Skip to main content

ಕನ್ನಡ ಸುಭಾಷಿತಗಳು ಕನ್ನಡ ನುಡಿಮುತ್ತು ಗಳು Kannada subhashitagalu Kannada nudi muttugalu

1. ನಕಲು ಮಾಡಿ ಗೆಲ್ಲುವುದಕ್ಕಿಂತ ಸ್ವಂತ ಸೃಷ್ಟಿಯಲ್ಲಿ ಸೋಲುವುದು ಒಳ್ಳೆಯದು.---- ಹರ್ಮನ್ ಮೆಲ್ವಿಲ್.
2. ಇತರರ ಬಗ್ಗೆ ಹೆಚ್ಚು ಗೊತ್ತಿರುವವನು ಬುದ್ಧಿವಂತ. ಆದರೆ ತನ್ನ ಬಗ್ಗೆಯೇ ಹೆಚ್ಚು ಗೊತ್ತಿರುವವನು ಜ್ಞಾನಿ.----- ಲಾವೊ ತ್ಸೆ.
3. ಕಾಲು ಜಾರಿದರೆ ಎದ್ದು ನಿಲ್ಲಬಹುದು.ನಾಲಗೆ ಜಾರಿದರೆ ಎದ್ದು ನಿಲ್ಲುವುದು ಕಷ್ಟ. ----ಬೆಂಜಮಿನ್ ಫ್ರಾಂಕ್ಲಿನ್.
4. ನೀವು ಯಶಸ್ಸು ಹೊಂದಬೇಕೆಂದು ದೇವರು ಬಯಸುವುದಿಲ್ಲ; ಆದರೆ ನೀವು ಪ್ರಯತ್ನಿಸಬೇಕೆಂದು ಬಯಸುತ್ತಾನೆ.---- ಮದರ್ ತೆರೆಸಾ.
5. ನಿಮ್ಮ ದುರದೃಷ್ಟದಿಂದ ಕಲಿತುಕೊಳ್ಳುವುದಕ್ಕಿಂತ ಇತರರ ದುರದೃಷ್ಟದಿಂದ ಕಲಿತುಕೊಳ್ಳುವುದು ಒಳ್ಳೆಯದು.-----ಈಸೋಪ.
6. ಕಾದಂಬರಿ ಬರೆಯಲು ಮೂರು ನಿಯಮಗಳಿವೆ.ಆದರೆ ದುರದೃಷ್ಟವಶಾತ್ ಆ ಮೂರು ನಿಯಮಗಳು ಯಾವುದೆಂದು ಯಾರಿಗೂ ಗೊತ್ತಿಲ್ಲ. ---- ಸಾಮರ್ ಸೆಟ್ ಮಾಮ್.
7. ಮನುಷ್ಯ ನಿನಗೇನು ಬೆಲೆಯಿದೆ? ನಿನ್ನ ಮೂಳೆಗಳಿಂದ ಆಭರಣ ಮಾಡಲಾಗದು, ತೊಗಲಿನಿಂದ ಸಂಗೀತ ಉಪಕರಣಗಳನ್ನೂ ಮಾಡಲಾಗದು ! ---- ಸಂತ ಕಬೀರ.
8. ಮನುಷ್ಯ ತನ್ನನ್ನು ತಾನು ಗೆಲ್ಲುವುದೇ ಅತ್ಯುತ್ತಮವಾದ ಜಿಹಾದ್.------ ಮೊಹಮ್ಮದ್ ಪೈಗಂಬರ್.
9. ನಿರ್ಧಾರವನ್ನು ನಿಧಾನವಾಗಿಯೇ ಕೈಗೊಳ್ಳಿ. ಆದರೆ ಒಮ್ಮೆ ನಿರ್ಧರಿಸಿದ ಬಳಿಕ ಅದನ್ನು ಗಟ್ಟಿಯಾಗಿ ಸಮರ್ಥಿಸಿ.----ಮಹಾತ್ಮಾ ಗಾಂಧಿ.
