Thursday 22 February 2018

ಕನ್ನಡ ಸುಭಾಷಿತಗಳು ಕನ್ನಡ ನುಡಿಮುತ್ತು ಗಳು kannada subhashitagalu Kannada nudi muttugalu

1. ತಜ್ಞನೆಂದರೆ ತನ್ನ ವಿಷಯದಲ್ಲಿ ಆಗಲಿರುವ ಅತಿ ಕೆಟ್ಟ ತಪ್ಪುಗಳನ್ನು ಮೊದಲೇ ತಿಳಿದುಕೊಂಡು ಅದನ್ನು ನಿವಾರಿಸಿಕೊಳ್ಳುತ್ತಾನೆ.----- ವಾರ್ನರ್ ಹೆನ್ಸ್ ಬರ್ಗ್.
2. ಈ ಭೂಮಿಯಲ್ಲಿ ಪ್ರತಿಯೊಬ್ಬರ ಅಗತ್ಯತೆಗೆ ಸಾಕಷ್ಟಿದೆ ,ಆದರೆ ಯಾರೊಬ್ಬರ ದುರಾಸೆಗಲ್ಲ.----ಮಹಾತ್ಮಾ ಗಾಂಧಿ.
3. ಆಸೆಯು ಮನುಷ್ಯನನ್ನು ಮಂಗನನ್ನಾಗಿ ಕುಣಿಸುತ್ತದೆ.----- ಸುಭಾಷಿತ.
4. ಅತಿ ಆಸೆ ಗತಿಗೇಡು. ----- ಭಾರತೀಯ ಗಾದೆ.
5. ಮೊದಲಿನ ಆಸೆಗಳು ತೀರಿದಂತೆಲ್ಲಾ ಹೆಚ್ಚಿನ ಆಸೆಗಳು ಅತ್ಯವಶ್ಯಕವಾಗುತ್ತದೆ.----- ಎಮರ್ಸನ್.
6. ಆಸೆಯೇ ದುಃಖಕ್ಕೆ ಮೂಲ. -----ಗೌತಮ ಬುದ್ಧ
7. ಆಸೆ ಆಕಾಂಕ್ಷೆಗಳನ್ನು ಸಮಾಜದ ಯಾವ ಕಟ್ಟುಪಾಡುಗಳೂ ಬಂದಿಸಲಾರವು.---- ಮಹಾತ್ಮಾ ಗಾಂಧಿ.
8. ಯಾರ ಆಸೆಗಳು ದೊಡ್ಡವೊ ಅವನೇ ದರಿದ್ರ. ----ಭತೃಹರಿ.
9. ವಂಚಿಸಲಾಗದಂಥ ಆಸೆಯೇ ವಿವೇಕ---- ಜಾನ್ಸ್ ನ್.
10. ಯಾರು ತನ್ನ ಶತ್ರುಗಳಿಗಿಂತ ತನ್ನ ಆಸೆಗಳನ್ನು ಜಯಿಸುತ್ತಾನೋ ಅವನೇ ಬುದ್ಧಿವಂತ. -----ಅರಿಸ್ಟಾಟಲ್.
11. ಆಶಾವಾದಿ ಮರೆಯಲು ನಗುತ್ತಾನೆ; ನಿರಾಶಾವಾದಿ ನಗಲು ಮರೆಯುತ್ತಾನೆ.-----ಅನಾಮಿಕ.
12. ನಿರಾಶೆ ಕೆಲವರನ್ನು ಹಾಳು ಮಾಡಿದರೆ , ಅತಿಆಸೆ ಅನೇಕರನ್ನು ಹಾಳು ಮಾಡುತ್ತದೆ. ---- ಫ್ರಾಂಕ್ಲಿನ್.
13. ನಾವು ಏನನ್ನು ಹೊಂದಿಲ್ಲವೋ ಅದಕ್ಕಾಗಿ ಆಸೆಪಡುವುದೇ ನಮಗೆ ಅಭ್ಯಾಸವಾಗಿದೆ.----- ಪಬ್ಲಿಯಸ್ ಸೈರಸ್.
14. ಆಸೆಯಂಥ ರೋಗ ಮತ್ತೊಂದಿಲ್ಲ.----ಜಪಾನಿ ಗಾದೆ.
15. ಮನುಷ್ಯನು ಪ್ರಾಜ್ಞನಿರಲಿ ,ಶೂರನಿರಲಿ ,ಸ್ಥಿರ ಬುದ್ಧಿಯವನಿರಲಿ ಆಸೆ ಆತನನ್ನು ಹುಲ್ಲು ಕಡ್ಡಿಯನ್ನಾಗಿ ಮಾಡುತ್ತದೆ.----- ಯೋಗ ವಾಸಿಷ್ಠ.
16. ನಿಮ್ಮ ಆಸೆಯಲ್ಲಿ ಎಷ್ಟು ತಾರುಣ್ಯವಿದೆಯೋ ನೀವು ಅಷ್ಟೇ ತರುಣರು.-----ವಾಲ್ಟೇರ್.
17. ನಿಮ್ಮ ಆಸೆಗಳಿಗೆ ಅಂತ್ಯವಿಲ್ಲದಿದ್ದರೆ , ನಿಮ್ಮ ಕಣ್ಣೀರಿಗೂ ಅಂತ್ಯವಿಲ್ಲವಾಗುತ್ತದೆ----ಥಾಮಸ್ ಫುಲ್ಲರ್.
18. ಮಾನವನ ಎಲ್ಲಾ ಚಟುವಟಿಕೆಗಳು ಆಸೆಯಿಂದ ಪ್ರಚೋದಿಸಲ್ಪಟ್ಟಿವೆ.----ಬ್ರಟ್ರೇಂಡ್ ರಸೆಲ್.
19. ಆಸೆ ಮನುಷ್ಯನ ಸಾರ----ಬಿ.ಸ್ಟಿನೋಜಾ.
20. ಶಿಶಿರ ಬಂದರೇನಂತೆ , ವಸಂತ ಬಹಳ ಹಿಂದಿರುವುದೇ ---'ಷೆಲ್ಲಿ.
21. ಆಶಾವಾದಿ ಹೆಚ್ಚು ಅನುಭವಿಯಾಗಿರುವುದಿಲ್ಲ.------ಡಾನ್ ಮಾರ್ಕ್ವಿಸ್ .
22. ಆಶಾವಾದವು ಅರಳುವ ಸ್ಥಳ ಮಾನಸಿಕ ಆಸ್ಪತ್ರೆ. -----ಹ್ಯಾವಲೋಕ ಎಲ್ಲಿಸ್.
23. ಐಶ್ವರ್ಯವಂತರು ವಿನಯದಿಂದಿರುವುದು ಕಷ್ಟ. ----ಜಾನ್ ಆಷ್ಟಿನ್.
24. ಹಣವು ಯಕ್ಷಿಣಿಯಂತೆ ಅದೃಶ್ಯವಾಗುತ್ತದೆ.-----ಅನನ್.
25. ಐಶ್ವರ್ಯವು ಅನೇಕ ಸ್ನೇಹಿತರನ್ನು ಮಾಡಿಕೊಡುತ್ತದೆ.-----ಬೈಬಲ್.

No comments:

Post a Comment

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು