎಂಬುದನ್ನು ಅರ್ಥ ಮಾಡಿಕೊಳ್ಳೋಣ.*

*ಯೋಗವು ಒಮ್ಮೇ ಬರುವುದು ನಮಗೆ ಯೋಗ್ಯತೆ ಒಂದೇ ಉಳಿವುದು ಕೊನೆಗೆ*

🌹🌹🌹


*ಕೆಲವರಿಗೆ ನೀವು ಎಷ್ಟೇ ಒಳ್ಳೆಯದನ್ನು ಮಾಡಿ ಒಳ್ಳೆಯದನ್ನೇ ಬಯಸಿ ಅವರಿಗೆ ಅದು ಅರ್ಥವಾಗುವದಿಲ್ಲ ಏಕೆಂದರೆ ಅದಕ್ಕೆ ಅವರು ಯೋಗ್ಯರಾಗಿರುವದಿಲ್ಲ ಹಾಗೆಂದು ಒಳ್ಳೆಯದನ್ನು ಬಯಸುವ ನಿಮ್ಮ ಗುಣವವನ್ನು ಬಿಡಬೇಡಿ. ಬೇರೆಯವರು ಸದ್ಭಾವನೆ ಸ್ವೀಕರಿಸುವದಿದ್ದರೆ ಅದು ನಿಮ್ಮ ತಪ್ಪಲ್ಲ*.



ಒಂದು ದಿನ ಕನಸು, ಜೀವನವನ್ನು ಕೇಳುತ್ತೆ ನಾನು ಯಾವಾಗಲು ನನಸು ಆಗೋದಿಲ್ಲಾ ಯಾಕೆ? ಅಂತಾ...... ಆಗ ಜೀವನ ನಗುತ್ತಾ ಹೇಳುತ್ತೆ, ಪ್ರಯತ್ನ ಪಡದೆ ಎಲ್ಲಾ ಕನಸು ನನಸಾದರೆ ಜೀವನಕ್ಕೆ ಅಥ೯ನೇ ಇರೋದಿಲ್ಲ ಅಂತಾ..*

*💞💞💞 ಶುಭೋದಯ 💞💞💞*
●ಮನೆಗೆ T.V. ಬಂದಾಗ ನಾನು ಪುಸ್ತಕ *ಓದುವುದನ್ನೇ* ಮರೆತೆ.
●ಮನೆಯ ಬಾಗಿಲಿಗೆ ಕಾರು ಬಂದು ನಿಂತಾಗ ನಾನು *ನಡೆಯಲು* ಮರೆತೆ.
●ಮೊಬೈಲ್ ಪೋನ್ ಸಿಕ್ಕಿದಾಗ *ಕಾಗದ ಬರೆಯು*ದನ್ನೇ ಮರೆತೆ.
●Computer ಸಿಕ್ಕಿದಾಗ ನಾನು *spelling*ಗಳನ್ನೇ ಮರೆತೆ.
●ಮನೆಗೆ a/c ಬಂದಾಗ ಮರಗಳ ನೆರಳಿನಲ್ಲಿದ್ದ *ತಂಗಾಳಿ*ಗಳನ್ನೇ ಮರೆತೆ.
●ನಂತರ ನನ್ನ ಜೀವನ ಮಹಾನಗರಕ್ಕೆ ಬದಲಾಯಿಸಿದಾಗ *ಮಣ್ಣಿನ ಗಂಧ*ವನ್ನೇ ಮರೆತೆ.
●ATMಗಳಲ್ಲಿ ಹಣ ವಿನಿಮಯ ಪ್ರಾರಂಭಿಸಿದಾಗ *ಹಣದ ಬೆಲೆ*ಯನ್ನೇ ಮರೆತೆ.
●ಕ್ರತ್ರಿಮ ಸುಗಂಧ ಲೇಪನಗಳನ್ನು ಆಸ್ವಾದಿಸಲು ಪ್ರಾರಂಬಿಸಿದಾಗ ಪುಷ್ಪಗಳ *ಸುಗಂಧವನ್ನೇ* ಮರೆತೆ.
●ಫಾಸ್ಟ್ ಪುಡ್ ತಿನ್ನಲು ಆರಂಭಿಸಿದಾಗ ಮನೆಯ *ದೋಸೆ ಚಟ್ನಿ ಪಾಯಸಗಳ ರುಚಿ*ಗಳನ್ನೇ ಮರೆತೆ.
●ಕೊನೆಗೆ Facebook ಸಿಕ್ಕಿದಾಗ ನಾನು *ಮಾತನಾಡುವುದನ್ನೇ* ಮರೆತು ಬಿಟ್ಟೆ.
●ಈಗ what‘s app ಕೂಡಾ ಸಿಕ್ಕಿದಾಗ *ಕುಳಿತಲ್ಲಿಂದ ಎದ್ದೇಳಲು* ಮರೆತುಬಿಟ್ಟೆ.


*ತಮಾಷೆಯಾದರೂ ನೀತಿ ಇದೆ* ಅಲ್ಲವೇ..!!??

💐 *ಅರ್ಥಪೂರ್ಣ 💐


⚫ *ಮೊದಲ ಬಾರಿ ಯಾರೊ ಒಬ್ಬರು ಪುರುಷರ ಬಗ್ಗೆ ಕೆಲವು ಒಳ್ಳೆಯ ಮಾತುಗಳನ್ನು ಆಡಿದ್ದಾರೆ....!!!!*

▪ *ಪುರುಷ ಎಂದರೆ ಯಾರು?*

▪ *ಪುರುಷ ಎಂದರೆ ದೇವರ ಸೃಷ್ಟಿಯ ಸುಂದರವಾದ ಭಾಗ*

▪ *ಆತ ತನ್ನಲ್ಲಿರುವ ಚೋಕ್ಲೇಟನ್ನು ತನ್ನ ಅಕ್ಕ ತಂಗಿಯರಿಗಾಗಿ ತ್ಯಾಗ ಮಾಡುವವನು..*

▪ *ಆತ ತನ್ನ ಕನಸುಗಳನ್ನು ತನ್ನ ಹೆತ್ತವರ ಮುಖದಲ್ಲಿ ನಗು ತರಿಸಲು ತ್ಯಾಗ ಮಾಡುವವನು..*

▪ *ತನ್ನಲ್ಲಿರುವ ಎಲ್ಲಾ pocket money ಯನ್ನು ತಾನು ಪ್ರೀತಿಸುವ ಹುಡುಗಿಯ ನಗು ನೋಡಲು ಉಡುಗೊರೆ ಖರೀದಿಸಿ ಖಾಲಿ ಮಾಡುವವನು..*

▪ *ತನ್ನ ಇಡೀ ಯೌವನವನ್ನು ತನ್ನ ಪತ್ನಿ ಮಕ್ಕಳಿಗಾಗಿ ತಡರಾತ್ರಿವರೆಗೆ ದುಡಿದು ಸವೆಸುವವನು..*

▪ *ಮುಂದಿನ ಭವಿಷ್ಯಕ್ಕಾಗಿ ಮನೆ ನಿರ್ಮಾಣ ಮಾಡಲು ಬ್ಯಾಂಕಿನಿಂದ loan ತೆಗೆದುಕೊಂಡು ತನ್ನ ಜೀವನ ಪೂರ್ತಿ ಆ ಲೋನ್ ಪಾವತಿಸುವವನು.*

▪ *ಇಷ್ಟೆಲ್ಲಾ ಕಷ್ಟಪಡುತ್ತಿದ್ದರೂ ಆತ ತಾಯಿ, ಪತ್ನಿ ಹಾಗೂ boss ನ ಕೈಯಿಂದ ಬೈಗುಳ ಕೇಳ್ಬೇಕು....*

▪ *ಆತನ ಜೀವನ ಬೇರೆಯವರಿಗೆ ಸಂತೋಷ ನೀಡುವುದರಲ್ಲೇ ಕೊನೆಯಾಗುತ್ತದೆ.....*

▪ *ಒಂದು ವೇಳೆ ಆತ ಹೊರಗಡೆ ಹೋದರೆ ಜವಾಬ್ದಾರಿ ಇಲ್ಲದ ಮನುಷ್ಯ.*

▪ *ಆತ ಮನೆಯಲ್ಲೇ ಇದ್ದರೆ ಸೋಮಾರಿ...*

▪ *ಒಂದು ವೇಳೆ ಮಕ್ಕಳಿಗೆ ಬೈದರೆ ಆತ ರಾಕ್ಷಸ*

▪ *ಮಕ್ಕಳಿಗೆ ಬೈಯ್ಯದಿದ್ದರೆ ಆತ ಜವಾಬ್ದಾರಿ ಇಲ್ಲದ ಮನುಷ್ಯ.*

▪ *ಪತ್ನಿಯನ್ನು ಕೆಲಸದಿಂದ ಬಿಡಿಸಿದರೆ ಪತ್ನಿಯ ಮೇಲೆ ಅಪನಂಬಿಕೆ ಹೊಂದಿರುವ*

▪ *ಒಂದು ವೇಳೆ ಪತ್ನಿಯನ್ನು ಕೆಲಸಕ್ಕೆ ಕಳಿಸಿದರೆ ಪತ್ನಿಯನ್ನು ದುಡಿಸಿ ತಿನ್ನುವವನು...*

▪ *ಒಂದು ವೇಳೆ ತಾಯಿಯ ಮಾತು ಕೇಳಿದರೆ ತಾಯಿಯ ಮಗ*

▪ *ಪತ್ನಿಯ ಮಾತು ಕೇಳಿದರೆ ಹೆಂಡತಿಯ ಗುಲಾಮ*

▪ *ಆತ ನಿಮಗಾಗಿ ಅದೆಷ್ಟು ತ್ಯಾಗ ಮಾಡಿರಬಹುದೆಂಬ ಅರಿವು ನಿಮಗಿರಲಿಕ್ಕಿಲ್ಲ.. ಹಾಗಾಗಿ ಪ್ರತಿ ಪುರುಷರನ್ನು ಗೌರವಿಸಿ..*

*ಪುರುಷ ದಿನಾಚರಣೆ ಯಾಕಿಲ್ಲ*
ನಾವೆಲ್ಲಾ ಸದಾ ಆಸ್ತಿ ಮಾಡುವ ಚಿ0ತೆ ಮಾಡುತ್ತೇವೆ ಆದರೆ ಆ ಆಸ್ತಿ ಹೇಗಿರಬೇಕು ಎ0ಬುದನ್ನು ಯೋಚನೆ ಮಾಡುವುದಿಲ್ಲಾ. ಹಾಗಾದರೆ ಈ ಕೆಳಗೆ ಬರೆದಿರುವುದನ್ನು ಓದಿ ಆಳವಡಿಸಿ ಆನ0ದಮಯವಾಗಿಸಿ ಜೀವನವನ್ನು.
*"ಅಮೂಲ್ಯ ಆಸ್ತಿ"*

1 *ಒಳ್ಳೆಯ ನಡತೆ ಮನುಷ್ಯನ ಆಸ್ತಿ.*

2 *ಒಳ್ಳೆಯ ಮಕ್ಕಳು ತಂದೆ ತಾಯಿಯ ಆಸ್ತಿ.*

3 *ಒಳ್ಳೆಯ ಗುಣ ಮನಸ್ಸಿನ ಆಸ್ತಿ.*

4 *ಒಳ್ಳೆಯ ಸಂಭಂದ ಜೀವನದ ಆಸ್ತಿ.*

5 *ಒಳ್ಳೆಯ ಹವ್ಯಾಸ ಪರಿಸರದ ಆಸ್ತಿ.*

6 *ಒಳ್ಳೆಯ ಪ್ರೀತಿ ಹೃದಯದ ಆಸ್ತಿ.*

7 *ಒಳ್ಳೆಯ ಆಹಾರ ದೇಹದ ಆಸ್ತಿ.*

8 *ಒಳ್ಳೆಯ ಪುಸ್ತಕ ಜ್ಞಾನದ ಆಸ್ತಿ.*

9 *ಒಳ್ಳೆಯ ಗುರು ವಿಶ್ವದ ಆಸ್ತಿ.*

10 *ಒಳ್ಳೆಯ ನಗು ಆರೋಗ್ಯದ ಆಸ್ತಿ.*

11 *ಒಳ್ಳೆಯ ಮಾನವೀಯತೆ ಸಮಾಜದ ಆಸ್ತಿ.*

*ಇವೇ ನಮ್ಮ ನಿಮ್ಮೆಲ್ಲರ ಆಸ್ತಿಯಾಗಿರಲಿ ಎಂದು ಪ್ರಾರ್ಥಿಸೋಣ.*


ಭಗವದ್ಗೀತೆಯನ್ನು ಮೆಚ್ಚಿದರೆ ಬ್ರಾಹ್ಮಣನೆನ್ನುವಿರಿ,🤔

ಅಂಬೇಡ್ಕರ್ ಅವರನ್ನು ಪ್ರೀತಿಸಿದರೆ ದಲಿತನೆನ್ನುವಿರಿ,🤔

ಬಸವಣ್ಣನವರನ್ನು ಅನುಸರಿಸಿದರೆ ಲಿಂಗಾಯಿತನೆನ್ನುವಿರಿ,🤔

ಕೆ೦ಪೇಗೌಡರನ್ನು ಹೊಗಳಿದರೆ ಒಕ್ಕಲಿಗನೆನ್ನುವಿರಿ,🤔

ಕನಕದಾಸರನ್ನು ಹಾಡಿದರೆ ಕುರುಬನೆನ್ನುವಿರಿ,🤔

ವಾಲ್ಮೀಕಿಯನ್ನು ನೆನಪಿಸಿಕೊಂಡರೆ ಬೇಡನೆನ್ನುವಿರಿ,🤔

ವಿಶ್ವಕರ್ಮರನ್ನು ಜ್ಙಾಪಿಸಿಕೊಂಡರೆ ಆಚಾರಿಎನ್ನುವಿರಿ,🤔

ವಚನಕಾರ ಮಾಚಯ್ಯನನ್ನು ಕೊಂಡಾಡಿದರೆ ಮಡಿವಾಳನೆನ್ನುವಿರಿ,🤔

ಬುದ್ಧರನ್ನು ಅಳವಡಿಸಿಕೊಂಡರೆ ಬೌದ್ಧನೆನ್ನುವಿರಿ,🤔

ಮಹಾವೀರರನ್ನು ಇಷ್ಟಪಟ್ಟರೆ ಜ್ಯೆನನೆನ್ನುವಿರಿ, 🤔

ಗುರುನಾನಾಕ್ ರನ್ನು ವ್ಯೆಭವೀಕರಿಸಿದರೆ ಸಿಖ್ಖರೆನ್ನುವಿರಿ,🤔

ಯೇಸುಕ್ರಿಸ್ತರನ್ನು ಅರ್ಥಮಾಡಿಕೊಂಡರೆ ಕ್ರಿಶ್ಚಿಯನ್ ಎನ್ನುವಿರಿ,🤔

ಪ್ಯೆಗಂಬರ್ ಅವರನ್ನು ನಂಬಿದರೆ ಮುಸ್ಲಿಂಮನೆನ್ನುವಿರಿ,🤔

ಉದ್ದನಾಮಕ್ಕೊಂದು ಜಾತಿ, ಅಡ್ಡನಾಮಕ್ಕೊಂದು ಜಾತಿ,🤔

ವಿಭೂತಿಗೊಂದು ಜಾತಿ, ಕುಂಕುಮಕ್ಕೊಂದು ಜಾತಿ,🤔

ಕತ್ತಿನಸರಕ್ಕೊಂದು ಜಾತಿ, ಸೊಂಟದಸರಕ್ಕೊಂದು ಜಾತಿ,🤔

ತುಪ್ಪ ತಿಂದರೆ ಒಂದು ಜಾತಿ, ಮಾಂಸತಿಂದರೆ ಇನ್ನೊಂದು ಜಾತಿ,🤔

ಎರಡೂಕೈ ಜೋಡಿಸಿ ಮುಗಿದರೆ ಒಂದು ಧರ್ಮ,🤔

ಎದೆಯ ಮೇಲೆ ಕೈಯಿಟ್ಟರೆ ಇನ್ನೊಂದು ಧರ್ಮ,🤔

ಬಗ್ಗಿದರೆ ಒಂದು ಧರ್ಮ,🤔

ಮಲಗಿದರೆ ಇನ್ನೊಂದು ಧರ್ಮ,🤔

ಹಸು ತಿಂದರೆ ಒಂದು ಧರ್ಮ,🤔

ಹಂದಿ ತಿಂದರೆ ಇನ್ನೊಂದು ಧರ್ಮ,🤔

ಸೆರಗು ಮುಚ್ಚಿಕೊಂಡರೆ ಒ೦ದು ಧರ್ಮ, 🤔

ಮುಖ ಮುಚ್ಚಿಕೊಂಡರೆ ಇನ್ನೊಂದು ಧರ್ಮ,🤔

ಅಣ್ಣಾ,ಅಪ್ಪಾ, ಅಯ್ಯಾ,ತಂದೆ,ಗುರು,ಗೆಳೆಯ,ಯಾಕಪ್ಪಾ ಇದೆಲ್ಲಾ ,

ಎಲ್ಲರ ದೇಹವೂ ರಕ್ತ, ಮೂಳೆ,ಮಾಂಸ, ಚರ್ಮವಲ್ಲ ಹೊದಿಕೆ,🤷🏼‍♂

ನಾವೇ ಶಾಶ್ವತ ಅಲ್ಲ ಅಂದಮೇಲೆ ಯಾಕ್ರಯ್ಯ ಇಷ್ಟೊಂದು ಭೇಧ,🤗

ಸರಳವಾಗಿ, ಸಹಜವಾಗಿ ಬದುಕೋಣ ,
ಭಾರತೀಯರೆನ್ನೋಣ 🇮🇳

*ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ..*
*...ಪ್ರಬುದ್ಧ ಭಾರತ...*
🙏🏼👍👌🏻 💪🏼🤗🤗

ಸಮಾನತೆಯ ಸಂಕೇತ ಭಾರತೀಯರಾಎಲ್ಲಾ ಸ್ತ್ರೀಯರಿಗೂ ಈ ಬರಹವನ್ನು ಸಮರ್ಪಿಸುತ್ತೇನೆ)

ಒಬ್ಬ ಗುರುಗಳು ಆತನ ಹತ್ತಿರ ಕೇಳುತ್ತಾರೆ
" ನೀವು ಏನು ಕೆಲಸ ಮಾಡುತ್ತಿದ್ದೀರಾ..?

ಆತ - ನಾನು ಬ್ಯಾಂಕ್ ನಲ್ಲಿ ಅಕೌಂಟೆಂಟ್.

ಗುರು - ನಿಮ್ಮ ಪತ್ನಿ ?

ಆತ - ಆಕೆಗೆ ಕೆಲಸವಿಲ್ಲ ಹೌಸ್ ವೈಫ್.

ಗುರು - ಯಾರು ಬೆಳಗಿನ ಟೀ ತಿಂಡಿಗಳನ್ನು ತಯಾರಿಸೋದು?

ಆತ - ನನ್ನ ಪತ್ನಿ , ಯಾಕೆಂದರೆ ಆಕೆಗೆ ಕೆಲಸವಿಲ್ಲ.

ಗುರು - ಟೀ ತಿಂಡಿಗಳನ್ನು ಮಾಡಲು ಆಕೆ ಎಷ್ಟು ಗಂಟೆಗೆ ಏಳುತ್ತಾಳೆ ?

ಆತ - ಐದು ಗಂಟೆಗೆ. ತಿಂಡಿಗಳನ್ನು ಮಾಡೋದಕ್ಕೆ ಮುಂಚೆ ಮನೆಯನ್ನೆಲ್ಲಾ ಕ್ಲೀನ್ ಮಾಡುತ್ತಾಳೆ.

ಗುರು - ನಿಮ್ಮ ಮಕ್ಕಳು ಹೇಗೆ ಶಾಲೆಗೆ ಹೋಗೋದು?

ಆತ - ನನ್ನ ಪತ್ನಿ ಕರಕ್ಕೊಂಡು ಹೋಗುತ್ತಾಳೆ, ಆಕೆಗೆ ಕೆಲಸವಿಲ್ಲ.

ಗುರು - ಮಕ್ಕಳನ್ನು ಶಾಲೆಗೆ ಬಿಟ್ಟು ಬಂದ ನಂತರ ನಿಮ್ಮ ಪತ್ನಿ ಏನು ಮಾಡುತ್ತಾಳೆ?

ಆತ - ಮಾರ್ಕೆಟ್ ಗೆ ಹೋಗುತ್ತಾಳೆ, ಅಲ್ಲಿಂದ ಬಂದು ಮಧ್ಯಾಹ್ನದ ಊಟ ರೆಡಿ ಮಾಡುತ್ತಾಳೆ, ಬಟ್ಟೆಗಳನ್ನು ಒಗೆಯುತ್ತಾಳೆ. ಹೂ ಗಿಡಗಳಿಗೆ ನೀರು ಹಾಕುತ್ತಾಳೆ, ಯಾಕೆಂದರೆ ಆಕೆಗೆ ಕೆಲಸವಿಲ್ಲ.

ಗುರು - ಸಂಜೆ ನೀವು ಮನೆಗೆ ಬಂದು ಏನು ಮಾಡುತ್ತೀರಿ ?

ಆತ - ರೆಸ್ಟ್ ಮಾಡುತ್ತೇನೆ. ಕಾರಣ ನಾನು ಕೆಲಸಕ್ಕೆ ಹೋಗಿ ಬಂದದ್ದರಿಂದ ಸುಸ್ತಾಗಿರುತ್ತೇನೆ.

ಗುರು - ಆಗ ನಿಮ್ಮ ಪತ್ನಿ ಏನು ಮಾಡುತ್ತಾಳೆ ?

ಆತ - ನನಗೆ ಮತ್ತು ಮಕ್ಕಳಿಗೆ ಸಂಜೆಯ ಟೀ ತಿಂಡಿಯನ್ನು ಕೊಟ್ಟು , ರಾತ್ರಿಯ ಊಟ ರೆಡಿಮಾಡಿ ಮಕ್ಕಳಿಗೆ ತಿನ್ನಿಸಿ ನನಗೂ ಬಡಿಸಿಕೊಡುತ್ತಾಳೆ. ನಂತರ ಪಾತ್ರೆಗಳನ್ನೆಲ್ಲಾ ಕ್ಲೀನ್ ಮಾಡಿ ಮಕ್ಕಳಿಗೆ ಪಾಠವನ್ನು ಹೇಳಿಕೊಟ್ಟು ಮಲಗಿಸುತ್ತಾಳೆ.

" ಬೆಳಗಿನಿಂದ ಮಧ್ಯರಾತ್ರಿಯವರೆಗೆ ಕಷ್ಟಪಟ್ಟು ದುಡಿದರೂ ಹೇಳುವುದು ಆಕೆಗೆ ಕೆಲಸವಿಲ್ಲ."

ಹೌಸ್ ವೈಫ್ ಆಗಲು ಯಾವುದೇ ಪದವಿಯ ಅಗತ್ಯವಿಲ್ಲ, ಆದರೆ ಅವರ ಸಾನ್ನಿಧ್ಯ ಬಹಳ ಪ್ರಧಾನವಾಗಿದೆ.

ಮತ್ತೆ ಒಂದು ದಿನ ಗುರುಗಳು ಆತನ ಪತ್ನಿಯ ಬಳಿ ಕೇಳುತ್ತಾರೆ ನೀವು ಕೆಲಸ ಮಾಡುತ್ತಿದ್ದೀರಾ ಅಥವಾ ಹೌಸ್ ವೈಫಾ?

ಆಕೆ - ಹೌದು ನಾನು ಫುಲ್ ಟೈಮ್ ಕೆಲಸ ಮಾಡುವ ಹೌಸ್ ವೈಫ್ ಆಗಿದ್ದೇನೆ.

24 ಗಂಟೆಯಾಗಿದೆ ನನ್ನ ಡ್ಯೂಟಿ.

ನಾನು ಅಮ್ಮನಾಗಿದ್ದೇನೆ,

ನಾನು ಪತ್ನಿಯಾಗಿದ್ದೇನೆ,

ನಾನು ಮಗಳಾಗಿದ್ದೇನೆ,

ನಾನು ಸೊಸೆಯಾಗಿದ್ದೇನೆ,

ನಾನು ಆಲಾರಂ ಆಗಿದ್ದೇನೆ,

ನಾನು ಕುಕ್ ಆಗಿದ್ದೇನೆ,

ನಾನು ದಾಸಿಯಾಗಿದ್ದೇನೆ,

ನಾನು ಟೀಚರ್ ಆಗಿದ್ದೇನೆ,

ನಾನು ವೈಟರ್ ಆಗಿದ್ದೇನೆ,

ನಾನು ದಾದಿಯಾಗಿದ್ದೇನೆ,

ನಾನು ವಾಚ್ ಮೆನ್ ಆಗಿದ್ದೇನೆ,

ನಾನು ಗುರುವಾಗಿದ್ದೇನೆ,

ನನಗೆ ರಜಾದಿನಗಳಿಲ್ಲ,

ನನಗೆ ಮೆಡಿಕಲ್ ರಜೆಗಳಿಲ್ಲ,

ನಾನು ಹಗಲು ಮತ್ತು ರಾತ್ರಿ ದುಡಿಯುವ ಸೇವಕಿಯಾಗಿದ್ದೇನೆ.

ಕೊನೆಗೆ ನನಗೆ ಸಿಗುವ ಸಂಬಳ ಬರೀ ದೂರುಗಳು ಮತ್ತು ಚುಚ್ಚು ಮಾತುಗಳು ಮಾತ್ರ. ..... ನಿಸ್ವಾರ್ಥದಿಂದ ಎಲ್ಲರ ಸಂತೋಷಕ್ಕೆ ಅಂತ ಬದುಕುವ ಒಂದೇ ಒಂದು ಜೀವಾ ಅಂದ್ರೇ ಅದು ಹೆಣ್ಣು ಮಾತ್ರ ಅವರು ಮಾಡಿತ್ತಿರೋ ಎಲ್ಲಾ ತ್ಯಾಗಗಳಿಗೆ ಒಂದ Big Salute
🙏🙏🙏🙏🙏🙏🙏
🍇🍇🍇🍇🍇🍇🍇🍇🍇
ಒತ್ತಡವಿಲ್ಲದ ಉದ್ಯೋಗವಿಲ್ಲ ,
ನಷ್ಟವಿಲ್ಲದ ವ್ಯಾಪಾರವಿಲ್ಲ ,
ಕಷ್ಟವಿಲ್ಲದ ವ್ಯವಸಾಯವಿಲ್ಲ ,
ನೋವಿಲ್ಲದ ಸಂಸಾರವಿಲ್ಲ ,
ಸಮಸ್ಯೆಗಳಿಲ್ಲದ ಮನುಷ್ಯನಿಲ್ಲ ,

ಇವೆಲ್ಲವನ್ನೂ ಜಯಸುವುದೇನೇ
"ಜೀವನ"
🍇🍇🍇🍇🍇🍇🍇🍇🍇
🙏.. ಶುಭೋದಯ.. 🙏

ನಾವು ಭಾಗ್ಯಶಾಲಿಗಳು! ಪುಣ್ಯವಂತರು!!

★ — ★ — ★ — ★ — ★
1947 ರಿಂದ 2000 ರ ಮಧ್ಯೆ ಹುಟ್ಟಿದ ನಾವು ಭಾಗ್ಯಶಾಲಿಗಳು ಹಾಗೂ ಪುಣ್ಯವಂತರು.
ಏಕೆಂದರೆ..


೧. ನಾವು, ಶಾಲೆಗೆ ಪ್ರಾಣಿಗಳಂತೆ ಹೆಣಭಾರದ ಪುಸ್ತಕಗಳನ್ನು ಹೊತ್ತು ಹೋಗಲಿಲ್ಲ.


೨. ಆಟ ಆಡುವಾಗ, ಸೈಕಲ್ ಸವಾರಿ ಮಾಡುವಾಗ ನಮಗೆ ಹೆಲ್ಮೆಟ್ ಧರಿಸಿಕೊಳ್ಳುವ ಧಾವಂತವಿರಲಿಲ್ಲ.


೩. ಶಾಲೆ ಮುಗಿದ ಮೇಲೆ ಮುಸ್ಸಂಜೆಯಾಗುವವರೆಗೂ ಆಟವಾಡುತ್ತಿದ್ದೆವು. ನಮಗೆ ಈ ಟಿವಿ, ಕಂಪ್ಯೂಟರ್ ಗಳ ಗೊಡವೆಯಿರಲಿಲ್ಲ.


೪. ನಮ್ಮ ನಿಜವಾದ ಗೆಳೆಯರೊಂದಿಗಷ್ಟೇ ಆಡಿದೆವು, ಹಾಡಿದೆವು, ಕುಣಿದಾಡಿದೆವು, ಜಗಳಾಡಿದೆವು, ಮಾತಾಡಿದೆವು! ಮುಖ ಮೋರೆ ನೋಡದ, ಎದುರು ಬದುರು ಭೇಟಿಯಾಗದ ಆನ್ ಲೈನ್ ಗೆಳೆಯರೊಂದಿಗಲ್ಲ.


೫. ಬಾಯಾರಿಕೆಯಾದಾಗ ಧಾರಾಳವಾಗಿ ನಲ್ಲಿ ನೀರನ್ನೋ, ಹಳ್ಳದ ನೀರನ್ನೋ, ಕೆರೆ ಬಾವಿಯ ನೀರನ್ನೋ ಕುಡಿದೆವು. ಬಾಟಲಿ ನೀರಿಗಾಗಿ ಹುಡುಕಾಡಲಿಲ್ಲ.


೬. ಒಂದೇ ಹಣ್ಣನ್ನು ನಾಲ್ಕು ಮಂದಿ ಕಚ್ಚಿ ತಿಂದೆವು, ಒಂದೇ ಗ್ಲಾಸಿನಲ್ಲಿ ನಾಲ್ಕು ಮಂದಿ ಕಚ್ಚಿ ಕುಡಿದೆವು. ನಮಗೆ ಯಾವ ರೋಗವೂ ಬರಲಿಲ್ಲ. ಬರುವ ಭೀತಿಯೂ ಇರಲಿಲ್ಲ.


೭. ತಟ್ಟೆ ತುಂಬ ಸಿಹಿ ತಿಂಡಿಗಳನ್ನು ತಿಂದರೂ, ಧಂಡಿಧಂಡಿ ಅನ್ನ ಉಂಡರೂ ನಮ್ಮ ತೂಕ ಹೆಚ್ಚಾಗಲಿಲ್ಲ.


೮. ಬರಿಗಾಲಲ್ಲೇ ಊರು ಸುತ್ತಿದರೂ, ನಮ್ಮ ಪಾದಗಳಿಗೇನೂ ಆಗಲಿಲ್ಲ, ಕ್ರಿಮಿ ಕೀಟಗಳು ಅಂಟಿಕೊಳ್ಳಲಿಲ್ಲ.


೯. ವಿಟಮಿನ್, ಪ್ರೋಟೀನ್, ಕಬ್ಬಿಣ, ಕ್ಯಾಲ್ಸಿಯಂ, ಸೋಡಿಯಂ, ಪೊಟ್ಯಾಶಿಯಂ, ಮಣ್ಣು ಮಸಿ ಮಣ್ಣಾಂಗಟ್ಟಿ ಅಂತ ಮಾತ್ರೆ ನುಂಗಲಿಲ್ಲ. ಸಿರಪ್ಪು ಕುಡಿಯಲಿಲ್ಲ. ಆದರೂ ಆರೋಗ್ಯವಾಗೇ ಇದ್ದೆವು.


೧೦. ನಮ್ಮ ಆಟಿಕೆಗಳನ್ನು ನಾವೇ ತಯಾರಿಸಿಕೊಂಡು ಆಡಿದವರು ನಾವು. ಅದಕ್ಕಾಗಿ ಅಪ್ಪ ಅವ್ವ, ಆಂಟಿ ಅಂಕಲ್ಲರು ಸಾವಿರಾರು ರೂಪಾಯಿ ಸುರಿಯಲಿಲ್ಲ.


೧೧. ನಮ್ಮ ಅಪ್ಪ ಅವ್ವ ಅಸಹ್ಯ ಹುಟ್ಟಿಸುವಷ್ಟು ಶ್ರೀಮಂತರಾಗಿರಲಿಲ್ಲ. ಹಣ ಮತ್ತು ಸಂಪತ್ತನ್ನು ಸಂಗ್ರಹಿಸಲೆಂದೇ ಬದುಕಿದವರಲ್ಲ. ಅವರು ಭೋಗದ ವಸ್ತುಗಳನ್ನು ಮೀರಿದ ಪ್ರೀತಿಯನ್ನು ಕೊಟ್ಟರು.