10. ಸ್ವಾತಂತ್ರ್ಯ ಮತ್ತು ಪ್ರೀತಿ ಜತೆಗೂಡಿ ಹೋಗುತ್ತದೆ. ಇನ್ನೊಬ್ಬರು ಪ್ರೀತಿಸುತ್ತಾರೆಂದು ಅದಕ್ಕೆ ಪ್ರತಿಕ್ರಿಯೆಯಾಗಿ ಪ್ರೀತಿಸಿದರೆ ಅದು ವ್ಯಾಪಾರ. ಯಾವ ಅಪೇಕ್ಷೆಯೂ ಇಲ್ಲದೆ ಪ್ರೀತಿಸಿ.---- ಜಿಡ್ಡು ಕೃಷ್ಣ ಮೂರ್ತಿ.
11. ಸಮಾಜಕ್ಕೆ ಸೇವೆ ಸಲ್ಲಿಸಲು ಯಾವ ಡಿಗ್ರಿಯೂ ಬೇಕಾಗಿಲ್ಲ. ಘನತೆ ತುಂಬಿದ ಹೃದಯ ಮತ್ತು ಪ್ರೀತಿ ತುಂಬಿದ ಆತ್ಮವಿದ್ದರೆ ಸಾಕು.----- ಮಾರ್ಟಿನ್ ಲೂಥರ್ ಕಿಂಗ್.
12. ಬಡತನವೇ ಕ್ರಾಂತಿ ಮತ್ತು ಅಪರಾಧಗಳ ಪೋಷಕ.-----ಅರಿಸ್ಟಾಟಲ್.
13. ಜನ ನಿಮ್ಮನ್ನು ಏಕಾಂಗಿಯಾಗಿರಲು ಬಿಟ್ಟರೆ ಬದುಕು ಅದ್ಭುತವಾಗಿರುತ್ತದೆ.---- ಚಾರ್ಲಿ ಚಾಪ್ಲಿನ್.
14. ಜಗತ್ತನ್ನು ಪ್ರೀತಿಸಿದರೆ ಮಾತ್ರ ಅಲ್ಲಿ ಜೀವಿಸಲು ಸಾಧ್ಯ. ----- ರವೀಂದ್ರನಾಥ ಟ್ಯಾಗೋರ್.
15. ಪ್ರೀತಿಯ ಸ್ಪರ್ಶವಿದ್ದರೆ ಪ್ರತಿಯೊಬ್ಬನೂ ಕವಿಯಾಗುತ್ತಾನೆ.-------- ಪ್ಲೇಟೋ.
16. ಗೆಳೆಯರನ್ನು ನಿಧಾನಕ್ಕೆ ಆಯ್ಕೆ ಮಾಡಿ. ಅವರನ್ನು ಬದಲಾಯಿಸುವಾಗ ಇನ್ನಷ್ಟು ನಿಧಾನಿಸಿ.------ಬೆಂಜಮಿನ್ ಫ್ರಾಂಕ್ಲಿನ್.
17. ದೇಹ ಮತ್ತು ಮನಸ್ಸಿನ ಆರೋಗ್ಯದ ಗುಟ್ಟು ಕಳೆದುಹೋದದ್ದಕ್ಕೆ ದುಃಖಿಸುವುದರಲ್ಲಾಗಲೀ ಭವಿಷ್ಯದ ಬಗ್ಗೆ ಭಯ ಪಡುವುದರಲ್ಲಾಗಲೀ ಇಲ್ಲ. ವರ್ತಮಾನವನ್ನು ಗೌರವ ಮತ್ತು ಬುದ್ಧಿವಂತಿಕೆಯಿಂದ ಬದುಕುವುದರಲ್ಲಿ ಇದೆ.---- ಗೌತಮ ಬುದ್ಧ.
