Skip to main content

ಕನ್ನಡ ಸುಭಾಷಿತಗಳು ಕನ್ನಡ ನುಡಿಮುತ್ತು ಗಳು kannada subhashitagalu Kannada nudi muttugalu

1. ಇತಿಹಾಸವನ್ನು ಯಾರು ಬೇಕಾದರೂ ಸೃಷ್ಟಿಸಬಹುದು. ಆದರೆ ಶ್ರೇಷ್ಠ ವ್ಯಕ್ತಿಗಳು ಮಾತ್ರ ಅದನ್ನು ಬರೆಯುತ್ತಾರೆ.-----ಆಸ್ಕರ್ ವೈಲ್ಡ್.
2. ಯಾವುದೇ ಕೆಲಸವನ್ನು ಮಾಡುವುದಕ್ಕಿಂತ ಮುಂಚೆಯೇ ಕಲಿಯಬೇಕೆಂದರೆ, ಅದನ್ನು ಮಾಡುತ್ತಲೇ ಕಲಿಯಬೇಕು.-----ಅರಿಸ್ಟಾಟಲ್.
3. ಯಾರಿಗೆ ಯಾರೂ ಇಲ್ಲ ಎನ್ನುವುದೇ ಈ ಜಗತ್ತಿನ ಅತಿದೊಡ್ಡ ರೋಗ.----- ಮದರ್ ತೆರೆಸಾ.
4. ನಮ್ಮ ಕನಸುಗಳೇ ನಾವು ನಿಜವಾಗಿ ಯಾರು ಎನ್ನುವುದನ್ನು ತೋರಿಸಿಕೊಡುತ್ತವೆ.----ಬಾರ್ಬರಾ ಶೆರ್.
5. ತಲೆಕೂದಲಿಗೆ ಬಣ್ಣ ಹಚ್ಚುವುದರಿಂದ ಯೌವನವನ್ನು ತಡೆದಿಟ್ಟುಕೊಳ್ಳಲು ಆಗುವುದಿಲ್ಲ.---- ಖಲೀಫಾ ಅಬೂಬಕರ್.
6. ಬುದ್ಧಿವಂತ ಮನುಷ್ಯನ ತಲೆಯಲ್ಲಿ ಹಣ ಇರುವುದಿಲ್ಲ; ಹೃದಯದಲ್ಲಿ ಹಣ ಇರುತ್ತದೆ.---- ಜೊನಾಥನ್ ಸ್ವಿಫ್ಟ್.
7. ಸಾಮಾನ್ಯ ಮನುಷ್ಯ ಪ್ರಾರ್ಥಿಸುವುದಿಲ್ಲ ; ಕೇವಲ ಬೇಡುತ್ತಾನೆ.----ಜಾರ್ಜ್ ಬರ್ನಾರ್ಡ್.
8. ಕಲೆಯನ್ನು ಶಾಲೆಗಳಲ್ಲಿ ಕಲಿಸಲಾಗುವುದಿಲ್ಲ.ಕಲಾವಿದನಿಗೆ ರಸ್ತೆಗಳೇ ನಿಜವಾದ ಶಾಲೆಗಳು.-----ಆಸ್ಕರ್ ವೈಲ್ಡ್.
9. ಪ್ರತಿಯೊಬ್ಬ ಮಗುವೂ ಒಬ್ಬ ಕಲಾವಿದ. ಆದರೆ ಬೆಳೆಯುತ್ತಾ ಹೋದಂತೆ ಈ ಕಲಾವಿದ ಉಳಿದುಕೊಳ್ಳುತ್ತಾನೆಯೋ ಎನ್ನುವುದಷ್ಟೇ ಪ್ರಶ್ನೆ. ----- ಪಾಬ್ಲೊ ಪಿಕಾಸೊ.
10. ದಾರಿಯಲ್ಲಿ ಬೊಗಳುವ ಎಲ್ಲಾ ನಾಯಿಗಳತ್ತಲೂ ಕಲ್ಲೆಸೆಯುತ್ತಾ ನಿಂತರೆ , ನಿಮ್ಮ ಗುರಿಯನ್ನು ನೀವು ಎಂದಿಗೂ ತಲುಪಲಾರಿರಿ.-----ವಿನ್ ಸ್ಟನ್ ಚರ್ಚಿಲ್.
11. ಪುಸ್ತಕಗಳು ಒಂದೋ ಕನಸುಗಳಾಗಿರುತ್ತವೆ ಅಥವಾ ಖಡ್ಗಗಳಾಗಿರುತ್ತವೆ.----ಅಮಿ ಲೊವೆಲ್.
12. ದೇವರು ಬುದ್ಧಿವಂತ ಆದರೆ ಅಪ್ರಾಮಾಣಿಕ ಅಲ್ಲ. ------ ಆಲ್ಬರ್ಟ್ ಐನ್ ಸ್ಟೀನ್.
13. ಸರ್ಕಾರ ಅಂದ ಮೇಲೆ , ಕುರಿಗಳೂ ಇರಬೇಕು, ಕಟುಕರೂ ಇರಬೇಕು. -----ವಾಲ್ಟೇರ್.
