Skip to main content

ಕನ್ನಡ ಸುಭಾಷಿತಗಳು ಕನ್ನಡ ನುಡಿಮುತ್ತು ಗಳು Kannada subhashitagalu Kannada nudi muttugalu

1. ದ್ವೇಷ ಬದುಕಿನಲ್ಲಿ ಕತ್ತಲೆ ಕವಿಸುತ್ತದೆ. ಪ್ರೇಮ ಬದುಕನ್ನು ಉದ್ದೀಪನಗೊಳಿಸುತ್ತದೆ. ---- ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್.
2. ನೆಮ್ಮದಿ ನಿಮ್ಮ ಮನಸ್ಸಿನೊಳಗೇ ಇದೆ. ಅದನ್ನು ಹೊರಗೆ ಹುಡುಕಬೇಡಿ. ----ಗೌತಮ ಬುದ್ಧ.
3. ಸಂದಿಗ್ಧದ ಸಮಯದಲ್ಲಿ ತುಂಬ ಬಲಶಾಲಿಗೂ ಅತ್ಯಂತ ದುರ್ಬಲನ ಸಹಾಯ ಪಡೆಯುವ ಅಗತ್ಯ ಬೀಳುತ್ತದೆ. ---- ಈಸೋಪ.
4. ದುರದೃಷ್ಟ ಆವರಿಸಿದೆ ಎಂದರೆ ನಿಮಗೆ ನೈಜ ಗೆಳೆಯರಿಲ್ಲ ಎಂದರ್ಥ. ---- ಅರಿಸ್ಟಾಟಲ್.
5. ನಮ್ಮಿಂದ ಸಾಧ್ಯವಾದದ್ದನ್ನೆಲ್ಲ ಮಾಡಿದರೂ ಸಾಕಾಗುವುದಿಲ್ಲ. ಕೆಲವೊಮ್ಮೆ ಅಗತ್ಯ ಇರುವುದನ್ನಷ್ಟೆ ಮಾಡಬೇಕು.---- ವಿನ್ ಸ್ಟನ್ ಚರ್ಚಿಲ್.
6. ಭಾಷಣದ ಸಾಮರ್ಥ್ಯ ಇರುವವರಿಗೆಲ್ಲ ಮಾತುಕತೆ ನಡೆಸಲು ಬರುತ್ತದೆ ಎಂದುಕೊಳ್ಳಬೇಡಿ.----- ಬೆಂಜಮಿನ್ ಡಿಸ್ರೇಲಿ.
7. ದೇಶಪ್ರೇಮ ಎಂದರೆ ದೇಶದ ಪರವಾಗಿ ನಿಲ್ಲುವುದು; ದೇಶವನ್ನು ಆಳುವವನ ಜತೆಗೆ ನಿಲ್ಲುವುದು ಎಂದಲ್ಲ.---- ಥಿಯೋಡರ್ ರೂಸ್ ವೆಲ್ಟ್.
8. ಎಲ್ಲರೂ ಹೀರೋಗಳಾಗಲು ಆಗುವುದಿಲ್ಲ.ಏಕೆಂದರೆ ಚಪ್ಪಾಳೆ ಹೊಡೆಯಲು ಕೆಲವರಾದರೂ ಬೇಕಲ್ಲ. ---- ವಿಲ್ ರೋಜರಸ್.
9. ಬುದ್ಧಿವಂತನ ಬಗ್ಗೆ ಮೂರ್ಖನ ವರದಿ ಯಾವತ್ತೂ ಸತ್ಯವಾಗಿರುವುದಿಲ್ಲ. ಏಕೆಂದರೆ ಮೂರ್ಖ ತನಗೆ ಅರ್ಥವಾದಷ್ಟನ್ನು ಮಾತ್ರ ಬರೆಯುತ್ತಾನೆ.----- ಬರ್ ಟ್ರೆಂಡ್ ರಸೆಲ್.
10. ಕೆಲವರು ವರ್ಷಕ್ಕೆ ಎರಡು ಅಥವಾ ಮೂರು ಸಲ ಯೋಚಿಸುತ್ತಾರೆ.ಹಾಗಾಗಿಯೇ ವಾರಕ್ಕೆ ಒಮ್ಮೆ ಅಥವಾ ಎರಡು ಸಲ ಯೋಚಿಸುವವರು ಆಳುತ್ತಾರೆ.---- ಜಾರ್ಜ್ ಬರ್ನಾರ್ಡ್ ಷಾ.
11. ಮೇಧಾವಿತನ ಸೌಂದರ್ಯಕ್ಕಿಂತ ಹೆಚ್ಚು ಬಾಳಿಕೆ ಬರುತ್ತದೆ. ---- ಆಸ್ಕರ್ ವೈಲ್ಡ್.
12. ಇದು ನನಗೆ ಮೊದಲೇ ಗೊತ್ತಿದೆ ಎಂದು ಯಾರಾದರೂ ಭಾವಿಸಿದ್ದರೆ ಅವನು ಆ ವಿಷಯವನ್ನು ಕಲಿಯುವುದು ಅಸಾಧ್ಯ. ---- ಎಪಿಕ್ಟಿಟಸ್.
13. ನಿಮ್ಮ ಬಳಿ ಸುತ್ತಿಗೆ ಮಾತ್ರ ಇರುವುದಾದರೆ , ಪ್ರತಿಯೊಂದು ಸಮಸ್ಯೆಯನ್ನೂ ಮೊಳೆ ಎಂದೇ ಭಾವಿಸಿ. ---- ಅಬ್ರಹಾಂ ಮಾಸ್ಲೊ.
14. ಪಾಠ ಮಾಡುವುದು ಎಂದರೆ ಎರಡನೇ ಬಾರಿ ಆ ವಿಷಯವನ್ನು ಕಲಿತಂತೆ.---- ಜೋಸೆಫ್ ಜೋಬಟರ್.
15. ಕೇವಲ ಸುತ್ತಿಗೆ ಇದ್ದವನಿಗೆ ಎದುರಿಗೆ ಇರವುದೆಲ್ಲವೂ ಮೊಳೆಯಂತೆಯೇ ಕಾಣಿಸುತ್ತದೆ. ---- ಅಬ್ರಹಾಂ ಮಾಸ್ಲೊ.
16. ಜಗತ್ತು ಅಪಾಯಕಾರಿ. ದುಷ್ಟರಿಂದಾಗಿ ಅಲ್ಲ; ದುಷ್ಟತನವನ್ನು ನೋಡಿ ಸುಮ್ಮನಿರುವ ಒಳ್ಳೆಯವರಿಂದಾಗಿ.----- ಆಲ್ಬರ್ಟ್ ಐನ್ ಸ್ಟೀನ್.
17. ಸೋಮಾರಿಯಾಗಿರುವುದು ಸಾಯುವುದಕ್ಕಿಂತ ಅಡ್ಡದಾರಿ. ಕ್ರಿಯಾಶೀಲನಾಗಿರುವುದು ಬದುಕುವ ಮಾರ್ಗ.----ಗೌತಮ ಬುದ್ಧ.
18. ಯಾವ ಆದರ್ಶ ಮನುಷ್ಯನ ಹಿತವನ್ನು ಕಾಯುವುದೋ ಅದೇ ಧರ್ಮ. ----ಡಾ. ಎಸ್.ರಾಧಾಕೃಷ್ಣನ್.
19. ಜೀವನದಲ್ಲಿ ಇರುವುದೇ ಒಂದು ಸಂತೋಷದ ಸಂಗತಿ . ಅದೆಂದರೆ ಪ್ರೀತಿಸಲ್ಪಡುವುದು ಮತ್ತು ಪ್ರೀತಿಸುವುದು.----- ಜಾರ್ಜ್ ಸ್ಯಾಂಡ್.
20. ಬದಲಾವಣೆ ಬದುಕಿನ ನಿಯಮ. ಭೂತಕಾಲ ಮತ್ತು ವರ್ತಮಾನವನ್ನು ಮಾತ್ರ ನೋಡುವವರು ಭವಿಷ್ಯವನ್ನು ಕಳೆದುಕೊಳ್ಳುತ್ತಾರೆ.---- ಜಾನ್ ಎಫ್ ಕೆನಡಿ
21. ಮನುಷ್ಯರನ್ನು ಒಟ್ಟುಗೂಡಿಸುವುದು ಎರಡೇ - ಭಯ ಮತ್ತು ಆಸಕ್ತಿ. ----ನೆಪೋಲಿಯನ್ ಬೊನಪಾರ್ಟ್.
22. ಸಹಾಯ ಮಾಡುವ ಹೃದಯ ಇದ್ದವನಿಗೆ ಟೀಕಿಸುವ ಅಧಿಕಾರವೂ ಇರುತ್ತದೆ. ---- ಅಬ್ರಹಾಂ ಲಿಂಕನ್.
23. ನೀವು ಏನನ್ನು ಬೇಕಾದರೂ ಮಾಡಬಹುದು, ಆದರೆ ಎಲ್ಲವನ್ನೂ ಮಾಡಲು ಆಗುವುದಿಲ್ಲ. ----ಡೇವಿಡ್ ಆಲನ್.
24. ನಿಷ್ಪ್ರಯೋಜಕ ವ್ಯಕ್ತಿ ಗಳು ಕೇವಲ ತಿನ್ನುವುದಕ್ಕಾಗಿ ಮತ್ತು ಕುಡಿಯುವುದಕ್ಕಾಗಿ ಬದುಕುತ್ತಾರೆ. ಪ್ರಯೋಜನಕಾರಿ ವ್ಯಕ್ತಿ ಗಳು ಬದುಕುವುದಕ್ಕಾಗಿ ತಿನ್ನುತ್ತಾರೆ ಮತ್ತು ಕುಡಿಯುತ್ತಾರೆ. ---- ಸಾಕ್ರೆಟಿಸ್.
25. ಯಾವುದಾದರೂ ವಿಚಾರವನ್ನು ಒಪ್ಪಿಕೊಳ್ಳದೆ , ಮನಸ್ಸಿಗೆ ಬಿಟ್ಟುಕೊಂಡರೆ ನಿಮ್ಮದು ಶಿಕ್ಷಿತ ಮನಸ್ಸು ಎನ್ನಬಹ.----ಅರಿಸ್ಟಾಟಲ್.
26. ಶಾಲೆಯ ಬಾಗಿಲನ್ನು ತೆರೆಯುವಾತ ಜೈಲಿನ ಬಾಗಿಲು ಮುಚ್ಚಿದಂತೆ.----- ವಿಕ್ಟರ್ ಹ್ಯೂಗ್.
27. ಅತ್ಯುತ್ತಮ ಕಲಿಕೆಯ ತರಗತಿ ಹಿರಿಯರ ಪದತಲದಲ್ಲಿದೆ.----- ಆಂಡಿ ರೂನಿ.
28. ನೀವು ಸಿಟ್ಟಿಗೆದ್ದ ಪ್ರತಿ ನಿಮಿಷಕ್ಕೂ 60 ಸೆಕೆಂಡ್ ಗಳ ಸಂತೋಷವನ್ನು ಕಳೆದುಕೊಳ್ಳುತ್ತೀರಿ.-----ರಾಲ್ಫ್ ಎಮರ್ಸನ್.
29. ಮೂರ್ಖ ತಮಾಷೆಗಿಂತ ತಮಾಷೆಯಾಗಿ ಕಾಣುವ ಮೂರ್ಖ ಒಳ್ಳೆಯವನು.---- ವಿಲಿಯಂ ಷೇಕ್ಸ್ ಪಿಯರ್.
30. ಪ್ರತಿಯೊಬ್ಬ ಮಹಿಳೆಯೂ ಬಂಡಾಯಗಾರ್ತಿ.ಸಾಮಾನ್ಯವಾಗಿ ತನ್ನ ವಿರುದ್ಧವೇ ಆಕೆ ಬಂಡಾಯ ಏಳುತ್ತಾಳೆ.----ಆಸ್ಕರ್ ವೈಲ್ಡ್.
31. ಒಂದೋ ತುಂಬಾ ಸುಲಭ ; ಇಲ್ಲವೇ ಅಸಾಧ್ಯ. ಅದರ ನಡುವೆ ಯಾವುದೂ ಇಲ್ಲ. ---- ಸಾಲ್ವಡೋರ್ ಡಾಲಿ.
32. ನಾನು ವ್ಯಾಕರಣ ಬದ್ದವಾಗಿ ಮಾತನಾಡಲು ಬಯಸುವುದಿಲ್ಲ ; ನಾನು ಮಹಿಳೆಯರಂತೆ ಮಾತನಾಡಲು ಬಯಸುತ್ತೇನೆ. ಜಾರ್ಜ್ ಬರ್ನಾರ್ಡ್ ಷಾ.
33. ಕೆಟ್ಟ ಮನುಷ್ಯ ಭಯದಿಂದ ಅನುಸರಣೆ ಮಾಡುತ್ತಾನೆ ; ಒಳ್ಳೆಯ ಮನುಷ್ಯ ಪ್ರೀತಿಯಿಂದ ಅನುಸರಣೆ ಮಾಡುತ್ತಾನೆ. ---- ಅರಿಸ್ಟಾಟಲ್.
34. ದೊರೆಯಾಗಲೀ, ರೈತನಾಗಲೀ ; ಮನೆಯಲ್ಲಿ ನೆಮ್ಮದಿ ಇದ್ದವನು ಮಾತ್ರ ಸಂತೋಷವಾಗಿರಬಲ್ಲ.---- ಗಾಯಥೆ.
35. ದುಃಖವನ್ನು ಒಬ್ಬನೇ ಅನುಭವಿಸಬಹುದು .ಆದರೆ ಸಂತೋಷವನ್ನು ಪೂರ್ಣ ರೂಪದಲ್ಲಿ ಅನುಭವಿಸಲು ಇನ್ನೊಬ್ಬನ ಜತೆಗೆ ಹಂಚಿಕೊಳ್ಳಲೇಬೇಕಾಗುತತ್ತದೆ.------- ಮಾರ್ಕ್ ಟ್ವೈನ್.
36. ಸ್ವಾತಂತ್ರ್ಯವೆಂದರೆ ಜನರು ಯಾವುದನ್ನು ಕೇಳಲು ಬಯಸುವುದಿಲ್ಲವೋ ಅದನ್ನು ಹೇಳುವ ಹಕ್ಕು.----- ಜಾರ್ಜ್ ಆರ್ವೆಲ್.
37. ನಾವು ಯುವಕರಿಗಾಗಿ ಯಾವಾಗಲೂ ಭವಿಷ್ಯವನ್ನು ನಿರ್ಮಿಸಲು ಆಗುವುದಿಲ್ಲ; ಆದರೆ ಭವಿಷ್ಯಕ್ಕಾಗಿ ಯುವಕರನ್ನು ಸಜ್ಜುಗೊಳಿಸಬಹುದು.---- ಫ್ರಾಂಕ್ಲಿನ್ ರೂಸ್ ವೆಲ್ಟ್.

Comments

Popular posts from this blog

ಸವರ್ಣ ದೀರ್ಘ ಸಂಧಿ. ಸವರ್ಣ ದೀರ್ಘ ಸಂಧಿ ಉದಾಹರಣೆಗಳು savarna dhirgha sandhi. Savarna dhirgha sandhi examples

ಸವರ್ಣ ದೀರ್ಘ ಸಂಧಿ. [ ] ಪೂರ್ವ ಪದದ ಅಂತ್ಯ ಸ್ವರ ಮತ್ತು ಉತ್ತರ ಪದದ ಆರಂಭದ ಸ್ವರ ಒಂದೇ ರೀತಿಯ ವರ್ಣವಾಗಿದ್ದರೆ , ಸಂಧಿಕಾರ್ಯ ನಡೆಯುವಾಗ ಅದೇ ಸ್ವರದ ದೀರ್ಘ ಸ್ವರವು ಆದೇಶವಾಗಿರುವುದು ಕಂಡು ಬರುತ್ತದೆ. [ ] ಸಂಧಿಕಾರ್ಯ ನಡೆಯುವಾಗ ಒಂದೇ ರೀತಿಯ ಸ್ವರಾಕ್ಷರಗಳು ಪರಸ್ಪರ ಸೇರಿ ದೀರ್ಘ ಸ್ವರ ಆದೇಶವಾದರೆ ಅಂತಹ ಸಂಧಿಯನ್ನು "ಸವರ್ಣ ದೀರ್ಘ ಸಂಧಿ "ಎಂದು ಕರೆಯುತ್ತಾರೆ. [ ] ಸವರ್ಣಾಕ್ಷರಗಳಿಗೆ ಸವರ್ಣಾಕ್ಷರಗಳ ಪರವಾಗಿ ಸವರ್ಣ ದೀರ್ಘಾಕ್ಷರಗಳು ಬಂದರೆ ಸವರ್ಣ ದೀರ್ಘ ಸಂಧಿ. [ ] ಉದಾಹರಣೆಗೆ ಪೂರ್ವ ಪದ + ಉತ್ತರ ಪದ = ಸಂಧಿಪದ 1. ರವಿ + ಇಂದ್ರ = ರವೀಂದ್ರ ( ಇ+ಇ= ಈ) 2. ದೇವ+ ಆಲಯ= ದೇವಾಲಯ. (ಅ+ಆ=ಆ) 3. ಗುರು+ ಉಪದೇಶ =ಗುರೂಪದೇಶ (ಉ+ಉ=ಊ) 4. ಮಹಾ+ ಆತ್ಮ = ಮಹಾತ್ಮ (ಆ+ಆ=ಆ) 5. ಗಿರಿ+ ಇಂದ್ರ = ಗಿರೀಂದ್ರ 6. ಮುನಿ+ ಇಂದ್ರ =ಮುನೀಂದ್ರ. 7. ಅಲ್ಪ + ಅಕ್ಷರ =ಅಲ್ಪಾಕ್ಷರ. 8. ವಿದ್ಯ+ ಅರ್ಜನೆ=ವಿದ್ಯಾರ್ಜನೆ. 9. ರಾಕ್ಷಸ + ಅಧಿಪತಿ= ರಾಕ್ಷಸಾಧಿಪತಿ. 10. ಸೀತ+ಅನ್ವೇಷಣೆ= ಸೀತಾನ್ವೇಷಣೆ. 11. ಪಂಚ+ಆಸ್ಯ=ಪಂಚಾಸ್ಯ. 12. ಶಾಸಕ+ಅಂಗ=ಶಾಸಕಾಂಗ. 13. ಅಭಯ+ಅರಣ್ಯ =ಅಭಯಾರಣ್ಯ. 14. ಉಭಯ+ಅರಣ್ಯ =ಉಭಯಾರಣ್ಯ 15. ವಸ್ರ್ತ + ಆಭರಣ= ವಸ್ತ್ರಾಭರಣ. 16. ಗೌರಿ+ಈಶ =ಗೌರೀಶ. 17. ಕಟು+ಉಕ್ತಿ=ಕಟೂಕ್ತಿ. 18. ಕೃಷ್ಣ +ಅಜಿನ=ಕೃಷ್ಣಾಜಿನ. 19. ಪೀತ+ಅಂಬರ=ಪೀತಾಂಬರ. 20. ಏಕ+ಆಸ...

ಡಾ.ಸತ್ಯಾನಂದ ಪಾತ್ರೋಟ Dr.satyananda patrota

• ಡಾ.ಸತ್ಯಾನಂದ ಪಾತ್ರೋಟ • ಜನನ- ಬಾಗಲಕೋಟೆ • ವಿದ್ಯಾಭ್ಯಾಸ ~ಎಂ.ಎ., ಪಿ.ಎಚ್.ಡಿ. • ಉದ್ಯೋಗ ~ ಬಾಗಲಕೋಟೆಯ ಎಸ್.ಬಿ.ಪಾಟೀಲ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಅಧ್ಯಾಪಕರು. • ಕವನ ಸಂಕಲನಗಳು 1. ಕರಿನೆಲದ ಕಲೆಗಳು 2. ಜಾಜಿ ಮಲ್ಲಿಗೆ 3. ಕಲ್ಲಿಗೂ ಗೊತ್ತಿರುವ ಕಥೆ. 4. ಕರಿಯ ಕಟ್ಟಿದ ಕವನ 5. ನನ್ನ ಕನಸಿನ ಹುಡುಗಿ 6. ನದಿಗೊಂದು ಕನಸು ಮತ್ತು ಅವಳು ನಾಟಕಗಳು 1. ನಮಗ ಯಾರು ಇಲ್ಲೋ ಎಪ್ಪಾ ಸಾಕ್ಷಿ 2. ಮತ್ತೊಬ್ಬ ಏಕಲವ್ಯ ಪ್ರಬಂಧ ಸಂಕಲನ 1. ಒಂದಿಷ್ಟು ಕ್ಷಣಗಳು ಕಾವ್ಯದ ಧ್ವನಿಸುರುಳಿ 1. ಎದೆಯ ಮಾತು ಪ್ರಶಸ್ತಿ- ಕನ್ನಡ ರಾಜ್ಯೋತ್ಸವ ಪ್ರಶಸ್ತಿ

Kannada grammar for kpsc exams ಕೆ.ಪಿ.ಎಸ್. ಸಿ.ಪರೀಕ್ಷೆಗಳಿಗೆ ಕನ್ನಡ ವ್ಯಾಕರಣ

 ಕೆ.ಪಿ.ಎಸ್. ಸಿ ನಡೆಸುವ ಪ್ರತಿಯೊಂದು ಪರೀಕ್ಷೆಗಳಲ್ಲಿ ಕನ್ನಡಕ್ಕೆ ಸಂಬಂಧಪಟ್ಟಂತೆ 35 ಅಂಕಗಳನ್ನು ನಿಗದಿಪಡಿಸಲಾಗಿದೆ. ಪರೀಕ್ಷೆಗೆ ಅನಕೂಲವಾಗಲೆಂದು  ಕನ್ನಡ ವ್ಯಾಕರಣಕ್ಕೆ ಸಂಬಂಧಪಟ್ಟ ಕೆಲವು ಮಾಹಿತಿ ಸಂಗ್ರಹಿಸಿ ಸ್ಪರ್ಧಾರ್ಥಿಗಳ ಅನುಕೂಲಕ್ಕಾಗಿ ನೀಡಲಾಗಿದೆ.ಆಸಕ್ತರು ಇದರ ಸದುಪಯೋಗ ಪಡೆಯಬಹುದು. □  □ □ □ □ □ □ □ □ □ □ □ □ □ □     ತತ್ಸಮ - - - -  - - - - - - - - - ತದ್ಭವ (ಸಂಸ್ಕೃತ )                    (ಕನ್ನಡ ) ■ ನರ್ತಕಿ - ನಚ್ಚಣಿ ■ ಲಕ್ಷ್ಮಿ - ಲಕ್ಕಿ ,ಲಕುಮಿ ■ವೇಷ - ವೇಸ ■ಲೇಪ - ಲಪ್ಪ ■ವರ್ಧಮಾನ - ಬದ್ದವಣ ■ವಜ್ರ - ಬಜ್ಜರ ■ವತ್ಸಲಾ - ಬಚ್ಚಳೆ ■ವಿಸ್ತಾರ - ಬಿತ್ತರ ■ವೃದ್ಧ - ವಡ್ಡ ■ವೃದ್ಧಿ - ಬಡ್ಡಿ ■ವ್ಯಾಖ್ಯಾನ - ವಕ್ಕಣೆ ■ವ್ಯಾಘ್ರ - ಬಗ್ಗ ■ವರ್ಧಕಿ - ಬಡಗಿ ■ವಿದ್ಯೆ - ಬಿಜ್ಜೆ ■ವೈದ್ಯ - ಬೆಜ್ಜ ■ವಿಜ್ಞಾನ - ಬಿನ್ನಣ ■ಶಿಲ್ಪಕ,ಶಿಲ್ಪಿ - ಸಿಂಪಿಗ ,ಚಿಪ್ಪಿಗ ■ಶೂನ್ಯ - ಸೊನ್ನೆ ■ಅವಸ್ಥೆ - ಅವತೆ ■ಅರ್ಹ - ಅರುಹ ■ಅರ್ಗಲ,ಅರ್ಗಲೆ - ಅಗಳಿ,ಅಗುಳಿ (ಚಿಲಕ) ■ಅಂಗುಷ್ಠ - ಅಂಗುಟ ,ಉಂಗುಟ. ■ಆಲಸ್ಯ - ಆಲಸ ■ಆಜ್ಞಾ, ಆಜ್ಞೆ - ಆಣೆ ■ಕ್ರಕಚ - ಗರಗಸ ■ಕ್ಷಣ - ಚಣ ■ಗ್ರಹ - ಗರ ■ಗ್ರಹಣ - ಗರಣ ■ಗ್ರಾಮೀಣ - ಗಾವಿಲ ■ಲಕ್ಷ - ಲಕ್ಕ ■ ಶ್ರೇಷ್ಠಿ -...