18. ಜಗತ್ತಿನಲ್ಲಿ ಎಲ್ಲಾ ಸವಲತ್ತುಗಳು ಇದ್ದರೂ ಸ್ನೇಹಿತರು ಇಲ್ಲದಿದ್ದರೆ ಬದುಕಲು ಸಾಧ್ಯವಿಲ್ಲ. ------ಅರಿಸ್ಟಾಟಲ್.
19. ಯಾವುದಾದರೂ ಕೆಲಸ ಆಗಬೇಕೆಂದಿದ್ದರೆ ನೀವೇ ಹೋಗಿ.ಆಗಬಾರದು ಎಂದಿದ್ದರೆ ಯಾರನ್ನಾದರೂ ಕಳಿಸಿ.------ ಬೆಂಜಮಿನ್ ಫ್ರಾಂಕ್ಲಿನ್.
20. ನಿಮಗೆ ನೀವು ಏನನ್ನು ಮಾಡಲು ಬಯಸುವುದಿಲ್ಲವೋ ಅದನ್ನು ಇನ್ನೊಬ್ಬರಿಗೂ ಮಾಡಬೇಡಿ.-----ಕನ್ ಪ್ಯೂಸಿಯಸ್.
21. ಹೆತ್ತವರು ಒಳ್ಳೆಯ ದಾರಿಯಲ್ಲಿ ನಡೆಯಲು ಸಲಹೆ ಕೊಡಬಹುದು.ಆದರೆ ವ್ಯಕ್ತಿಯ ಗುಣ ನಡತೆ ಉತ್ತಮಗೊಳ್ಳುವುದು ಅವನ ಕೈಯಲ್ಲೇ ಇದೆ.----- ಆನ್ ಫ್ರಾಂಕ್.
22. ಲೇಖಕನಾದವನು ಏನನ್ನು ಹೇಳಬಯಸುತ್ತಾನೋ ಅದನ್ನು ಬರೆಯಬೇಕು, ಮಾತನಾಡಬಾರದು.-----ಆರ್ನೆಸ್ಟ್ ಹೆಮಿಂಗ್ ವೇ.
23. ನಿಮ್ಮನ್ನು ಸಾಮಾನ್ಯ ಎಂದು ತಿಳಿದುಕೊಂಡವರನ್ನು ಯಾವತ್ತೂ ಪ್ರೀತಿಸಬೇಡಿ.----- ಆಸ್ಕರ್ ವೈಲ್ಡ್.
24. ಪ್ರೀತಿಸುವವರ ಒಂದು ಸ್ಪರ್ಶ ಸಾಕು, ಪ್ರತಿಯೊಬ್ಬರೂ ಕವಿಯಾಗುತ್ತಾರೆ.---ಪ್ಲೆಟೋ.
25. ನಾನು ಪ್ರೀತಿಗೆ ಅಂಟಿಕೊಳ್ಳಲು ನಿರ್ಧರಿಸಿದ್ದೇನೆ.ದ್ವೇಷದ ಹೊರೆಯನ್ನು ಹೊರುವುದು ಸಾಧ್ಯವಿಲ್ಲ. ------ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್.
26. ಹೃದಯ ಇರುವದೇ ಭಗ್ನಗೊಳ್ಳಲು ! ಆಸ್ಕರ್ ವೈಲ್ಡ್.
27. ಜೀವನ ಸುದೀರ್ಘ ಅನ್ನಿಸಿಕೊಳ್ಳುವುದಕ್ಕಿಂತ ಶ್ರೇಷ್ಠ ಅನ್ನಿಸಿಕೊಳ್ಳಬೇಕು.----- ಬಾಬಾ ಸಾಹೇಬ್ ಅಂಬೇಡ್ಕರ್ .
28. ಬೆಳಕು ಕೊಡಿ, ಜನರು ಅವರ ದಾರಿಯನ್ನು ಅವರೇ ಹುಡುಕಿಕೊಳ್ಳುತ್ತಾರೆ.--------ಎಲ್ಲಾ ಬೇಕರ್.