14. ನಿಮ್ಮ ಪ್ರತಿಷ್ಠೆಗಿಂತ ನಿಮ್ಮ ಚಾರಿತ್ರ್ಯಕ್ಕೆ ಗಮನ ಕೊಡಿ.ಚಾರಿತ್ರ್ಯ ಎಂದರೆ ನೀವು ಏನಾಗಿದ್ದೀರೋ ಅದು.ಪ್ರತಿಷ್ಠೆ ಎಂದರೆ ನಿಮ್ಮ ಬಗ್ಗೆ ಬೇರೆಯವರು ಏನು ತಿಳಿದುಕೊಂಡಿದ್ದಾರೋ ಅದು.-----ಜಾನ್ ವೂಡನ್.
15. ಹೂವಿನ ಪರಿಮಳ ಗಾಳಿ ಬಂದ ದಿಕ್ಕಿಗೆ ಮಾತ್ರ ಪಸರಿಸುತ್ತದೆ.ಆದರೆ ಮನುಷ್ಯನ ಒಳ್ಳೆಯತನ ಎಲ್ಲಾ ದಿಕ್ಕುಗಳಲ್ಲೂ ಪಸರಿಸುತ್ತದೆ.-----ಚಾಣಕ್ಯ.
16. ಬಹಳಷ್ಟು ಜನರು ತಮ್ಮ ಕನಸುಗಳನ್ನು ನನಸುಗೊಳಿಸಲು ವಿಫಲರಾಗುತ್ತಾರೆ. ಏಕೆಂದರೆ ಅವರು ಸಾಯಲು ಹೆದರುತ್ತಾರೆ.-----ಲೆಸ್ ಬ್ರೌನ್
17. ಹೆಚ್ಚು ಕಷ್ಟ ಪಟ್ಟು ದುಡಿದಷ್ಟೂ ಅದೃಷ್ಟ ಹೆಚ್ಚಾಗಿ ನಿಮ್ಮನ್ನು ಒಲಿಯುತ್ತದೆ. -----ಥಾಮಸ್ ಜಫರ್ಸನ್.
18. ದುಃಖ ನಿಮ್ಮನ್ನು ಆಳವಾಗಿ ಕೊರೆದಷ್ಟೂ ನಿಮ್ಮ ಸಂತೋಷದ ಪ್ರಮಾಣ ಹೆಚ್ಚಾಗುತ್ತದೆ.-----ಖಲೀಲ್ ಗಿಬ್ರಾನ್.
19. ಶಿಕ್ಷಣವಿಲ್ಲದ ಬುದ್ಧಿವಂತ, ಗಣಿಯೊಳಗಿರುವ ಬೆಳ್ಳಿಯಂತೆ.----ಬೆಂಜಮಿನ್ ಫ್ರಾಂಕ್ಲಿನ್.
20. ಅನುಭವವೇ ಅತಿದೊಡ್ಡ ಶಿಕ್ಷಕ.ಅವನು ಮೊದಲು ಪರೀಕ್ಷೆ ಕೊಡುತ್ತಾನೆ, ಬಳಿಕ ಪಾಠ ಮಾಡುತ್ತಾನೆ. ----ವರ್ಮನ್ ಲಾ.
21. ಯಾವ ಮನುಷ್ಯನ ಜ್ಞಾನವೂ ಅವನ ಅನುಭವಕ್ಕಿಂತ ಮುಂದೆ ಹೋಗಲಾರದು.---- ಜಾನ್ ಲಾಕ್.
22. ತಪ್ಪುಗಳಿಂದ ಪಾಠ ಕಲಿಯುವುದಿದ್ದರೆ ಮಾತ್ರ ಹಿಂದೆ ತಿರುಗಿ ನೋಡಿ---ಜಾರ್ಜ್ ವಾಷಿಂಗ್ಟನ್.
23. ಒಂದು ಕ್ಷಣದ ಒಳನೋಟ ಕೆಲವೊಮ್ಮೆ ಇಡೀ ಜೀವನದ ಒಟ್ಟು ಅನುಭವವಾಗುತ್ತದೆ.----ಒಲಿವರ್ ಹೋಮ್ಸ್.
24. ನಮ್ಮ ಹೃದಯದಲ್ಲಿ ಮತ್ತು ಇನ್ನೊಬ್ಬ ಮನುಷ್ಯನಲ್ಲಿ ದೇವರು ಕಾಣಿಸಲಿಲ್ಲ ಎಂದಾದರೆ ಬೇರೆಲ್ಲಿ ದೇವರನ್ನು ಹುಡುಕುತ್ತೀರಿ. ? ---- ಸ್ವಾಮಿ ವಿವೇಕಾನಂದ.
25. ಸರಳತೆಯನ್ನು ಸಾಧಿಸುವುದು ಜಗತ್ತಿನಲ್ಲಿ ಅತ್ಯಂತ ಕಷ್ಟದ ಕೆಲಸ. ಅದು ಅನುಭವದ ಕೊನೆಯ ಮಿತಿ ; ಬುದ್ಧಿವಂತನ ಕೊನೆಯ ಪ್ರಯತ್ನ. ----- ಜಾರ್ಜ್ ಸ್ಯಾಂಡ್.