೧೨. ನಾವು ನಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಮೊಬೈಲ್ ಫೋನ್ ಗಳನ್ನು ಉಪಯೋಗಿಸಲಿಲ್ಲ. ಆ, ಈ ಸಂಕೇತಗಳನ್ನು ಬಳಸಲಿಲ್ಲ.


೧೩. ಯಾರೋ ಬರೆದದ್ದನ್ನು ಫಾರ್ವರ್ಡ್ ಮಾಡಲಿಲ್ಲ. ನಾವೇ ಬರೆದೆವು. ನಾವೇ ಓದಿದೆವು. ನೇರವಾಗಿ ಹೇಳಿದೆವು.


೧೪. ನಮ್ಮ ಬಳಿ ಸೆಲ್ ಫೋನ್, ಡಿವಿಡಿ, ಪೆನ್ ಡ್ರೈವ್, ಪ್ಲೇ ಸ್ಟೇಷನ್, ವಿಡಿಯೋ ಗೇಮ್, ಲ್ಯಾಪ್ ಟಾಪ್, ಇಂಟರ್ ನೆಟ್ ಗಳಿರಲಿಲ್ಲ. ಗೆಳೆಯರಿದ್ದರು..!


೧೫. ನಮ್ಮ ಸಂಬಂಧಿಕರ ಮನೆಗೆ, ಅಜ್ಜಿ ಮನೆಗೆ ನಮಗೆ ಬೇಕು ಬೇಕಾದಾಗಲೆಲ್ಲ ಹೋಗಿ ಬರುತ್ತಿದ್ದೆವು. ಕಾಲ್ ಮಾಡಿ ಪರ್ಮಿಷನ್ ಕೇಳಬೇಕಾದ ಪರಿಸ್ಥಿತಿಯಿರಲಿಲ್ಲ.


೧೬. ನಮ್ಮ ಜೊತೆಯಲ್ಲಿ ಬಂಧು ಮಿತ್ರರು, ಹಿತೈಷಿಗಳೂ ಇದ್ದರು. ಇನ್ಷೂರನ್ಸ್ ಇಲ್ಲದೆಯೂ ನಾವು ಬದುಕಬಹುದಿತ್ತು.


೧೭. ನಮ್ಮ ಅಪ್ಪ ಅವ್ವನಿಗಿಂತ ನಾವೇ ತಿಳಿದವರೆಂಬ ಭಾವನೆ ನಮಗೆಂದೂ ಬರಲಿಲ್ಲ.
ಆದರೆ, ನಮ್ಮ ಮಕ್ಕಳು ನಮಗಿಂತ ಬುದ್ಧಿವಂತರು ಎಂದು ಹೆಮ್ಮೆ ಪಡುತ್ತಿದ್ದೇವೆ. ಭಾವನೆಗಳ ಬೆಲೆ ತಿಳಿಯದೆ ಬೆಳೆಯುತ್ತಿದ್ದಾರೆ.


೧೮. ನಮ್ಮ ಫೋಟೋಗಳು ಹೆಚ್ಚಾಗಿ ಬ್ಲಾಕ್ ಆಂಡ್ ವೈಟ್ ಇರಬಹುದು;
ಆದರೆ, ನಮ್ಮ ನೆನಪುಗಳು ಎಷ್ಟೊಂದು ವರ್ಣರಂಜಿತವಾಗಿವೆ!!

ಒಟ್ಟಿನಲ್ಲಿ ನಾವು ಭಾಗ್ಯಶಾಲಿಗಳು!!

ನನ್ನ ಮೊದಲ ತೊದಲ ಮಾತು ನಿನ್ನ ಹೆಸರೇ ತಾನೇ
ಪುಟ್ಟ ಅಂಬೆಗಾಲನಿಟ್ಟು ನಿನ್ನೆಡೆಗೆ ಕೈಚಾಚಿ ಬರುವೆನೆ
ಜಾರಿ ಬಿದ್ದಾಗಲೆಲ್ಲ ನನ್ನ ಕೈ ಹಿಡಿದು ನಡೆಸಿದೆ
ಹಿಡಿ ಮಣ್ಣಿನಂತೆ ಇದ್ದ ಎನ್ನ ಶಿಲ್ಪವಾಗಿ ಮಾಡಿದೆ

ಜೀವನ ಪಯಣದಿ ನಾ ಸಾಗಲು ಮುಂದೆ
ನೀ ನೆರಳಾಗಿ ಬಂದೆ ಸದಾ ಬೆನ್ನ ಹಿಂದೆ
ಕಲ್ಲು ಮುಳ್ಳುಗಳ ದೂರ ಸರಿಸುತಾ ಬಂದೆ
ದಾರಿ ದೀವಿಗೆಯಾಗಿ ಬೆಳಕ ಹರಿಸುತ ನಿಂದೆ

ತ್ಯಾಗ,ಪ್ರೀತಿ ಮಮಕಾರಕೆ ನೀನೆ ಮೂರ್ತ ರೂಪ
ನಿನ್ನ ಪ್ರೇಮ ಸಾಗರದ ನಡುವೆ ನಾನೊಂದು ಸ್ವಾರ್ಥಿ ದ್ವೀಪ
ನೋವನುಂಡು ನಲಿವ ಉಣಿಸೋ ನಿನ್ನ ಪ್ರೀತಿ ಕಡಲು
ಇಂದ್ರನೂ ಹುಡುಕಿ ಹೋದ ಸ್ವರ್ಗ – ತಾಯಿ ಮಡಿಲು

ಜಗದಿ ಒಲವ ಬಣ್ಣಿಸಲು ಕವಿಗಳು ನೂರು ಬೇಕೆ
ಎರಡಕ್ಷರದ ಮಹಾಕಾವ್ಯ “ಅಮ್ಮ” ಎಂದರೆ ಸಾಕೆ..



ಹಿಂದಿನ ಕಾಲದ ಶಿಕ್ಷಕರು ವಿದ್ಯಾರ್ಥಿಗಳಿಗೆ ಕೊಡುತ್ತಿದ್ದ ಶಿಕ್ಷೆಗೆ ಅರ್ಥ ಏನು ಅಂತ ತಿಳಿದುಕೊಳ್ಳೋಣ ;

೧) ಮೊಣಕಾಲು ಮೇಲೆ ನಿಲ್ಲಿಸಿದರೆ
*"ವಿನಯವನ್ನು ರೂಢಿಸಿಕೋ"* ಎಂದರ್ಥ.

೨) *"ಬಾಯಿಯ ಮೇಲೆ ಬೆರಳಿಟ್ಟುಕೋ ಎಂದರೆ ಸ್ವ-ಪ್ರಶಂಸೆ ಮಾಡಿಕೊಳ್ಳಬೇಡ "* ಎಂದು.

೩)ಕಿವಿ ಹಿಡಿದು ನಿಲ್ಲೆಂದರೆ *"ಒಳ್ಳೆಯ ವಿಷಯಗಳನ್ನು ಶ್ರದ್ಧೆಯಿಂದ ಕೇಳು"* ಅಂತ.

೪) ಬೆಂಚಿನ ಮೇಲೆ ನಿಲ್ಲು ಅಂದರೆ *"ಎಲ್ಲರಿಗಿಂತ ಓದಿನಲ್ಲಿ ಮುಂದೆ ಇರು"* ಅಂತರ್ಥ.

೫) ಕೈಯೆತ್ತಿ ನಿಲ್ಲು ಅಂದರೆ
*"ನಿನ್ನ ಗುರಿ ಉನ್ನತವಾಗಿ ನಿಶ್ಚಲವಾಗಿರಲಿ"* ಎಂದು.

೬) ಗೋಡೆಗೆ ಮುಖಮಾಡಿ ನಿಲ್ಲು ಎಂದರೆ *"ಆತ್ಮಾವಲೋಕನ ಮಾಡಿಕೋ"* ಅಂತ.

೭) ತರಗತಿಯ (ಕ್ಲಾಸಿಂದ) ಹೊರಗೆ ನಿಲ್ಲಿಸಿದರೆ *"ಪರಿಸರದ ಜ್ಞಾನ ಪಡೆದುಕೋ"* ಎಂದು.

೮) ಕರಿಹಲಗೆ (ಬ್ಲ್ಯಾಕ್ ಬೋರ್ಡು) ಒರೆಸು ಎಂದರೆ
*"ಯಾವಾಗಲೂ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಇರು"* ಎಂದರ್ಥ.

೯) ಒಂದೇ ವಿಷಯವನ್ನು ಹಲವು ಬಾರಿ ಬರೆಯಲು ಹೇಳಿದರೆ *"ಗೆಲುವು ಸಿಗುವವರೆಗೂ ಪ್ರಯತ್ನಿಸುತ್ತಿರು. ಸೋಲೊಪ್ಪಿಕೊಳ್ಳಬೇಡ"* ಎಂದು.

ಎಷ್ಟು ಚೆನ್ನಾಗಿದೆಯಲ್ವಾ ಶಿಕ್ಷೆಯೆಂಬ ನವರತ್ನಗಳು.
ಗೂಢಾರ್ಥವ ಜೋಡಿಸಿ ಬದುಕ ತಿದ್ದುವ ಗುರುಗಳಿಗೆ ನಮೋನಮಃ 🙏🏻🙏🏻

*ನಿನ್ನ ಬೆಲೆ ಎಷ್ಟು....?*

ಒಬ್ಬ ವ್ಯಕ್ತಿ ದೇವರನ್ನು ಪ್ರಶ್ನಿಸಿದ " *ನನ್ನ ಜೀವನದ ಬೆಲೆ ಏನು* ? "
ಎಂದು.

ಆಗ ದೇವರು ಅವನಿಗೆ ಒಂದು ಕಲ್ಲನ್ನು ಕೊಟ್ಟು *ಈ ಕಲ್ಲಿನ ಬೆಲೆಯನ್ನು ತಿಳಿದುಕೊಂಡು ಬಾ*

*ಆದರೆ ಅದನ್ನು ನೀನು ಮಾರಬಾರದು* ಎಂದು ಹೇಳಿದನಂತೆ.

ಆ ವ್ಯಕ್ತಿ ಒಬ್ಬ ಹಣ್ಣಿನ ವ್ಯಾಪಾರಿಯಲ್ಲಿ ಆ ಕಲ್ಲನ್ನು ತೆಗೆದುಕೊಂಡು ಹೋಗಿ ' ಈ ಕಲ್ಲಿನ ಬೆಲೆ ಎಷ್ಟಿರಬಹುದು ? ' ಎಂದು ಕೇಳಿದನಂತೆ.

ಅದಕ್ಕಾ ಹಣ್ಣಿನ ವ್ಯಾಪಾರಿ "ಈ ಕಲ್ಲಿಗೆ ನಾನು ಒಂದು ೫ ಹಣ್ಣುಗಳನ್ನು ಕೊಡುವೆ.

ಮಾರುತ್ತೀಯಾ?" ಎಂದು ಕೇಳಿದನಂತೆ.

ಆದರೆ ದೇವರು ಆ ಕಲ್ಲನ್ನು ಮಾರಬಾರದೆಂದು ಹೇಳಿದ್ದಾನಲ್ಲಾ! ಹಾಗಾಗಿ ಆ ವ್ಯಕ್ತಿ ಆ ಹಣ್ಣಿನ ವ್ಯಾಪಾರಿಯಿಂದ ಹೊರಟು ಮುಂದೆ ನಡೆದನಂತೆ.

ನಂತರ ಆ ವ್ಯಕ್ತಿ ಒಬ್ಬ ತರಕಾರಿ ವ್ಯಾಪಾರಿಯ ಬಳಿ ಹೋಗಿ '' ಈ ಕಲ್ಲಿನ ಬೆಲೆ ಎಷ್ಟಿರಬಹುದು? " ಎಂದು ಕೇಳಿದನಂತೆ. " ಈ ಕಲ್ಲಿಗೆ ನಾನು ಒಂದು ೧೦ ಕೆ ಜಿ ತರಕಾರಿಯನ್ನು ಕೊಡುವೆ, ಈ ಕಲ್ಲನ್ನು ಮಾರುತ್ತೀಯಾ?" ಎಂದು ಕೇಳಿದನಂತೆ.

ಆದರೆ ದೇವರು ಆ ಕಲ್ಲಿನ ಬೆಲೆಯನ್ನು ಮಾತ್ರ ತಿಳಿದು ಬಾ ಎಂದು ಹೇಳಿದ್ದಾನಲ್ಲ, ಮಾರಬಾರದೆಂದೂ ಹೇಳಿದ್ದಾನಲ್ಲ, ಹಾಗಾಗಿ ಆ ವ್ಯಕ್ತಿ ಆ ತರಕಾರಿ ಮಾರುವವನಿಂದ ಹೊರಟು ಮುನ್ನಡೆದನಂತೆ.

ಇದಾದ ಮೇಲೆ ಆ ವ್ಯಕ್ತಿ ಚಿನ್ನದ ಆಭರಣಗಳ ವ್ಯಾಪಾರಿಯಲ್ಲಿ ಹೋಗಿ '' ಈ ಕಲ್ಲಿನ ಬೆಲೆ ಎಷ್ಟಿರಬಹುದು? " ಎಂದು ಕೇಳಿದನಂತೆ.

ಆ ಕಲ್ಲನ್ನು ನೋಡಿ, ಆಶ್ಚರ್ಯಚಕಿತನಾಗಿ ಆ ಆಭರಣಗಳ ವ್ಯಾಪಾರಿ "ಒಂದು ೫೦ ಲಕ್ಷ ರೂಗಳನ್ನು ಕೊಡುವೆ, ನನಗೆ ಈ ಕಲ್ಲನ್ನು ಮಾರುತ್ತೀಯಾ?" ಎಂದನಂತೆ.

ಇದನ್ನು ಕೇಳಿ ಅಲ್ಲಿಂದ ಮುಂದಕ್ಕೆ ಹೊರಟು ಹೋಗುತ್ತಿರುವ ವ್ಯಕ್ತಿಗೆ "ಹೋಗಲಿ ೪ ಕೋಟಿ ರೂಗಳನ್ನು ಕೊಡುತ್ತೇನೆ" ಎಂದನಂತೆ ಆ ಚಿನ್ನದ ವ್ಯಾಪಾರಿ.

ಆ ವ್ಯಕ್ತಿಯಲ್ಲಿ ಸ್ವಲ್ಪ ಆಸೆ ಮೂಡಿತು.

ಆದರೆ ಆ ಕಲ್ಲನ್ನು ಮಾರಬಾರದೆಂದು ದೇವರು ಹೇಳಿದ್ದನಲ್ಲ, ಹಾಗಾಗಿ ಆ ವ್ಯಕ್ತಿಯು, 'ಇದನ್ನು ಮಾರುವುದಿಲ್ಲ' ಎಂದು ಹೇಳಿ ಮುಂದಕ್ಕೆ ಹೊರಟನಂತೆ.

ಕಡೆಗೆ ನಮ್ಮ ವ್ಯಕ್ತಿ ಒಬ್ಬ 'ವಜ್ರ' ಗಳ ವ್ಯಾಪಾರಿಯಲ್ಲಿಗೆ ಹೋಗಿ " '' ಈ ಕಲ್ಲಿನ ಬೆಲೆ ಎಷ್ಟಿರಬಹುದು? " ಎಂದು ಕೇಳಿದನಂತೆ.

ಆ ವಜ್ರದ ವ್ಯಾಪಾರಿ ಆ ಕಲ್ಲನ್ನು ಬಹುವಾಗಿ ಪರೀಕ್ಷಿಸಿ " ನಿಮಗೆ ಎಲ್ಲಿ ಸಿಕ್ಕಿತು ಇಷ್ಟು ಬೆಲೆಬಾಳುವ ಕಲ್ಲು? " ಎಂದು ಕೇಳಿದನಂತೆ.

ನಾನು ನನ್ನ ಆಸ್ತಿಯನ್ನೆಲ್ಲಾ
ಅಷ್ಟೇ ಏಕೆ ನನ್ನನ್ನೇ ನಾನು ಮಾರಿಕೊಂಡರೂ ಈ ಕಲ್ಲನ್ನು ಕೊಳ್ಳಲು ಸಾಧ್ಯವಿಲ್ಲ. .........

ಕಡೆಗೆ ಈ ಜಗತ್ತನ್ನೆಲ್ಲಾ ಮಾರಿದರೂ ಈ ಕಲ್ಲಿಗೆ ಬೆಲೆಕಟ್ಟಲು ಸಾಧ್ಯವಿಲ್ಲ " ಎಂದನಂತೆ
ಈ ಮಾತನ್ನು ಕೇಳಿ ನಮ್ಮ ವ್ಯಕ್ತಿಗೆ ಏನು ಹೇಳಬೇಕೆಂದು ತೋಚಲೇ ಇಲ್ಲ.

