Skip to main content

kannada subhashitagalu Kannada nudi muttugalu ಕನ್ನಡ ಸುಭಾಷಿತಗಳು ಕನ್ನಡ ನುಡಿಮುತ್ತು ಗಳು

 🙏ತಂದೆಯ ಹೆಗಲ ಮೇಲೆ ಕುಳಿತು ದೇವರನ್ನು ನೋಡಬೇಕಾದರೆ ಗೊತ್ತಾಗಲಿಲ್ಲ... ನಾ ಕೂತಿರೋದು ದೇವರ ಹೆಗಲ ಮೇಲೆಯೇ ಅಂತ!!!
ಮನ ಮುಟ್ಟಿದ ಮಾತು.

*ಯಶಸ್ವಿ ಜೀವನಕ್ಕಿಂತ,,*
*ಸ೦ತೃಪ್ತ ಜೀವನವೇ ಮಿಗಿಲು..*
*ಯಾಕೆಂದರೇ,,,,,*
*ಜೀವನದ ಯಶಸ್ಸು*
*ಇತರರ ದೃಷ್ಠಿಯಲ್ಲಿರುತ್ತದೆ,,*
*ಜೀವನದ ಸುಖ ನಮ್ಮ*
*ಆತ್ಮ ತೃಪ್ತಿಯಲ್ಲಿರುತ್ತದೆ...*


ಮಳೆ ಬಂದಾಗ ಕೊಚ್ಚಿ ‌‌‌ಹೋದ ಇರುವೆಗಳನ್ನ ಮೀನುಗಳು ತಿನ್ನುತ್ತವೆ.*

*ಅದೇ ನೀರು ಬತ್ತಿ ಹೋದಾಗ ಸತ್ತು ಬಿದ್ದ ಮೀನುಗಳನ್ನು ಇರುವೆಗಳು ತಿನ್ನುತ್ತವೆ.*

*ಅವಕಾಶ* ಎಲ್ಲರಿಗೂ ಇರುತ್ತದೆ.
ಆ *ಸಮಯ*ಕ್ಕೋಸ್ಕರ ಎಲ್ಲರು ಕಾಯಬೇಕು..

*ಪ್ರೀತಿಗೆ ಪಾತ್ರ ಎಂದು ಕರೆಸಿಕೊಳ್ಳುವ ಬದಲು ನಂಬಿಕೆಗೆ ಪಾತ್ರ ಎಂದು ಕರೆಸಿಕೊಳ್ಳುವುದು ತುಂಬಾ ಮುಖ್ಯ*
*ಯಾಕೆಂದರೆ ನಂಬಿಕೆಗೆ ಪಾತ್ರವಾದರೆ ಎಲ್ಲರೂ ಪ್ರೀತಿಸುತ್ತಾರೆ*


*ಯೋಚನೆ ಮತ್ತು ಸಲಹೆಗಳು ಸಮಯಕ್ಕೆ ತಕ್ಕಂತೆ ಬದಲಾಗುತ್ತವೆ*.
*ನೀರಿನ ಲೋಟದಲ್ಲಿ ನೊಣ ಬಿದ್ದರೆ ನೀರು ಚೆಲ್ಲುತ್ತೇವೆ*.
*ತುಪ್ಪದ ಡಬ್ಬಿಯಲ್ಲಿ ನೊಣ ಬಿದ್ದರೆ ನೊಣವನ್ನು ಎತ್ತಿ ಬಿಸಾಕ್ತೀವಿ*....

*ಇದೇ ಜೀವನ*.......

ಜೀವನ ಹೇಗಿರಬೇಕು ಅಂದರೆ ನಾವು ಹುಟ್ಟಿದರೆ ತಾಯಿ ಸಂತೋಷ ಪಡುವಂತಿರಬೇಕು.
ಬೆಳೆದರೆ ತಂದೆ ಆನಂದಿಸುವಂತಿರಬೇಕು
ಬಾಳಿದರೆ‌ ಸಮಾಜ ಸಂಭ್ರಮಿಸುವಂತಿರಬೇಕು
ಸತ್ತರೆ ಸ್ಮಶಾನ ಕೂಡ ಕಣ್ಣೀರಿಡುವಂತಿಬೇಕು.....


 ಜೀವನ ಶಾಶ್ವತವೂ ಅಲ್ಲ, ದೀರ್ಘವೂ ಅಲ್ಲ. ಕಳೆದ ಕ್ಷಣಗಳೆಂದೂ ಕೈಗೆ ಸಿಗುವುದಿಲ್ಲವೆಂಬ ಎಚ್ಚರಿಕೆಯಿಂದಲೇ ಇಂದಿನ ಸಮಯದ ಸದ್ಬಳಕೆ ಮಾಡಿಕೊಳ್ಳೋಣ.

*ಸಮುದ್ರದಲ್ಲಿ ಸ್ನಾನಕ್ಕೆಂದೆ ಬೇರೆ ತೆರೆಗಳಿರುವುದಿಲ್ಲ, ಬಂದ ತೆರೆಗಳಿಗೆ ತಲೆಯೊಡ್ಡಿ ಸ್ನಾನ ಮುಗಿಸಬೇಕು. ಹಾಗೆಯೇ ಬದುಕಿನಲ್ಲಿ ಖುಷಿಗೆಂದೇ ಬೇರೆ ದಿನಗಳಿರುವುದಿಲ್ಲ, ಎಲ್ಲ ದಿನದಲ್ಲೂ ಖುಷಿ ಪಡಲು ಸಾಧ್ಯವಿದೆ, ಅದನ್ನು ಅನುಭವಿಸುವ ಮನಸ್ಸು ನಮ್ಮದಾಗಿರಬೇಕು.


ತುಳಿದಷ್ಟು ಮತ್ತೆ ಮತ್ತೆ ಚಿಗುರುವ ಗರಿಕೆಯ ಹುಲ್ಲಾಗಬೇಕು,*
*ಜರಿದಷ್ಟು ಜಗಮಗಿಸುವ ದೀಪದ ಬೆಳಕಾಗಬೇಕು,*
*ತೂರಿದಷ್ಟು ಎತ್ತರದ ಎತ್ತರಕ್ಕೆ ಹಾರಾಡುವ ಗಾಳಿಪಟವಾಗಬೇಕು,*
*ಕೈ ಬಿಟ್ಟಷ್ಟು ಮತ್ತೆಂದು ಕೈಗೆ ಸಿಗದ ಪಾದರಸವಾಗಬೇಕು,*
*ಇವೆಲ್ಲವೂ ಮೀರಿ ನಾವು ನಾವಾಗಿಯೇ ನಮ್ಮತನದ ಅಡಿಯಲ್ಲಿಯೇ ಬೆಳಗಬೇಕು ಬೆಳಕ ಚಲ್ಲಬೇಕು.



*"ಸತ್ಯನಿಷ್ಠೆ, ಪವಿತ್ರತೆ ಮತ್ತು ನಿಸ್ವಾರ್ಥತೆ ಈ ಮೂರು ಯಾರಲ್ಲಿರುತ್ತದೆಯೋ ಅವರನ್ನು ಈ ಜಗತ್ತಿನ ಯಾವ ಶಕ್ತಿಯೂ ನಿಗ್ರಹಿಸಲಾರದು. ಇವುಗಳಿಂದ ಸಂಪನ್ನನಾದವನು ಇಡೀ ಜಗತ್ತಿನ ವಿರೋಧವನ್ನೇ ಎದುರಿಸಬಲ್ಲ."*
*--ಸ್ವಾಮಿ ವಿವೇಕಾನಂದ 



ಒತ್ತಡವಿಲ್ಲದ ಉದ್ಯೋಗವಿಲ್ಲ ,
ನಷ್ಟವಿಲ್ಲದ ವ್ಯಾಪಾರವಿಲ್ಲ ,
ಕಷ್ಟವಿಲ್ಲದ ವ್ಯವಸಾಯವಿಲ್ಲ ,
ನೋವಿಲ್ಲದ ಸಂಸಾರವಿಲ್ಲ ,
ಸಮಸ್ಯೆಗಳಿಲ್ಲದ ಮನುಷ್ಯನಿಲ್ಲ ,

ಇವೆಲ್ಲವನ್ನೂ ಜಯಸುವುದೇನೇ
"ಜೀವನ"



*"ಚಂದ್ರಗುಪ್ತ ಕೇಳುತ್ತಾನೆ"*
*"ಎಲ್ಲವೂ ಹಣೆಬರಹದಲ್ಲಿ ಬರೆದಿದ್ದಾರೆ ಅಂದ ಮೇಲೆ ಪ್ರಯತ್ನ ಪಟ್ಟು ಫಲವೇನು"?*

*"ಚಾಣಕ್ಯ ಉತ್ತರಿಸುತ್ತಾನೆ"*
*"ಯಾರಿಗೆ ಗೊತ್ತು ಪ್ರಯತ್ನ ಪಟ್ಟರೆ ಸಿಗುತ್ತದೆ ಎಂದು ಹಣೆಬರಹದಲ್ಲಿ ಬರೆದಿದ್ದರೆ"...*

*"ಪ್ರಯತ್ನಂ ಸರ್ವ ಸಿದ್ಧಿ ಸಾಧನಂ"...*✍



*ಎಷ್ಟೊಂದು ಅರ್ಥಗರ್ಭಿತ ಮಾತು*
👉ತುಳಿದು ಬದುಕುವುದಕ್ಕಿಂತ ತಿಳಿದು ಬದುಕುವುದು ಮುಖ್ಯ….
ತುಳಿದು ಬದುಕಿದವರು ಬಹು ಬೇಗ ಅಳಿಯುತ್ತಾರೆ*
ತಿಳಿದು ಬದುಕಿದವರು ಅಳಿದ ಮೇಲೂ ಉಳಿಯುತ್ತಾರೆ...
- *ತಿಳಿದವರು ಹೇಳಿದ ಅಳಿಯದ ಮಾತು*



*"ಶ್ರೀಮಂತರ ಜೊತೆ ಸ್ನೇಹ ಮಾಡಿ ತಪ್ಪೇನಲ್ಲ,*
*ಆದರೆ ಬಡವರ ಜೊತೆಗೆ ಪ್ರೀತಿಯಿಂದ ಮಾತನಾಡಿ*
*ಯಾಕೆಂದರೆ*
*ಸತ್ತ ಮೇಲೆ ಹೆಗಲು ಕೊಡುವವರು ಅವರೆ...*
*ಶ್ರೀಮಂತರು ನೇರವಾಗಿ* *ಕಾರಿನಲ್ಲಿ ಸ್ಮಶಾನಕ್ಕೆ ಬರುತ್ತಾರೆ ಅಷ್ಟೇ"*





*"ಗೊಡೆಯ ಮೇಲೆ ಇರುವೆಗಳು ಎಷ್ಟೆ ಅವಸರವಿದ್ದರು ಪರಸ್ಪರ* *ಒಂದೊನ್ನೊಂದು ಬೇಟಿಯಾಗಿ ಮುಂದೆ ಹೋಗುವಂತೆ,*
*ನಮ್ಮ ದಿನನಿತ್ಯ ಜೀವನದಲ್ಲಿಯೂ ಸಹ ಪ್ರತಿಯೊಬ್ಬ ವ್ಯಕ್ತಿ ಎದುರುಗಡೆ* *ಬಂದಾಗ,ನಿರ್ಮಲ ದೃಷ್ಟಿ, ಸಣ್ಣ ನಗೆ ಬೀರಿ ಬಿಡಿ,💐*
*ನಮ್ಮ ಪ್ರೀತಿ, ಸಂತೋಷ ಇಮ್ಮಡಿಯಾಗುತ್ತವೆ".🙏🏻*



*ಪ್ರಾಮಾಣಿಕ ಸಂಬಂಧಗಳು ಶುದ್ಧ ನೀರಿದ್ದಂತೆ. ವಾಸನೆ, ಬಣ್ಣ, ಆಕಾರಗಳಿಲ್ಲದಿದ್ದರೂ ಜೀವನಕ್ಕೆ ಅತೀ ಅವಶ್ಯ. ಕಲುಷಿತವಾಗದಂತೆ ನೋಡಿಕೊಳ್ಳೋಣ*



*ವೈರಿಯನ್ನು ಕೊಲ್ಲಬೇಕಾದರೆ ಅವನ ತಲೆಯನ್ನು ತೆಗೆಯಬೇಕಾದ ಅಗತ್ಯವಿಲ್ಲ!*
*ನಮ್ಮ ತಲೆಯಿಂದ ಅವನನ್ನು ತೆಗೆದರೆ ಸಾಕು!!😬*



*ಸಫಲತೆಯು ನಿನ್ನನ್ನು ಪ್ರಪಂಚಕ್ಕೆ ಪರಿಚಯಿಸಿದರೆ ಸೋಲು ನಿನಗೆ ಜಗತ್ತನ್ನು ಪರಿಚಯಿಸುತ್ತದೆ. ಬದುಕಿನ ದಾರಿಯಲ್ಲಿ ಭರವಸೆ ಕಳೆದುಕೊಂಡು ಇದೇ ಕೊನೆ ಎಂದುಕೊಂಡರೆ ಭಗವಂತ ನಕ್ಕು ನುಡಿಯುತ್ತಾನೆ..." ಇದು ಬರೀ ಒಂದು ತಿರುವಷ್ಟೆ...ಕೊನೆಯಲ್ಲ" ಯಾವಾಗಲೂ ಸಂತಸದಿಂದಿರಿ.*





ಯಾವುದನ್ನೂ ಹಗುರವಾಗಿ ಭಾವಿಸಬಾರದೂ ಎಲ್ಲದಕ್ಕೂ ಒಂದು ಕಾಲ ಅಂತ ಇದೆ...
ಸಮಯ ಬಂದಾಗ ತಲೆಕೆಳಗೆ ಹಾಕಿ ನೇತಾಡುವ ಬಾವಲಿ ಕೂಡ ಎಲ್ಲರನ್ನೂ ಒಮ್ಮೆಗೆ ಮೇಲೆಕೆಳಗೆ ಮಾಡಬಲ್ಲದು🦇🤣😛


*ಕುದಿಯುವ ನೀರಿನಲ್ಲಿ ಪ್ರತಿಬಿಂಬ ನೋಡಲು ಸಾಧ್ಯವಿಲ್ಲ. ಹಾಗೆಯೆ ಮನಸ್ಸು ಸಿಟ್ಟಿನಿಂದ ಕುದಿಯುತ್ತಿರುವಾಗ ಸರಿಯಾಗಿ ಯೋಚಿಸಲು ಆಗುವುದಿಲ್ಲ,ಹಾಗೂ ಯಾವ ಸತ್ಯವೂ ಕಾಣಿಸುವುದಿಲ್ಲ,ಆದ್ದರಿಂದ ಮನಸ್ಸನ್ನು ತಿಳಿನೀರಿನಂತೆ ತಿಳಿಯಾಗಿಸಿ ಸಮಾಧಾನದಿಂದ ಇಟ್ಟುಕೊಳ್ಳಬೇಕು*


ಯಶಸ್ವಿ ಜೀವನಕ್ಕಿಂತ,,*
*ಸ೦ತೃಪ್ತ ಜೀವನವೇ ಮಿಗಿಲು..*
*ಯಾಕೆಂದರೇ,,,,,*
*ಜೀವನದ ಯಶಸ್ಸು*
*ಇತರರ ದೃಷ್ಠಿಯಲ್ಲಿರುತ್ತದೆ,,*
*ಜೀವನದ ಸುಖ ನಮ್ಮ*
*ಆತ್ಮ ತೃಪ್ತಿಯಲ್ಲಿರುತ್ತದೆ...*


💐 *" ಅನುಮಾನ " ಮತ್ತು "ಅವಮಾನ "
ಬರೀ ಒಂದಕ್ಷರ ವ್ಯತ್ಯಾಸವಿರುವ
ಈ ಪದಗಳಿಗೆ ಸಾವಿರಾರು ಹೃದಯಗಳನ್ನು
ಛಿದ್ರ ಮಾಡುವಷ್ಟು "ಶಕ್ತಿ" ಇದೆ.. ಈ ಎರಡು ಪದಗಳು ನಮ್ಮ ಜೀವನದಲ್ಲಿ ಬಾರದಂತೆ ನೋಡಿಕೊಳ್ಳಬೆಕು.✍ *💐


*ಬರೆದಿಟ್ಟಂತೆ ಜೀವನ ಮಾಡಲು ಯಾರಿಗೂ ಸಾಧ್ಯವಿಲ್ಲ.*

*ಆದರೆ........*

*ಬರೆದಿಡುವಂತಹ ಜೀವನ ಮಾಡಲು ಸಾಧ್ಯಇದೆ....*


ನಾವು ಚಿಕ್ಕವರಿದ್ದಾಗ ತಂದೆಯ ಹೆಗಲ ಮೇಲೆ ಕುಳಿತು ದೇವರನ್ನು ನೋಡಬೇಕಾದರೆ ಗೊತ್ತಾಗಲಿಲ್ಲ... ನಾ ಕೂತಿರೋದು ದೇವರ ಹೆಗಲ ಮೇಲೆಯೇ ಅಂತ!!!

*ಬದುಕಿನಲ್ಲಿ ಎಲ್ಲ ಕಷ್ಟಗಳಿಗೂ ಎರಡು ಔಷಧಗಳಿವೆ ಒಂದು ದುಡಿಮೆ ಇನ್ನೊಂದು ತಾಳ್ಮೆ. ಜೀವನದ ಅಂತ್ಯದವರೆಗೂ ಕಲಿಯುವುದು ಬೆಟ್ಟದಷ್ಟಿದೆ ಎನ್ನುವುದೇ 'ಬದುಕು ಕಲಿಸುವ ಪಾಠ'.*

Comments

Popular posts from this blog

ಸವರ್ಣ ದೀರ್ಘ ಸಂಧಿ. ಸವರ್ಣ ದೀರ್ಘ ಸಂಧಿ ಉದಾಹರಣೆಗಳು savarna dhirgha sandhi. Savarna dhirgha sandhi examples

ಸವರ್ಣ ದೀರ್ಘ ಸಂಧಿ. [ ] ಪೂರ್ವ ಪದದ ಅಂತ್ಯ ಸ್ವರ ಮತ್ತು ಉತ್ತರ ಪದದ ಆರಂಭದ ಸ್ವರ ಒಂದೇ ರೀತಿಯ ವರ್ಣವಾಗಿದ್ದರೆ , ಸಂಧಿಕಾರ್ಯ ನಡೆಯುವಾಗ ಅದೇ ಸ್ವರದ ದೀರ್ಘ ಸ್ವರವು ಆದೇಶವಾಗಿರುವುದು ಕಂಡು ಬರುತ್ತದೆ. [ ] ಸಂಧಿಕಾರ್ಯ ನಡೆಯುವಾಗ ಒಂದೇ ರೀತಿಯ ಸ್ವರಾಕ್ಷರಗಳು ಪರಸ್ಪರ ಸೇರಿ ದೀರ್ಘ ಸ್ವರ ಆದೇಶವಾದರೆ ಅಂತಹ ಸಂಧಿಯನ್ನು "ಸವರ್ಣ ದೀರ್ಘ ಸಂಧಿ "ಎಂದು ಕರೆಯುತ್ತಾರೆ. [ ] ಸವರ್ಣಾಕ್ಷರಗಳಿಗೆ ಸವರ್ಣಾಕ್ಷರಗಳ ಪರವಾಗಿ ಸವರ್ಣ ದೀರ್ಘಾಕ್ಷರಗಳು ಬಂದರೆ ಸವರ್ಣ ದೀರ್ಘ ಸಂಧಿ. [ ] ಉದಾಹರಣೆಗೆ ಪೂರ್ವ ಪದ + ಉತ್ತರ ಪದ = ಸಂಧಿಪದ 1. ರವಿ + ಇಂದ್ರ = ರವೀಂದ್ರ ( ಇ+ಇ= ಈ) 2. ದೇವ+ ಆಲಯ= ದೇವಾಲಯ. (ಅ+ಆ=ಆ) 3. ಗುರು+ ಉಪದೇಶ =ಗುರೂಪದೇಶ (ಉ+ಉ=ಊ) 4. ಮಹಾ+ ಆತ್ಮ = ಮಹಾತ್ಮ (ಆ+ಆ=ಆ) 5. ಗಿರಿ+ ಇಂದ್ರ = ಗಿರೀಂದ್ರ 6. ಮುನಿ+ ಇಂದ್ರ =ಮುನೀಂದ್ರ. 7. ಅಲ್ಪ + ಅಕ್ಷರ =ಅಲ್ಪಾಕ್ಷರ. 8. ವಿದ್ಯ+ ಅರ್ಜನೆ=ವಿದ್ಯಾರ್ಜನೆ. 9. ರಾಕ್ಷಸ + ಅಧಿಪತಿ= ರಾಕ್ಷಸಾಧಿಪತಿ. 10. ಸೀತ+ಅನ್ವೇಷಣೆ= ಸೀತಾನ್ವೇಷಣೆ. 11. ಪಂಚ+ಆಸ್ಯ=ಪಂಚಾಸ್ಯ. 12. ಶಾಸಕ+ಅಂಗ=ಶಾಸಕಾಂಗ. 13. ಅಭಯ+ಅರಣ್ಯ =ಅಭಯಾರಣ್ಯ. 14. ಉಭಯ+ಅರಣ್ಯ =ಉಭಯಾರಣ್ಯ 15. ವಸ್ರ್ತ + ಆಭರಣ= ವಸ್ತ್ರಾಭರಣ. 16. ಗೌರಿ+ಈಶ =ಗೌರೀಶ. 17. ಕಟು+ಉಕ್ತಿ=ಕಟೂಕ್ತಿ. 18. ಕೃಷ್ಣ +ಅಜಿನ=ಕೃಷ್ಣಾಜಿನ. 19. ಪೀತ+ಅಂಬರ=ಪೀತಾಂಬರ. 20. ಏಕ+ಆಸ...

ಡಾ.ಸತ್ಯಾನಂದ ಪಾತ್ರೋಟ Dr.satyananda patrota

• ಡಾ.ಸತ್ಯಾನಂದ ಪಾತ್ರೋಟ • ಜನನ- ಬಾಗಲಕೋಟೆ • ವಿದ್ಯಾಭ್ಯಾಸ ~ಎಂ.ಎ., ಪಿ.ಎಚ್.ಡಿ. • ಉದ್ಯೋಗ ~ ಬಾಗಲಕೋಟೆಯ ಎಸ್.ಬಿ.ಪಾಟೀಲ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಅಧ್ಯಾಪಕರು. • ಕವನ ಸಂಕಲನಗಳು 1. ಕರಿನೆಲದ ಕಲೆಗಳು 2. ಜಾಜಿ ಮಲ್ಲಿಗೆ 3. ಕಲ್ಲಿಗೂ ಗೊತ್ತಿರುವ ಕಥೆ. 4. ಕರಿಯ ಕಟ್ಟಿದ ಕವನ 5. ನನ್ನ ಕನಸಿನ ಹುಡುಗಿ 6. ನದಿಗೊಂದು ಕನಸು ಮತ್ತು ಅವಳು ನಾಟಕಗಳು 1. ನಮಗ ಯಾರು ಇಲ್ಲೋ ಎಪ್ಪಾ ಸಾಕ್ಷಿ 2. ಮತ್ತೊಬ್ಬ ಏಕಲವ್ಯ ಪ್ರಬಂಧ ಸಂಕಲನ 1. ಒಂದಿಷ್ಟು ಕ್ಷಣಗಳು ಕಾವ್ಯದ ಧ್ವನಿಸುರುಳಿ 1. ಎದೆಯ ಮಾತು ಪ್ರಶಸ್ತಿ- ಕನ್ನಡ ರಾಜ್ಯೋತ್ಸವ ಪ್ರಶಸ್ತಿ

Kannada grammar for kpsc exams ಕೆ.ಪಿ.ಎಸ್. ಸಿ.ಪರೀಕ್ಷೆಗಳಿಗೆ ಕನ್ನಡ ವ್ಯಾಕರಣ

 ಕೆ.ಪಿ.ಎಸ್. ಸಿ ನಡೆಸುವ ಪ್ರತಿಯೊಂದು ಪರೀಕ್ಷೆಗಳಲ್ಲಿ ಕನ್ನಡಕ್ಕೆ ಸಂಬಂಧಪಟ್ಟಂತೆ 35 ಅಂಕಗಳನ್ನು ನಿಗದಿಪಡಿಸಲಾಗಿದೆ. ಪರೀಕ್ಷೆಗೆ ಅನಕೂಲವಾಗಲೆಂದು  ಕನ್ನಡ ವ್ಯಾಕರಣಕ್ಕೆ ಸಂಬಂಧಪಟ್ಟ ಕೆಲವು ಮಾಹಿತಿ ಸಂಗ್ರಹಿಸಿ ಸ್ಪರ್ಧಾರ್ಥಿಗಳ ಅನುಕೂಲಕ್ಕಾಗಿ ನೀಡಲಾಗಿದೆ.ಆಸಕ್ತರು ಇದರ ಸದುಪಯೋಗ ಪಡೆಯಬಹುದು. □  □ □ □ □ □ □ □ □ □ □ □ □ □ □     ತತ್ಸಮ - - - -  - - - - - - - - - ತದ್ಭವ (ಸಂಸ್ಕೃತ )                    (ಕನ್ನಡ ) ■ ನರ್ತಕಿ - ನಚ್ಚಣಿ ■ ಲಕ್ಷ್ಮಿ - ಲಕ್ಕಿ ,ಲಕುಮಿ ■ವೇಷ - ವೇಸ ■ಲೇಪ - ಲಪ್ಪ ■ವರ್ಧಮಾನ - ಬದ್ದವಣ ■ವಜ್ರ - ಬಜ್ಜರ ■ವತ್ಸಲಾ - ಬಚ್ಚಳೆ ■ವಿಸ್ತಾರ - ಬಿತ್ತರ ■ವೃದ್ಧ - ವಡ್ಡ ■ವೃದ್ಧಿ - ಬಡ್ಡಿ ■ವ್ಯಾಖ್ಯಾನ - ವಕ್ಕಣೆ ■ವ್ಯಾಘ್ರ - ಬಗ್ಗ ■ವರ್ಧಕಿ - ಬಡಗಿ ■ವಿದ್ಯೆ - ಬಿಜ್ಜೆ ■ವೈದ್ಯ - ಬೆಜ್ಜ ■ವಿಜ್ಞಾನ - ಬಿನ್ನಣ ■ಶಿಲ್ಪಕ,ಶಿಲ್ಪಿ - ಸಿಂಪಿಗ ,ಚಿಪ್ಪಿಗ ■ಶೂನ್ಯ - ಸೊನ್ನೆ ■ಅವಸ್ಥೆ - ಅವತೆ ■ಅರ್ಹ - ಅರುಹ ■ಅರ್ಗಲ,ಅರ್ಗಲೆ - ಅಗಳಿ,ಅಗುಳಿ (ಚಿಲಕ) ■ಅಂಗುಷ್ಠ - ಅಂಗುಟ ,ಉಂಗುಟ. ■ಆಲಸ್ಯ - ಆಲಸ ■ಆಜ್ಞಾ, ಆಜ್ಞೆ - ಆಣೆ ■ಕ್ರಕಚ - ಗರಗಸ ■ಕ್ಷಣ - ಚಣ ■ಗ್ರಹ - ಗರ ■ಗ್ರಹಣ - ಗರಣ ■ಗ್ರಾಮೀಣ - ಗಾವಿಲ ■ಲಕ್ಷ - ಲಕ್ಕ ■ ಶ್ರೇಷ್ಠಿ -...