Skip to main content

ಕನ್ನಡ ಸುಭಾಷಿತಗಳು ಕನ್ನಡ ನುಡಿಮುತ್ತು ಗಳು Kannada subhashitagalu Kannada nudimuttugalu

ಕನ್ನಡ ಭಾಷೆಯ ಹಿರಿಮೆಗಳಲ್ಲಿ ಸುಭಾಷಿತಗಳು ಮತ್ತು ಹಿತನುಡಿ ,ನುಡಿಮುತ್ತುಗಳು ಒಂದು ಪ್ರಮುಖ ಅಂಶವಾಗಿದೆ. ಕೆಲವೊಂದು ಸುಭಾಷಿತಗಳು ಈ ಕೆಳಗಿನಂತಿವೆ.
1. ಪ್ರಾಮಾಣಿಕ ಭಿನ್ನಮತ ಎಷ್ಟೋ ಸಲ ಪ್ರಗತಿಯ ಆರೋಗ್ಯಕರ ಸೂಚನೆಯಾಗಿರುತ್ತದೆ.----- ಮಹಾತ್ಮಾ ಗಾಂಧಿ.
2. ಪ್ರಕೃತಿ ನಿಷ್ಪ್ರಯೋಜಕವಾದ ಯಾವುದನ್ನು ಸೃಷ್ಟಿಸಿಲ್ಲ.-----ಅರಿಸ್ಟಾಟಲ್.
3. ನಿಮ್ಮನ್ನು ನೀವು ನಂಬಲಿಲ್ಲ ಎಂದಾದರೆ ದೇವರನ್ನು ನಂಬಿ ಪ್ರಯೋಜನವಿಲ್ಲ. -----ಸ್ವಾಮಿ ವಿವೇಕಾನಂದ
4. ಪ್ರೇಮವೆಂಬ ರೋಗ ಬುದ್ಧಿವಂತ ಮತ್ತು ದಡ್ಡ ಎಂದು ತಾರತಮ್ಯ ಮಾಡುವುದಿಲ್ಲ.-----ಆಲ್ಬರ್ಟ್ ಕಾಮು.
5. ಭವಿಷ್ಯದ ಬಗ್ಗೆ ನಾನು ಚಿಂತಿಸುವುದಿಲ್ಲ.ಏಕೆಂದರೆ ಅದು ಬಂದೇ ಬರುತ್ತದೆ. -----ಆಲ್ಬರ್ಟ್ ಐನ್ ಸ್ಟೀನ್.
6. ಜ್ಞಾನದಲ್ಲಿ ಹೂಡಿಕೆ ಮಾಡಿದರೆ ಎಂದೆಂದಿಗೂ ಅತ್ಯಧಿಕ ಆದಾಯ ಸಿಗುತ್ತದೆ. -----ಬೆಂಜಮಿನ್ ಫ್ರಾಂಕ್ ಲಿನ್.
7. ನಮಗೆ ಎಷ್ಟು ಯೋಗ್ಯತೆ ಇದೆಯೋ ಅಷ್ಟೇ ಉತ್ತಮ ಆಡಳಿತ ಲಭ್ಯವಾಗಿಸುವುದು ಪ್ರಜಾಸತ್ತೆಯ ವಿಶೇಷ. ----- ಜಾರ್ಜ್ ಬರ್ನಾರ್ಡ್ ಷಾ.
8. ಕೇಳಿದಾಗ ಕೊಟ್ಟುಬಿಡುವುದು ಒಳ್ಳೆಯದು.ಆದರೆ ಕೇಳದೇ ಕೊಡುವುದು ಇನ್ನೂ ಒಳ್ಳೆಯದು.-----ಖಲೀಲ್ ಗಿಬ್ರಾನ್.
9. ಶ್ರೇಷ್ಠ ಸತ್ಯಗಳು ಗೊತ್ತಿಲ್ಲದಾಗ ಗ್ರಂಥಗಳ ಓದಿನಿಂದ ಪ್ರಯೋಜನವಿಲ್ಲ. ಶ್ರೇಷ್ಠ ಸತ್ಯಗಳು ಗೊತ್ತಾದಾಗಲೂ ಗ್ರಂಥಗಳ ಓದಿನಿಂದ ಪ್ರಯೋಜನವಿಲ್ಲ. -----ಆದಿ ಶಂಕರ
10. ಪ್ರೇಮದಲ್ಲಿ ಯಾವತ್ತೂ ಸ್ವಲ್ಪ ಹುಚ್ಚಿರುತ್ತವೆ. ಆದರೆ ಎಷ್ಟೋ ಸಲ ಆ ಹುಚ್ಚು ಸಕಾರಣವಾಗಿರುತ್ತದೆ.----- ಫ್ರೆಡ್ರಿಕ್ ನೀಷೆ.
11. ಜಗತ್ತಿನಲ್ಲಿ ಅರ್ಧದಷ್ಟು ಜನರು ಇನ್ನೊಬ್ಬರ ಸಂತೋಷವನ್ನು ಅರ್ಥ ಮಾಡಿಕೊಳ್ಳಲಾರರು.------ಜೇನ್ ಆಸ್ಟಿನ್.
12. ಅಜ್ಞಾನವು ಯಾವತ್ತೂ ಯಾವ ಪ್ರಶ್ನೆಗಳನ್ನೂ ಬಗೆಹರಿಸುವುದಿಲ್ಲ.-----ಬೆಂಜಮಿನ್ ಡಿಸ್ರೇಲಿ.
13. ನಮ್ಮನ್ನು ಯಾರೂ ಮೋಸಗೊಳಿಸಲು ಸಾಧ್ಯವಿಲ್ಲ. ನಾವೇ ಮೋಸ ಹೋಗುತ್ತೇವೆ.---- ಗಾಯಟೆ.
14. ಬುದ್ಧಿವಂತ ತನ್ನ ಸವಂತ ನಿರ್ದೇಶನಗಳನ್ನು ಮಾತ್ರ ಪಾಲಿಸುತ್ತಾನೆ.-----ಯೂರಿಪಿಡಿಸ್.
15. ಯಾವುದೇ ಘಟನೆಯ ಬಗ್ಗೆ ಭವಿಷ್ಯ ನುಡಿಯುವುದು ಸರಿಯಲ್ಲ.ಬೇಕಿದ್ದರೆ ಘಟನೆ ನಡೆದ ಬಳಿಕ ಅದರ ಭವಿಷ್ಯ ನುಡಿಯಿರಿ.----- ವಿನ್ ಸ್ಟನ್ ಚರ್ಚಿಲ್.
16. ವರುಷಕೊಂದು ಹೊಸತು ಜನ್ಮ, ಹರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆ. ಒಂದೆ ಒಂದು ಜನ್ಮದಲ್ಲಿ ಒಂದೆ ಬಾಲ್ಯ ಒಂದೆ ಹರೆಯ , ನಮಗದಷ್ಟೇ ಏತಕೊ.-----ದ.ರಾ.ಬೇಂದ್ರೆ.
17. ಕೇವಲ ಸಂಬಳಕ್ಕಾಗಿ ಮಾಡುವ ಎಲ್ಲಾ ಕೆಲಸಗಳು ಮನಸ್ಸನ್ನು ಕುಂಠಿತಗೊಳಿಸುತ್ತವೆ.----- ಅರಿಸ್ಟಾಟಲ್.
18. ಇತರರು ಎಸೆದ ಇಟ್ಟಿಗೆಗಳಿಂದ ಗಟ್ಟಿಯಾದ ಅಡಿಪಾಯ ನಿರ್ಮಿಸುವವನೇ ನಿಜವಾದ ಯಶಸ್ವಿ ಮನುಷ್ಯ. ----- ಡೇವಿಡ್ ಬ್ರಿಂಕ್ಲೀ.
19. ಶಾಂತಿ ನಮ್ಮ ಒಳಗಿನಿಂದಲೇ ಬರುತ್ತದೆ. ಅದನ್ನು ಹೊರಗೆಲ್ಲ ಹುಡುಕಬೇಡಿ.----- ಗೌತಮ ಬುದ್ಧ.
20. ನೀನು ಸಮುದ್ರದಲ್ಲಿ ಒಂದು ಬಿಂದು ಅಲ್ಲ; ಒಂದು ಬಿಂದುವಿನಲ್ಲಿ ಇಡೀ ಸಮುದ್ರ. -----ಜಲಾಲುದ್ದೀನ್ ರೂಮಿ.
21. ಜಗತ್ತು ಕನಸಿನಲ್ಲಿ ನಡೆಯುವ ಒಂದು ನಾಟಕ.----- ಗುರುನಾನಕ್. 

Comments

Popular posts from this blog

ಸವರ್ಣ ದೀರ್ಘ ಸಂಧಿ. ಸವರ್ಣ ದೀರ್ಘ ಸಂಧಿ ಉದಾಹರಣೆಗಳು savarna dhirgha sandhi. Savarna dhirgha sandhi examples

ಸವರ್ಣ ದೀರ್ಘ ಸಂಧಿ. [ ] ಪೂರ್ವ ಪದದ ಅಂತ್ಯ ಸ್ವರ ಮತ್ತು ಉತ್ತರ ಪದದ ಆರಂಭದ ಸ್ವರ ಒಂದೇ ರೀತಿಯ ವರ್ಣವಾಗಿದ್ದರೆ , ಸಂಧಿಕಾರ್ಯ ನಡೆಯುವಾಗ ಅದೇ ಸ್ವರದ ದೀರ್ಘ ಸ್ವರವು ಆದೇಶವಾಗಿರುವುದು ಕಂಡು ಬರುತ್ತದೆ. [ ] ಸಂಧಿಕಾರ್ಯ ನಡೆಯುವಾಗ ಒಂದೇ ರೀತಿಯ ಸ್ವರಾಕ್ಷರಗಳು ಪರಸ್ಪರ ಸೇರಿ ದೀರ್ಘ ಸ್ವರ ಆದೇಶವಾದರೆ ಅಂತಹ ಸಂಧಿಯನ್ನು "ಸವರ್ಣ ದೀರ್ಘ ಸಂಧಿ "ಎಂದು ಕರೆಯುತ್ತಾರೆ. [ ] ಸವರ್ಣಾಕ್ಷರಗಳಿಗೆ ಸವರ್ಣಾಕ್ಷರಗಳ ಪರವಾಗಿ ಸವರ್ಣ ದೀರ್ಘಾಕ್ಷರಗಳು ಬಂದರೆ ಸವರ್ಣ ದೀರ್ಘ ಸಂಧಿ. [ ] ಉದಾಹರಣೆಗೆ ಪೂರ್ವ ಪದ + ಉತ್ತರ ಪದ = ಸಂಧಿಪದ 1. ರವಿ + ಇಂದ್ರ = ರವೀಂದ್ರ ( ಇ+ಇ= ಈ) 2. ದೇವ+ ಆಲಯ= ದೇವಾಲಯ. (ಅ+ಆ=ಆ) 3. ಗುರು+ ಉಪದೇಶ =ಗುರೂಪದೇಶ (ಉ+ಉ=ಊ) 4. ಮಹಾ+ ಆತ್ಮ = ಮಹಾತ್ಮ (ಆ+ಆ=ಆ) 5. ಗಿರಿ+ ಇಂದ್ರ = ಗಿರೀಂದ್ರ 6. ಮುನಿ+ ಇಂದ್ರ =ಮುನೀಂದ್ರ. 7. ಅಲ್ಪ + ಅಕ್ಷರ =ಅಲ್ಪಾಕ್ಷರ. 8. ವಿದ್ಯ+ ಅರ್ಜನೆ=ವಿದ್ಯಾರ್ಜನೆ. 9. ರಾಕ್ಷಸ + ಅಧಿಪತಿ= ರಾಕ್ಷಸಾಧಿಪತಿ. 10. ಸೀತ+ಅನ್ವೇಷಣೆ= ಸೀತಾನ್ವೇಷಣೆ. 11. ಪಂಚ+ಆಸ್ಯ=ಪಂಚಾಸ್ಯ. 12. ಶಾಸಕ+ಅಂಗ=ಶಾಸಕಾಂಗ. 13. ಅಭಯ+ಅರಣ್ಯ =ಅಭಯಾರಣ್ಯ. 14. ಉಭಯ+ಅರಣ್ಯ =ಉಭಯಾರಣ್ಯ 15. ವಸ್ರ್ತ + ಆಭರಣ= ವಸ್ತ್ರಾಭರಣ. 16. ಗೌರಿ+ಈಶ =ಗೌರೀಶ. 17. ಕಟು+ಉಕ್ತಿ=ಕಟೂಕ್ತಿ. 18. ಕೃಷ್ಣ +ಅಜಿನ=ಕೃಷ್ಣಾಜಿನ. 19. ಪೀತ+ಅಂಬರ=ಪೀತಾಂಬರ. 20. ಏಕ+ಆಸ...

ಡಾ.ಸತ್ಯಾನಂದ ಪಾತ್ರೋಟ Dr.satyananda patrota

• ಡಾ.ಸತ್ಯಾನಂದ ಪಾತ್ರೋಟ • ಜನನ- ಬಾಗಲಕೋಟೆ • ವಿದ್ಯಾಭ್ಯಾಸ ~ಎಂ.ಎ., ಪಿ.ಎಚ್.ಡಿ. • ಉದ್ಯೋಗ ~ ಬಾಗಲಕೋಟೆಯ ಎಸ್.ಬಿ.ಪಾಟೀಲ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಅಧ್ಯಾಪಕರು. • ಕವನ ಸಂಕಲನಗಳು 1. ಕರಿನೆಲದ ಕಲೆಗಳು 2. ಜಾಜಿ ಮಲ್ಲಿಗೆ 3. ಕಲ್ಲಿಗೂ ಗೊತ್ತಿರುವ ಕಥೆ. 4. ಕರಿಯ ಕಟ್ಟಿದ ಕವನ 5. ನನ್ನ ಕನಸಿನ ಹುಡುಗಿ 6. ನದಿಗೊಂದು ಕನಸು ಮತ್ತು ಅವಳು ನಾಟಕಗಳು 1. ನಮಗ ಯಾರು ಇಲ್ಲೋ ಎಪ್ಪಾ ಸಾಕ್ಷಿ 2. ಮತ್ತೊಬ್ಬ ಏಕಲವ್ಯ ಪ್ರಬಂಧ ಸಂಕಲನ 1. ಒಂದಿಷ್ಟು ಕ್ಷಣಗಳು ಕಾವ್ಯದ ಧ್ವನಿಸುರುಳಿ 1. ಎದೆಯ ಮಾತು ಪ್ರಶಸ್ತಿ- ಕನ್ನಡ ರಾಜ್ಯೋತ್ಸವ ಪ್ರಶಸ್ತಿ