ತಕ್ಷಣ ಆ ಕಲ್ಲನ್ನು ತೆಗೆದುಕೊಂಡು ದೇವರ ಬಳಿ ಬಂದನಂತೆ.

ಆಗ ದೇವರು "ನಿನ್ನ ಜೀವನದ ಬೆಲೆ ಎಷ್ಟು ಎಂದು ಕೇಳಿದೆಯಲ್ಲಾ!!! ನೋಡು ನೀನು ಮೊದಲು ಈ ಕಲ್ಲನ್ನು ಹಣ್ಣಿನ ವ್ಯಾಪಾರಿಯ ಬಳಿ, ನಂತರ ತರಕಾರಿ ವ್ಯಾಪಾರಿಯ ಬಳಿ, ಬಳಿಕ ಚಿನ್ನದ ಆಭರಣಗಳ ವರ್ತಕನ ಬಳಿ ಕೊಂಡು ಹೋಗಿ ತೋರಿಸಿದಾಗ ಅವರುಗಳು ತಮ್ಮ ತಮ್ಮ ಯೋಗ್ಯತೆಗನುಸಾರ ಈ ಕಲ್ಲಿಗೆ ಬೆಲೆ ಕಟ್ಟಿದರು.

ಆದರೆ ಆ ಕಲ್ಲಿನ ನಿಜವಾದ ಬೆಲೆ ಗೊತ್ತಿದ್ದ ವಜ್ರದ ವ್ಯಾಪಾರಿಗೂ ಕೂಡ ಆ ಕಲ್ಲಿಗೆ ಬೆಲೆ ಕಟ್ಟಲಾಗಲಿಲ್ಲ, ಅಲ್ಲವೇ?
ಹಾಗೆಯೇ ನಿನಗೂ ಕೂಡ ಬೆಲೆಕಟ್ಟಲಾಗುವುದಿಲ್ಲ, ನಿನ್ನ ಜೀವನವೂ ' ಅಮೂಲ್ಯ ' ಎಂದರೆ ಬೆಲೆಕಟ್ಟಲಾಗದ್ದು.

ಆದರೆ ಮನುಷ್ಯರು ಅವರವರ ಯೋಗ್ಯತೆಗೆ ಅನುಸಾರವಾಗಿ ನಿನಗೆ ಬೆಲೆ ಕಟ್ಟುತ್ತಾರೆ.

*ಈ ಜಗತ್ತಿನ ಪ್ರತೀ ವಸ್ತುವಿಗೂ ಮಾನವರು ಆ ವಸ್ತು ತಮಗೆ ಯಾವ ರೀತಿ ಉಪಯೋಗಕ್ಕೆ ಬರುತ್ತದೆ ಎನ್ನುವುದರ ಮೇಲೆ ಅದಕ್ಕೆ ಬೆಲೆಕಟ್ಟುತ್ತಾರೆ*.

ನಿನಗೂ ಹಾಗೆ!!!!! ಆದರೆ ಅದು ನಿನ್ನ ಜೀವನದ ನಿಜವಾದ ಬೆಲೆಯಲ್ಲ.

*ಅದು ಅವರುಗಳು ಅವರ ಉಪಯೋಗ, ಅನುಕೂಲ ಮತ್ತು ಯೋಗ್ಯತೆಗನುಸಾರ ಕಟ್ಟುವ ಬೆಲೆ. ಅವರು ಕಟ್ಟುವ ಬೆಲೆ ಕೇವಲ ಅವರ ತೋರುತ್ತದೆ*.

ಆದರೆ, ನಿನ್ನ ಬೆಲೆ ಮತ್ತು ಮೌಲ್ಯ ನನಗೊಬ್ಬನಿಗೇ ಗೊತ್ತು.

ನೀನು ನನಗೆ ಎಂದೆಂದಿಗೂ ಅತ್ಯಮೂಲ್ಯ. ನಿನ್ನ ಜೀವನಕ್ಕೆ ಬೆಲೆಕಟ್ಟಲು ನನ್ನಿಂದಾಗುವುದಿಲ್ಲ " ಎಂದನಂತೆ ಆ ದೇವರೂ ಸಹ.

ಅದಕ್ಕೆ ನಮ್ಮ ಹಿಂದಿನವರು ಹೇಳಿದ್ದು " *ಮಾನವ ಜನ್ಮ ಬಹು ಶ್ರೇಷ್ಠವಾದದ್ದು*" ಎಂದು.

ಹಾಗಾಗಿ *ನಾವು ನಮ್ಮನ್ನು ನಾವೇ ಅಪಮೌಲ್ಯ ಮಾಡಿಕೊಳ್ಳಬಾರದು ಮತ್ತು ನಮ್ಮ ಅಲ್ಪ ಮತಿಯಿಂದ ಅನ್ಯರಿಗೆ ಬೆಲೆ ಕಟ್ಟಲೂ ಬಾರದು.🌼🌹
1. ಕಷ್ಟಗಳನ್ನು ಎದುರಿಸಲು ಮಕ್ಕಳಿಗೆ ಕಲಿಸಿ. ಸಂಘರ್ಷಗಳಿಂದ ಮನುಷ್ಯನ ಸ್ಫೂರ್ತಿ ದೃಢವಾಗುತ್ತದೆ.--------- ವಿಲಿಯಂ ಚಾನಿಂಗ್.
2. ಎಲ್ಲರೂ ತಪ್ಪುಗಳನ್ನು ಮಾಡುತ್ತಾರೆ.ಆದರೆ ಬುದ್ಧಿವಂತರು ಮಾತ್ರ ತಪ್ಪುಗಳಿಂದ ಪಾಠ ಕಲಿಯುತ್ತಾರೆ. -----------ವಿನ್ ಸ್ಟನ್ ಚರ್ಚಿಲ್.
3. ಕನ್ನಡ ಪದಗಳ್ ಆಡೋದ್ನೆಲ್ಲ
ನಿಲ್ಲೀಸ್ ಬುಡಬೇಕ್ ರತ್ನ
ಅಂತ ಔನ್ ಅಂದ್ರೆ - ದೇವ್ರ್ ಆದ್ರ್ ಏನು
ಮಾಡ್ತೀನ್ ಔನ್ಗೆ ಖತ್ನ !
----ಜಿ.ಪಿ.ರಾಜರತ್ನಂ
1. ಪರಿಸ್ಥಿತಿಯು ಪ್ರತಿಕೂಲವಾಗಿರುವಾಗ ಮಾತನಾಡುವುದೂ ಸಾಹಸವೇ. ----------ರಂ.ಶ್ರೀ.ಮುಗಳಿ 

Saturday 11 August 2018

Pudina rice receipes in kannada ಪುದಿನಾ ರೈಸ್. Rice receipes in kannada

ಬೇಕಾದ ಸಾಮಗ್ರಿಗಳು
• ಪುದಿನ ಸೊಪ್ಪು 1 ಕಟ್ಟು
• ಕೊತ್ತಂಬರಿ ಸೊಪ್ಪು 1 ಕಟ್ಟು
• ಹಸಿಮೆಣಸಿನ ಕಾಯಿ 8
• ಶುಂಠಿ 1 ಇಂಚು
• ಬೆಳ್ಳುಳ್ಳಿ 1
• ತೆಂಗಿನಕಾಯಿ ತುರಿ ಸ್ವಲ್ಪ
• ಈರುಳ್ಳಿ 3
• ಟೊಮಾಟೊ 2
• ಗೋಡಂಬಿ 15-20
• ಪಲಾವ್ ಎಲೆ 1
• ಜೀರಿಗೆ 1 ಚಮಚ
• ಏಲಕ್ಕಿ 1
• ಚಕ್ಕೆ 2
• ಲವಂಗ 4
• ಅನಾನಸ್ ಮೊಗ್ಗು 2
• ಎಣ್ಣೆ-ತುಪ್ಪ-- ಅಗತ್ಯಕ್ಕೆ ಅನುಗುಣವಾಗಿ
• ಅಕ್ಕಿ 2 ಗ್ಲಾಸ್ (ಅರ್ಧ ಕೆ.ಜಿ)
• ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ

[ ] ಮಿಕ್ಸಿ ಜಾರ್ ಗೆ ಪುದಿನಾ.,ಕೊತ್ತಂಬರಿ ಸೊಪ್ಪು,ಹಸಿಮೆಣಸಿನ ಕಾಯಿ, ಅರ್ಧ ಈರುಳ್ಳಿ, ಶುಂಠಿ , ಬೆಳ್ಳುಳ್ಳಿ, ತೆಂಗಿನಕಾಯಿ ತುರಿ ಹಾಕಿ ಪೇಸ್ಟ್ ತರಹ ಮಾಡಿಕೊಳ್ಳಬೇಕು.
[ ] ನಂತರ ಕುಕ್ಕರ್ ಗೆ ಎಣ್ಣೆ, ಸ್ವಲ್ಪ ತುಪ್ಪ ಹಾಕಿ ಅದು ಕಾದ ನಂತರ ಪಲಾವ್ ಎಲೆ,ಜೀರಿಗೆ, ಅನಾನಸ್ ಹೂವು, ಏಲಕ್ಕಿ,ಗೋಡಂಬಿ,ಚಕ್ಕೆ ಲವಂಗ,ಹಾಕಿ ನಂತರ ಕತ್ತರಿಸಿದ ಈರುಳ್ಳಿ ಹಾಕಿ ಅದು ಕಂದು ಬಣ್ಣ ಬರುವ ತನಕ ಹುರಿಯಬೇಕು. ನಂತರ ಅದಕ್ಕೆ ಟೊಮಾಟೊ ಹಾಕಿ ಬಾಡಿಸಿ ಅದಕ್ಕೆ ರುಬ್ಬಿದ ಮಸಾಲೆ ಹಾಕಿ ಅದರ ಹಸಿ ವಾಸನೆ ಹೋಗುವವರಿಗೆ ಹುರಿಯಬೇಕು.
[ ] ನಂತರ ಅದಕ್ಕೆ ತೊಳೆದ ಅಕ್ಕಿ ಹಾಕಿ ಒಂದು ನಿಮಿಷ ಹುರಿಯಬೇಕು. ನಂತರ ಅಳತೆಗನುಗುಣವಾಗಿ ನೀರು ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುಕ್ಕರ್ ನಲ್ಲಿ 2 ವಿಷಲ್ ಹಾಕಿಸಬೇಕು.
ಈಗ ರುಚಿ ರುಚಿ ಆದ ಪುದಿನಾ ರೈಸ್ ಸವಿಯಲು ಸಿದ್ದ.

Saturday 7 July 2018

ನೀತಿ ಕತೆಗಳು ಕನ್ನಡ ನೀತಿ ಕತೆಗಳು ಕನ್ನಡ ಸಣ್ಣ ಕತೆಗಳು ನೀತಿ ಕತೆಗಳು kannada neethi kathegalu Kannada nithi kathegalu

*ಸ್ವಾರಸ್ಯವಾದ ಕಥೆ*                               



*ತೋಟದ ದಂಡೆಗುಂಟ ಹಚ್ಚಿದ ಮಾವಿನ ಮರಗಳಲ್ಲಿ ಆ ವರ್ಷ ಸಾಕಷ್ಟು ಕಾಯಿಗಳಾಗಿದ್ದವು. ಮಾಲಿಕನು ಅವುಗಳನ್ನೆಲ್ಲ ಕೋಣೆಯ ಒಣಹುಲ್ಲು ಹಾಸಿನ ಮೇಲೆ ಹರವಿ ಮೇಲೆ ಒಂದಿಷ್ಟು ಹುಲ್ಲು ಹಾಕಿ ಕಂಬಳಿ, ಗೋಣಿಚೀಲ ಹೊದಿಸಿ ಹಣ್ಣು ಮಾಡಲೆಂದು ಇಟ್ಟನು. ವಾರದ ನಂತರ ಕೋಣೆಯೊಳಗಿಂದ ಮಾವಿನ ಹಣ್ಣಿನ ಪರಿಮಳ ಬರಲಾರಂಭಿಸಿತು. ಅವುಗಳಲ್ಲಿ ಎಂಟ್ಹತ್ತು ಕಾಯಿಗಳು ಒಳ್ಳೆ ಹಣ್ಣುಗಳಾಗಿ ತಿನ್ನಲಿಕ್ಕೆ ತಯಾರಾಗಿದ್ದವು. ಉಳಿದವು ಸ್ವಲ್ಪ ಸ್ವಲ್ಪ ಹಣ್ಣುಗಳಾಗಿ ಕೆಲ ದಿನಗಳಲ್ಲಿ ಮಾಗಲಿದ್ದವು. ಅಷ್ಟರಲ್ಲಿ ಮಾಲಿಕನ ದೃಷ್ಟಿ ಒಂದು ಮೂಲೆಯ ಕಡೆಗೆ ಹೊರಳಿತು. ಅಲ್ಲಿ ನಾಲ್ಕೈದು ಕಾಯಿಗಳು ಸಂಪೂರ್ಣ ಹಣ್ಣುಗಳಾಗಿ ಮೇಲ್ಭಾಗದಲ್ಲಿ ಕೊಳೆಯಲಾರಂಭಿಸಿದ್ದವು.* ಅವನು ಆ ಹಣ್ಣುಗಳನ್ನು ಮಾತ್ರ ಅಲ್ಲಿಂದ ಹೊರತೆಗೆದು-
*‘ಇವಷ್ಟನ್ನು ಇಂದು ತಿಂದರಾಯಿತು. ಹೇಗೂ ನಾಳೆಯಿಂದ ಒಳ್ಳೆಯ ಹಣ್ಣುಗಳು ಸಿಗುತ್ತವೆ’ ಎಂದೆಣಿಸಿ ಮೇಲಿನ ಕೊಳೆತ ಭಾಗವನ್ನು ಚಾಕುವಿನಿಂದ ತೆಗೆದು ಅರ್ಧರ್ಧ ಭಾಗವನ್ನು ತಿಂದನು*.
ಮರುದಿನ ಮತ್ತೆ ಐದಾರು ಹಣ್ಣುಗಳು ತಯಾರಾಗಿದ್ದವು. *ಆದರೆ ನಿನ್ನೆ ತಿನ್ನಲು ತಯಾರಾಗಿದ್ದ ಆ ಎಂಟ್ಹತ್ತು ಹಣ್ಣುಗಳು ಇಂದು ಅರ್ಧ ಕೊಳೆತಿದ್ದವು. ಆಗ ಅವುಗಳನ್ನು ಬಿಸಾಡಲು ಮನಸ್ಸಾಗದೆ ಮತ್ತೆ ಅವುಗಳನ್ನಷ್ಟೇ ಹೊರಗೆ ತೆಗೆದು ಅರ್ಧಭಾಗವನ್ನು ತಿಂದ.*
*ಮೂರನೇ ದಿನವೂ ಇದೇ ಪರಿಯಾಯಿತು. ಅಂತೂ ಅವನು ಆ ಎಲ್ಲ ಹಣ್ಣುಗಳನ್ನು ಅರ್ಧಕೊಳೆತ ಸ್ಥಿತಿಯಲ್ಲೇ ತಿಂದ*.
*ನಿಜ ಹೇಳಬೇಕೆಂದರೆ ಅವುಗಳನ್ನು ಕೊಳೆಯಿಸಿಯೇ ತಿಂದ*. ಒಂದು ವೇಳೆ ಮೊದಲನೇ ದಿನವೇ ಧೈರ್ಯಮಾಡಿ, ಯೋಚಿಸಿ ಕೊಳೆತ ಹಣ್ಣುಗಳನ್ನು ಬಿಸಾಡಿ ಒಳ್ಳೆಯ ಹಣ್ಣುಗಳನ್ನು ತಿನ್ನಲಾರಂಭಿಸಿದ್ದರೆ *ಪ್ರತಿದಿನವೂ ಒಳ್ಳೆಯ ಹಣ್ಣುಗಳನ್ನೇ ಅವನು ತಿನ್ನಬಹುದಾಗಿತ್ತಲ್ಲವೇ?*

ನಮ್ಮಲ್ಲಿಯೂ ಬಹುತೇಕರು ಇದೇ ರೀತಿ ಜೀವನ ವ್ಯಯಿಸುತ್ತೇವೆ.
*ನಾಳೆಗೆ ಬೇಕೆಂಬ ದುರಾಶೆಗೆ ಬಲಿಯಾಗಿ ಇಂದಿನ ಸುಖ ಕಳೆದುಕೊಳ್ಳುತ್ತೇವೆ.* ಸುಖವೆನ್ನುವುದು ಬರೀ ಮರೀಚಿಕೆಯಾಗುತ್ತದೆ.
*ಊಟ ಆರಂಭಿಸಿದ ತಕ್ಷಣ ತಂಗುಳ ಏನಾದರೂ ಉಳಿದಿದ್ದರೆ ತೀರಿಸಿ ಆ ಮೇಲೆ ಹಸಿವೆಯುಳಿದಿದ್ದರೆ ಬಿಸಿ ಅನ್ನ ಉಣ್ಣುತ್ತೇವೆ*.
 *ಆ ಉಳಿದ ಬಿಸಿ ಅನ್ನವನ್ನು ಮತ್ತೆ ಮರುದಿನ ತಿನ್ನುತ್ತೇವೆ* ಯಾರಾದರೂ ಉಡುಗೊರೆಯಾಗಿ ಕೊಟ್ಟ *ಒಳ್ಳೆಯ ಪೆನ್ನುಗಳನ್ನು ಬೀರುವಿನಲ್ಲಿಟ್ಟು ಪ್ಲಾಸ್ಟಿಕ್ ಪೆನ್ನಲ್ಲಿ ಬರೆಯುತ್ತೇವೆ*. ಸ್ವಲ್ಪದಿನಗಳ ಬಳಿಕ ನೋಡಿದಾಗ
*ಆ ಒಳ್ಳೆಯ ಪೆನ್ನುಗಳೂ ಬರೆಯಲಾರದ ಸ್ಥಿತಿಗೆ ಬಂದಿರುತ್ತವೆ.*
*ಹೊಸ ಮನೆ ಕಟ್ಟಿಸಿ ಬಾಡಿಗೆಗೆ ಕೊಟ್ಟು ಹಳೆಯ ಚಿಕ್ಕದಾದ ಮನೆಯಲ್ಲಿ ಇರುತ್ತೇವೆ.*
*ಸಮಯವನ್ನೂ ಹೀಗೆ ಕಳೆದು ಸೃಜನಾತ್ಮಕ, ಸಮಾಜಮುಖಿ ಅಥವಾ ಆಧ್ಯಾತ್ಮಿಕ ಕಾರ್ಯದ ಅವಕಾಶ ಬಂದಾಗ ಈಗ ಸಮಯವಿಲ್ಲವೆಂದು ಬಿಡುತ್ತೇವೆ. ಹಾಗಾದರೆ ಜೀವನವನ್ನು ಆನಂದಿಸುವುದು ಯಾವಾಗ?*

ಭಗವದ್ಗೀತೆಯ ಕರ್ಮಯೋಗವು ಜೀವನವನ್ನು ಹೇಗೆ ಜೀವಿಸಬೇಕೆಂದು ಸುಂದರವಾಗಿ ಹೇಳಿದೆ. *ನಾವೆಲ್ಲರೂ ಕರ್ಮ ಮಾಡುತ್ತೇವೆ ಆದರೆ ಅದು ಲೋಭಮಯವಾಗಿರುವ ತಪ್ಪು ನಿರ್ಧಾರಗಳಿಂದಾಗಿ ‘ದೈವ ಕೊಟ್ಟರೂ ದರಿದ್ರತನ ತಪ್ಪಲಿಲ್ಲ’ ಎಂಬಂತೆ ಆಗಿ ಬಿಡುತ್ತದೆ*.
*ಹಾಗಾಗದಂತೆ ಪ್ರಸನ್ನತೆಯಿಂದ ಜೀವಿಸೋಣ*

ಕನ್ನಡ ಸುಭಾಷಿತಗಳು ಕನ್ನಡ ನುಡಿಮುತ್ತು ಗಳು kannada subhashitagalu Kannada nudi muttugalu

💮💮💮
ಮರೆತು ಬಿಡಿ : ನಿಮ್ಮ ಅಸಫಲತೆಯ
ಮರೆತು ಬಿಡಿ : ಬೇರೆಯವರ ತಪ್ಪನ್ನು
ಮರೆತು ಬಿಡಿ : ಹಿಂದಿನ ಕಹಿ ಕ್ಷಣಗಳ

💮💮💮
ಬಿಟ್ಟುಬಿಡಿ : ಇನ್ನೊಬ್ಬರನ್ನು ಕೀಳಾಗಿ ಕಾಣುವುದನು
ಬಿಟ್ಟುಬಿಡಿ : ಇನ್ನೊಬ್ಬರ ಏಳಿಗೆಗೆ ಹೊಟ್ಟೆ ಕಿಚ್ಚನು
ಬಿಟ್ಟುಬಿಡಿ : ಇನ್ನೊಬ್ಬರ ಹಣದ ಆಸೆಯನು
ಬಿಟ್ಟುಬಿಡಿ : ಇನ್ನೊಬ್ಬರ ಅಪಹಾಸ್ಯವನು
ಬಿಟ್ಟುಬಿಡಿ : ಇನ್ನೊಬ್ಬರ ಸಫಲತೆಗೆ ದುಃಖವನು

*💎  ಸುಖ ಜೀವನದ ಮಂತ್ರಗಳು  💎*

1  ಹಿತವಾಗಿ ಮಾತಾಡಿ 👉 ಶಾಂತಿ ಸಿಗುತ್ತದೆ
2 ಅಹಂಕಾರ ಬಿಡಿ 👉  ದೊಡ್ಡವರಾಗುವಿರಿ
3 ಭಕ್ತಿಯಿರಲಿ 👉  ಮುಕ್ತಿ ಸಿಗುತ್ತದೆ
4 ವಿಚಾರ ಮಾಡಿ 👉  ಜ್ಞಾನ ಸಿಗುತ್ತದೆ
5 ಸೇವೆ ಮಾಡಿ 👉  ಶಕ್ತಿ ದೊರೆಯುತ್ತದೆ
6 ಸಹನೆಯಿಂದಿರಿ 👉  ದೈವತ್ವ ದೊರೆಯುತ್ತದೆ
7 ಸಂತೋಷದಿಂದಿರಿ 👉  ಸುಖ ದೊರೆಯುತ್ತದೆ



              👌 ಒಂದೊಳ್ಳೆj ವಿಚಾರ👌

       ಪರಕೆಯ ಕಡ್ಡಿಗಳು ದಾರದಿಂದ ಕಟ್ಟಿದ್ದರೆ ಕಸವನ್ನು ಗುಡಿಸ ಬಹುದು. ಕಡ್ಡಿಗಳೇ ಉದುರಿದರೆ ಅವೇ ಕಸವಾಗುವುದು. ಆದ್ದರಿಂದ ನಾವು ಬಿಡಿಯಾಗಿ ಬೀಳದೆ ಸಂಬಂಧ ಎಂಬ ದಾರದಿಂದ ಒಂದಾಗೋಣ.

🙏🏻🙏🏻💐💐🙏🏻🙏🏻🙏🏻💐💐💐

kannada moral stories in kannada kannada neethi kathegalu Kannada ಕನ್ನಡ ನೀತಿ ಕತೆಗಳು ಕನ್ನಡ ಸಣ್ಣ ಕತೆ ಗಳು ನೀತಿ ಕತೆಗಳು

*ನಿನ್ನ ಬೆಲೆ ಎಷ್ಟು....?*

ಒಬ್ಬ ವ್ಯಕ್ತಿ ದೇವರನ್ನು ಪ್ರಶ್ನಿಸಿದ " *ನನ್ನ ಜೀವನದ ಬೆಲೆ ಏನು* ? "
ಎಂದು.

ಆಗ ದೇವರು ಅವನಿಗೆ ಒಂದು ಕಲ್ಲನ್ನು ಕೊಟ್ಟು *ಈ ಕಲ್ಲಿನ ಬೆಲೆಯನ್ನು ತಿಳಿದುಕೊಂಡು ಬಾ*

*ಆದರೆ ಅದನ್ನು ನೀನು ಮಾರಬಾರದು* ಎಂದು ಹೇಳಿದನಂತೆ.

ಆ ವ್ಯಕ್ತಿ ಒಬ್ಬ ಹಣ್ಣಿನ ವ್ಯಾಪಾರಿಯಲ್ಲಿ ಆ ಕಲ್ಲನ್ನು ತೆಗೆದುಕೊಂಡು ಹೋಗಿ ' ಈ ಕಲ್ಲಿನ ಬೆಲೆ ಎಷ್ಟಿರಬಹುದು ? ' ಎಂದು ಕೇಳಿದನಂತೆ.

ಅದಕ್ಕಾ ಹಣ್ಣಿನ ವ್ಯಾಪಾರಿ "ಈ ಕಲ್ಲಿಗೆ ನಾನು ಒಂದು ೫ ಹಣ್ಣುಗಳನ್ನು ಕೊಡುವೆ.

ಮಾರುತ್ತೀಯಾ?" ಎಂದು ಕೇಳಿದನಂತೆ.

ಆದರೆ ದೇವರು ಆ ಕಲ್ಲನ್ನು ಮಾರಬಾರದೆಂದು ಹೇಳಿದ್ದಾನಲ್ಲಾ! ಹಾಗಾಗಿ ಆ ವ್ಯಕ್ತಿ ಆ ಹಣ್ಣಿನ ವ್ಯಾಪಾರಿಯಿಂದ ಹೊರಟು ಮುಂದೆ ನಡೆದನಂತೆ.

ನಂತರ ಆ ವ್ಯಕ್ತಿ ಒಬ್ಬ ತರಕಾರಿ ವ್ಯಾಪಾರಿಯ ಬಳಿ ಹೋಗಿ '' ಈ ಕಲ್ಲಿನ ಬೆಲೆ ಎಷ್ಟಿರಬಹುದು? " ಎಂದು ಕೇಳಿದನಂತೆ. " ಈ ಕಲ್ಲಿಗೆ ನಾನು ಒಂದು ೧೦ ಕೆ ಜಿ ತರಕಾರಿಯನ್ನು ಕೊಡುವೆ, ಈ ಕಲ್ಲನ್ನು ಮಾರುತ್ತೀಯಾ?" ಎಂದು ಕೇಳಿದನಂತೆ.

ಆದರೆ ದೇವರು ಆ ಕಲ್ಲಿನ ಬೆಲೆಯನ್ನು ಮಾತ್ರ ತಿಳಿದು ಬಾ ಎಂದು ಹೇಳಿದ್ದಾನಲ್ಲ, ಮಾರಬಾರದೆಂದೂ ಹೇಳಿದ್ದಾನಲ್ಲ, ಹಾಗಾಗಿ ಆ ವ್ಯಕ್ತಿ ಆ ತರಕಾರಿ ಮಾರುವವನಿಂದ ಹೊರಟು ಮುನ್ನಡೆದನಂತೆ.

ಇದಾದ ಮೇಲೆ ಆ ವ್ಯಕ್ತಿ ಚಿನ್ನದ ಆಭರಣಗಳ ವ್ಯಾಪಾರಿಯಲ್ಲಿ ಹೋಗಿ '' ಈ ಕಲ್ಲಿನ ಬೆಲೆ ಎಷ್ಟಿರಬಹುದು? " ಎಂದು ಕೇಳಿದನಂತೆ.

ಆ ಕಲ್ಲನ್ನು ನೋಡಿ, ಆಶ್ಚರ್ಯಚಕಿತನಾಗಿ ಆ ಆಭರಣಗಳ ವ್ಯಾಪಾರಿ "ಒಂದು ೫೦ ಲಕ್ಷ ರೂಗಳನ್ನು ಕೊಡುವೆ, ನನಗೆ ಈ ಕಲ್ಲನ್ನು ಮಾರುತ್ತೀಯಾ?" ಎಂದನಂತೆ.

ಇದನ್ನು ಕೇಳಿ ಅಲ್ಲಿಂದ ಮುಂದಕ್ಕೆ ಹೊರಟು ಹೋಗುತ್ತಿರುವ ವ್ಯಕ್ತಿಗೆ "ಹೋಗಲಿ ೪ ಕೋಟಿ ರೂಗಳನ್ನು ಕೊಡುತ್ತೇನೆ" ಎಂದನಂತೆ ಆ ಚಿನ್ನದ ವ್ಯಾಪಾರಿ.

ಆ ವ್ಯಕ್ತಿಯಲ್ಲಿ ಸ್ವಲ್ಪ ಆಸೆ ಮೂಡಿತು.

ಆದರೆ ಆ ಕಲ್ಲನ್ನು ಮಾರಬಾರದೆಂದು ದೇವರು ಹೇಳಿದ್ದನಲ್ಲ, ಹಾಗಾಗಿ ಆ ವ್ಯಕ್ತಿಯು, 'ಇದನ್ನು ಮಾರುವುದಿಲ್ಲ' ಎಂದು ಹೇಳಿ ಮುಂದಕ್ಕೆ ಹೊರಟನಂತೆ.

ಕಡೆಗೆ ನಮ್ಮ ವ್ಯಕ್ತಿ ಒಬ್ಬ 'ವಜ್ರ' ಗಳ ವ್ಯಾಪಾರಿಯಲ್ಲಿಗೆ ಹೋಗಿ " '' ಈ ಕಲ್ಲಿನ ಬೆಲೆ ಎಷ್ಟಿರಬಹುದು? " ಎಂದು ಕೇಳಿದನಂತೆ.

ಆ ವಜ್ರದ ವ್ಯಾಪಾರಿ ಆ ಕಲ್ಲನ್ನು ಬಹುವಾಗಿ ಪರೀಕ್ಷಿಸಿ " ನಿಮಗೆ ಎಲ್ಲಿ ಸಿಕ್ಕಿತು ಇಷ್ಟು ಬೆಲೆಬಾಳುವ ಕಲ್ಲು? " ಎಂದು ಕೇಳಿದನಂತೆ.

ನಾನು ನನ್ನ ಆಸ್ತಿಯನ್ನೆಲ್ಲಾ
ಅಷ್ಟೇ ಏಕೆ ನನ್ನನ್ನೇ ನಾನು ಮಾರಿಕೊಂಡರೂ ಈ ಕಲ್ಲನ್ನು ಕೊಳ್ಳಲು ಸಾಧ್ಯವಿಲ್ಲ. .........

ಕಡೆಗೆ ಈ ಜಗತ್ತನ್ನೆಲ್ಲಾ ಮಾರಿದರೂ ಈ ಕಲ್ಲಿಗೆ ಬೆಲೆಕಟ್ಟಲು ಸಾಧ್ಯವಿಲ್ಲ " ಎಂದನಂತೆ
ಈ ಮಾತನ್ನು ಕೇಳಿ ನಮ್ಮ ವ್ಯಕ್ತಿಗೆ ಏನು ಹೇಳಬೇಕೆಂದು ತೋಚಲೇ ಇಲ್ಲ.

ತಕ್ಷಣ ಆ ಕಲ್ಲನ್ನು ತೆಗೆದುಕೊಂಡು ದೇವರ ಬಳಿ ಬಂದನಂತೆ.

ಆಗ ದೇವರು "ನಿನ್ನ ಜೀವನದ ಬೆಲೆ ಎಷ್ಟು ಎಂದು ಕೇಳಿದೆಯಲ್ಲಾ!!! ನೋಡು ನೀನು ಮೊದಲು ಈ ಕಲ್ಲನ್ನು ಹಣ್ಣಿನ ವ್ಯಾಪಾರಿಯ ಬಳಿ, ನಂತರ ತರಕಾರಿ ವ್ಯಾಪಾರಿಯ ಬಳಿ, ಬಳಿಕ ಚಿನ್ನದ ಆಭರಣಗಳ ವರ್ತಕನ ಬಳಿ ಕೊಂಡು ಹೋಗಿ ತೋರಿಸಿದಾಗ ಅವರುಗಳು ತಮ್ಮ ತಮ್ಮ ಯೋಗ್ಯತೆಗನುಸಾರ ಈ ಕಲ್ಲಿಗೆ ಬೆಲೆ ಕಟ್ಟಿದರು.

ಆದರೆ ಆ ಕಲ್ಲಿನ ನಿಜವಾದ ಬೆಲೆ ಗೊತ್ತಿದ್ದ ವಜ್ರದ ವ್ಯಾಪಾರಿಗೂ ಕೂಡ ಆ ಕಲ್ಲಿಗೆ ಬೆಲೆ ಕಟ್ಟಲಾಗಲಿಲ್ಲ, ಅಲ್ಲವೇ?
ಹಾಗೆಯೇ ನಿನಗೂ ಕೂಡ ಬೆಲೆಕಟ್ಟಲಾಗುವುದಿಲ್ಲ, ನಿನ್ನ ಜೀವನವೂ ' ಅಮೂಲ್ಯ ' ಎಂದರೆ ಬೆಲೆಕಟ್ಟಲಾಗದ್ದು.

