Thursday 28 December 2017

ಕನ್ನಡ ಸುಭಾಷಿತಗಳು ಕನ್ನಡ ನುಡಿಮುತ್ತು ಗಳು Kannada subhashitagalu Kannada nudimuttugalu

ಕನ್ನಡ ಭಾಷೆಯ ಹಿರಿಮೆಗಳಲ್ಲಿ ಸುಭಾಷಿತಗಳು ಮತ್ತು ಹಿತನುಡಿ ,ನುಡಿಮುತ್ತುಗಳು ಒಂದು ಪ್ರಮುಖ ಅಂಶವಾಗಿದೆ. ಕೆಲವೊಂದು ಸುಭಾಷಿತಗಳು ಈ ಕೆಳಗಿನಂತಿವೆ.
1. ಪ್ರಾಮಾಣಿಕ ಭಿನ್ನಮತ ಎಷ್ಟೋ ಸಲ ಪ್ರಗತಿಯ ಆರೋಗ್ಯಕರ ಸೂಚನೆಯಾಗಿರುತ್ತದೆ.----- ಮಹಾತ್ಮಾ ಗಾಂಧಿ.
2. ಪ್ರಕೃತಿ ನಿಷ್ಪ್ರಯೋಜಕವಾದ ಯಾವುದನ್ನು ಸೃಷ್ಟಿಸಿಲ್ಲ.-----ಅರಿಸ್ಟಾಟಲ್.
3. ನಿಮ್ಮನ್ನು ನೀವು ನಂಬಲಿಲ್ಲ ಎಂದಾದರೆ ದೇವರನ್ನು ನಂಬಿ ಪ್ರಯೋಜನವಿಲ್ಲ. -----ಸ್ವಾಮಿ ವಿವೇಕಾನಂದ
4. ಪ್ರೇಮವೆಂಬ ರೋಗ ಬುದ್ಧಿವಂತ ಮತ್ತು ದಡ್ಡ ಎಂದು ತಾರತಮ್ಯ ಮಾಡುವುದಿಲ್ಲ.-----ಆಲ್ಬರ್ಟ್ ಕಾಮು.
5. ಭವಿಷ್ಯದ ಬಗ್ಗೆ ನಾನು ಚಿಂತಿಸುವುದಿಲ್ಲ.ಏಕೆಂದರೆ ಅದು ಬಂದೇ ಬರುತ್ತದೆ. -----ಆಲ್ಬರ್ಟ್ ಐನ್ ಸ್ಟೀನ್.
6. ಜ್ಞಾನದಲ್ಲಿ ಹೂಡಿಕೆ ಮಾಡಿದರೆ ಎಂದೆಂದಿಗೂ ಅತ್ಯಧಿಕ ಆದಾಯ ಸಿಗುತ್ತದೆ. -----ಬೆಂಜಮಿನ್ ಫ್ರಾಂಕ್ ಲಿನ್.
7. ನಮಗೆ ಎಷ್ಟು ಯೋಗ್ಯತೆ ಇದೆಯೋ ಅಷ್ಟೇ ಉತ್ತಮ ಆಡಳಿತ ಲಭ್ಯವಾಗಿಸುವುದು ಪ್ರಜಾಸತ್ತೆಯ ವಿಶೇಷ. ----- ಜಾರ್ಜ್ ಬರ್ನಾರ್ಡ್ ಷಾ.
8. ಕೇಳಿದಾಗ ಕೊಟ್ಟುಬಿಡುವುದು ಒಳ್ಳೆಯದು.ಆದರೆ ಕೇಳದೇ ಕೊಡುವುದು ಇನ್ನೂ ಒಳ್ಳೆಯದು.-----ಖಲೀಲ್ ಗಿಬ್ರಾನ್.
9. ಶ್ರೇಷ್ಠ ಸತ್ಯಗಳು ಗೊತ್ತಿಲ್ಲದಾಗ ಗ್ರಂಥಗಳ ಓದಿನಿಂದ ಪ್ರಯೋಜನವಿಲ್ಲ. ಶ್ರೇಷ್ಠ ಸತ್ಯಗಳು ಗೊತ್ತಾದಾಗಲೂ ಗ್ರಂಥಗಳ ಓದಿನಿಂದ ಪ್ರಯೋಜನವಿಲ್ಲ. -----ಆದಿ ಶಂಕರ
10. ಪ್ರೇಮದಲ್ಲಿ ಯಾವತ್ತೂ ಸ್ವಲ್ಪ ಹುಚ್ಚಿರುತ್ತವೆ. ಆದರೆ ಎಷ್ಟೋ ಸಲ ಆ ಹುಚ್ಚು ಸಕಾರಣವಾಗಿರುತ್ತದೆ.----- ಫ್ರೆಡ್ರಿಕ್ ನೀಷೆ.
11. ಜಗತ್ತಿನಲ್ಲಿ ಅರ್ಧದಷ್ಟು ಜನರು ಇನ್ನೊಬ್ಬರ ಸಂತೋಷವನ್ನು ಅರ್ಥ ಮಾಡಿಕೊಳ್ಳಲಾರರು.------ಜೇನ್ ಆಸ್ಟಿನ್.
12. ಅಜ್ಞಾನವು ಯಾವತ್ತೂ ಯಾವ ಪ್ರಶ್ನೆಗಳನ್ನೂ ಬಗೆಹರಿಸುವುದಿಲ್ಲ.-----ಬೆಂಜಮಿನ್ ಡಿಸ್ರೇಲಿ.
13. ನಮ್ಮನ್ನು ಯಾರೂ ಮೋಸಗೊಳಿಸಲು ಸಾಧ್ಯವಿಲ್ಲ. ನಾವೇ ಮೋಸ ಹೋಗುತ್ತೇವೆ.---- ಗಾಯಟೆ.
14. ಬುದ್ಧಿವಂತ ತನ್ನ ಸವಂತ ನಿರ್ದೇಶನಗಳನ್ನು ಮಾತ್ರ ಪಾಲಿಸುತ್ತಾನೆ.-----ಯೂರಿಪಿಡಿಸ್.
15. ಯಾವುದೇ ಘಟನೆಯ ಬಗ್ಗೆ ಭವಿಷ್ಯ ನುಡಿಯುವುದು ಸರಿಯಲ್ಲ.ಬೇಕಿದ್ದರೆ ಘಟನೆ ನಡೆದ ಬಳಿಕ ಅದರ ಭವಿಷ್ಯ ನುಡಿಯಿರಿ.----- ವಿನ್ ಸ್ಟನ್ ಚರ್ಚಿಲ್.
16. ವರುಷಕೊಂದು ಹೊಸತು ಜನ್ಮ, ಹರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆ. ಒಂದೆ ಒಂದು ಜನ್ಮದಲ್ಲಿ ಒಂದೆ ಬಾಲ್ಯ ಒಂದೆ ಹರೆಯ , ನಮಗದಷ್ಟೇ ಏತಕೊ.-----ದ.ರಾ.ಬೇಂದ್ರೆ.
17. ಕೇವಲ ಸಂಬಳಕ್ಕಾಗಿ ಮಾಡುವ ಎಲ್ಲಾ ಕೆಲಸಗಳು ಮನಸ್ಸನ್ನು ಕುಂಠಿತಗೊಳಿಸುತ್ತವೆ.----- ಅರಿಸ್ಟಾಟಲ್.
18. ಇತರರು ಎಸೆದ ಇಟ್ಟಿಗೆಗಳಿಂದ ಗಟ್ಟಿಯಾದ ಅಡಿಪಾಯ ನಿರ್ಮಿಸುವವನೇ ನಿಜವಾದ ಯಶಸ್ವಿ ಮನುಷ್ಯ. ----- ಡೇವಿಡ್ ಬ್ರಿಂಕ್ಲೀ.
19. ಶಾಂತಿ ನಮ್ಮ ಒಳಗಿನಿಂದಲೇ ಬರುತ್ತದೆ. ಅದನ್ನು ಹೊರಗೆಲ್ಲ ಹುಡುಕಬೇಡಿ.----- ಗೌತಮ ಬುದ್ಧ.
20. ನೀನು ಸಮುದ್ರದಲ್ಲಿ ಒಂದು ಬಿಂದು ಅಲ್ಲ; ಒಂದು ಬಿಂದುವಿನಲ್ಲಿ ಇಡೀ ಸಮುದ್ರ. -----ಜಲಾಲುದ್ದೀನ್ ರೂಮಿ.
21. ಜಗತ್ತು ಕನಸಿನಲ್ಲಿ ನಡೆಯುವ ಒಂದು ನಾಟಕ.----- ಗುರುನಾನಕ್. 

No comments:

Post a Comment

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು