Thursday 11 January 2018

ಕನ್ನಡ ಸುಭಾಷಿತಗಳು ಕನ್ನಡ ನುಡಿಮುತ್ತು ಗಳು kannada subhashitagalu Kannada nudi muttugalu

1. ಹೇಳಿದರೆ ಮರೆತು ಬಿಡುತ್ತೇನೆ.ತೋರಿಸಿದರೆ ನೆನಪಿಟ್ಟುಕೊಳ್ಳಬಹುದು.ನನ್ನನ್ನೂ ಜತೆಗೆ ಸೇರಿಸಿಕೊಂಡರೆ ಖಂಡಿತಾ ಅರ್ಥ ಮಾಡಿಕೊಳ್ಳುತ್ತೇನೆ.-----ಚೀನಿ ಗಾದೆ.
2. ಹೊಸತೆ ಇರಲಿ, ಹಳತೆ ಇರಲಿ: ಒಳಿತು ಯಾವುದೋ ಬಾಳ್ಗೆ ಬರಲಿ.------ಆನಂದಕಂದ
3. ಪರಭಾಷೆಯ ಮೇಲಿನ ಮೋಹವೇ ಸಂಸ್ಕೃತಿಯ ರಾಹು. ----ಮಹಾತ್ಮಾ ಗಾಂಧಿ.
4. ದುಷ್ಟ ವಿಚಾರಗಳು ದುಃಖಕ್ಕೆ ಮೂಲ ಕಾರಣ. ----ಗೌತಮ ಬುದ್ಧ.
5. ಜ್ಞಾನದ ಅತಿದೊಡ್ಡ ಶತ್ರು ಅಜ್ಞಾನ ಅಲ್ಲ; ಜ್ಞಾನದ ಭ್ರಮೆ.----ಡೇನಿಯಲ್ ಬೂಸ್ಟಿನ್.
6. ಗಾಳಿ ವಿರುದ್ಧ ದಿಕ್ಕಿಗೆ ಬೀಸಿದರೆ ಮಾತ್ರ ಗಾಳಿಪಟ ಅತ್ಯಧಿಕ ಮೇಲಕ್ಕೆ ಏರುವುದು.-----ವಿನ್ ಸ್ಟನ್ ಚರ್ಚಿಲ್.
7. ಗೆಳೆಯರು ಕಷ್ಟ ಕಾಲದಲ್ಲಿ ಪ್ರೀತಿ ತೋರುತ್ತಾರೆ,ಸಂತೋಷದ ಸಮಯದಲ್ಲಿ ಅಲ್ಲ. ----ಯುರಿಪಿಡೀಸ್.
8. ನಿಮ್ಮ ಕೊನೆಯ ಉಸಿರು ಸಮೀಪಿಸಿದಾಗ ವ್ಯಾಕರಣದಿಂದ ಏನೂ ಪ್ರಯೋಜನ ಆಗುವುದಿಲ್ಲ. -----ಆದಿ ಶಂಕರ.
9. ನಿಮ್ಮ ಮುಗುಳ್ನಗೆಯನ್ನು ಜಗತ್ತಿನ ಜತೆ ಹಂಚಿಕೊಳ್ಳಿ. ಅದು ಸ್ನೇಹ ಮತ್ತು ಶಾಂತಿಯನ್ನು ಹರಡುತ್ತದೆ. -----ಕ್ರಿಸ್ಟೀ ಬ್ರಿಂಕ್ಲೀ.
10. ಕನಸುಗಳಲ್ಲಿ ಭರವಸೆ ಇಡಿ.ಸ್ವರ್ಗದ ಬಾಗಿಲು ಅಲ್ಲೇ ಅಡಗಿದೆ.---- ಖಲೀಲ್ ಗಿಬ್ರಾನ್.
11. ನನ್ನ ಒಳಗಿರುವ ಅತ್ಯುತ್ತಮವಾದುದನ್ನು ಹೊರತೆಗೆಯುವವನೇ ನನ್ನ ಅತ್ಯುತ್ತಮ ಗೆಳೆಯ.---- ಹೆನ್ರಿ ಫೋರ್ಡ್.
12. ಪ್ರಾಮಾಣಿಕ ಮನುಷ್ಯ ಯಾವಾಗಲೂ ಮಗುವಿನಂತೆ ಇರುತ್ತಾನೆ.----ಸಾಕ್ರೆಟಿಸ್.
13. ಸತ್ಯವನ್ನು ಸಾವಿರ ತರಹ ಹೇಳಬಹುದು.ಹಾಗಿದ್ದೂ ಪ್ರತಿಯೊಂದೂ ಸತ್ಯವೇ ಆಗಿರುತ್ತದೆ. -------ಸ್ವಾಮಿ ವಿವೇಕಾನಂದ.
14. ನಿಮ್ಮ ವೈಫಲ್ಯಗಳನ್ನು ನಿರ್ಲಕ್ಷಿಸಿ , ಯಶಸ್ಸನ್ನು ಸಹಿಸಿಕೊಳ್ಳವವನೇ ನಿಜವಾದ ಗೆಳೆಯ.---- ಡೋಗ್ ಲಾರ್ಸನ್.
15. ನಗು ಎನ್ನುವುದು ಟಾನಿಕ್, ಪರಿಹಾರ ಮತ್ತು ನೋವಿಗೆ ಮುಲಾಮು.---- ಚಾರ್ಲಿ ಚಾಪ್ಲಿನ್ .
16. ಈ ಪ್ರಪಂಚದಲ್ಲಿ ಯಾರೂ ನಿಮಗೆ ಅಪರಿಚಿತರಲ್ಲ.ಅವರೆಲ್ಲರೂ ನೀವಿನ್ನೂ ಭೇಟಿಯಾಗದ ನಿಮ್ಮ ಗೆಳೆಯರು. ------ ವಿಲಿಯಂ ಬಟ್ಲರ್ ಯೇಟ್ಸ್.
17. ಮಕ್ಕಳ ಶಿಕ್ಷಣದ ಬಗ್ಗೆ ಮಾತ್ರ ತನಗೆ ಜವಾಬ್ದಾರಿ ಇದೆ ಎಂದು ಸಮಾಜ ಏಕೆ ತಿಳಿದುಕೊಳ್ಳಬೇಕು.? ದೊಡ್ಡವರ ಶಿಕ್ಷಣದ ಬಗ್ಗೆಯೂ ಸಮಾಜಕ್ಕೆ ಜವಾಬ್ದಾರಿ ಇದೆ.---- ಎರಿಕ್ ಫ್ರಾಮ್.
18. ನಿಮ್ಮ ಹೆಬ್ಬಯಕೆಗಳನ್ನು ನಿರುತ್ತೇಜಿಸುವ ಜನರಿಂದ ದೂರವಿರಿ.ನಿಜಕ್ಕೂ ಶ್ರೇಷ್ಠ ಮನುಷ್ಯರು ಮಾತ್ರ ನೀವೂ ಶ್ರೇಷ್ಠರಾಗಬಲ್ಲಿರಿ ಎಂದು ಪ್ರೋತ್ಸಾಹ ನೀಡುತ್ತಾರೆ. ----- ಮಾಕರ್ ಟ್ವೈನ್.
19. ಮಕ್ಕಳು ಹಿರಿಯರು ಹೇಳಿದ್ದನ್ನು ಆಲಿಸುವುದರಲ್ಲಿ ಯಾವತ್ತೂ ಚುರುಕಾಗಿರುವುದಿಲ್ಲ.ಆದರೆ ಹಿರಿಯರನ್ನು ಅನುಕರಿಸುವಲ್ಲಿ ಯಾವತ್ತೂ ವಿಫಲರಾಗುವುದಿಲ್ಲ.-----ಜೇಮ್ಸ್ ಬಾಲ್ಡ್ವಿನ್ .
20. ಸುಶಿಕ್ಷಿತ ಮನಸ್ಸಿನಲ್ಲಿ ಉತ್ತರಗಳಿಗಿಂತ ಹೆಚ್ಚು ಪ್ರಶ್ನೆಗಳೇ ತುಂಬಿರುತ್ತವೆ.-----ಹೆಲನ್ ಕೆಲ್ಲರ್.
21. ಬುದ್ಧಿವಂತರ ಗುರಿ ಸಂತೋಷವನ್ನು ಹೊಂದುವುದಲ್ಲ, ನೋವುಗಳನ್ನು ದೂರ ಮಾಡುವುದು.----- ಅರಿಸ್ಟಾಟಲ್.
22. ಅನುಭವ ಪುಕ್ಕಟೆ ಬರುವುದಿಲ್ಲ. ಅದಕ್ಕಾಗಿ ಏನನ್ನಾದರೂ ಖರ್ಚು ಮಾಡಬೇಕು.-----ಆಸ್ಕರ್ ವೈಲ್ಡ್.
