Skip to main content

ನಗೆ ಹನಿ ಕನ್ನಡ ನಗೆಹನಿಗಳು Kannada joke's

ನಾನೊಂದು ದಿನ ಬೆಟ್ಟದ ಹಾದಿಯುದ್ದಕ್ಕೂ ನಡೆಯುತ್ತಿದ್ದೆ, ಇದ್ದಕ್ಕಿದ್ದಂತೆ ಧ್ವನಿವೊಂದು ಕೇಳಿತು.
"ನಿಲ್ಲು".
ಕೂಡಲೆ ನಿಂತೆ, ಒಂದು ದೊಡ್ಡ ಬಂಡೆಯು ಮುಂದೆ ಬಿದ್ದಿತು ... ಕೂದಲೆಳೆಯಿಂದ ಬಚಾವಾದೆ ...!

ಆ 'ಧ್ವನಿಗೆ' ಧನ್ಯವಾದ ಹೇಳುತ್ತಾ ಮುಂದುವರೆದೆ ...!

ಸ್ವಲ್ಪ ಸಮಯದ ನಂತರ, ಅದೇ ಧ್ವನಿ ಮತ್ತೇ ಬಂದಿತು, " ನಿಲ್ಲು ...!

ಮತ್ತೆ ನಿಂತೆ, ಒಂದು ಕಾರು ವೇಗವಾಗಿ ಹಾದುಹೋಯಿತು ಕೂದಲೆಳೆಯಲ್ಲಿ ಬದುಕುಳಿದೆ ...!

ಆ 'ಧ್ವನಿಗೆ' ಧನ್ಯವಾದ ಹೇಳುತ್ತಾ ಕೇಳಿದೆ.,! ಸಹೋದರ, ಯಾರು ನೀನು ನನ್ನ ಜೀವನವನ್ನು ಮತ್ತೆ ಮತ್ತೆ ಉಳಿಸುತ್ತಿದ್ದಿಯಾ...!

ಧ್ವನಿ ಉತ್ತರಿಸಿತು: ನಿನ್ನ ಜೀವ ರಕ್ಷಿಸುವ ದೇವರು...!

ಮತ್ತೊಮ್ಮೆ ಧನ್ಯವಾದ ಹೇಳಿ ಅಳುತ್ತಾ ಕೇಳಿದೆ.
ನೀವು ಮದುವೆಯ ಸಂದರ್ಭದಲ್ಲಿ ಎಲ್ಲಿದ್ದಿರಿ ಆವಾಗ ಯಾಕೆ ಕೂಗಿ ಹೇಳಲಿಲ್ಲ?

ಅದೃಶ್ಯ ಧ್ವನಿ ಉತ್ತರಿಸಿತು: ಅವಾಗಲೂ ಕೂಗಿ ಕೂಗಿ ಹೇಳಿದೆ ಆದರೆ 'ವಾದ್ಯದ ಸದ್ದಿನಿಂದ ನೀನು ಕೇಳಿಸಿಕೊಂಡಿಲ್ಲ...!
😂😁😆😅😂😃





😃😃😃😃

ಒಬ್ಬ ಗಂಡ ಕೊನೇ ಉಸಿರೆಳೆಯುವ ಸಮಯದಲ್ಲಿ (ಬೆಂಗಳೂರಿನ ಒಂದು ಆಸ್ಪತ್ರೆಯಲ್ಲಿ)

ತನ್ನ ದೊಡ್ಡ ಮಗನನ್ನು ಕರೆದು "ಜಯನಗರ 3ನೇ ಬ್ಲಾಕಿನ 15 ಮನೆಗಳನ್ನ ನೀನು ತಗೋ,"🏠🏠🏠

ಎರಡನೆಯವನ್ನನ್ನು ಕರೆದು "ಜಯನಗರ 5ನೇ ಬ್ಲಾಕಿನ 8 ಫ್ಲಾಟ್ಗಳನ್ನ ನೀನು ಇಟ್ಕೋ,"🏫🏫🏫

ಕಡೆಯ ಮಗನನ್ನು ಕರೆದು "ನೀನು ನನಗೆ ತುಂಬ ಪ್ರೀತಿ ಪಾತ್ರ. 4ನೇ ಬ್ಲಾಕಿನ 20 ಅಂಗಡಿಗಳನ್ನು ನೀನೇ ಇಟ್ಕೋ."🏤🏤🏤