29. ಸೂರ್ಯನ ಬೆಳಕು ಇದ್ದಾಗ ನಾನು ಏನೆಲ್ಲವನ್ನೂ ಮಾಡಬಲ್ಲೆ.ಯಾವ ಪರ್ವತವೂ ನನಗೆ ಎತ್ತರವಲ್ಲ.----- ವಿಲ್ಮಾ ರುಡೋಲ್ಫ್.
30. ಇವತ್ತು ಏನು ಮಾಡುತ್ತೀಯೋ ಅದರ ಮೇಲೆ ನಿನ್ನ ನಾಳೆಯ ಭವಿಷ್ಯ ನಿಂತಿದೆ.----- ಮಹಾತ್ಮಾ ಗಾಂಧಿ.
31. ಹಕ್ಕಿಯೊಂದು ತನ್ನ ಸ್ವಂತ ಬದುಕಿನಿಂದಲೇ ಶಕ್ತಿ ಮತ್ತು ಸಾಧಿಸುವ ಛಲವನ್ನು ಪಡೆಯುತ್ತದೆ.------ಎ.ಪಿ.ಜೆ.ಅಬ್ದುಲ್ ಕಲಾಂ.
32. ಯಾರು ಸಂತೋಷವಾಗಿರುತ್ತಾರೋ ಅವರು ಉಳಿದವರನ್ನೂ ಸಂತೋಷಗೊಳಿಸಬಲ್ಲರು.----ಆಯ್ನ್ ಫ್ರಾಂಕ್.
33. ನಿಮಗೆ ಯಾವ ಕೆಲಸ ಅಸಾಧ್ಯ ಎನ್ನಿಸುತ್ತದೋ ಅದನ್ನೇ ಮಾಡಿ.-----'ಎಲಿನಾರ್ ರೂಸ್ ವೆಲ್ಟ್.
34. ನಿಷ್ಪ್ರಯೋಜಕ ವ್ಯಕ್ತಿಗಳು ಕೇವಲ ತಿನ್ನುವುದಕ್ಕಾಗಿ ಮತ್ತು ಕುಡಿಯುವುದಕ್ಕಾಗಿ ಬದುಕುತ್ತಾರೆ. ಪ್ರಯೋಜನಕಾರಿ ವ್ಯಕ್ತಿ ಗಳು ಬದುಕುವುದಕ್ಕಾಗಿ ತಿನ್ನುತ್ತಾರೆ ಮತ್ತು ಕುಡಿಯುತ್ತಾರೆ. ----- ಸಾಕ್ರೆಟಿಸ್.
35. ಬಹಳಷ್ಟು ಜನರಿಗೆ ಸ್ವಾತಂತ್ರ್ಯ ಬೇಕಿಲ್ಲ. ಏಕೆಂದರೆ ಸ್ವಾತಂತ್ರ್ಯದ ಜತೆಗೆ ಜವಾಬ್ದಾರಿಯು ಇರುತ್ತದೆ. ಬಹಳಷ್ಟು ಜನ ಜವಾಬ್ದಾರಿಯ ಬಗ್ಗೆ ಭಯ ಹೊಂದಿದ್ದಾರೆ. ----- ಸಿಗ್ಮಂಡ್ ಫ್ರಾಯ್ಡ್.
36. ಮುಗ್ಧರ ನಂಬಿಕೆಯೇ ಮೋಸಗಾರರ ಬಲವಾದ ಆಯುಧ. ------ ಸ್ಟೀಫನ್ ಕಿಂಗ್.
37. ಮಹತ್ವಾಕಾಂಕ್ಷೆ ಇಲ್ಲದ ಬುದ್ಧಿವಂತಿಕೆ ರೆಕ್ಕೆಗಳಿಲ್ಲದ ಹಕ್ಕಿಯಂತೆ. ----- ಸಾಲ್ವಡೋರ್ ಡಾಲಿ.
38. ದುಃಖದ ಮೌನ ಭಾಷೆಯೇ ಕಣ್ಣೀರು. ------ವಾಲ್ಟೇರ್.
39. ಕ್ರೀಡೆಯಲ್ಲಿ ಕೆಲವೊಮ್ಮೆ ನೀವು ಅಪಾಯಗಳನ್ನು ಆಹ್ವಾನಿಸಲೇಬೇಕು. ಆದರೆ ವಾಸ್ತವದ ಅಪಾಯಗಳನ್ನು ಎದುರಿಸಿ, ಹುಚ್ಚು ಅಪಾಯಗಳನ್ನಲ್ಲ. ------ ಸರ್ಗಿ ಬುಬ್ಕಾ.
40. ಯಶಸ್ಸು ಸದಾ ಇರಬೇಕೆಂದರೆ ವಿನಯದಿಂದಿರಿ. ಕೀರ್ತಿ ಅಥವಾ ಹಣ ತಲೆಗೆ ಹತ್ತದಂತೆ ನೋಡಿಕೊಳ್ಳಿ. ------- ಎ.ಆರ್.ರೆಹಮಾನ್.
41. ಬೆಂಕಿಯಿಲ್ಲದೆ ಮೇಣದ ಬತ್ತಿ ಉರಿಯುವುದಿಲ್ಲ. ಹಾಗೆಯೇ ಆಧ್ಯಾತ್ಮಿಕ ಜೀವನವಿಲ್ಲದೆ ಮನುಷ್ಯ ಬದುಕಲಾರ. -----ಗೌತಮ ಬುದ್ಧ.
42. ಜೀವನದ ಭಯದಿಂದಲೇ ಸಾವಿನ ಭಯವೂ ಹುಟ್ಟುವುದು. ಜೀವನವನ್ನು ಸಂಪೂರ್ಣವಾಗಿ ಜೀವಿಸುವವನು ಸಾಯಲು ಸದಾ ಸಿದ್ಧನಾಗಿರುತ್ತಾನೆ. ------ ಮಾರ್ಕ್ ಟ್ವೈನ್.
43. ಶಿಕ್ಷಣ ಎನ್ನುವುದು ಅತ್ಯಂತ ಶಕ್ತಿ ಶಾಲಿ ಆಯುಧ. ಅದರ ಮೂಲಕ ಜಗತ್ತನ್ನು ಬದಲಿಸಬಹುದು. -----'ನೆಲ್ಸನ್ ಮಂಡೇಲಾ.
44. ನಿಮಗೆ ಶತ್ರುಗಳಿದ್ದಾರಾ ? ತುಂಬಾ ಒಳ್ಳೆಯದು.ಅದರ ಅರ್ಥ ಜೀವನದಲ್ಲಿ ನೀವು ಯಾವತ್ತೋ ಒಂದು ಸಲ ಒಳ್ಳೆಯದಕ್ಕಾಗಿ ಎದ್ದು ನಿಂತಿದ್ದೀರಿ.----- ವಿನ್ ಸ್ಟನ್ ಚರ್ಚಿಲ್.
45. ಈ ಜಗತ್ತೆನ್ನುವುದು ನಮ್ಮನ್ನು ನಾವು ಗಟ್ಟಿಗೊಳಿಸಲೆಂದೇ ಇರುವ ವ್ಯಾಯಾಮ ಶಾಲೆ. -----ಸ್ವಾಮಿ ವಿವೇಕಾನಂದ.
46. ದ್ವೇಷವನ್ನು ದ್ವೇಷದಿಂದಲೇ ಮುಗಿಸಲು ಹೊರಟರೆ ಪ್ರಪಂಚವೇ ಕುರುಡಾಗುತ್ತದೆ.-----ಮಹಾತ್ಮಾ ಗಾಂಧಿ.
47. ಜೀವನವು ಹೋರಾಟದ ಕಣ.ಹೋರಾಟದ ಮೂಲಕವೇ ನಾವು ಮುಂದಕ್ಕೆ ಸಾಗಬೇಕಿದೆ.-----ಸ್ವಾಮಿ ವಿವೇಕಾನಂದ.
48. ಮೂರ್ಖನ ಹಣ ಮಾತ್ರ ಅತ್ಯಧಿಕ ಪ್ರಚಾರ ಪಡೆಯುತ್ತದೆ. ----ಅಲ್ ಬೆರ್ಸೀನ್.
49. ಶಕ್ತಿ ಬರುವುದು ದೈಹಿಕ ಸಾಮರ್ಥ್ಯದಿಂದ ಅಲ್ಲ; ಮಾನಸಿಕ ದೃಡತೆಯಿಂದ. ----ಮಹಾತ್ಮಾ ಗಾಂಧಿ.
50. ಇಂದ್ರಿಯಗಳನ್ನು ಮತ್ತು ಮನಸ್ಸನ್ನು ನಿಗ್ರಹಿಸಿದರೆ ನಿಮ್ಮ ಹೃದಯದಲ್ಲಿರುವ ದೇವರು ಕಾಣಿಸುತ್ತಾನೆ.---ಆದಿ ಶಂಕರ. 

Comments

Popular posts from this blog

ಸವರ್ಣ ದೀರ್ಘ ಸಂಧಿ. ಸವರ್ಣ ದೀರ್ಘ ಸಂಧಿ ಉದಾಹರಣೆಗಳು savarna dhirgha sandhi. Savarna dhirgha sandhi examples

ಸವರ್ಣ ದೀರ್ಘ ಸಂಧಿ. [ ] ಪೂರ್ವ ಪದದ ಅಂತ್ಯ ಸ್ವರ ಮತ್ತು ಉತ್ತರ ಪದದ ಆರಂಭದ ಸ್ವರ ಒಂದೇ ರೀತಿಯ ವರ್ಣವಾಗಿದ್ದರೆ , ಸಂಧಿಕಾರ್ಯ ನಡೆಯುವಾಗ ಅದೇ ಸ್ವರದ ದೀರ್ಘ ಸ್ವರವು ಆದೇಶವಾಗಿರುವುದು ಕಂಡು ಬರುತ್ತದೆ. [ ] ಸಂಧಿಕಾರ್ಯ ನಡೆಯುವಾಗ ಒಂದೇ ರೀತಿಯ ಸ್ವರಾಕ್ಷರಗಳು ಪರಸ್ಪರ ಸೇರಿ ದೀರ್ಘ ಸ್ವರ ಆದೇಶವಾದರೆ ಅಂತಹ ಸಂಧಿಯನ್ನು "ಸವರ್ಣ ದೀರ್ಘ ಸಂಧಿ "ಎಂದು ಕರೆಯುತ್ತಾರೆ. [ ] ಸವರ್ಣಾಕ್ಷರಗಳಿಗೆ ಸವರ್ಣಾಕ್ಷರಗಳ ಪರವಾಗಿ ಸವರ್ಣ ದೀರ್ಘಾಕ್ಷರಗಳು ಬಂದರೆ ಸವರ್ಣ ದೀರ್ಘ ಸಂಧಿ. [ ] ಉದಾಹರಣೆಗೆ ಪೂರ್ವ ಪದ + ಉತ್ತರ ಪದ = ಸಂಧಿಪದ 1. ರವಿ + ಇಂದ್ರ = ರವೀಂದ್ರ ( ಇ+ಇ= ಈ) 2. ದೇವ+ ಆಲಯ= ದೇವಾಲಯ. (ಅ+ಆ=ಆ) 3. ಗುರು+ ಉಪದೇಶ =ಗುರೂಪದೇಶ (ಉ+ಉ=ಊ) 4. ಮಹಾ+ ಆತ್ಮ = ಮಹಾತ್ಮ (ಆ+ಆ=ಆ) 5. ಗಿರಿ+ ಇಂದ್ರ = ಗಿರೀಂದ್ರ 6. ಮುನಿ+ ಇಂದ್ರ =ಮುನೀಂದ್ರ. 7. ಅಲ್ಪ + ಅಕ್ಷರ =ಅಲ್ಪಾಕ್ಷರ. 8. ವಿದ್ಯ+ ಅರ್ಜನೆ=ವಿದ್ಯಾರ್ಜನೆ. 9. ರಾಕ್ಷಸ + ಅಧಿಪತಿ= ರಾಕ್ಷಸಾಧಿಪತಿ. 10. ಸೀತ+ಅನ್ವೇಷಣೆ= ಸೀತಾನ್ವೇಷಣೆ. 11. ಪಂಚ+ಆಸ್ಯ=ಪಂಚಾಸ್ಯ. 12. ಶಾಸಕ+ಅಂಗ=ಶಾಸಕಾಂಗ. 13. ಅಭಯ+ಅರಣ್ಯ =ಅಭಯಾರಣ್ಯ. 14. ಉಭಯ+ಅರಣ್ಯ =ಉಭಯಾರಣ್ಯ 15. ವಸ್ರ್ತ + ಆಭರಣ= ವಸ್ತ್ರಾಭರಣ. 16. ಗೌರಿ+ಈಶ =ಗೌರೀಶ. 17. ಕಟು+ಉಕ್ತಿ=ಕಟೂಕ್ತಿ. 18. ಕೃಷ್ಣ +ಅಜಿನ=ಕೃಷ್ಣಾಜಿನ. 19. ಪೀತ+ಅಂಬರ=ಪೀತಾಂಬರ. 20. ಏಕ+ಆಸ...

ಡಾ.ಸತ್ಯಾನಂದ ಪಾತ್ರೋಟ Dr.satyananda patrota

• ಡಾ.ಸತ್ಯಾನಂದ ಪಾತ್ರೋಟ • ಜನನ- ಬಾಗಲಕೋಟೆ • ವಿದ್ಯಾಭ್ಯಾಸ ~ಎಂ.ಎ., ಪಿ.ಎಚ್.ಡಿ. • ಉದ್ಯೋಗ ~ ಬಾಗಲಕೋಟೆಯ ಎಸ್.ಬಿ.ಪಾಟೀಲ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಅಧ್ಯಾಪಕರು. • ಕವನ ಸಂಕಲನಗಳು 1. ಕರಿನೆಲದ ಕಲೆಗಳು 2. ಜಾಜಿ ಮಲ್ಲಿಗೆ 3. ಕಲ್ಲಿಗೂ ಗೊತ್ತಿರುವ ಕಥೆ. 4. ಕರಿಯ ಕಟ್ಟಿದ ಕವನ 5. ನನ್ನ ಕನಸಿನ ಹುಡುಗಿ 6. ನದಿಗೊಂದು ಕನಸು ಮತ್ತು ಅವಳು ನಾಟಕಗಳು 1. ನಮಗ ಯಾರು ಇಲ್ಲೋ ಎಪ್ಪಾ ಸಾಕ್ಷಿ 2. ಮತ್ತೊಬ್ಬ ಏಕಲವ್ಯ ಪ್ರಬಂಧ ಸಂಕಲನ 1. ಒಂದಿಷ್ಟು ಕ್ಷಣಗಳು ಕಾವ್ಯದ ಧ್ವನಿಸುರುಳಿ 1. ಎದೆಯ ಮಾತು ಪ್ರಶಸ್ತಿ- ಕನ್ನಡ ರಾಜ್ಯೋತ್ಸವ ಪ್ರಶಸ್ತಿ

Kannada grammar for kpsc exams ಕೆ.ಪಿ.ಎಸ್. ಸಿ.ಪರೀಕ್ಷೆಗಳಿಗೆ ಕನ್ನಡ ವ್ಯಾಕರಣ

 ಕೆ.ಪಿ.ಎಸ್. ಸಿ ನಡೆಸುವ ಪ್ರತಿಯೊಂದು ಪರೀಕ್ಷೆಗಳಲ್ಲಿ ಕನ್ನಡಕ್ಕೆ ಸಂಬಂಧಪಟ್ಟಂತೆ 35 ಅಂಕಗಳನ್ನು ನಿಗದಿಪಡಿಸಲಾಗಿದೆ. ಪರೀಕ್ಷೆಗೆ ಅನಕೂಲವಾಗಲೆಂದು  ಕನ್ನಡ ವ್ಯಾಕರಣಕ್ಕೆ ಸಂಬಂಧಪಟ್ಟ ಕೆಲವು ಮಾಹಿತಿ ಸಂಗ್ರಹಿಸಿ ಸ್ಪರ್ಧಾರ್ಥಿಗಳ ಅನುಕೂಲಕ್ಕಾಗಿ ನೀಡಲಾಗಿದೆ.ಆಸಕ್ತರು ಇದರ ಸದುಪಯೋಗ ಪಡೆಯಬಹುದು. □  □ □ □ □ □ □ □ □ □ □ □ □ □ □     ತತ್ಸಮ - - - -  - - - - - - - - - ತದ್ಭವ (ಸಂಸ್ಕೃತ )                    (ಕನ್ನಡ ) ■ ನರ್ತಕಿ - ನಚ್ಚಣಿ ■ ಲಕ್ಷ್ಮಿ - ಲಕ್ಕಿ ,ಲಕುಮಿ ■ವೇಷ - ವೇಸ ■ಲೇಪ - ಲಪ್ಪ ■ವರ್ಧಮಾನ - ಬದ್ದವಣ ■ವಜ್ರ - ಬಜ್ಜರ ■ವತ್ಸಲಾ - ಬಚ್ಚಳೆ ■ವಿಸ್ತಾರ - ಬಿತ್ತರ ■ವೃದ್ಧ - ವಡ್ಡ ■ವೃದ್ಧಿ - ಬಡ್ಡಿ ■ವ್ಯಾಖ್ಯಾನ - ವಕ್ಕಣೆ ■ವ್ಯಾಘ್ರ - ಬಗ್ಗ ■ವರ್ಧಕಿ - ಬಡಗಿ ■ವಿದ್ಯೆ - ಬಿಜ್ಜೆ ■ವೈದ್ಯ - ಬೆಜ್ಜ ■ವಿಜ್ಞಾನ - ಬಿನ್ನಣ ■ಶಿಲ್ಪಕ,ಶಿಲ್ಪಿ - ಸಿಂಪಿಗ ,ಚಿಪ್ಪಿಗ ■ಶೂನ್ಯ - ಸೊನ್ನೆ ■ಅವಸ್ಥೆ - ಅವತೆ ■ಅರ್ಹ - ಅರುಹ ■ಅರ್ಗಲ,ಅರ್ಗಲೆ - ಅಗಳಿ,ಅಗುಳಿ (ಚಿಲಕ) ■ಅಂಗುಷ್ಠ - ಅಂಗುಟ ,ಉಂಗುಟ. ■ಆಲಸ್ಯ - ಆಲಸ ■ಆಜ್ಞಾ, ಆಜ್ಞೆ - ಆಣೆ ■ಕ್ರಕಚ - ಗರಗಸ ■ಕ್ಷಣ - ಚಣ ■ಗ್ರಹ - ಗರ ■ಗ್ರಹಣ - ಗರಣ ■ಗ್ರಾಮೀಣ - ಗಾವಿಲ ■ಲಕ್ಷ - ಲಕ್ಕ ■ ಶ್ರೇಷ್ಠಿ -...