Skip to main content

ಕನ್ನಡ ಸುಭಾಷಿತಗಳು ಕನ್ನಡ ನುಡಿಮುತ್ತು ಗಳು kannada subhashitagalu Kannada nudi muttugalu

1. ಹೇಳಿದರೆ ಮರೆತು ಬಿಡುತ್ತೇನೆ.ತೋರಿಸಿದರೆ ನೆನಪಿಟ್ಟುಕೊಳ್ಳಬಹುದು.ನನ್ನನ್ನೂ ಜತೆಗೆ ಸೇರಿಸಿಕೊಂಡರೆ ಖಂಡಿತಾ ಅರ್ಥ ಮಾಡಿಕೊಳ್ಳುತ್ತೇನೆ.-----ಚೀನಿ ಗಾದೆ.
2. ಹೊಸತೆ ಇರಲಿ, ಹಳತೆ ಇರಲಿ: ಒಳಿತು ಯಾವುದೋ ಬಾಳ್ಗೆ ಬರಲಿ.------ಆನಂದಕಂದ
3. ಪರಭಾಷೆಯ ಮೇಲಿನ ಮೋಹವೇ ಸಂಸ್ಕೃತಿಯ ರಾಹು. ----ಮಹಾತ್ಮಾ ಗಾಂಧಿ.
4. ದುಷ್ಟ ವಿಚಾರಗಳು ದುಃಖಕ್ಕೆ ಮೂಲ ಕಾರಣ. ----ಗೌತಮ ಬುದ್ಧ.
5. ಜ್ಞಾನದ ಅತಿದೊಡ್ಡ ಶತ್ರು ಅಜ್ಞಾನ ಅಲ್ಲ; ಜ್ಞಾನದ ಭ್ರಮೆ.----ಡೇನಿಯಲ್ ಬೂಸ್ಟಿನ್.
6. ಗಾಳಿ ವಿರುದ್ಧ ದಿಕ್ಕಿಗೆ ಬೀಸಿದರೆ ಮಾತ್ರ ಗಾಳಿಪಟ ಅತ್ಯಧಿಕ ಮೇಲಕ್ಕೆ ಏರುವುದು.-----ವಿನ್ ಸ್ಟನ್ ಚರ್ಚಿಲ್.
7. ಗೆಳೆಯರು ಕಷ್ಟ ಕಾಲದಲ್ಲಿ ಪ್ರೀತಿ ತೋರುತ್ತಾರೆ,ಸಂತೋಷದ ಸಮಯದಲ್ಲಿ ಅಲ್ಲ. ----ಯುರಿಪಿಡೀಸ್.
8. ನಿಮ್ಮ ಕೊನೆಯ ಉಸಿರು ಸಮೀಪಿಸಿದಾಗ ವ್ಯಾಕರಣದಿಂದ ಏನೂ ಪ್ರಯೋಜನ ಆಗುವುದಿಲ್ಲ. -----ಆದಿ ಶಂಕರ.
9. ನಿಮ್ಮ ಮುಗುಳ್ನಗೆಯನ್ನು ಜಗತ್ತಿನ ಜತೆ ಹಂಚಿಕೊಳ್ಳಿ. ಅದು ಸ್ನೇಹ ಮತ್ತು ಶಾಂತಿಯನ್ನು ಹರಡುತ್ತದೆ. -----ಕ್ರಿಸ್ಟೀ ಬ್ರಿಂಕ್ಲೀ.
10. ಕನಸುಗಳಲ್ಲಿ ಭರವಸೆ ಇಡಿ.ಸ್ವರ್ಗದ ಬಾಗಿಲು ಅಲ್ಲೇ ಅಡಗಿದೆ.---- ಖಲೀಲ್ ಗಿಬ್ರಾನ್.
11. ನನ್ನ ಒಳಗಿರುವ ಅತ್ಯುತ್ತಮವಾದುದನ್ನು ಹೊರತೆಗೆಯುವವನೇ ನನ್ನ ಅತ್ಯುತ್ತಮ ಗೆಳೆಯ.---- ಹೆನ್ರಿ ಫೋರ್ಡ್.
12. ಪ್ರಾಮಾಣಿಕ ಮನುಷ್ಯ ಯಾವಾಗಲೂ ಮಗುವಿನಂತೆ ಇರುತ್ತಾನೆ.----ಸಾಕ್ರೆಟಿಸ್.
13. ಸತ್ಯವನ್ನು ಸಾವಿರ ತರಹ ಹೇಳಬಹುದು.ಹಾಗಿದ್ದೂ ಪ್ರತಿಯೊಂದೂ ಸತ್ಯವೇ ಆಗಿರುತ್ತದೆ. -------ಸ್ವಾಮಿ ವಿವೇಕಾನಂದ.
14. ನಿಮ್ಮ ವೈಫಲ್ಯಗಳನ್ನು ನಿರ್ಲಕ್ಷಿಸಿ , ಯಶಸ್ಸನ್ನು ಸಹಿಸಿಕೊಳ್ಳವವನೇ ನಿಜವಾದ ಗೆಳೆಯ.---- ಡೋಗ್ ಲಾರ್ಸನ್.
15. ನಗು ಎನ್ನುವುದು ಟಾನಿಕ್, ಪರಿಹಾರ ಮತ್ತು ನೋವಿಗೆ ಮುಲಾಮು.---- ಚಾರ್ಲಿ ಚಾಪ್ಲಿನ್ .
16. ಈ ಪ್ರಪಂಚದಲ್ಲಿ ಯಾರೂ ನಿಮಗೆ ಅಪರಿಚಿತರಲ್ಲ.ಅವರೆಲ್ಲರೂ ನೀವಿನ್ನೂ ಭೇಟಿಯಾಗದ ನಿಮ್ಮ ಗೆಳೆಯರು. ------ ವಿಲಿಯಂ ಬಟ್ಲರ್ ಯೇಟ್ಸ್.
17. ಮಕ್ಕಳ ಶಿಕ್ಷಣದ ಬಗ್ಗೆ ಮಾತ್ರ ತನಗೆ ಜವಾಬ್ದಾರಿ ಇದೆ ಎಂದು ಸಮಾಜ ಏಕೆ ತಿಳಿದುಕೊಳ್ಳಬೇಕು.? ದೊಡ್ಡವರ ಶಿಕ್ಷಣದ ಬಗ್ಗೆಯೂ ಸಮಾಜಕ್ಕೆ ಜವಾಬ್ದಾರಿ ಇದೆ.---- ಎರಿಕ್ ಫ್ರಾಮ್.
18. ನಿಮ್ಮ ಹೆಬ್ಬಯಕೆಗಳನ್ನು ನಿರುತ್ತೇಜಿಸುವ ಜನರಿಂದ ದೂರವಿರಿ.ನಿಜಕ್ಕೂ ಶ್ರೇಷ್ಠ ಮನುಷ್ಯರು ಮಾತ್ರ ನೀವೂ ಶ್ರೇಷ್ಠರಾಗಬಲ್ಲಿರಿ ಎಂದು ಪ್ರೋತ್ಸಾಹ ನೀಡುತ್ತಾರೆ. ----- ಮಾಕರ್ ಟ್ವೈನ್.
19. ಮಕ್ಕಳು ಹಿರಿಯರು ಹೇಳಿದ್ದನ್ನು ಆಲಿಸುವುದರಲ್ಲಿ ಯಾವತ್ತೂ ಚುರುಕಾಗಿರುವುದಿಲ್ಲ.ಆದರೆ ಹಿರಿಯರನ್ನು ಅನುಕರಿಸುವಲ್ಲಿ ಯಾವತ್ತೂ ವಿಫಲರಾಗುವುದಿಲ್ಲ.-----ಜೇಮ್ಸ್ ಬಾಲ್ಡ್ವಿನ್ .
20. ಸುಶಿಕ್ಷಿತ ಮನಸ್ಸಿನಲ್ಲಿ ಉತ್ತರಗಳಿಗಿಂತ ಹೆಚ್ಚು ಪ್ರಶ್ನೆಗಳೇ ತುಂಬಿರುತ್ತವೆ.-----ಹೆಲನ್ ಕೆಲ್ಲರ್.
21. ಬುದ್ಧಿವಂತರ ಗುರಿ ಸಂತೋಷವನ್ನು ಹೊಂದುವುದಲ್ಲ, ನೋವುಗಳನ್ನು ದೂರ ಮಾಡುವುದು.----- ಅರಿಸ್ಟಾಟಲ್.
22. ಅನುಭವ ಪುಕ್ಕಟೆ ಬರುವುದಿಲ್ಲ. ಅದಕ್ಕಾಗಿ ಏನನ್ನಾದರೂ ಖರ್ಚು ಮಾಡಬೇಕು.-----ಆಸ್ಕರ್ ವೈಲ್ಡ್.
23. ಒಳ್ಳೆಯದನ್ನು ವರ್ಣಿಸುವಾಗ ಮಾತು ಹೆಚ್ಚಾಗಲಿ, ಇಲ್ಲದನ್ನು ಹೇಳುವಾಗ ಮಾತು ಕಡಿಮೆಯಾಗಲಿ.----ಬಿ.ಎಂ.ಶ್ರೀ.
24. ಕೈಲಾದವನು ಮಾಡಿ ತೋರಿಸುತ್ತಾನೆ.ಕೈಲಾಗದವನು ಉಪದೇಶ ಮಾಡುತ್ತಾನೆ.----ಜಾರ್ಜ್ ಬರ್ನಾರ್ಡ್ ಷಾ.
25. ಇನ್ನೊಬ್ಬರಿಗೆ ಒಳಿತು ಮಾಡಿದಷ್ಟೂ ನಮ್ಮ ಹೃದಯ ಶುದ್ಧವಾಗುತ್ತದೆ.ದೇವರು ನಮಗೆ ಹತ್ತಿರವಾಗುತ್ತಾನೆ.----ಸ್ವಾಮಿ ವಿವೇಕಾನಂದ.
26. ಎಲ್ಲಕ್ಕೂ ಮನಸ್ಸೇ ಕಾರಣ. ಅದು ಪರಿಶುದ್ಧವಾಗದೆ ಯಾವ ಒಳ್ಳೆಯ ಕೆಲಸವೂ ಆಗುವುದಿಲ್ಲ. ------ಶ್ರೀ ಶಾರದಾದೇವಿ.
27. ಹೊಸ ಪುಸ್ತಕವೊಂದನ್ನು ನೀವು ನಿಮ್ಮ ಮನೆಗೆ ತಂದಿರೆಂದರೆ, ಹೊಸ ಹಿತೈಷಿಯೊಬ್ಬ ನಿಮ್ಮ ಮನೆಗೆ ಬಂದನೆಂದು ತಿಳಿಯಬೇಕು. -----ಹಾ.ಮಾ.ನಾಯಕ.
28. ಕೀರ್ತಿ ಯನ್ನು ಜೀರ್ಣಿಸಿಕೊಳ್ಳುವುದು ಬಹಳ ಕಷ್ಟ. -----ಕುವೆಂಪು.
29. ಕಡಿಮೆ ಮಾತನಾಡಿ, ಹೆಚ್ಚು ಆಲಿಸಿ.-----ಎಮರ್ಸನ್.
30. ಕರೆ ಕಳುಹಿಸದೆ ಬರುವುದು ಎಷ್ಟು ತಪ್ಪೋ , ಕೇಳದೇ ಬುದ್ದಿವಾದ ಹೇಳುವುದು ಅಷ್ಟೇ ತಪ್ಪು. ----- ತ.ರಾ.ಸು.
31. ನಮ್ಮ ಆಲೋಚನೆಗಳೇ ನಮ್ಮನ್ನು ರೂಪಿಸುತ್ತವೆ.-----ಸ್ವಾಮಿ ವಿವೇಕಾನಂದ
32. ಚಿಂತನೆ ಇಲ್ಲದಿದ್ದರೆ ಯಶಸ್ಸು ಸಿಗುವುದಿಲ್ಲ. -----ಜಿಡ್ಡು ಕೃಷ್ಣ ಮೂರ್ತಿ.
33. ಎಷ್ಟು ಕಾಲ ಬದುಕುವೆ ಎಂಬುದಕ್ಕಿಂತ ಹೇಗೆ ಬದುಕುವೆ ಎಂಬುದೇ ಮುಖ್ಯ. -----ಪಿ.ಸೈರಸ್.
34. ನೀವು ತಪ್ಪು ಮಾಡದಂತಿರಲು ನಿಮ್ಮನ್ನು ನೀವೇ ಸಂದೇಹದಿಂದ ನೋಡಿರಿ.------ಸ್ವಾಮಿ ವಿವೇಕಾನಂದ .
35. ಆರಂಭದಲ್ಲಿ ಯೋಚಿಸದವನು ಕೊನೆಯಲ್ಲಿ ಸಂಕಟಪಡುತ್ತಾನೆ.----- ಇಟಲಿ ಗಾದೆ.
36. ನಮಗೆ ಒಪ್ಪದ ವಿಚಾರಗಳನ್ನು ವಿಚಾರಗಳಿಂದಲೇ ಹೊಡೆದು ಹಾಕಬೇಕು.ವ್ಯಕ್ತಿಗಳನ್ನು ಹೊಡೆಯುವುದರಿಂದ ವಿಚಾರಗಳನ್ನು ಅಳಿಸಲಾಗುವುದಿಲ್ಲ.----- ಹಾ.ಮಾ.ನಾಯಕ.
37. ತಿಳಿದು ಬದುಕುವುದು ಮನುಷ್ಯ ಧರ್ಮ; ತಿಂದು ಬದುಕುವುದು ಪ್ರಾಣಿ ಧರ್ಮ.-----ದ.ರಾ.ಬೇಂದ್ರೆ.
38. ಸ್ವರ್ಗವೆನ್ನುವುದು ಇನ್ನೆಲ್ಲಿಯೂ ಇಲ್ಲ. ಅದು ಸುಖೀ ಸಂಸಾರದಲ್ಲಿಯೇ ಇದೆ.-----ಪಾಟೀಲ ಪುಟ್ಟಪ್ಪ.
39. ಜಗತ್ತಿನಲ್ಲಿ ಅತ್ಯಂತ ಬಲಯುತ ಶಕ್ತಿ ಎಂದರೆ ಪ್ರೀತಿ. ಪ್ರೀತಿ ಇಲ್ಲದ ಜೀವನ ಸಾವಿಗೆ ಸಮ.-----ಮಹಾತ್ಮಾ ಗಾಂಧಿ.
40. ದೊಡ್ಡ ಯೋಚನೆಗಳೊಡನೆ ಇರುವವರು ಎಂದೂ ಏಕಾಂಗಿಗಳಲ್ಲ.------ ಸರ್ ಫಿಲಿಪ್ ಸಿಡ್ನಿ.
41. ಕಲಿಯಲು ತಿರಸ್ಕರಿಸುವುದು ಜೀವಿಸಲು ತಿರಸ್ಕರಿಸುವುದಕ್ಕೆ ಸಮನಾದುದು.-----ರಾಮಕೃಷ್ಣ ಪರಮಹಂಸ.
42. ಶೀಲಬಾಹಿರವಾದ ಶಿಕ್ಷಣ ಪಾಪದಿಂದ ಕೂಡಿರುತ್ತದೆ.-----ಮಹಾತ್ಮಾ ಗಾಂಧಿ.
43. ಕಷ್ಟಗಳಲ್ಲಿ ಧೈರ್ಯವನ್ನು ತಳೆದವನೇ ದೊಡ್ಡವನು.------ ಆಚಾರ್ಯ ಸೋಮದೇವ.
44. ಪ್ರಮುಖ ತತ್ವಗಳು ಬದಲಾಯಿಸಲಾರದಷ್ಟು ದೃಢವಾಗಿರಬೇಕು.-----ಅಬ್ರಹಾಂ ಲಿಂಕನ್.
45. ಜ್ಞಾನಕ್ಕೆ ಸಮನಾದ ಪವಿತ್ರ ವಸ್ತು ಬೇರೊಂದಿಲ್ಲ.----'ಭಗವದ್ಗೀತೆ.
46. ಸ್ವಸಹಾಯದಲ್ಲಿ ನಂಬಿಕೆ ಇರುವವರಿಗೆ ದೇವರು ಸಹಾಯ ಮಾಡುತ್ತಾನೆ.---- ಬೆಂಜಮಿನ್ ಫ್ರಾಂಕ್ಲಿನ್.
47. ಮನುಷ್ಯನ ಬೆಳವಣಿಗೆಗೆ ಬೇಕಾದ ಸ್ವಾರ್ಥವು ಅವನಲ್ಲಿರಬೇಕು.ಆದರೆ ಮಿತಿ ಮೀರಿದ ಸ್ವಾರ್ಥವಿರಕೂಡದು-----ಶಿವರಾಮ ಕಾರಂತ.
48. ಆತ್ಮವಿಶ್ವಾಸ, ಜಯದ ಮೊದಲ ಗುಟ್ಟು. ----ಎಮರ್ಸನ್.
49. ಬಾಳನ್ನು ಹಸನಾಗಿಸಿಕೊಳ್ಳಬೇಕು.ಪ್ರಹಸನವಾಗಿಸಿಕೊಳ್ಳಬಾರದು.------ಕೆ.ಎಸ್.ನಿಸಾರ್ ಅಹಮದ್.
50. ಲೋಪಗಳಿಂದಲೇ ದೊಡ್ಡವರು ರೂಪುಗೊಂಡಿದ್ದಾರೆ.-----ಷೇಕ್ಸ್ ಪಿಯರ್. 

Comments

Popular posts from this blog

ಸವರ್ಣ ದೀರ್ಘ ಸಂಧಿ. ಸವರ್ಣ ದೀರ್ಘ ಸಂಧಿ ಉದಾಹರಣೆಗಳು savarna dhirgha sandhi. Savarna dhirgha sandhi examples

ಸವರ್ಣ ದೀರ್ಘ ಸಂಧಿ. [ ] ಪೂರ್ವ ಪದದ ಅಂತ್ಯ ಸ್ವರ ಮತ್ತು ಉತ್ತರ ಪದದ ಆರಂಭದ ಸ್ವರ ಒಂದೇ ರೀತಿಯ ವರ್ಣವಾಗಿದ್ದರೆ , ಸಂಧಿಕಾರ್ಯ ನಡೆಯುವಾಗ ಅದೇ ಸ್ವರದ ದೀರ್ಘ ಸ್ವರವು ಆದೇಶವಾಗಿರುವುದು ಕಂಡು ಬರುತ್ತದೆ. [ ] ಸಂಧಿಕಾರ್ಯ ನಡೆಯುವಾಗ ಒಂದೇ ರೀತಿಯ ಸ್ವರಾಕ್ಷರಗಳು ಪರಸ್ಪರ ಸೇರಿ ದೀರ್ಘ ಸ್ವರ ಆದೇಶವಾದರೆ ಅಂತಹ ಸಂಧಿಯನ್ನು "ಸವರ್ಣ ದೀರ್ಘ ಸಂಧಿ "ಎಂದು ಕರೆಯುತ್ತಾರೆ. [ ] ಸವರ್ಣಾಕ್ಷರಗಳಿಗೆ ಸವರ್ಣಾಕ್ಷರಗಳ ಪರವಾಗಿ ಸವರ್ಣ ದೀರ್ಘಾಕ್ಷರಗಳು ಬಂದರೆ ಸವರ್ಣ ದೀರ್ಘ ಸಂಧಿ. [ ] ಉದಾಹರಣೆಗೆ ಪೂರ್ವ ಪದ + ಉತ್ತರ ಪದ = ಸಂಧಿಪದ 1. ರವಿ + ಇಂದ್ರ = ರವೀಂದ್ರ ( ಇ+ಇ= ಈ) 2. ದೇವ+ ಆಲಯ= ದೇವಾಲಯ. (ಅ+ಆ=ಆ) 3. ಗುರು+ ಉಪದೇಶ =ಗುರೂಪದೇಶ (ಉ+ಉ=ಊ) 4. ಮಹಾ+ ಆತ್ಮ = ಮಹಾತ್ಮ (ಆ+ಆ=ಆ) 5. ಗಿರಿ+ ಇಂದ್ರ = ಗಿರೀಂದ್ರ 6. ಮುನಿ+ ಇಂದ್ರ =ಮುನೀಂದ್ರ. 7. ಅಲ್ಪ + ಅಕ್ಷರ =ಅಲ್ಪಾಕ್ಷರ. 8. ವಿದ್ಯ+ ಅರ್ಜನೆ=ವಿದ್ಯಾರ್ಜನೆ. 9. ರಾಕ್ಷಸ + ಅಧಿಪತಿ= ರಾಕ್ಷಸಾಧಿಪತಿ. 10. ಸೀತ+ಅನ್ವೇಷಣೆ= ಸೀತಾನ್ವೇಷಣೆ. 11. ಪಂಚ+ಆಸ್ಯ=ಪಂಚಾಸ್ಯ. 12. ಶಾಸಕ+ಅಂಗ=ಶಾಸಕಾಂಗ. 13. ಅಭಯ+ಅರಣ್ಯ =ಅಭಯಾರಣ್ಯ. 14. ಉಭಯ+ಅರಣ್ಯ =ಉಭಯಾರಣ್ಯ 15. ವಸ್ರ್ತ + ಆಭರಣ= ವಸ್ತ್ರಾಭರಣ. 16. ಗೌರಿ+ಈಶ =ಗೌರೀಶ. 17. ಕಟು+ಉಕ್ತಿ=ಕಟೂಕ್ತಿ. 18. ಕೃಷ್ಣ +ಅಜಿನ=ಕೃಷ್ಣಾಜಿನ. 19. ಪೀತ+ಅಂಬರ=ಪೀತಾಂಬರ. 20. ಏಕ+ಆಸ...

ಡಾ.ಸತ್ಯಾನಂದ ಪಾತ್ರೋಟ Dr.satyananda patrota

• ಡಾ.ಸತ್ಯಾನಂದ ಪಾತ್ರೋಟ • ಜನನ- ಬಾಗಲಕೋಟೆ • ವಿದ್ಯಾಭ್ಯಾಸ ~ಎಂ.ಎ., ಪಿ.ಎಚ್.ಡಿ. • ಉದ್ಯೋಗ ~ ಬಾಗಲಕೋಟೆಯ ಎಸ್.ಬಿ.ಪಾಟೀಲ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಅಧ್ಯಾಪಕರು. • ಕವನ ಸಂಕಲನಗಳು 1. ಕರಿನೆಲದ ಕಲೆಗಳು 2. ಜಾಜಿ ಮಲ್ಲಿಗೆ 3. ಕಲ್ಲಿಗೂ ಗೊತ್ತಿರುವ ಕಥೆ. 4. ಕರಿಯ ಕಟ್ಟಿದ ಕವನ 5. ನನ್ನ ಕನಸಿನ ಹುಡುಗಿ 6. ನದಿಗೊಂದು ಕನಸು ಮತ್ತು ಅವಳು ನಾಟಕಗಳು 1. ನಮಗ ಯಾರು ಇಲ್ಲೋ ಎಪ್ಪಾ ಸಾಕ್ಷಿ 2. ಮತ್ತೊಬ್ಬ ಏಕಲವ್ಯ ಪ್ರಬಂಧ ಸಂಕಲನ 1. ಒಂದಿಷ್ಟು ಕ್ಷಣಗಳು ಕಾವ್ಯದ ಧ್ವನಿಸುರುಳಿ 1. ಎದೆಯ ಮಾತು ಪ್ರಶಸ್ತಿ- ಕನ್ನಡ ರಾಜ್ಯೋತ್ಸವ ಪ್ರಶಸ್ತಿ

Kannada grammar for kpsc exams ಕೆ.ಪಿ.ಎಸ್. ಸಿ.ಪರೀಕ್ಷೆಗಳಿಗೆ ಕನ್ನಡ ವ್ಯಾಕರಣ

 ಕೆ.ಪಿ.ಎಸ್. ಸಿ ನಡೆಸುವ ಪ್ರತಿಯೊಂದು ಪರೀಕ್ಷೆಗಳಲ್ಲಿ ಕನ್ನಡಕ್ಕೆ ಸಂಬಂಧಪಟ್ಟಂತೆ 35 ಅಂಕಗಳನ್ನು ನಿಗದಿಪಡಿಸಲಾಗಿದೆ. ಪರೀಕ್ಷೆಗೆ ಅನಕೂಲವಾಗಲೆಂದು  ಕನ್ನಡ ವ್ಯಾಕರಣಕ್ಕೆ ಸಂಬಂಧಪಟ್ಟ ಕೆಲವು ಮಾಹಿತಿ ಸಂಗ್ರಹಿಸಿ ಸ್ಪರ್ಧಾರ್ಥಿಗಳ ಅನುಕೂಲಕ್ಕಾಗಿ ನೀಡಲಾಗಿದೆ.ಆಸಕ್ತರು ಇದರ ಸದುಪಯೋಗ ಪಡೆಯಬಹುದು. □  □ □ □ □ □ □ □ □ □ □ □ □ □ □     ತತ್ಸಮ - - - -  - - - - - - - - - ತದ್ಭವ (ಸಂಸ್ಕೃತ )                    (ಕನ್ನಡ ) ■ ನರ್ತಕಿ - ನಚ್ಚಣಿ ■ ಲಕ್ಷ್ಮಿ - ಲಕ್ಕಿ ,ಲಕುಮಿ ■ವೇಷ - ವೇಸ ■ಲೇಪ - ಲಪ್ಪ ■ವರ್ಧಮಾನ - ಬದ್ದವಣ ■ವಜ್ರ - ಬಜ್ಜರ ■ವತ್ಸಲಾ - ಬಚ್ಚಳೆ ■ವಿಸ್ತಾರ - ಬಿತ್ತರ ■ವೃದ್ಧ - ವಡ್ಡ ■ವೃದ್ಧಿ - ಬಡ್ಡಿ ■ವ್ಯಾಖ್ಯಾನ - ವಕ್ಕಣೆ ■ವ್ಯಾಘ್ರ - ಬಗ್ಗ ■ವರ್ಧಕಿ - ಬಡಗಿ ■ವಿದ್ಯೆ - ಬಿಜ್ಜೆ ■ವೈದ್ಯ - ಬೆಜ್ಜ ■ವಿಜ್ಞಾನ - ಬಿನ್ನಣ ■ಶಿಲ್ಪಕ,ಶಿಲ್ಪಿ - ಸಿಂಪಿಗ ,ಚಿಪ್ಪಿಗ ■ಶೂನ್ಯ - ಸೊನ್ನೆ ■ಅವಸ್ಥೆ - ಅವತೆ ■ಅರ್ಹ - ಅರುಹ ■ಅರ್ಗಲ,ಅರ್ಗಲೆ - ಅಗಳಿ,ಅಗುಳಿ (ಚಿಲಕ) ■ಅಂಗುಷ್ಠ - ಅಂಗುಟ ,ಉಂಗುಟ. ■ಆಲಸ್ಯ - ಆಲಸ ■ಆಜ್ಞಾ, ಆಜ್ಞೆ - ಆಣೆ ■ಕ್ರಕಚ - ಗರಗಸ ■ಕ್ಷಣ - ಚಣ ■ಗ್ರಹ - ಗರ ■ಗ್ರಹಣ - ಗರಣ ■ಗ್ರಾಮೀಣ - ಗಾವಿಲ ■ಲಕ್ಷ - ಲಕ್ಕ ■ ಶ್ರೇಷ್ಠಿ -...