ಕೊನೆಯದಾಗಿ ತನ್ನ ಪತ್ನಿಯನ್ನು ಕುರಿತು
"ನೀನು ನಮ್ಮ 4ನೇT ಬ್ಲಾಕಿನ 11 ಮನೆಗಳನ್ನು ನೀನೆ ಇಟ್ಕೊ. ಈಗಿನ ನಮ್ಮ ಮನೆಗೆ ತುಂಬಾ ಹತ್ತಿರ ಆಗುತ್ತೆ."🏡🏡🏡

ಇದೆಲ್ಲವನ್ನೂ ನೋಡುತ್ತಿದ್ದ ನರ್ಸ್ ಹೇಳಿದಳು "ನೀವು ಎಂತಾ ಪುಣ್ಯವಂತರು....!!!"

ಕೋಪಗೊಂಡ ಹೆಂಡ್ತಿ ಹೇಳಿದಳು
"ಅಯ್ಯೋ ನನ್ ಕರ್ಮ ಅದೆಲ್ಲಾ ನಾವು ಹಾಲು ಹಾಕುತ್ತಿದ್ದ ಮನೆಗಳು,
ಅದನ್ನ ಹಂಚ್ತಾ ಅವ್ರೆ ಅಷ್ಟೇಯ....!!!""







ನಮ್ಮ ಭಾರತೀಯ ಸಂಪ್ರದಾಯದ ಪ್ರಕಾರ ನಾವು ಕಾಲಿಂದ ಯಾವುದನ್ನೂ/ಯಾರನ್ನೂ ಹೊಡೆಯೋಲ್ಲ..!!

ಇಲ್ಲಾಂದಿದ್ರೆ..ನಾವು ಫುಟ್ ಬಾಲ್ ನಲ್ಲಿ ನಂಬರ್ ಒನ್ ಆಗಿರ್ತಾ ಇದ್ವಿ..⚽!!

😜🤣😀😃😍😇😄😁

ಆದ್ರೆ ನಾವು ಬೇರೆಯವ್ರ ಕಾಲು ಎಳೆಯೋದ್ರಲ್ಲೇ ಖುಷಿ ಪಡ್ತೀವಿ.. ಅದಕ್ಕೇ ನಾವು ಕಬಡ್ಡಿಯಲ್ಲಿ ನಂಬರ್ ಒನ್ ಆಗಿರೋದು..😅😂🤣😁😆🤣😂😅🤩😍







ಓರ್ವ ಅರಬಿ Karnataka ಮಾರ್ಗವಾಗಿ ಪ್ರಯಾಣ ಮಾಡ್ತಾ ಇದ್ದ…….
ದಾರಿ ಮಧ್ಯೆ ,
Udupi ಬಳಿ ಇದ್ದ ತೋಡಿನಲ್ಲಿ ಒಬ್ಬ ವ್ಯಕ್ತಿ ಬಟ್ಟೆ ಒಗೆಯುತ್ತಿದ್ದುದು ಅರಬಿ ನೋಡಿದ…..
ಅರಬಿಯು ಊರಿಗೆ ಹಿಂತಿರುಗಿದಾಗ ಊರಿನ ಗೆಳೆಯರು ಕೇಳಿದರು: ” ಹೇಗಿತ್ತು ಕರ್ನಾಟಕ ಪ್ರವಾಸ ?”
ಅರಬಿ: ” ಎಂತ ಭಯಂಕರ ಮಾರ್ರೇ…ಏನೆಂದು ಹೇಳಲಿ …Karnatakaದವರು ನಾವು ಎಣಿಸಿದ ಹಾಗೆ ಇಲ್ಲ …… ಅವರು ಭೀಕರ…..”
“ಯಾಕೆ…..??
“ಅವರು ಬಂಡೆಕಲ್ಲನ್ನು ಒಡೆಯುವುದು ಚಡ್ಡಿಯಿಂದ…….”😁😁😁




---------------------
ಗಂಡ ಹೆಂಡತಿಯನ್ನು ಬೆಳಿಗ್ಗೆ ಎಬ್ಬಿಸುತ್ತಾನೆ:
......
ಗಂಡ: ಬಾರೇ, ಬೆಳಿಗ್ಗೆ ಯೋಗಾ ಮಾಡಿದ್ರೆ ಒಳ್ಳೆಯದು.