ಆದರೆ ಮನುಷ್ಯರು ಅವರವರ ಯೋಗ್ಯತೆಗೆ ಅನುಸಾರವಾಗಿ ನಿನಗೆ ಬೆಲೆ ಕಟ್ಟುತ್ತಾರೆ.

*ಈ ಜಗತ್ತಿನ ಪ್ರತೀ ವಸ್ತುವಿಗೂ ಮಾನವರು ಆ ವಸ್ತು ತಮಗೆ ಯಾವ ರೀತಿ ಉಪಯೋಗಕ್ಕೆ ಬರುತ್ತದೆ ಎನ್ನುವುದರ ಮೇಲೆ ಅದಕ್ಕೆ ಬೆಲೆಕಟ್ಟುತ್ತಾರೆ*.

ನಿನಗೂ ಹಾಗೆ!!!!! ಆದರೆ ಅದು ನಿನ್ನ ಜೀವನದ ನಿಜವಾದ ಬೆಲೆಯಲ್ಲ.

*ಅದು ಅವರುಗಳು ಅವರ ಉಪಯೋಗ, ಅನುಕೂಲ ಮತ್ತು ಯೋಗ್ಯತೆಗನುಸಾರ ಕಟ್ಟುವ ಬೆಲೆ. ಅವರು ಕಟ್ಟುವ ಬೆಲೆ ಕೇವಲ ಅವರ ತೋರುತ್ತದೆ*.

ಆದರೆ, ನಿನ್ನ ಬೆಲೆ ಮತ್ತು ಮೌಲ್ಯ ನನಗೊಬ್ಬನಿಗೇ ಗೊತ್ತು.

ನೀನು ನನಗೆ ಎಂದೆಂದಿಗೂ ಅತ್ಯಮೂಲ್ಯ. ನಿನ್ನ ಜೀವನಕ್ಕೆ ಬೆಲೆಕಟ್ಟಲು ನನ್ನಿಂದಾಗುವುದಿಲ್ಲ " ಎಂದನಂತೆ ಆ ದೇವರೂ ಸಹ.

ಅದಕ್ಕೆ ನಮ್ಮ ಹಿಂದಿನವರು ಹೇಳಿದ್ದು " *ಮಾನವ ಜನ್ಮ ಬಹು ಶ್ರೇಷ್ಠವಾದದ್ದು*" ಎಂದು.

ಹಾಗಾಗಿ *ನಾವು ನಮ್ಮನ್ನು ನಾವೇ ಅಪಮೌಲ್ಯ ಮಾಡಿಕೊಳ್ಳಬಾರದು ಮತ್ತು ನಮ್ಮ ಅಲ್ಪ ಮತಿಯಿಂದ ಅನ್ಯರಿಗೆ ಬೆಲೆ ಕಟ್ಟಲೂ ಬಾರದು.🌼🌹

ನೀತಿ ಕತೆಗಳು ಕನ್ನಡ ಸಣ್ಣ ಕತೆಗಳು ಕನ್ನಡ ನೀತಿ ಕತೆಗಳು moral stories in kannada kannada neethi kathegalu Kannada nithikathegalu

ಮದುವೆ ಮನೆಗಳಲ್ಲಿ ಊಟ ಮಾಡಿರಲಿ ಬಿಡಲಿ.. ತಪ್ಪದೇ ಈ ಕರುಳು ಹಿಂಡುವ ಕಥೆಯನ್ನೊಮ್ಮೆ ಓದಿ..

ಜಾನಕಿಯ ಮದುವೆ ಸಂಭ್ರಮ.. ಮನೆಯ ತುಂಬೆಲ್ಲಾ ಹೆಣ್ಣು ಮಕ್ಕಳು ಲಂಗ ರವಿಕೆ ತೊಟ್ಟು ಓಡಾಡುತ್ತಿದ್ದದ್ದು ಕಾಣುತ್ತಿತ್ತು.. ಅಮ್ಮನೋ ಪುರುಸೊತ್ತಿಲ್ಲದ ಹಾಗೆ ಕೆಲಸದ ಮೇಲೆ ಕೆಲಸ ಮಾಡುತ್ತಲೇ ಇದ್ದಳು..

ಅತ್ತ ಜಾನಕಿಯ ಅಪ್ಪ ನಾಗರಾಜಣ್ಣನಿಗೆ ಗಂಡಿನ ಮನೆಯಿಂದ ಫೋನ್ ಬಂದಿತು.. ನಮಗೆ ಎರೆಡು ಬಸ್ ಹೆಚ್ಚಿಗೆ ಬೇಕು.. ನಮ್ಮ ಕಡೆಯ ನೆಂಟರು ಹೆಚ್ಚಾಗಿದ್ದಾರೆ ಎಂದರು..

ತಡಬಡಾಯಿಸಿಕೊಂಡು.. ಆಯಿತು ಎಂದು ಫೋನ್ ಇಟ್ಟು ಹೋದ ನಾಗರಾಜಣ್ಣ.. ಶೆಟ್ಟರ ಬಳಿ ಅದೇನೋ ಮಾತು ಕತೆಯಾಡುತ್ತಲೇ ಇದ್ದ..

ನಂತರ ಎಲ್ಲರೂ ಮದುವೆ ಮನೆಗೆ ಹೊರಡುವ ಸಮಯ ಬಂದಿತು.. ಜಾನಕಿಯು ಮನೆಯಿಂದ ಬಲಗಾಲಿಟ್ಟು ಹೊರಗೆ ಬಂದದ್ದೇ ಸಾಕಿತ್ತು ಪ್ರೀತಿಯಿಂದ ಸಾಕಿದ ಅಪ್ಪ ಅಮ್ಮನ ಕಣ್ಣಲ್ಲಿ ಕಣ್ಣೀರು ಯಾರನ್ನೂ ಹೇಳದೇ ಕೇಳದೇ ಬಂದು ಸುರಿಯುತಿತ್ತು..

ಈ ಕಣ್ಣೀರೇ ಹೀಗೆ.. ಅದಕ್ಕೇ ಬುದ್ದೀನೇ ಇಲ್ಲ.. ಎಷ್ಟು ಅಳಬಾರದು ಎಂದರೂ ಕೇಳೋದೇ ಇಲ್ಲಾ ಅಲ್ವಾ.. ಅಪ್ಪ ಅಮ್ಮನನ್ನು ನೋಡಿದ ಜಾನಕಿ ಕೂಡ ಅಪ್ಪನನ್ನು ತಬ್ಬಿಕೊಂಡು ಅಳ ತೊಡಗಿದಳು.. ಅಪ್ಪನ ಹೊಸ ಶರ್ಟ್ ಎಲ್ಲಾ ಮಗಳ ಕಣ್ಣೀರು ತಾಕಿ ಕರೆಯಾಯಿತು..

ಮನೆ ಸದಸ್ಯರೆಲ್ಲರೂ ಕಾರ್ ಗೆ ಪೂಜೆ ಮಾಡಿ ಹತ್ತಿದರು.. ಸಂಬಂಧಿಕರೆಲ್ಲರೂ ಬಸ್ ಕಡೆ ಮುಖ ಮಾಡಿದರು.. ಅಬ್ಬಾ 2 ತಾಸಿನ ಜರ್ನಿ.. ಕೊನೆಗೆ ಮದುವೆ ಮಂಟಪ ಸಿಕ್ಕಿತು..

ಆರತಿ ಮಾಡಿ ವಧುವನ್ನು ಮದುವೆಯ ಮಂಟಪಕ್ಕೆ ಕರೆದೊಯ್ದರು.. ಸಂಜೆ ಯಾಗಿದ್ದರಿಂದ ಎಲ್ಲರಿಗೂ ಹೊಟ್ಟೆ ಸ್ವಲ್ಪ ಹಸಿವಲು ಶುರುವಾಯಿತು.. ಗಂಡಿನ ಮನೆಯವರಿಗಾಗಿ ಶಾವಿಗೆ ಉಪ್ಪಿಟ್ಟು ರೆಡಿಯಾಗುತಿತ್ತು.. ಅದರಲ್ಲೇ ಸ್ವಲ್ಪ ತಂದು ಎಲ್ಲರಿಗೂ ಬಡಿಸಿದರು..

ದೂರದಿಂದ ಯಾರೋ ಕೂಗಿದರು.. ನಾಗರಾಜಪ್ಪಾ……. ಎಲ್ಲಿದ್ದೀಯೋ ಮಾರಾಯಾ?? ಇಲ್ಲಿ ಗಂಡಿನ ಕಡೆಯವರು ಬಂದಿದ್ದಾರೆ.. ಏನೂ ಅಡುಗೆ ಮನೆ ಸೇರ್ಕೊಂಡ್ ಚೆನ್ನಾಗಿ ತಿಂತಾ ಕೂತ್ತಿದ್ದೀಯಾ ಅಂದರು..

ತಕ್ಷಣ ಇನ್ನೇನು ಬಾಯಿಗೆ ಮೊದಲ ತುತ್ತು ಇಡಬೇಕೆಂದಿದ್ದ ಶಾವಿಗೆ ಉಪ್ಪಿಟ್ಟನ್ನು ತಟ್ಟೆಯಲ್ಲೇ ಹಾಕಿ.. ಹೆಂಡತಿಗೆ ಕೊಟ್ಟು.. ತಿಂದುಕೋ ವೇಸ್ಟ್ ಆಗಿಬಿಡುತ್ತದೆ.. ಎಂದು ಹೊರ ನಡೆದ.. ಅಮ್ಮನೂ ಗಬಗಬನೇ ಆತುರದಿಂದ ತಿಂದು ಬಂದರು.. ಕಾರಣ ಮಧ್ಯಾಹ್ನ ನಾಗರಾಜಣ್ಣ ಹಾಗೂ ಶ್ರೀಮತಿಯವರು ಏನನ್ನೂ ತಿಂದಿರಲಿಲ್ಲ..

ಅತ್ತಕಡೆ ಗಂಡಿನ ಮನೆಯವರು ಅರಳಿ ಮರದ ಕಟ್ಟೆಯ ಬಳಿ ಕೂತಿದ್ದರು.. ವಾದ್ಯದ ಸಮೇತ ಸಂಬಂಧಿಕರ ಜೊತೆ ನಾಗರಾಜಣ್ಣ ಹೋಗಿ ಕಾಲು ತೊಳೆದು ಗಂಡನ್ನು ಹಾಗೂ ಗಂಡಿನ ಮನೆಯವರನ್ನು ಮದುವೆ ಮಂಟಪಕ್ಕೆ ಕರೆತಂದ..

ಬಂದವರೇ ಗಂಡಿನ ಅಮ್ಮ ನಮಗೇ 6 ರೂಮ್ ಬೇಕು ಎಂದರು.. 4 ಸಾಕು ಎಂದಿದ್ದಿರಲ್ಲಾ ತಾಯಿ ಎಂದು ನಾಗರಾಜಣ್ಣ ಕೇಳಿದ.. ಇಲ್ಲಾ ಇಲ್ಲಾ ನಮಗೆ ನೆಂಟರು ಜಾಸ್ತಿ 6 ರೂಮ್ ಬೇಕಲೇ ಬೇಕು ಎಂದರು..

ಮದುವೆ ಮನೆಯಲ್ಲಿ ವಧು ವರರ ಕೋಣೆ ಬಿಟ್ಟರೇ ಇದ್ದದ್ದೇ 6 ರೂಮು.. ತಕ್ಷಣ ತನ್ನ ಸಂಬಂಧಿಕರನ್ನು ಚೌಟರಿಯ ಪಕ್ಕದಲ್ಲಿದ್ದ ಸಣ್ಣ ಹೋಟೇಲ್ ಒಂದರಲ್ಲಿ ರೂಮ್ ಮಾಡಿ ಅಲ್ಲಿಗೆ ಕಳುಹಿಸಿಕೊಟ್ಟನು.. ಇತ್ತ 6 ರೂಮನ್ನು‌ ಗಂಡಿನ ಮನೆಯವರಿಗೆ ಬಿಟ್ಟು ಕೊಟ್ಟ ನಾಗರಾಜಣ್ಣ..

ಸರಿ.. ಶಾಸ್ತ್ರ ಸಂಪ್ರದಾಯಗಳು ಶುರುವಾದವು.. ಹುಡುಗನ ಹೆಸರು ರಾಮ್.. ರಾಮನ ಕೈ ಹಿಡಿಯಲು ಜಾನಕಿ ತಯಾರಾಗುತ್ತಿದ್ದಳು.. ಇತ್ತ ರಾಮ್ ಕೂಡ ಜಾನಕಿ ಎಲ್ಲಾದರೂ ಕಾಣಬಹುದೇನೋ ಎಂದು ಅಲ್ಲಿ ಇಲ್ಲಿ ಇಣುಕುತ್ತಲೇ ಇದ್ದ..

ಆನಂತರ ಗಂಡು ಹೆಣ್ಣನ್ನು ಅಕ್ಕ ಪಕ್ಕದಲ್ಲಿ ಕೂರಿಸಿ ಶಾಸ್ತ್ರ ಮಾಡಲು ಶುರು ಮಾಡಿದರು..

ಮಗಳ ಶಾಸ್ತ್ರವನ್ನು ಕಣ್ತುಂಬಿಕೊಳ್ಳಲು ನಾಗರಾಜಣ್ಣ ಹಾಗೂ ಶ್ರೀಮತಿ ಸಾವಿತ್ರಕ್ಕ ನಿಂತು ಮಗಳಿನ ಮಧು ಮಗಳ ಅಲಂಕಾರ ನೋಡಿ ಸಂತೋಷ ಪಡುತ್ತಿದ್ದರು..

ಅತ್ತ ಮತ್ತೆ ಇನ್ಯಾರೋ.. ನಾಗರಾಜಣ್ಣಾ ಈರುಳ್ಳಿ ತರಿಸಬೇಕಂತೆ.. ಭಟ್ಟರು ಕರಿತಿದಾರೆ ಬಾ ಎಂದರು.. ಪಂಚೆಯನ್ನು ಎತ್ತಿ‌ ಮೇಲಕ್ಕೆ ಕಟ್ಟಿಕೊಂಡು ಅಡುಗೆ ಮನೆ ಕಡೆ ಹೊರಟ ನಾಗರಾಜಣ್ಣ.. ಇತ್ತ ಇನ್ಯಾರೋ ಸಾವಿತ್ರಕ್ಕಾ ನೆಂಟರಿಗೆ ಕೊಡಬೇಕಾದ ತಾಂಬೂಲ ಎಲ್ಲಿಟ್ಟಿದ್ದೀಯಾ?? ಕೊಡು ಬಾ ಎಂದು ಕೂಗಿದರು.. ಸಾವಿತ್ರಕ್ಕಾ, ತಡಿ ಬಂದೆ ಎಂದು ಹೋಡಿ ಹೋದಳು..

ಜಾನಕಿ ತಲೆ ಎತ್ತಿ ನೋಡುವಷ್ಟರಲ್ಲಿ ಅಪ್ಪ ಅಮ್ಮ ಇಬ್ಬರೂ ಹೊರಟು ಹೋಗಿದ್ದರು.. ಕಣ್ಣಂಚಲ್ಲಿ ನೀರು ತುಂಬಿಕೊಂಡಿತು.. ಹೆಣ್ಣು ತನ್ನ ಈ ವಿಶೇಷ ಕ್ಷಣದಲ್ಲಿ ಅಪ್ಪ ಅಮ್ಮನಲ್ಲದೇ ಇನ್ಯಾರನ್ನು ಬಯಸುತ್ತಾಳೆ ಹೇಳಿ..

ಇನ್ನೇನು ಕಣ್ಣೀರು ಮದುವೆ ಮನೆಯ ನೆಲಕ್ಕೆ ಬೀಳಬೇಕು.. ಅಷ್ಟರಲ್ಲಿ ಪಕ್ಕದಲ್ಲಿದ್ದ ರಾಮ್ ಜಾನಕಿಯ ಕೈ ಯನ್ನು ಒತ್ತಿದ.. ಆ ಸ್ಪರ್ಶದಲ್ಲಿ.. ನಾನಿರುವೆ ಅಳಬೇಡ ಎಂಬ ಸಮಾಧಾನದ ಮಾತುಗಳು ಅಡಗಿದ್ದವು..

ಜಾನಕಿಗೆ ಅಷ್ಟೇ ಸಾಕಿತ್ತು.. ಕಣ್ಣು ಒರೆಸಿಕೊಂಡು ಸಮಾಧಾನ ಮಾಡಿಕೊಂಡಳು..

ಪುರೋಹಿತರು ರಾಮ್, ಜಾನಕಿಗೆ ಕುಂಕುಮ ಇಡು ಎಂದರು.. ಕುಂಕುಮ ಇಡಲು ಜಾನಕಿಗೆ ಬಹಳ ಹತ್ತಿರ ಬಂದ ರಾಮ್..‌ ನೀನು ಇಂದು ಬಹಳ ಸುಂದರವಾಗಿ ಕಾಣ್ತಿದ್ದೀಯಾ ಎಂದನು..

ಜಾನಕಿ ಅಯ್ಯೊ ಯಾರಾದರು ಕೇಳಿಸಿಕೊಂಡರೆ ಎಂದು.. ಕೇಳಿಯೂ ಕೇಳದವಳಂತೆ.. ತಲೆ ಬಗ್ಗಿಸಿಬಿಟ್ಟಳು..‌

ರಾಮ್ ಜಾನಕಿಗೆ ಕುಂಕುಮ ಇಡುವ ಆ ಸಂದರ್ಭ ಜಾನಕಿಯ ಜೀವನದ ಬಹು ಸಂತೋಷದ ಕ್ಷಣ ವಾಗಿತ್ತು..

ಶಾಸ್ತ್ರಗಳೆಲ್ಲಾ ಮುಗಿಯಿತು.. ರಾತ್ರಿ 12 ಆಯಿತು… ಜಾನಕಿ ಹೋಗಮ್ಮಾ ಮಲ್ಕೋ.. ಬೆಳಗ್ಗೆ ಬೇಗ ಏಳಬೇಕು.. ಇಲ್ಲದಿದ್ದರೆ ಮುಖ ಫ್ರೆಶ್ ಇರೊಲ್ಲಾ ಅಂತ ಹೇಳಿ ಅಮ್ಮ ಮಲಗಿಸಿದರು.. ನಾಗರಾಜಣ್ಣನೋ ಅಡುಗೆ ಮನೆ ಕಡೆ ಹೋದವನು ಮತ್ತೆ ಬರಲೇ ಇಲ್ಲ.. ಅಲ್ಲೇ ಒಂದರ ಮೇಲೊಂದು ಕೆಲಸದಲ್ಲಿ ತೊಡಗಿಕೊಂಡ…

ಮಧ್ಯ ರಾತ್ರಿ 2 ಘಂಟೆಯಾಗಿತ್ತು.. ನಾಗರಾಜಣ್ಣ ಶ್ರೀಮತಿ ಸಾವಿತ್ರಕ್ಕನ ಬಳಿ ಬಂದು… ನಿನಗೆ ಸಂಜೆ 20 ಸಾವಿರ ಕೊಟ್ಟಿದ್ದೆನಲ್ಲಾ ಕೊಡು ಎಂದು ತೆಗೆದುಕೊಂಡು ಹೋದನು.. ಇತ್ತ ಸಾವಿತ್ರಕ್ಕಾ ಸಂಬಂಧಿಕರನ್ನೆಲ್ಲಾ ಸೇರಿಸಿಕೊಂಡು ಹೂ ಕಟ್ಟುತ್ತಿದ್ದಳು..

ಅತ್ತ..ಬೆಳಗಾಗುತ್ತಲೆ.. ಜಾನಕಿ ನನ್ನ ಬಾಳಿನ ಜ್ಯೋತಿಯಾಗುತ್ತಾಳೆಂದು ಕನಸು ಕಾಣುತ್ತಾ ಮಲಗಿದ ರಾಮ್..

ನೋಡು ನೋಡುತ್ತಲೆ ಬೆಳಗಾಯಿತು.. ಅರೆಗಳಿಗೆಯಲ್ಲಿ ನಾಗರಾಜಣ್ಣ ವಧುವಿನ ಕೋಣೆಗೆ ಬಂದು ಸ್ನಾನ ಮಾಡಿಕೊಂಡು ಬಿಳಿ ಪಂಚೆ ಬಿಳಿ ಶರ್ಟು ಧರಿಸಿ ಹೊರಟೇ ಹೋದನು.. ಇತ್ತ ಸಾವಿತ್ರಕ್ಕನು 2 ನಿಮಿಷದಲ್ಲಿ ಸ್ನಾನ ಮುಗಿಸಿ.. ಅದು ಇದು ಕೆಲಸ ಕಾರ್ಯ ನೋಡುತ್ತಿದ್ದಳು.. ಮಗಳನ್ನು ಎಬ್ಬಿಸಿ ಸ್ನಾನಕ್ಕೆ ಕಳುಹಿಸಿದರು.. ಅಷ್ಟರಲ್ಲಿ ಗಂಡಿನ ಮನೆ ಕಡೆಯವರು ಬಂದು ವಧುವಿದ್ದ ರೂಮಿನ ಬಾಗಿಲು ತಟ್ಟಲು ಆರಂಭಿಸಿದರು.. ಸಾವಿತ್ರಕ್ಕ ಬಾಗಿಲು ತೆರೆದು ನೋಡಿದಳು..

ಯಾರೋ ಒಬ್ಬ ಹೆಂಗಸು.. ನಾವಿರುವ ರೂಮಿನಲ್ಲಿ ಬಿಸಿ ನೀರು ಬರುತ್ತಿಲ್ಲ.. ಎಂದು ಹೇಳಿದರು.. ಇನ್ನೊಬ್ಬರು ಬಂದು.. ನಾವು ಗಂಡಿನ ಕಡೆಯವರು.. ನಮಗೆ ಸೋಪು ಟೂತ್ ಪೇಸ್ಟು ಸಿಕ್ಕಿಲ್ಲ ಎಂದರು.. ಅಷ್ಟರಲ್ಲಿ ಒಳಗಿದ್ದ ಯಾವುದೋ ಕವರ್ ಹುಡುಕಿ ಟೂತ್ ಪೇಸ್ಟ್ ಮತ್ತು ಸೋಪನ್ನು ತಂದು ಕೊಟ್ಟಳು ಸಾವಿತ್ರಕ್ಕ.. ಇತ್ತ ಜಾನಕಿ ಕೂಡ ಬೇಗನೆ ಸ್ನಾನ ಮುಗಿಸಿ ಬಂದು ಆ ಹೆಂಗಸಿಗೆ ಹೇಳಿದಳು.. ನೀವು ಇದೇ ರೂಮಿನಲ್ಲಿ ಸ್ನಾನ ಮಾಡಿ.. ಬಿಸಿ ನೀರು ಬರುತ್ತಿದೆ ಎಂದಳು..

ಆನಂತರ ಗಂಡಿನ ಪಾದಪೂಜೆ ಮಾಡಬೇಕು ಎಂದು ನಾಗರಾಜಣ್ಣ ಮತ್ತು‌ ಸಾವಿತ್ರಕ್ಕನನ್ನು ಕರೆದರು..

ಸರಿ ಅದೆಲ್ಲೋ ಇದ್ದ ನಾಗರಾಜಣ್ಣ ಓಡೋಡಿ ಬಂದನು.. ಇತ್ತ ಸಾವಿತ್ರಕ್ಕ ಕೂಡ ವರನಿಗೆ ಕೊಡವೇಕಾದ ವಾಚು ಉಂಗುರ ಚೈನನ್ನು ಜೋಪಾನವಾಗಿ ಹಿಡಿದು ತಂದಳು…

ರಾಮ್ ಬಿಳಿ ಪಂಚೆ ಶರ್ಟು ಧರಿಸಿ ಮದು ಮಗನಾಗಿ ಕಂಗೊಳಿಸುತ್ತಿದ್ದ..

ಅವನನ್ನು ಚೇರ್ ಮೇಲೆ ಕೂರಲು ಹೇಳಿದರು ಪುರೋಹಿತರು.. ಆನಂತರ ಕಾಲು ತೊಳೆಯಲು ಬಂದ ನಾಗರಾಜಣ್ಣ ಹಾಗೂ ಸಾವಿತ್ರಕ್ಕನನ್ನು ದಯಮಾಡಿ ಬೇಡ ಮಾವ.. ನನಗೆ ಮುಜುಗರವಾಗುತ್ತದೆ ಎಂದ..

ಆದರೆ ಅತ್ತ.. ಏಯ್ ರಾಮ್ ಇದು ಶಾಸ್ತ್ರ ಸುಮ್ಮನೆ ತೊಳುಸ್ಕೊ ಎಂದರು.. ಇರಲಿ ಬಿಡಪ್ಪ ಶಾಸ್ತ್ರ ಅಲ್ಲವಾ ಎಂದು ನಾಗರಾಜಣ್ಣ ಹೇಳಿದ‌… ಒಲ್ಲದ ಮನಸ್ಸಿನಲ್ಲಿಯೂ ರಾಮ್ ಒಪ್ಪಿಗೆ ಕೊಟ್ಟ.. ನಾಗರಾಜಣ್ಣ ಕಾಲು ತೊಳೆಯುವಾಗ ನೀರಿನ ಜೊತೆಗೆ ಜಾನಕಿಯ ಅಪ್ಪ ಅಮ್ಮನ ಕಣ್ಣೀರು ಕೂಡ ರಾಮ್ ನ ಕಾಲಿನ ಮೇಲೆ ಬಿದ್ದದ್ದು.. ರಾಮ್ ಗೆ ಗೊತ್ತಾಯಿತು.. ಹೆಣ್ಣು ಹೆತ್ತವರ ಸಂಕಟ ತಿಳಿಯದಷ್ಟು ಕಲ್ಲು ಮನಸಿನವನಲ್ಲ ರಾಮ್..

ಹ.. ಮುಂದೆ ಎಲ್ಲಾ ಶಾಸ್ತ್ರಗಳು ಆದವು.. ರಾಮ್ ಪಕ್ಕ ಜಾನಕಿ ಬಂದು ನಿಂತಳು ಅನೇಕ ಶಾಸ್ತ್ರ ನಡೆದವು..

ಆನಂತರ ಪುರೋಹಿತರು.. ರಾಮ್ ಕೈಗೆ ತಾಳಿಯನ್ನು ತಂದು ಕೊಟ್ಟರು… ಇನ್ನೇನು ಜಾನಕಿಯ ಕೊರಳಿಗೆ ತಾಳಿ ಕಟ್ಟುವ ಸಮಯ.. ಆದರೆ ಅಲ್ಲಿ ನಾಗರಾಜಣ್ಣ ಇರಲಿಲ್ಲ.. ಜಾನಕಿ ಅಮ್ಮನ ಬಳಿ ಸನ್ನೆ ಮಾಡುತ್ತಲೇ ಇದ್ದಳು ಅಪ್ಪ ಎಲ್ಲಿ?? ಅಂತ.. ಅತ್ತ ಒಂದು ಕಡೆ ಮೂಲೆಯಲ್ಲಿ ಶೆಟ್ಟರ ಬಳಿ ನಾಗರಾಜಣ್ಣ ಏನನ್ನೋ ಮಾತನಾಡುತ್ತಿದ್ದ..

ಜಾನಕಿಯ ಚಡಪಡಿಕೆ ರಾಮನಿಗೆ ಅರ್ಥವಾಯಿತು.. ಪುರೋಹಿತರು ತಾಳಿ ಕಟ್ಟಲು ಹೇಳಿದರು.. ಆದರೆ ರಾಮ್ ದೂರದಲ್ಲಿ ಇದ್ದ ನಾಗರಾಜಣ್ಣನನ್ನು ನೋಡಿದ.. ಪಕ್ಕದಲ್ಲಿ ನಿಂತಿದ್ದ ಸ್ನೇಹಿತನೊಬ್ಬನಿಗೆ ಕಿವಿಯಲ್ಲಿ..‌ಹೋಗಿ ನಮ್ಮ ಮಾವನನ್ನು ಕರೆದುಕೊಂಡು ಬಾ ಎಂದ..

ಆ ಸ್ನೇಹಿತ ಹೋಗಿ ನಾಗರಾಜಣ್ಣ ನನ್ನು ಕರೆ ತಂದ.. ಜಾನಕಿಯ ಮುಖದಲ್ಲಿ ಸಂತೋಷ ಎದ್ದು ಕಂಡಿತು.. ಅದನ್ನು ನೋಡಿ ರಾಮನು ಖುಷಿ ಪಟ್ಟ…

ಮತ್ತೊಮ್ಮೆ ಪುರೋಹಿತರು ತಾಳಿ ಕಟ್ಟಲು ಹೇಳಿದರು.. ರಾಮ್ ಒಮ್ಮೆ ತನ್ನ ಅಪ್ಪ ಅಮ್ಮನನ್ನು ನೋಡಿದ.. ಇತ್ತ ಜಾನಕಿಯೂ ತನ್ನ ಅಪ್ಪ ಅಮ್ಮನನ್ನು ನೋಡಿದಳು.. ಎಲ್ಲರೂ ಅಕ್ಕಪಕ್ಕವೇ ಇದ್ದರು..

ಈಗ ರಾಮ್ ತನ್ನ ಕೈನಲ್ಲಿ ತಾಳಿಯನ್ನು ಹಿಡಿದು ಜಾನಕಿಗೆ ಬಹಳ ಹತ್ತಿರ ಬಂದ.. ಅವಳ ಬಿಸಿ ಉಸಿರು ರಾಮನ ಕತ್ತನ್ನು ಸ್ಪರ್ಶಿಸುತಿತ್ತು.. ಇನ್ನೂ ಹತ್ತಿರ ಮುಖವನ್ನು ತಂದು.. “ಇನ್ನು ಮುಂದೆ ಈ ದೇಹದ ಆತ್ಮ ನೀನು” ನಾನು ನಿನಗೆ ಒಪ್ಪಿಗೆ ನಾ?? ಅಂತ ಕೇಳ್ತಾನೆ ರಾಮ್..

ಅವನು ಹಾಗೆ ಕೇಳಲು ಸಂತೋಷಕ್ಕೆ ಕಣ್ಣಲ್ಲಿ ನೀರು ತುಂಬಿಕೊಳ್ಳತ್ತೆ ಜಾನಕಿಗೆ.. ತಲೆಯಾಡಿಸುತ್ತಲೇ ತನ್ನ ಒಪ್ಪಿಗೆ ಸೂಚಿಸುತ್ತಾಳೆ ಜಾನಕಿ..

ಗಟ್ಟಿ ಮೇಳ ಮೊಳಗುತ್ತದೇ..‌ಎಲ್ಲರೂ ಅಕ್ಷತೆಯ ಮಳೆಗರೆಯುತ್ತಾರೆ.. ಇತ್ತ ರಾಮ್ ತನ್ನ ಸಂಪೂರ್ಣ ಮನಸ್ಸಿನಿಂದ ಜಾನಕಿಗೆ ತಾಳಿಯನ್ನು ಕಟ್ಟುತ್ತಾನೆ.. ಇಬ್ಬರೂ ಹೊಸ ಜೀವನಕ್ಕೆ ಕಾಲಿಡುತ್ತಾರೆ..

ಜಾನಕಿಯ ಕಾಲಿನ ಹೆಬ್ಬೆರಳನ್ನು ಹಿಡಿದು ಸಪ್ತಪದಿ ತುಳಿಸುತ್ತಾನೆ ರಾಮ್.. ಇತ್ತ ರಾಮ್ ನ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಾಳೆ ಜಾನಕಿ..

ಆನಂತರ ಹೊರಗೆ ಬಂದು ಅರುಂಧತಿ ನಕ್ಷತ್ರ ತೋರಿಸುತ್ತಾನೆ ರಾಮ್.. ಪುರೋಹಿತರು ನಕ್ಷತ್ರ ಕಾಣ್ತೇನಮ್ಮ ಜಾನಕಿ.. ಎನ್ನಲು.. ಹೂ ಕಂಡಿತು ಎನ್ನುತ್ತಾಳೆ ಜಾನಕಿ..

ಕೈ ಹಿಡಿದು ಮದುವೆ ಮನೆಯ ಒಳಗೆ ಕರೆತರುತ್ತಾನೆ ರಾಮ್..

ಆನಂತರ ಎಲ್ಲರೂ ಊಟಕ್ಕೆ ಬನ್ನಿ ಎನ್ನಲು.. ಎಲ್ಲರೂ ಊಟಕ್ಕೆ ಹೋಗುತ್ತಾರೆ.. ಅಷ್ಟರಲ್ಲಾಗಲೇ ಬಂದ ನೆಂಟರೆಲ್ಲರ ಊಟವೂ ಆಗಿ.. ಕೊನೆ ಪಂಕ್ತಿಯಾಗಿರುತ್ತದೆ… ಪಲ್ಯವೆಲ್ಲಾ ಖಾಲಿಯಾಗಿ.. ಅನ್ನ ಸಾರು ಮಾತ್ರ ಉಳಿದಿರುತ್ತದೆ..

ವಧು ವರರ ಜೊತೆಗೆ ಮನೆಯವರೂ ಊಟಕ್ಕೆ ಕುಳಿತಿರುತ್ತಾರೆ.. ಅನ್ನ ಸಾಂಬಾರ್ ಹಾಗೂ ಒಂದು ಸ್ವೀಟನ್ನು ತಂದು ಬಡಿಸುತ್ತಾರೆ ಭಟ್ಟರು..

ಶುಭ ಸಮಾರಂಭಗಳಲ್ಲಿ ಕೊಂಕನ್ನು ಆಡಬೇಕು ಎಂದೇ ಕೆಲವರು ಹುಟ್ಟಿರುತ್ತಾರೆ.. ಅವರು ಇದೇನು ಹೀಗಿದೆ ಊಟ ಎನ್ನುತ್ತಾರೆ.. ಎದುರಲ್ಲಿ ಕೂತಿದ್ದ ನಾಗರಾಜಣ್ಣನಿಗೆ ಮುಜುಗರ ವಾಗುತ್ತದೆ.. ಅದನ್ನು ನೋಡಿದ ರಾಮ್.. ಯಾವುದೇ ಹಮ್ಮು ಬಿಮ್ಮಿಲ್ಲದೇ ಊಟ ಬಹಳ ಚೆನ್ನಾಗಿದೆ ಮಾವ ಎನ್ನುತ್ತಾನೆ.. ಅಷ್ಟರಲ್ಲಿ ಉಳಿದ ಕೊಂಕಿನ ಬಾಯಿಗಳೆಲ್ಲಾ ಮುಚ್ವಿಕೊಳ್ಳುತ್ತವೆ..

ಆನಂತರ ಮಗಳನ್ನು ರಾಮ್ ಜೊತೆ ಕಳುಹಿಸಿಕೊಡುವ ಸಮಯ..

23 ವರ್ಷ ಪ್ರೀತಿಯಿಂದ ಸಾಕಿದ್ದ ಮಗಳನ್ನು ಇಂದು ಗಂಡನ ಮನೆಗೆ ಕಳುಹಿಸಿಕೊಡುವ ಸಮಯ ಬಂದೇ ಬಿಟ್ಟಿತು ಎಂದು ನಾಗರಾಜಣ್ಣ ಕಣ್ಣೀರು ಹಾಕುತ್ತಾನೆ.. ನನ್ನ ಕಣ್ಣ ಮುಂದೆ ಕೆಂಪು ಬಣ್ಣದ ಫ್ರಾಕ್ ಒಂದನ್ನು ತೊಟ್ಟು ಇನ್ನೂ ಪುಟ್ಟ ಪುಟ್ಟ ಹೆಜ್ಜೆಯನಿಟ್ಟು ಅಪ್ಪಾ ಅಪ್ಪಾ ಎನ್ನುತ್ತಿದ್ದ ಜಾನಕಿಗೆ.. ಇಷ್ಟು ಬೇಗ ಮದುವೆ ಮಾಡಿಬಿಟ್ಟೆನಾ ಅಂದುಕೊಳ್ಳುತ್ತಾನೆ ನಾಗರಾಜಣ್ಣ.. ಇತ್ತ ಸಾವಿತ್ರಕ್ಕ ಮಗಳನ್ನು ತಬ್ಬಿಕೊಂಡು.. ಹೋದ ಮನೆಯಲ್ಲಿ ಅನುಸರಿಸಿಕೊಂಡು ಹೋಗು ಮಗಳೆ ಎಂದು ಅಳುತ್ತಾ ಬುದ್ದಿವಾದ ಹೇಳುತ್ತಿರುತ್ತಾಳೆ..

ಕೊನೆಗೂ ಆ ಸಮಯ ಬಂದೇ ಬಿಟ್ಟಿತು.. ಜಾನಕಿಯ ಕೈ ಯನ್ನು ರಾಮ್ ಕೈನಲ್ಲಿ ಇರಿಸಿ.. ಇನ್ನು ಮುಂದೆ ಇವಳು ನಿನ್ನ ಮನೆಯವಳಪ್ಪಾ.. ಚೆನ್ನಾಗಿ ನೋಡಿಕೋ ಎನ್ನುತ್ತಾನೆ ನಾಗರಾಜಣ್ಣ..

ನಾಗರಾಜಣ್ಣ ಹಾಗೂ ಸಾವಿತ್ರಕ್ಕ ಅಳು ನಿಲ್ಲದ್ದಾಗಿರುತ್ತದೆ.. ಅದನ್ನು ನೋಡಿದ ರಾಮ್.. ಅಳಬೇಡಿ ಮಾವ… ಜಾನಕಿ ಇನ್ನು ಮುಂದೆಯೂ ಚೆನ್ನಾಗಿರುತ್ತಾಳೆ ಎನ್ನುತ್ತಾನೆ..

ಅಳಿಯನ ಆ ಒಂದು ಮಾತು ಸಾಕಿತ್ತು.. ನಾಗರಾಜಣ್ಣ ಹಾಗೂ ಸಾವಿತ್ರಕ್ಕ ಖುಷಿ ಪಡಲು.. ಬಡಜೀವಗಳು ಸಂತೋಷ ಪಟ್ಟುಕೊಂಡವು..

ಅಳುತ್ತಿದ್ದ ಜಾನಕಿಯ ಕಣ್ಣನ್ನು ಸ್ವತಃ ರಾಮನೇ ಒರೆಸುತ್ತಾನೆ..‌ ಹಿಡಿದಿದ್ದ ಕೈ ಯನ್ನು ಗಟ್ಟಿಗೊಳಿಸುತ್ತಾನೆ..‌

ಜಾನಕಿಗೆ ಅದು ತಿಳಿಯುತ್ತದೆ.. ಅವನು ಹಿಡಿದಿದ್ದ ಜಾನಕಿಯ ಕೈ ಯನ್ನು ಇನ್ನಷ್ಟು ಬಿಗಿ ಗೊಳಿಸುತ್ತಾನೆ.. ಕಣ್ಣಿನಲ್ಲಿ‌ ನಾನಿದ್ದೇನೆ ಎನ್ನುವ ಮಾತು ಜಾನಕಿಗಾಗಿ ಹೊರಬರುತ್ತದೆ.. ಅರ್ಥ ಮಾಡಿಕೊಂಡ ಜಾನಕಿ ಸ್ವಲ್ಪ ಸಮಾಧಾನವಾಗುತ್ತಾಳೆ..

ಜಾನಕಿಯನ್ನು ಕರೆದುಕೊಂಡು ಕಾರ್ ಹತ್ತುತ್ತಾನೆ ರಾಮ್… ಎಲ್ಲರಿಗೂ ಹೋಗಿ ಬರುವೆವು ಎಂದು ಆಶೀರ್ವಾದ ಪಡೆದು ಹೊರಡುತ್ತಾರೆ.. ಜಾನಕಿಯ ಅಪ್ಪ ಅಮ್ಮ ಅಳುತ್ತಿರುವುದು ಕಾರಿನ ಕನ್ನಡಿಯಲ್ಲಿ ಕಾಣುತ್ತಿರುತ್ತದೆ.. ಕಾರ್ ಇನ್ನೇನು ಮದುವೆ ಮನೆಯ ಗೇಟಿನಿಂದ ಹೊರ ಬಂತು ಅಷ್ಟರಲ್ಲಿ ರಾಮ್ ನ ಮನಸ್ಸು ಕೇಳಲೇ ಇಲ್ಲ.. ಒಂದು ನಿಮಿಷ ಕಾರ್ ನಿಲ್ಲಿಸು ಎಂದು ಡ್ರೈವರ್ ಗೆ ಹೇಳುತ್ತಾನೆ..

ಕಾರ್ ನಿಂದ ಇಳಿದು ಸೀದಾ ಮಾವನ ಬಳಿ ಬಂದು.. ಇನ್ನು ಮುಂದೆ ನಾನು ನಿಮ್ಮ ಮಗ.. ಎಂದೂ ಯಾವತ್ತೂ ಚಿಂತಿಸದಿರಿ… ಎಂದು ಕೈ ಹಿಡಿದು ಸಮಾಧಾನ ಹೇಳಿ ಹೊರಡುತ್ತಾನೆ..

ನಾಗರಾಜಣ್ಣನ ಮನಸ್ಸು ತುಂಬಿ ಬಂತು… ಮಗಳಿಗೆ ಒಳ್ಳೆಯ ವರನನ್ನು ಹುಡುಕಿರುವೆ ಎಂಬ ಆತ್ಮ ತೃಪ್ತಿ ನೆಮ್ಮದಿ ನಾಗರಾಜಣ್ಣನ ಕಣ್ಣಲ್ಲಿ ಕಾಣುತಿತ್ತು…

ಇತ್ತ ಎಲ್ಲರೂ ಉಳಿದ ಸಾಮಾನನ್ನು ಬಸ್ಸಿಗೆ ತುಂಬಲು ಆರಂಭಿಸಿದರು..

ರಾತ್ರಿಯೇ ಶೆಟ್ಟರ ಬಳಿ ಇನ್ನೂ 80 ಸಾವಿರ ಹಣವನ್ನು ಸಾಲವಾಗಿ ಪಡೆದಿದ್ದ ನಾಗರಾಜಣ್ಣ.. ಇನ್ನು ಯಾರು ಯಾರಿಗೆ ಬಾಕಿ ಕೊಡಬೇಕೋ ಅವರಿಗೆ ಹಣ ಕೊಡಲು ಬಂದ..

ಭಟ್ಟರ ಬಳಿ ಬಂದು ಉಳಿದ 20 ಸಾವಿರ ಹಣ ಕೊಡಲು ಬಂದಾಗ.. ಇಲ್ಲಾ ನಾಗರಾಜಣ್ಣ… ರಾತ್ರಿಯೇ ನಿಮ್ಮ ಅಳಿಯ ಬಂದು 3 ಸಾವಿರ ಹೆಚ್ವಿಗೆಯಾಗಿಯೇ ಹಣ ನೀಡಿದರು.. ಎನ್ನುತ್ತಾರೆ ಭಟ್ಟರು..

ಒಂದು ಕ್ಷಣ ನಾಗರಾಜಣ್ಣನಿಗೆ ಆಶ್ಚರ್ಯವಾಗುತ್ತದೆ..‌ಅಯ್ಯೊ ಇದೇನಾಯ್ತು ಎನ್ನುತ್ತಾ… ಶಾಮಿಯಾನ ಬಿಚ್ಚುತ್ತಿದ್ದ ಜಾಗಕ್ಕೆ ಬಂದು.. ಅವರಿಗೆ ಹಣ ಕೊಡಲು ಮುಂದಾಗುತ್ತಾನೆ.. ಅವರೂ ಕೂಡ ಇದನ್ನೇ ಹೇಳುತ್ತಾರೆ..

ಇನ್ನೇಕೆ ಈ ಹಣ ಎಂದು ಶೆಟ್ಟರಿಗೆ ವಾಪಸ್ ನೀಡಲು ಬಂದಾಗ… ಶೆಟ್ಟರು.. ಇಲ್ಲಾ ನಾಗರಾಜಣ್ಣ.. ಈ ಹಣ ನನ್ನದಲ್ಲ.. ನಿನ್ನ ಅಳಿಯ ರಾತ್ರಿಯೇ ತಂದು ನನ್ಮ ಬಳಿ ಕೊಟ್ಟಿದ್ದರು… ಜೊತೆಗೆ ನೀನು ಮದುವೆಗಾಗಿ ಮಾಡಿದ್ದ 5 ಲಕ್ಷ ಸಾಲಕ್ಕೆ ರಾತ್ರಿಯೇ ಚೆಕ್ ನೀಡಿದ್ದಾರೆ ಎಂದರು..

ಒಂದು ಕ್ಷಣ ನಾಗರಾಜಣ್ಣನಿಗೆ ಏನು‌ಮಾಡಬೇಕೆಂದು ತೋಚುವುದಿಲ್ಲ.. ತಕ್ಷಣ ಜೇಬಿನಿಂದ ಫೋನ್ ತೆಗೆದು ರಾಮನಿಗೆ ಫೋನ್ ಮಾಡುತ್ತಾರೆ..

ಇತ್ತ ಕಾರಿನಲ್ಲಿ ಅತ್ತು ಅತ್ತು ಸುಸ್ತಾಗಿದ್ದ ಜಾನಕಿ ರಾಮನ ಭುಜಕ್ಕೆ ಒರಗಿ ಮಲಗಿರುತ್ತಾಳೆ.. ರಾಮನ ಫೋನ್ ರಿಂಗ್ ಆಗುತ್ತದೆ.. ಜಾನಕಿಗೆ ಎಚ್ಚರ ವಾಗಿಬಿಡುತ್ತದೆ ಎಂದು.. ಮೆಲ್ಲಗೆ ಜೇಬಿನಲ್ಲಿದ್ದ ಫೋನ್ ತೆಗೆದು ರಿಸೀವ್ ಮಾಡುತ್ತಾನೆ..

ಅತ್ತ ಯಾಕಪ್ಪಾ ರಾಮ್ ಹೀಗೆ ಮಾಡಿದೆ ಎಂದು ನಾಗರಾಜಣ್ಣ ಕೇಳುತ್ತಾನೆ…

ಆಗ ರಾಮ್ ಹೇಳುವುದು ಒಂದೇ ಮಾತು… “ನಾನು ಬಾಯಿ ಮಾತಿಗೆ ಮಾತ್ರ ನಿಮ್ಮ ಮಗನಾಗಿರುತ್ತೇನೆ ಎಂದು ಹೇಳಲಿಲ್ಲ ಮಾವ… ನನ್ನ ಕರ್ತವ್ಯ ನಾನು ಮಾಡಿದ್ದೇನೆ… ನನ್ನ ದೇಹಕ್ಕೆ ಆತ್ಮವಾಗುವ ಜೀವನದುದ್ದಕ್ಕೂ ಜೊತೆಯಾಗಿ ಬಾಳುವ.. ಜಾನಕಿಯನ್ನು ಕೊಟ್ಟಿದ್ದೀರಾ ನೀವು… ನಿಮಗೆ ನಾನು ಏನು ಮಾಡಿದರೂ ಕಡಿಮೆಯೇ ಎನ್ನುತ್ತಾನೆ.. ಇದನ್ನು ಯಾರ ಬಳಿಯೂ ಹೇಳಬೇಡಿ… ಇಲ್ಲಿಗೆ ಸುಮ್ಮನೆ ಬಿಟ್ಟುಬಿಡಿ” ಎಂದು ಹೆಚ್ಚಿಗೆ ಮಾತನಾಡದೆ ಫೋನ್ ಕಟ್ ಮಾಡುತ್ತಾನೆ ರಾಮ್…

ಇತ್ತ ಭುಜಕ್ಕೆ ಒರಗಿ ಮಲಗಿದ್ದ ಜಾನಕಿಯ ಕಿವಿಗೆ ಅಷ್ಟೂ ಮಾತುಗಳು ಬೀಳುತ್ತವೆ.. ಮನಸ್ಸಿನಲ್ಲಿಯೇ ಒಬ್ಬ ಪರಿಪೂರ್ಣ ಮನಸ್ಸಿನ ವ್ಯಕ್ತಿಯನ್ನು ಮದುವೆಯಾಗಿದ್ದೇನೆ ಎಂದುಕೊಳ್ಳೂತ್ತಾಳೆ ಜಾನಕಿ…

ಕೊನೆಯಲ್ಲಿ ನನ್ನದೊಂದು ಮಾತು…

ಮದುವೆ ಮನೆಯ ಊಟದಲ್ಲಿ ಉಪ್ಪು ಹೆಚ್ಚಾಗಿದ್ದಲ್ಲಿ‌ ದಯಮಾಡಿ ಅದನ್ನು ಹೇಳಬೇಡಿ.. ಆ ಹೆಣ್ಣಿನ ಅಪ್ಪ ಅಮ್ಮನ ಕಣ್ಣೀರು ಆ ಊಟದಲ್ಲಿ ಸೇರಿ ಹೋಗಿ ಉಪ್ಪು ಹೆಚ್ಚಾಗಿರುತ್ತದೆಯೇ ಹೊರತು… ಬೇರೆ ಯಾವ ಕಾರಣದಿಂದಲೂ ಅಲ್ಲ..

ಇಷ್ಟವಾಗಿದ್ದರೆ ಶೇರ್ ಮಾಡಿ..

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು