- ಮುಗುಳ್ನಗೆ ಎನ್ನುವುದು ದಯಾಳುತನದ ಜಾಗತಿಕ ಭಾಷೆ.---ವಿಲಿಯಂ ಆರ್ಥರ್ ವಾರ್ಡ.
- ಅಳಬೇಡಿ.ನೀವು ಯಾವುದಕ್ಕಾಗಿ ಅಳುತ್ತೀದ್ದೀರೋ ಅದು ಮುಗಿದುಹೋಗಿದೆ.-----ಡಾ.ಸಿಯಸ್.
- ಮಕ್ಕಳು ನಗುವುದನ್ನು ಅವರ ಹೆತ್ತವರಿಂದ ಕಲಿಯುತ್ತಾರೆ.-----ಸಿನಿಚಿ ಸುಜುಕಿ.
- ಜನರು ವಿಶ್ವಾಸದ ಕೊರತೆಯಿಂದಾಗಿ ಸವಾಲುಗಳನ್ನು ಎದುರಿಸಲು ಹೆದರುತ್ತಾರೆ.ನನಗೆ ನನ್ನ ಮೇಲೆ ಪೂರ್ಣ ವಿಶ್ವಾಸವಿದೆ.------'ಮಹಮ್ಮದ್ ಅಲಿ.
- ಪ್ರಯತ್ನಿಸುವವನಿಗೆ ಯಾವುದೂ ಅಸಾಧ್ಯವಲ್ಲ ----ಅಲೆಗ್ಸಾಂಡರ್ ದಿ ಗ್ರೇಟ್.
- ಯಾವುದೇ ಕೆಲಸ ಅದು ಮುಗಿಸುವವರೆಗೆ ಅಸಾಧ್ಯವೆಂದೇ ತೋರುತ್ತದೆ.-------ನೆಲ್ಸನ್ ಮಂಡೇಲಾ.
- ತಪ್ಪುಗಳನ್ನು ಹುಡುಕಬೇಡಿ, ಪರಿಹಾರಗಳನ್ನು ಹುಡುಕಿ.-----ಹೆನ್ರಿ ಫೋರ್ಡ್.
- ನಾವು ನಮ್ಮ ಮನೆಗಳನ್ನು ರೂಪಿಸುತ್ತೇವೆ. ಬಳಿಕ ಅವು ನಮ್ಮನ್ನು ರೂಪಿಸುತ್ತವೆ.-------ವಿನ್ ಸ್ಟನ್ ಚರ್ಚಿಲ್.
- ಅಪಾಯವನ್ನು ಎದುರಿಸುವಾಗ ನಾಯಕನಾದವನು ಗುಂಪನ್ನು ಎದುರಿನಿಂದ ಮುನ್ನಡೆಸಬೇಕು.ಸಂಭ್ರಮ ಆಚರಣೆಯ ವೇಳೆಗೆ ಗುಂಪಿನ ಹಿಂದಿರಬೇಕು.-----ನೆಲ್ಸನ್ ಮಂಡೇಲಾ.
- ಅಪಾಯದಿಂದ ರಕ್ಷಣೆಗೆ ಪ್ರಾರ್ಥಿಸಿ.ಆದರೆ ಅಪಾಯಗಳನ್ನು ಎದುರಿಸುವಾಗ ಧೈರ್ಯದಿಂದಿರಿ.-----ರವೀಂದ್ರನಾಥಟ್ಯಾಗೋರ್.
- ಧೈರ್ಯ ಎಂದರೆ ಭಯವೇ ಇಲ್ಲದಿರುವುದಲ್ಲ.ಭಯದ ಮೇಲಿನ ನಿಯಂತ್ರಣ ಮತ್ತು ಭಯವನ್ನು ಎದುರಿಸುವುದೇ ಧೈರ್ಯ.------ಮಾರ್ಕ್ ಟೈನ್.