ಹೆಂಡತಿ: ನೀವು ಹೇಳೋದು ಏನೂಂತಾ? ನಾನು ದಪ್ಪ ಅಂತಾನ?

ಗಂ: ಇಲ್ಲ. ಯೋಗಾ ಆರೋಗ್ಯಕ್ಕೆ ಒಳ್ಳೆಯದು ಅಂತ.

ಹೆಂ: ಅಂದ್ರೆ ನನ್ನ ಆರೋಗ್ಯ ಸರಿ ಇಲ್ಲ ಅಂತಾನ?

ಗಂ: ಹೋಗ್ಲಿ ಬಿಡು. ಏಳಬೇಡ.

ಹೆಂ: ಅಂದರೆ ನಾನು ಸೋಮಾರಿ ಅಂತ...

ಗಂ: ಹಾಗಲ್ಲ. ನಿನಗೆ ನಾನು ಹೇಳಿದ್ದು ಅರ್ಥ ಆಗಿಲ್ಲ.

ಹೆಂ: ಅಂದ್ರೆ ನಾನು ನಿಮ್ಮನ್ನ ಅರ್ಥ ಮಾಡಿಕೊಂಡಿಲ್ಲ ಅಂತ ನಿಮ್ಮರ್ಥ..

ಗಂ: ನಾನು ಹಾಗೆ ಹೇಳಲಿಲ್ಲ

ಹೆಂ: ಅಂದರೆ ನಾನು ಸುಳ್ಳು ಹೇಳ್ತೀನಿ ಅಂತ...

ಗಂ: ಎ.. ಸುಮ್ಮನೆ ಬೆಳಿಗ್ಗೆ ಬೆಳಿಗ್ಗೆ ತಲೆ ತಿನ್ನಬೇಡ.
.
ಹೆಂ: ಅಂದ್ರೆ ನಾನು ಜಗಳಗಂಟಿ ಅಂತ...

ಗಂ: ಹೋಗ್ಲಿ ಬಿಡು.. ನಾನೂ ಯೋಗಕ್ಕೆ ಹೋಗದಿರೋದೇ ಒಳ್ಳೆದು..

ಹೆಂ: ನೋಡಿ ಅದೇ ನಾನು ಹೇಳಿದ್ದು. ನಿಮಗೂ ಹೋಗಕ್ಕೆ ಮನಸ್ಸಿರಲಿಲ್ಲ.. ಸುಮ್ಮನೆ ನನ್ನ ತಲೆ ಮೇಲೆ ಗೂಬೆ ಕೂರ್ಸೋದು..

ಗಂ: ಸರಿ ಮಹಾತಾಯಿ.. ನೀನು ನಿದ್ದೆ ಮಾಡು.. ನಾನು ಒಬ್ನೇ ಹೋಗ್ತೀನಿ.. ಸರೀನಾ?

ಹೆಂ: ಅದೇ... ನಿಮಗೆ ಎಲ್ಲ ಕಡೆಗೂ ಒಬ್ರೇ ಹೋಗಕ್ಕೆ ಇಷ್ಟ.

ಗಂ: ಅಯ್ಯೋ ಮಹಾತಾಯಿ.. ನಿಲ್ಸು.. ನನ್ನ ತಲೆ ಸುತ್ತುತ್ತಾ ಇದೆ...

ಹೆಂ: ಅದೇ ನೋಡಿ.. ನಿಮಗೆ ಯಾವಾಗ್ಲೂ ನಿಮ್ಮ ಆರೋಗ್ಯದ ಬಗ್ಗೆಯೇ ಯೋಚನೆ. ನನ್ನ ಬಗ್ಗೆ ಚೂರೂ ಚಿಂತೆಯಿಲ್ಲ ನಿಮಗೆ
😄 😜 😁 😂 😡 🚶‍♂ಆಜ್ಞಾತವಾಸಿ


ಸಡನ್ನಾಗಿ ಅರ್ಧರಾತ್ರಿ 2 ಗಂಟೆಗೆ ಹೆಂಡತಿ ಗಂಡನನ್ನು ನಿದ್ರೆಯಿಂದ ಎಬ್ಬಿಸಿ ಹೀಗೆ ಕೇಳ್ತಾಳೆ,

ಹೆಂಡ್ತಿ: ಬಾಹುಬಲಿ ಸಿನಿಮಾದಲ್ಲಿ ಹೀರೊಯಿನ್ ಯಾರು ?