Comments

Popular posts from this blog

ಸವರ್ಣ ದೀರ್ಘ ಸಂಧಿ. ಸವರ್ಣ ದೀರ್ಘ ಸಂಧಿ ಉದಾಹರಣೆಗಳು savarna dhirgha sandhi. Savarna dhirgha sandhi examples

ಸವರ್ಣ ದೀರ್ಘ ಸಂಧಿ. [ ] ಪೂರ್ವ ಪದದ ಅಂತ್ಯ ಸ್ವರ ಮತ್ತು ಉತ್ತರ ಪದದ ಆರಂಭದ ಸ್ವರ ಒಂದೇ ರೀತಿಯ ವರ್ಣವಾಗಿದ್ದರೆ , ಸಂಧಿಕಾರ್ಯ ನಡೆಯುವಾಗ ಅದೇ ಸ್ವರದ ದೀರ್ಘ ಸ್ವರವು ಆದೇಶವಾಗಿರುವುದು ಕಂಡು ಬರುತ್ತದೆ. [ ] ಸಂಧಿಕಾರ್ಯ ನಡೆಯುವಾಗ ಒಂದೇ ರೀತಿಯ ಸ್ವರಾಕ್ಷರಗಳು ಪರಸ್ಪರ ಸೇರಿ ದೀರ್ಘ ಸ್ವರ ಆದೇಶವಾದರೆ ಅಂತಹ ಸಂಧಿಯನ್ನು "ಸವರ್ಣ ದೀರ್ಘ ಸಂಧಿ "ಎಂದು ಕರೆಯುತ್ತಾರೆ. [ ] ಸವರ್ಣಾಕ್ಷರಗಳಿಗೆ ಸವರ್ಣಾಕ್ಷರಗಳ ಪರವಾಗಿ ಸವರ್ಣ ದೀರ್ಘಾಕ್ಷರಗಳು ಬಂದರೆ ಸವರ್ಣ ದೀರ್ಘ ಸಂಧಿ. [ ] ಉದಾಹರಣೆಗೆ ಪೂರ್ವ ಪದ + ಉತ್ತರ ಪದ = ಸಂಧಿಪದ 1. ರವಿ + ಇಂದ್ರ = ರವೀಂದ್ರ ( ಇ+ಇ= ಈ) 2. ದೇವ+ ಆಲಯ= ದೇವಾಲಯ. (ಅ+ಆ=ಆ) 3. ಗುರು+ ಉಪದೇಶ =ಗುರೂಪದೇಶ (ಉ+ಉ=ಊ) 4. ಮಹಾ+ ಆತ್ಮ = ಮಹಾತ್ಮ (ಆ+ಆ=ಆ) 5. ಗಿರಿ+ ಇಂದ್ರ = ಗಿರೀಂದ್ರ 6. ಮುನಿ+ ಇಂದ್ರ =ಮುನೀಂದ್ರ. 7. ಅಲ್ಪ + ಅಕ್ಷರ =ಅಲ್ಪಾಕ್ಷರ. 8. ವಿದ್ಯ+ ಅರ್ಜನೆ=ವಿದ್ಯಾರ್ಜನೆ. 