Kannada grammar for kpsc exams ಕೆ.ಪಿ.ಎಸ್. ಸಿ.ಪರೀಕ್ಷೆಗಳಿಗೆ ಕನ್ನಡ ವ್ಯಾಕರಣ

 ಕೆ.ಪಿ.ಎಸ್. ಸಿ ನಡೆಸುವ ಪ್ರತಿಯೊಂದು ಪರೀಕ್ಷೆಗಳಲ್ಲಿ ಕನ್ನಡಕ್ಕೆ ಸಂಬಂಧಪಟ್ಟಂತೆ 35 ಅಂಕಗಳನ್ನು ನಿಗದಿಪಡಿಸಲಾಗಿದೆ. ಪರೀಕ್ಷೆಗೆ ಅನಕೂಲವಾಗಲೆಂದು  ಕನ್ನಡ ವ್ಯಾಕರಣಕ್ಕೆ ಸಂಬಂಧಪಟ್ಟ ಕೆಲವು ಮಾಹಿತಿ ಸಂಗ್ರಹಿಸಿ ಸ್ಪರ್ಧಾರ್ಥಿಗಳ ಅನುಕೂಲಕ್ಕಾಗಿ ನೀಡಲಾಗಿದೆ.ಆಸಕ್ತರು ಇದರ ಸದುಪಯೋಗ ಪಡೆಯಬಹುದು. □  □ □ □ □ □ □ □ □ □ □ □ □ □ □     ತತ್ಸಮ - - - -  - - - - - - - - - ತದ್ಭವ (ಸಂಸ್ಕೃತ )                    (ಕನ್ನಡ ) ■ ನರ್ತಕಿ - ನಚ್ಚಣಿ ■ ಲಕ್ಷ್ಮಿ - ಲಕ್ಕಿ ,ಲಕುಮಿ ■ವೇಷ - ವೇಸ ■ಲೇಪ - ಲಪ್ಪ ■ವರ್ಧಮಾನ - ಬದ್ದವಣ ■ವಜ್ರ - ಬಜ್ಜರ ■ವತ್ಸಲಾ - ಬಚ್ಚಳೆ ■ವಿಸ್ತಾರ - ಬಿತ್ತರ ■ವೃದ್ಧ - ವಡ್ಡ ■ವೃದ್ಧಿ - ಬಡ್ಡಿ ■ವ್ಯಾಖ್ಯಾನ - ವಕ್ಕಣೆ ■ವ್ಯಾಘ್ರ - ಬಗ್ಗ ■ವರ್ಧಕಿ - ಬಡಗಿ ■ವಿದ್ಯೆ - ಬಿಜ್ಜೆ ■ವೈದ್ಯ - ಬೆಜ್ಜ ■ವಿಜ್ಞಾನ - ಬಿನ್ನಣ ■ಶಿಲ್ಪಕ,ಶಿಲ್ಪಿ - ಸಿಂಪಿಗ ,ಚಿಪ್ಪಿಗ ■ಶೂನ್ಯ - ಸೊನ್ನೆ ■ಅವಸ್ಥೆ - ಅವತೆ ■ಅರ್ಹ - ಅರುಹ ■ಅರ್ಗಲ,ಅರ್ಗಲೆ - ಅಗಳಿ,ಅಗುಳಿ (ಚಿಲಕ) ■ಅಂಗುಷ್ಠ - ಅಂಗುಟ ,ಉಂಗುಟ. ■ಆಲಸ್ಯ - ಆಲಸ ■ಆಜ್ಞಾ, ಆಜ್ಞೆ - ಆಣೆ ■ಕ್ರಕಚ - ಗರಗಸ ■ಕ್ಷಣ - ಚಣ ■ಗ್ರಹ - ಗರ ■ಗ್ರಹಣ - ಗರಣ ■ಗ್ರಾಮೀಣ - ಗಾವಿಲ ■ಲಕ್ಷ - ಲಕ್ಕ ■ ಶ್ರೇಷ್ಠಿ -...