ಗಂಡ : ಅನುಷ್ಕ, ತಮನ್ನಾ.

ಹೆಂಡ್ತಿ : ತೆಲುಗು ಸಿನಿಮಾ ಈಗಾ ಚಿತ್ರದಲ್ಲಿ ಸಮಂತಾ ನಟಿಸಿದ ಪಾತ್ರದ ಹೆಸರು ಏನು?.

ಗಂಡ: ಬಿಂದು.

ಹೆಂಡ್ತಿ : 2003ರ ವರ್ಲ್ಡ್ ಕಪ್ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಪಾಕೀಸ್ತಾನ ವಿರುದ್ಧ ಹೊಡೆದ ರನ್ ಎಷ್ಟು?.

ಗಂಡ : 98.

ಹೆಂಡ್ತಿ:- ನಮ್ಮ ಫ್ಲಾಟ್‌ನಲ್ಲಿ ಇರೊ ಕವಿತ ಅ ಫ್ಲಾಟ್‌ಗೆ ಬಂದು ಎಷ್ಟು ದಿನ ಅಯ್ತು.

ಗಂಡ : ಈ ಗುರುವಾರಕ್ಕೆ ಎರ್ಡು ವರ್ಷ ಆಗುತ್ತೆ.

ಗಂಡ :- ಅದ್ ಸರಿ ಅರ್ಧ ರಾತ್ರಿಲಿ ಎಬ್ಬಿಸಿ ಯಾಕ್ ಕೇಳ್ತಿದ್ದಿಯಾ.

ಹೆಂಡ್ತಿ :- ನೆನ್ನೆ ನನ್ನ ಹುಟ್ಟಿದ ಹಬ್ಬ.

ಗಂಡ : SILENCE

ಹೆಂಡ್ತಿ : VIOLENCE.

ಕ್ವಿಜ್ ಕಾರ್ಯಕ್ರಮ ಮುಗಿತು.

ಮಾರಿ ಹಬ್ಬದ ಕುಣಿತ ಪ್ರಾರಂಭ ಆಯ್ತು.

Comments

Popular posts from this blog

ಸವರ್ಣ ದೀರ್ಘ ಸಂಧಿ. ಸವರ್ಣ ದೀರ್ಘ ಸಂಧಿ ಉದಾಹರಣೆಗಳು savarna dhirgha sandhi. Savarna dhirgha sandhi examples