9. ರಾಕ್ಷಸ + ಅಧಿಪತಿ= ರಾಕ್ಷಸಾಧಿಪತಿ. 10. ಸೀತ+ಅನ್ವೇಷಣೆ= ಸೀತಾನ್ವೇಷಣೆ. 11. ಪಂಚ+ಆಸ್ಯ=ಪಂಚಾಸ್ಯ. 12. ಶಾಸಕ+ಅಂಗ=ಶಾಸಕಾಂಗ. 13. ಅಭಯ+ಅರಣ್ಯ =ಅಭಯಾರಣ್ಯ. 14. ಉಭಯ+ಅರಣ್ಯ =ಉಭಯಾರಣ್ಯ 15. ವಸ್ರ್ತ + ಆಭರಣ= ವಸ್ತ್ರಾಭರಣ. 16. ಗೌರಿ+ಈಶ =ಗೌರೀಶ. 17. ಕಟು+ಉಕ್ತಿ=ಕಟೂಕ್ತಿ. 18. ಕೃಷ್ಣ +ಅಜಿನ=ಕೃಷ್ಣಾಜಿನ. 19. ಪೀತ+ಅಂಬರ=ಪೀತಾಂಬರ. 20. ಏಕ+ಆಸ...

ಡಾ.ಸತ್ಯಾನಂದ ಪಾತ್ರೋಟ Dr.satyananda patrota

• ಡಾ.ಸತ್ಯಾನಂದ ಪಾತ್ರೋಟ • ಜನನ- ಬಾಗಲಕೋಟೆ • ವಿದ್ಯಾಭ್ಯಾಸ ~ಎಂ.ಎ., ಪಿ.ಎಚ್.ಡಿ. • ಉದ್ಯೋಗ ~ ಬಾಗಲಕೋಟೆಯ ಎಸ್.ಬಿ.ಪಾಟೀಲ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಅಧ್ಯಾಪಕರು. • ಕವನ ಸಂಕಲನಗಳು 1. ಕರಿನೆಲದ ಕಲೆಗಳು 2. ಜಾಜಿ ಮಲ್ಲಿಗೆ 3. ಕಲ್ಲಿಗೂ ಗೊತ್ತಿರುವ ಕಥೆ. 4. ಕರಿಯ ಕಟ್ಟಿದ ಕವನ 5. ನನ್ನ ಕನಸಿನ ಹುಡುಗಿ 6. ನದಿಗೊಂದು ಕನಸು ಮತ್ತು ಅವಳು ನಾಟಕಗಳು 1. ನಮಗ ಯಾರು ಇಲ್ಲೋ ಎಪ್ಪಾ ಸಾಕ್ಷಿ 2. ಮತ್ತೊಬ್ಬ ಏಕಲವ್ಯ ಪ್ರಬಂಧ ಸಂಕಲನ 1. ಒಂದಿಷ್ಟು ಕ್ಷಣಗಳು ಕಾವ್ಯದ ಧ್ವನಿಸುರುಳಿ 1. ಎದೆಯ ಮಾತು ಪ್ರಶಸ್ತಿ- ಕನ್ನಡ ರಾಜ್ಯೋತ್ಸವ ಪ್ರಶಸ್ತಿ

Kannada grammar for kpsc exams ಕೆ.ಪಿ.ಎಸ್. ಸಿ.ಪರೀಕ್ಷೆಗಳಿಗೆ ಕನ್ನಡ ವ್ಯಾಕರಣ

 ಕೆ.ಪಿ.ಎಸ್. ಸಿ ನಡೆಸುವ ಪ್ರತಿಯೊಂದು ಪರೀಕ್ಷೆಗಳಲ್ಲಿ ಕನ್ನಡಕ್ಕೆ ಸಂಬಂಧಪಟ್ಟಂತೆ 35 ಅಂಕಗಳನ್ನು ನಿಗದಿಪಡಿಸಲಾಗಿದೆ. ಪರೀಕ್ಷೆಗೆ ಅನಕೂಲವಾಗಲೆಂದು  ಕನ್ನಡ ವ್ಯಾಕರಣಕ್ಕೆ ಸಂಬಂಧಪಟ್ಟ ಕೆಲವು ಮಾಹಿತಿ ಸಂಗ್ರಹಿಸಿ ಸ್ಪರ್ಧಾರ್ಥಿಗಳ ಅನುಕೂಲಕ್ಕಾಗಿ ನೀಡಲಾಗಿದೆ.ಆಸಕ್ತರು ಇದರ ಸದುಪಯೋಗ ಪಡೆಯಬಹುದು. □  □ □ □ □ □ □ □ □ □ □ □ □ □ □     ತತ್ಸಮ - - - -  - - - - - - - - - ತದ್ಭವ (ಸಂಸ್ಕೃತ )                    (ಕನ್ನಡ ) ■ ನರ್ತಕಿ - ನಚ್ಚಣಿ ■ ಲಕ್ಷ್ಮಿ - ಲಕ್ಕಿ ,ಲಕುಮಿ ■ವೇಷ - ವೇಸ ■ಲೇಪ - ಲಪ್ಪ ■ವರ್ಧಮಾನ - ಬದ್ದವಣ ■ವಜ್ರ - ಬಜ್ಜರ ■ವತ್ಸಲಾ - ಬಚ್ಚಳೆ ■ವಿಸ್ತಾರ - ಬಿತ್ತರ ■ವೃದ್ಧ - ವಡ್ಡ ■ವೃದ್ಧಿ - ಬಡ್ಡಿ ■ವ್ಯಾಖ್ಯಾನ - ವಕ್ಕಣೆ ■ವ್ಯಾಘ್ರ - ಬಗ್ಗ ■ವರ್ಧಕಿ - ಬಡಗಿ ■ವಿದ್ಯೆ - ಬಿಜ್ಜೆ ■ವೈದ್ಯ - ಬೆಜ್ಜ ■ವಿಜ್ಞಾನ - ಬಿನ್ನಣ ■ಶಿಲ್ಪಕ,ಶಿಲ್ಪಿ - ಸಿಂಪಿಗ ,ಚಿಪ್ಪಿಗ ■ಶೂನ್ಯ - ಸೊನ್ನೆ ■ಅವಸ್ಥೆ - ಅವತೆ ■ಅರ್ಹ - ಅರುಹ ■ಅರ್ಗಲ,ಅರ್ಗಲೆ - ಅಗಳಿ,ಅಗುಳಿ (ಚಿಲಕ) ■ಅಂಗುಷ್ಠ - ಅಂಗುಟ ,ಉಂಗುಟ. ■ಆಲಸ್ಯ - ಆಲಸ ■ಆಜ್ಞಾ, ಆಜ್ಞೆ - ಆಣೆ ■ಕ್ರಕಚ - ಗರಗಸ ■ಕ್ಷಣ - ಚಣ ■ಗ್ರಹ - ಗರ ■ಗ್ರಹಣ - ಗರಣ ■ಗ್ರಾಮೀಣ - ಗಾವಿಲ ■ಲಕ್ಷ - ಲಕ್ಕ ■ ಶ್ರೇಷ್ಠಿ -...