ಸವರ್ಣ ದೀರ್ಘ ಸಂಧಿ. ಸವರ್ಣ ದೀರ್ಘ ಸಂಧಿ ಉದಾಹರಣೆಗಳು savarna dhirgha sandhi. Savarna dhirgha sandhi examples
ಸವರ್ಣ ದೀರ್ಘ ಸಂಧಿ. [ ] ಪೂರ್ವ ಪದದ ಅಂತ್ಯ ಸ್ವರ ಮತ್ತು ಉತ್ತರ ಪದದ ಆರಂಭದ ಸ್ವರ ಒಂದೇ ರೀತಿಯ ವರ್ಣವಾಗಿದ್ದರೆ , ಸಂಧಿಕಾರ್ಯ ನಡೆಯುವಾಗ ಅದೇ ಸ್ವರದ ದೀರ್ಘ ಸ್ವರವು ಆದೇಶವಾಗಿರುವುದು ಕಂಡು ಬರುತ್ತದೆ. [ ] ಸಂಧಿಕಾರ್ಯ ನಡೆಯುವಾಗ ಒಂದೇ ರೀತಿಯ ಸ್ವರಾಕ್ಷರಗಳು ಪರಸ್ಪರ ಸೇರಿ ದೀರ್ಘ ಸ್ವರ ಆದೇಶವಾದರೆ ಅಂತಹ ಸಂಧಿಯನ್ನು "ಸವರ್ಣ ದೀರ್ಘ ಸಂಧಿ "ಎಂದು ಕರೆಯುತ್ತಾರೆ. [ ] ಸವರ್ಣಾಕ್ಷರಗಳಿಗೆ ಸವರ್ಣಾಕ್ಷರಗಳ ಪರವಾಗಿ ಸವರ್ಣ ದೀರ್ಘಾಕ್ಷರಗಳು ಬಂದರೆ ಸವರ್ಣ ದೀರ್ಘ ಸಂಧಿ. [ ] ಉದಾಹರಣೆಗೆ ಪೂರ್ವ ಪದ + ಉತ್ತರ ಪದ = ಸಂಧಿಪದ 1. ರವಿ + ಇಂದ್ರ = ರವೀಂದ್ರ ( ಇ+ಇ= ಈ) 2. ದೇವ+ ಆಲಯ= ದೇವಾಲಯ. (ಅ+ಆ=ಆ) 3. ಗುರು+ ಉಪದೇಶ =ಗುರೂಪದೇಶ (ಉ+ಉ=ಊ) 4. ಮಹಾ+ ಆತ್ಮ = ಮಹಾತ್ಮ (ಆ+ಆ=ಆ) 5. ಗಿರಿ+ ಇಂದ್ರ = ಗಿರೀಂದ್ರ 6. ಮುನಿ+ ಇಂದ್ರ =ಮುನೀಂದ್ರ. 7. ಅಲ್ಪ + ಅಕ್ಷರ =ಅಲ್ಪಾಕ್ಷರ. 8. ವಿದ್ಯ+ ಅರ್ಜನೆ=ವಿದ್ಯಾರ್ಜನೆ. 9. ರಾಕ್ಷಸ + ಅಧಿಪತಿ= ರಾಕ್ಷಸಾಧಿಪತಿ. 10. ಸೀತ+ಅನ್ವೇಷಣೆ= ಸೀತಾನ್ವೇಷಣೆ. 11. ಪಂಚ+ಆಸ್ಯ=ಪಂಚಾಸ್ಯ. 12. ಶಾಸಕ+ಅಂಗ=ಶಾಸಕಾಂಗ. 13. ಅಭಯ+ಅರಣ್ಯ =ಅಭಯಾರಣ್ಯ. 14. ಉಭಯ+ಅರಣ್ಯ =ಉಭಯಾರಣ್ಯ 15. ವಸ್ರ್ತ + ಆಭರಣ= ವಸ್ತ್ರಾಭರಣ. 16. ಗೌರಿ+ಈಶ =ಗೌರೀಶ. 17. ಕಟು+ಉಕ್ತಿ=ಕಟೂಕ್ತಿ. 18. ಕೃಷ್ಣ +ಅಜಿನ=ಕೃಷ್ಣಾಜಿನ. 19. ಪೀತ+ಅಂಬರ=ಪೀತಾಂಬರ. 20. ಏಕ+ಆಸ...
Comments
Post a Comment