ಸವರ್ಣ ದೀರ್ಘ ಸಂಧಿ. [ ] ಪೂರ್ವ ಪದದ ಅಂತ್ಯ ಸ್ವರ ಮತ್ತು ಉತ್ತರ ಪದದ ಆರಂಭದ ಸ್ವರ ಒಂದೇ ರೀತಿಯ ವರ್ಣವಾಗಿದ್ದರೆ , ಸಂಧಿಕಾರ್ಯ ನಡೆಯುವಾಗ ಅದೇ ಸ್ವರದ ದೀರ್ಘ ಸ್ವರವು ಆದೇಶವಾಗಿರುವುದು ಕಂಡು ಬರುತ್ತದೆ. [ ] ಸಂಧಿಕಾರ್ಯ ನಡೆಯುವಾಗ ಒಂದೇ ರೀತಿಯ ಸ್ವರಾಕ್ಷರಗಳು ಪರಸ್ಪರ ಸೇರಿ ದೀರ್ಘ ಸ್ವರ ಆದೇಶವಾದರೆ ಅಂತಹ ಸಂಧಿಯನ್ನು "ಸವರ್ಣ ದೀರ್ಘ ಸಂಧಿ "ಎಂದು ಕರೆಯುತ್ತಾರೆ. [ ] ಸವರ್ಣಾಕ್ಷರಗಳಿಗೆ ಸವರ್ಣಾಕ್ಷರಗಳ ಪರವಾಗಿ ಸವರ್ಣ ದೀರ್ಘಾಕ್ಷರಗಳು ಬಂದರೆ ಸವರ್ಣ ದೀರ್ಘ ಸಂಧಿ. [ ] ಉದಾಹರಣೆಗೆ ಪೂರ್ವ ಪದ + ಉತ್ತರ ಪದ = ಸಂಧಿಪದ 1. ರವಿ + ಇಂದ್ರ = ರವೀಂದ್ರ ( ಇ+ಇ= ಈ) 2. ದೇವ+ ಆಲಯ= ದೇವಾಲಯ. (ಅ+ಆ=ಆ) 3. ಗುರು+ ಉಪದೇಶ =ಗುರೂಪದೇಶ (ಉ+ಉ=ಊ) 4. ಮಹಾ+ ಆತ್ಮ = ಮಹಾತ್ಮ (ಆ+ಆ=ಆ) 5. ಗಿರಿ+ ಇಂದ್ರ = ಗಿರೀಂದ್ರ 6. ಮುನಿ+ ಇಂದ್ರ =ಮುನೀಂದ್ರ. 7. ಅಲ್ಪ + ಅಕ್ಷರ =ಅಲ್ಪಾಕ್ಷರ. 8. ವಿದ್ಯ+ ಅರ್ಜನೆ=ವಿದ್ಯಾರ್ಜನೆ. 9. ರಾಕ್ಷಸ + ಅಧಿಪತಿ= ರಾಕ್ಷಸಾಧಿಪತಿ. 10. ಸೀತ+ಅನ್ವೇಷಣೆ= ಸೀತಾನ್ವೇಷಣೆ. 11. ಪಂಚ+ಆಸ್ಯ=ಪಂಚಾಸ್ಯ. 12. ಶಾಸಕ+ಅಂಗ=ಶಾಸಕಾಂಗ. 13. ಅಭಯ+ಅರಣ್ಯ =ಅಭಯಾರಣ್ಯ. 14. ಉಭಯ+ಅರಣ್ಯ =ಉಭಯಾರಣ್ಯ 15. ವಸ್ರ್ತ + ಆಭರಣ= ವಸ್ತ್ರಾಭರಣ. 16. ಗೌರಿ+ಈಶ =ಗೌರೀಶ. 17. ಕಟು+ಉಕ್ತಿ=ಕಟೂಕ್ತಿ. 18. ಕೃಷ್ಣ +ಅಜಿನ=ಕೃಷ್ಣಾಜಿನ. 19. ಪೀತ+ಅಂಬರ=ಪೀತಾಂಬರ. 20. ಏಕ+ಆಸ...

ಡಾ.ಸತ್ಯಾನಂದ ಪಾತ್ರೋಟ Dr.satyananda patrota

• ಡಾ.ಸತ್ಯಾನಂದ ಪಾತ್ರೋಟ • ಜನನ- ಬಾಗಲಕೋಟೆ • ವಿದ್ಯಾಭ್ಯಾಸ ~ಎಂ.ಎ., ಪಿ.ಎಚ್.ಡಿ. • ಉದ್ಯೋಗ ~ ಬಾಗಲಕೋಟೆಯ ಎಸ್.ಬಿ.ಪಾಟೀಲ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಅಧ್ಯಾಪಕರು. • ಕವನ ಸಂಕಲನಗಳು 1. ಕರಿನೆಲದ ಕಲೆಗಳು 2. ಜಾಜಿ ಮಲ್ಲಿಗೆ 3. ಕಲ್ಲಿಗೂ ಗೊತ್ತಿರುವ ಕಥೆ. 4. ಕರಿಯ ಕಟ್ಟಿದ ಕವನ 5. ನನ್ನ ಕನಸಿನ ಹುಡುಗಿ 6. ನದಿಗೊಂದು ಕನಸು ಮತ್ತು ಅವಳು ನಾಟಕಗಳು 1. ನಮಗ ಯಾರು ಇಲ್ಲೋ ಎಪ್ಪಾ ಸಾಕ್ಷಿ 2. ಮತ್ತೊಬ್ಬ ಏಕಲವ್ಯ ಪ್ರಬಂಧ ಸಂಕಲನ 1. ಒಂದಿಷ್ಟು ಕ್ಷಣಗಳು ಕಾವ್ಯದ ಧ್ವನಿಸುರುಳಿ 1. ಎದೆಯ ಮಾತು ಪ್ರಶಸ್ತಿ- ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಕನ್ನಡದ ಮೊದಲುಗಳು ಕನ್ನಡದ ಬಗ್ಗೆ ಪ್ರಮುಖ ಮಾಹಿತಿಗಳು