23. ಒಳ್ಳೆಯದನ್ನು ವರ್ಣಿಸುವಾಗ ಮಾತು ಹೆಚ್ಚಾಗಲಿ, ಇಲ್ಲದನ್ನು ಹೇಳುವಾಗ ಮಾತು ಕಡಿಮೆಯಾಗಲಿ.----ಬಿ.ಎಂ.ಶ್ರೀ.
24. ಕೈಲಾದವನು ಮಾಡಿ ತೋರಿಸುತ್ತಾನೆ.ಕೈಲಾಗದವನು ಉಪದೇಶ ಮಾಡುತ್ತಾನೆ.----ಜಾರ್ಜ್ ಬರ್ನಾರ್ಡ್ ಷಾ.
25. ಇನ್ನೊಬ್ಬರಿಗೆ ಒಳಿತು ಮಾಡಿದಷ್ಟೂ ನಮ್ಮ ಹೃದಯ ಶುದ್ಧವಾಗುತ್ತದೆ.ದೇವರು ನಮಗೆ ಹತ್ತಿರವಾಗುತ್ತಾನೆ.----ಸ್ವಾಮಿ ವಿವೇಕಾನಂದ.
26. ಎಲ್ಲಕ್ಕೂ ಮನಸ್ಸೇ ಕಾರಣ. ಅದು ಪರಿಶುದ್ಧವಾಗದೆ ಯಾವ ಒಳ್ಳೆಯ ಕೆಲಸವೂ ಆಗುವುದಿಲ್ಲ. ------ಶ್ರೀ ಶಾರದಾದೇವಿ.
27. ಹೊಸ ಪುಸ್ತಕವೊಂದನ್ನು ನೀವು ನಿಮ್ಮ ಮನೆಗೆ ತಂದಿರೆಂದರೆ, ಹೊಸ ಹಿತೈಷಿಯೊಬ್ಬ ನಿಮ್ಮ ಮನೆಗೆ ಬಂದನೆಂದು ತಿಳಿಯಬೇಕು. -----ಹಾ.ಮಾ.ನಾಯಕ.
28. ಕೀರ್ತಿ ಯನ್ನು ಜೀರ್ಣಿಸಿಕೊಳ್ಳುವುದು ಬಹಳ ಕಷ್ಟ. -----ಕುವೆಂಪು.
29. ಕಡಿಮೆ ಮಾತನಾಡಿ, ಹೆಚ್ಚು ಆಲಿಸಿ.-----ಎಮರ್ಸನ್.
30. ಕರೆ ಕಳುಹಿಸದೆ ಬರುವುದು ಎಷ್ಟು ತಪ್ಪೋ , ಕೇಳದೇ ಬುದ್ದಿವಾದ ಹೇಳುವುದು ಅಷ್ಟೇ ತಪ್ಪು. ----- ತ.ರಾ.ಸು.
31. ನಮ್ಮ ಆಲೋಚನೆಗಳೇ ನಮ್ಮನ್ನು ರೂಪಿಸುತ್ತವೆ.-----ಸ್ವಾಮಿ ವಿವೇಕಾನಂದ
32. ಚಿಂತನೆ ಇಲ್ಲದಿದ್ದರೆ ಯಶಸ್ಸು ಸಿಗುವುದಿಲ್ಲ. -----ಜಿಡ್ಡು ಕೃಷ್ಣ ಮೂರ್ತಿ.
33. ಎಷ್ಟು ಕಾಲ ಬದುಕುವೆ ಎಂಬುದಕ್ಕಿಂತ ಹೇಗೆ ಬದುಕುವೆ ಎಂಬುದೇ ಮುಖ್ಯ. -----ಪಿ.ಸೈರಸ್.
34. ನೀವು ತಪ್ಪು ಮಾಡದಂತಿರಲು ನಿಮ್ಮನ್ನು ನೀವೇ ಸಂದೇಹದಿಂದ ನೋಡಿರಿ.------ಸ್ವಾಮಿ ವಿವೇಕಾನಂದ .
35. ಆರಂಭದಲ್ಲಿ ಯೋಚಿಸದವನು ಕೊನೆಯಲ್ಲಿ ಸಂಕಟಪಡುತ್ತಾನೆ.----- ಇಟಲಿ ಗಾದೆ.
36. ನಮಗೆ ಒಪ್ಪದ ವಿಚಾರಗಳನ್ನು ವಿಚಾರಗಳಿಂದಲೇ ಹೊಡೆದು ಹಾಕಬೇಕು.ವ್ಯಕ್ತಿಗಳನ್ನು ಹೊಡೆಯುವುದರಿಂದ ವಿಚಾರಗಳನ್ನು ಅಳಿಸಲಾಗುವುದಿಲ್ಲ.----- ಹಾ.ಮಾ.ನಾಯಕ.
37. ತಿಳಿದು ಬದುಕುವುದು ಮನುಷ್ಯ ಧರ್ಮ; ತಿಂದು ಬದುಕುವುದು ಪ್ರಾಣಿ ಧರ್ಮ.-----ದ.ರಾ.ಬೇಂದ್ರೆ.
38. ಸ್ವರ್ಗವೆನ್ನುವುದು ಇನ್ನೆಲ್ಲಿಯೂ ಇಲ್ಲ. ಅದು ಸುಖೀ ಸಂಸಾರದಲ್ಲಿಯೇ ಇದೆ.-----ಪಾಟೀಲ ಪುಟ್ಟಪ್ಪ.
39. ಜಗತ್ತಿನಲ್ಲಿ ಅತ್ಯಂತ ಬಲಯುತ ಶಕ್ತಿ ಎಂದರೆ ಪ್ರೀತಿ. ಪ್ರೀತಿ ಇಲ್ಲದ ಜೀವನ ಸಾವಿಗೆ ಸಮ.-----ಮಹಾತ್ಮಾ ಗಾಂಧಿ.
40. ದೊಡ್ಡ ಯೋಚನೆಗಳೊಡನೆ ಇರುವವರು ಎಂದೂ ಏಕಾಂಗಿಗಳಲ್ಲ.------ ಸರ್ ಫಿಲಿಪ್ ಸಿಡ್ನಿ.
41. ಕಲಿಯಲು ತಿರಸ್ಕರಿಸುವುದು ಜೀವಿಸಲು ತಿರಸ್ಕರಿಸುವುದಕ್ಕೆ ಸಮನಾದುದು.-----ರಾಮಕೃಷ್ಣ ಪರಮಹಂಸ.
42. ಶೀಲಬಾಹಿರವಾದ ಶಿಕ್ಷಣ ಪಾಪದಿಂದ ಕೂಡಿರುತ್ತದೆ.-----ಮಹಾತ್ಮಾ ಗಾಂಧಿ.
43. ಕಷ್ಟಗಳಲ್ಲಿ ಧೈರ್ಯವನ್ನು ತಳೆದವನೇ ದೊಡ್ಡವನು.------ ಆಚಾರ್ಯ ಸೋಮದೇವ.
44. ಪ್ರಮುಖ ತತ್ವಗಳು ಬದಲಾಯಿಸಲಾರದಷ್ಟು ದೃಢವಾಗಿರಬೇಕು.-----ಅಬ್ರಹಾಂ ಲಿಂಕನ್.
45. ಜ್ಞಾನಕ್ಕೆ ಸಮನಾದ ಪವಿತ್ರ ವಸ್ತು ಬೇರೊಂದಿಲ್ಲ.----'ಭಗವದ್ಗೀತೆ.
46. ಸ್ವಸಹಾಯದಲ್ಲಿ ನಂಬಿಕೆ ಇರುವವರಿಗೆ ದೇವರು ಸಹಾಯ ಮಾಡುತ್ತಾನೆ.---- ಬೆಂಜಮಿನ್ ಫ್ರಾಂಕ್ಲಿನ್.
47. ಮನುಷ್ಯನ ಬೆಳವಣಿಗೆಗೆ ಬೇಕಾದ ಸ್ವಾರ್ಥವು ಅವನಲ್ಲಿರಬೇಕು.ಆದರೆ ಮಿತಿ ಮೀರಿದ ಸ್ವಾರ್ಥವಿರಕೂಡದು-----ಶಿವರಾಮ ಕಾರಂತ.
48. ಆತ್ಮವಿಶ್ವಾಸ, ಜಯದ ಮೊದಲ ಗುಟ್ಟು. ----ಎಮರ್ಸನ್.
49. ಬಾಳನ್ನು ಹಸನಾಗಿಸಿಕೊಳ್ಳಬೇಕು.ಪ್ರಹಸನವಾಗಿಸಿಕೊಳ್ಳಬಾರದು.------ಕೆ.ಎಸ್.ನಿಸಾರ್ ಅಹಮದ್.
50. ಲೋಪಗಳಿಂದಲೇ ದೊಡ್ಡವರು ರೂಪುಗೊಂಡಿದ್ದಾರೆ.-----ಷೇಕ್ಸ್ ಪಿಯರ್. 

No comments:

Post a Comment

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು