Saturday 7 July 2018

kannada subhashitagalu Kannada nudi muttugalu ಕನ್ನಡ ಸುಭಾಷಿತಗಳು ಕನ್ನಡ ನುಡಿಮುತ್ತು ಗಳು

 🙏ತಂದೆಯ ಹೆಗಲ ಮೇಲೆ ಕುಳಿತು ದೇವರನ್ನು ನೋಡಬೇಕಾದರೆ ಗೊತ್ತಾಗಲಿಲ್ಲ... ನಾ ಕೂತಿರೋದು ದೇವರ ಹೆಗಲ ಮೇಲೆಯೇ ಅಂತ!!!
ಮನ ಮುಟ್ಟಿದ ಮಾತು.

*ಯಶಸ್ವಿ ಜೀವನಕ್ಕಿಂತ,,*
*ಸ೦ತೃಪ್ತ ಜೀವನವೇ ಮಿಗಿಲು..*
*ಯಾಕೆಂದರೇ,,,,,*
*ಜೀವನದ ಯಶಸ್ಸು*
*ಇತರರ ದೃಷ್ಠಿಯಲ್ಲಿರುತ್ತದೆ,,*
*ಜೀವನದ ಸುಖ ನಮ್ಮ*
*ಆತ್ಮ ತೃಪ್ತಿಯಲ್ಲಿರುತ್ತದೆ...*


ಮಳೆ ಬಂದಾಗ ಕೊಚ್ಚಿ ‌‌‌ಹೋದ ಇರುವೆಗಳನ್ನ ಮೀನುಗಳು ತಿನ್ನುತ್ತವೆ.*

*ಅದೇ ನೀರು ಬತ್ತಿ ಹೋದಾಗ ಸತ್ತು ಬಿದ್ದ ಮೀನುಗಳನ್ನು ಇರುವೆಗಳು ತಿನ್ನುತ್ತವೆ.*

*ಅವಕಾಶ* ಎಲ್ಲರಿಗೂ ಇರುತ್ತದೆ.
ಆ *ಸಮಯ*ಕ್ಕೋಸ್ಕರ ಎಲ್ಲರು ಕಾಯಬೇಕು..

*ಪ್ರೀತಿಗೆ ಪಾತ್ರ ಎಂದು ಕರೆಸಿಕೊಳ್ಳುವ ಬದಲು ನಂಬಿಕೆಗೆ ಪಾತ್ರ ಎಂದು ಕರೆಸಿಕೊಳ್ಳುವುದು ತುಂಬಾ ಮುಖ್ಯ*
*ಯಾಕೆಂದರೆ ನಂಬಿಕೆಗೆ ಪಾತ್ರವಾದರೆ ಎಲ್ಲರೂ ಪ್ರೀತಿಸುತ್ತಾರೆ*


*ಯೋಚನೆ ಮತ್ತು ಸಲಹೆಗಳು ಸಮಯಕ್ಕೆ ತಕ್ಕಂತೆ ಬದಲಾಗುತ್ತವೆ*.
*ನೀರಿನ ಲೋಟದಲ್ಲಿ ನೊಣ ಬಿದ್ದರೆ ನೀರು ಚೆಲ್ಲುತ್ತೇವೆ*.
*ತುಪ್ಪದ ಡಬ್ಬಿಯಲ್ಲಿ ನೊಣ ಬಿದ್ದರೆ ನೊಣವನ್ನು ಎತ್ತಿ ಬಿಸಾಕ್ತೀವಿ*....

*ಇದೇ ಜೀವನ*.......

ಜೀವನ ಹೇಗಿರಬೇಕು ಅಂದರೆ ನಾವು ಹುಟ್ಟಿದರೆ ತಾಯಿ ಸಂತೋಷ ಪಡುವಂತಿರಬೇಕು.
ಬೆಳೆದರೆ ತಂದೆ ಆನಂದಿಸುವಂತಿರಬೇಕು
ಬಾಳಿದರೆ‌ ಸಮಾಜ ಸಂಭ್ರಮಿಸುವಂತಿರಬೇಕು
ಸತ್ತರೆ ಸ್ಮಶಾನ ಕೂಡ ಕಣ್ಣೀರಿಡುವಂತಿಬೇಕು.....


 ಜೀವನ ಶಾಶ್ವತವೂ ಅಲ್ಲ, ದೀರ್ಘವೂ ಅಲ್ಲ. ಕಳೆದ ಕ್ಷಣಗಳೆಂದೂ ಕೈಗೆ ಸಿಗುವುದಿಲ್ಲವೆಂಬ ಎಚ್ಚರಿಕೆಯಿಂದಲೇ ಇಂದಿನ ಸಮಯದ ಸದ್ಬಳಕೆ ಮಾಡಿಕೊಳ್ಳೋಣ.

*ಸಮುದ್ರದಲ್ಲಿ ಸ್ನಾನಕ್ಕೆಂದೆ ಬೇರೆ ತೆರೆಗಳಿರುವುದಿಲ್ಲ, ಬಂದ ತೆರೆಗಳಿಗೆ ತಲೆಯೊಡ್ಡಿ ಸ್ನಾನ ಮುಗಿಸಬೇಕು. ಹಾಗೆಯೇ ಬದುಕಿನಲ್ಲಿ ಖುಷಿಗೆಂದೇ ಬೇರೆ ದಿನಗಳಿರುವುದಿಲ್ಲ, ಎಲ್ಲ ದಿನದಲ್ಲೂ ಖುಷಿ ಪಡಲು ಸಾಧ್ಯವಿದೆ, ಅದನ್ನು ಅನುಭವಿಸುವ ಮನಸ್ಸು ನಮ್ಮದಾಗಿರಬೇಕು.


ತುಳಿದಷ್ಟು ಮತ್ತೆ ಮತ್ತೆ ಚಿಗುರುವ ಗರಿಕೆಯ ಹುಲ್ಲಾಗಬೇಕು,*
*ಜರಿದಷ್ಟು ಜಗಮಗಿಸುವ ದೀಪದ ಬೆಳಕಾಗಬೇಕು,*
*ತೂರಿದಷ್ಟು ಎತ್ತರದ ಎತ್ತರಕ್ಕೆ ಹಾರಾಡುವ ಗಾಳಿಪಟವಾಗಬೇಕು,*
*ಕೈ ಬಿಟ್ಟಷ್ಟು ಮತ್ತೆಂದು ಕೈಗೆ ಸಿಗದ ಪಾದರಸವಾಗಬೇಕು,*
*ಇವೆಲ್ಲವೂ ಮೀರಿ ನಾವು ನಾವಾಗಿಯೇ ನಮ್ಮತನದ ಅಡಿಯಲ್ಲಿಯೇ ಬೆಳಗಬೇಕು ಬೆಳಕ ಚಲ್ಲಬೇಕು.



*"ಸತ್ಯನಿಷ್ಠೆ, ಪವಿತ್ರತೆ ಮತ್ತು ನಿಸ್ವಾರ್ಥತೆ ಈ ಮೂರು ಯಾರಲ್ಲಿರುತ್ತದೆಯೋ ಅವರನ್ನು ಈ ಜಗತ್ತಿನ ಯಾವ ಶಕ್ತಿಯೂ ನಿಗ್ರಹಿಸಲಾರದು. ಇವುಗಳಿಂದ ಸಂಪನ್ನನಾದವನು ಇಡೀ ಜಗತ್ತಿನ ವಿರೋಧವನ್ನೇ ಎದುರಿಸಬಲ್ಲ."*
*--ಸ್ವಾಮಿ ವಿವೇಕಾನಂದ 



ಒತ್ತಡವಿಲ್ಲದ ಉದ್ಯೋಗವಿಲ್ಲ ,
ನಷ್ಟವಿಲ್ಲದ ವ್ಯಾಪಾರವಿಲ್ಲ ,
ಕಷ್ಟವಿಲ್ಲದ ವ್ಯವಸಾಯವಿಲ್ಲ ,
ನೋವಿಲ್ಲದ ಸಂಸಾರವಿಲ್ಲ ,
ಸಮಸ್ಯೆಗಳಿಲ್ಲದ ಮನುಷ್ಯನಿಲ್ಲ ,

ಇವೆಲ್ಲವನ್ನೂ ಜಯಸುವುದೇನೇ
"ಜೀವನ"



*"ಚಂದ್ರಗುಪ್ತ ಕೇಳುತ್ತಾನೆ"*
*"ಎಲ್ಲವೂ ಹಣೆಬರಹದಲ್ಲಿ ಬರೆದಿದ್ದಾರೆ ಅಂದ ಮೇಲೆ ಪ್ರಯತ್ನ ಪಟ್ಟು ಫಲವೇನು"?*

*"ಚಾಣಕ್ಯ ಉತ್ತರಿಸುತ್ತಾನೆ"*
*"ಯಾರಿಗೆ ಗೊತ್ತು ಪ್ರಯತ್ನ ಪಟ್ಟರೆ ಸಿಗುತ್ತದೆ ಎಂದು ಹಣೆಬರಹದಲ್ಲಿ ಬರೆದಿದ್ದರೆ"...*

*"ಪ್ರಯತ್ನಂ ಸರ್ವ ಸಿದ್ಧಿ ಸಾಧನಂ"...*✍



*ಎಷ್ಟೊಂದು ಅರ್ಥಗರ್ಭಿತ ಮಾತು*
👉ತುಳಿದು ಬದುಕುವುದಕ್ಕಿಂತ ತಿಳಿದು ಬದುಕುವುದು ಮುಖ್ಯ….
ತುಳಿದು ಬದುಕಿದವರು ಬಹು ಬೇಗ ಅಳಿಯುತ್ತಾರೆ*
ತಿಳಿದು ಬದುಕಿದವರು ಅಳಿದ ಮೇಲೂ ಉಳಿಯುತ್ತಾರೆ...
- *ತಿಳಿದವರು ಹೇಳಿದ ಅಳಿಯದ ಮಾತು*



*"ಶ್ರೀಮಂತರ ಜೊತೆ ಸ್ನೇಹ ಮಾಡಿ ತಪ್ಪೇನಲ್ಲ,*
*ಆದರೆ ಬಡವರ ಜೊತೆಗೆ ಪ್ರೀತಿಯಿಂದ ಮಾತನಾಡಿ*
*ಯಾಕೆಂದರೆ*
*ಸತ್ತ ಮೇಲೆ ಹೆಗಲು ಕೊಡುವವರು ಅವರೆ...*
*ಶ್ರೀಮಂತರು ನೇರವಾಗಿ* *ಕಾರಿನಲ್ಲಿ ಸ್ಮಶಾನಕ್ಕೆ ಬರುತ್ತಾರೆ ಅಷ್ಟೇ"*





*"ಗೊಡೆಯ ಮೇಲೆ ಇರುವೆಗಳು ಎಷ್ಟೆ ಅವಸರವಿದ್ದರು ಪರಸ್ಪರ* *ಒಂದೊನ್ನೊಂದು ಬೇಟಿಯಾಗಿ ಮುಂದೆ ಹೋಗುವಂತೆ,*
*ನಮ್ಮ ದಿನನಿತ್ಯ ಜೀವನದಲ್ಲಿಯೂ ಸಹ ಪ್ರತಿಯೊಬ್ಬ ವ್ಯಕ್ತಿ ಎದುರುಗಡೆ* *ಬಂದಾಗ,ನಿರ್ಮಲ ದೃಷ್ಟಿ, ಸಣ್ಣ ನಗೆ ಬೀರಿ ಬಿಡಿ,💐*
*ನಮ್ಮ ಪ್ರೀತಿ, ಸಂತೋಷ ಇಮ್ಮಡಿಯಾಗುತ್ತವೆ".🙏🏻*



*ಪ್ರಾಮಾಣಿಕ ಸಂಬಂಧಗಳು ಶುದ್ಧ ನೀರಿದ್ದಂತೆ. ವಾಸನೆ, ಬಣ್ಣ, ಆಕಾರಗಳಿಲ್ಲದಿದ್ದರೂ ಜೀವನಕ್ಕೆ ಅತೀ ಅವಶ್ಯ. ಕಲುಷಿತವಾಗದಂತೆ ನೋಡಿಕೊಳ್ಳೋಣ*



*ವೈರಿಯನ್ನು ಕೊಲ್ಲಬೇಕಾದರೆ ಅವನ ತಲೆಯನ್ನು ತೆಗೆಯಬೇಕಾದ ಅಗತ್ಯವಿಲ್ಲ!*
*ನಮ್ಮ ತಲೆಯಿಂದ ಅವನನ್ನು ತೆಗೆದರೆ ಸಾಕು!!😬*



*ಸಫಲತೆಯು ನಿನ್ನನ್ನು ಪ್ರಪಂಚಕ್ಕೆ ಪರಿಚಯಿಸಿದರೆ ಸೋಲು ನಿನಗೆ ಜಗತ್ತನ್ನು ಪರಿಚಯಿಸುತ್ತದೆ. ಬದುಕಿನ ದಾರಿಯಲ್ಲಿ ಭರವಸೆ ಕಳೆದುಕೊಂಡು ಇದೇ ಕೊನೆ ಎಂದುಕೊಂಡರೆ ಭಗವಂತ ನಕ್ಕು ನುಡಿಯುತ್ತಾನೆ..." ಇದು ಬರೀ ಒಂದು ತಿರುವಷ್ಟೆ...ಕೊನೆಯಲ್ಲ" ಯಾವಾಗಲೂ ಸಂತಸದಿಂದಿರಿ.*





ಯಾವುದನ್ನೂ ಹಗುರವಾಗಿ ಭಾವಿಸಬಾರದೂ ಎಲ್ಲದಕ್ಕೂ ಒಂದು ಕಾಲ ಅಂತ ಇದೆ...
ಸಮಯ ಬಂದಾಗ ತಲೆಕೆಳಗೆ ಹಾಕಿ ನೇತಾಡುವ ಬಾವಲಿ ಕೂಡ ಎಲ್ಲರನ್ನೂ ಒಮ್ಮೆಗೆ ಮೇಲೆಕೆಳಗೆ ಮಾಡಬಲ್ಲದು🦇🤣😛


*ಕುದಿಯುವ ನೀರಿನಲ್ಲಿ ಪ್ರತಿಬಿಂಬ ನೋಡಲು ಸಾಧ್ಯವಿಲ್ಲ. ಹಾಗೆಯೆ ಮನಸ್ಸು ಸಿಟ್ಟಿನಿಂದ ಕುದಿಯುತ್ತಿರುವಾಗ ಸರಿಯಾಗಿ ಯೋಚಿಸಲು ಆಗುವುದಿಲ್ಲ,ಹಾಗೂ ಯಾವ ಸತ್ಯವೂ ಕಾಣಿಸುವುದಿಲ್ಲ,ಆದ್ದರಿಂದ ಮನಸ್ಸನ್ನು ತಿಳಿನೀರಿನಂತೆ ತಿಳಿಯಾಗಿಸಿ ಸಮಾಧಾನದಿಂದ ಇಟ್ಟುಕೊಳ್ಳಬೇಕು*


ಯಶಸ್ವಿ ಜೀವನಕ್ಕಿಂತ,,*
*ಸ೦ತೃಪ್ತ ಜೀವನವೇ ಮಿಗಿಲು..*
*ಯಾಕೆಂದರೇ,,,,,*
*ಜೀವನದ ಯಶಸ್ಸು*
*ಇತರರ ದೃಷ್ಠಿಯಲ್ಲಿರುತ್ತದೆ,,*
*ಜೀವನದ ಸುಖ ನಮ್ಮ*
*ಆತ್ಮ ತೃಪ್ತಿಯಲ್ಲಿರುತ್ತದೆ...*


💐 *" ಅನುಮಾನ " ಮತ್ತು "ಅವಮಾನ "
ಬರೀ ಒಂದಕ್ಷರ ವ್ಯತ್ಯಾಸವಿರುವ
ಈ ಪದಗಳಿಗೆ ಸಾವಿರಾರು ಹೃದಯಗಳನ್ನು
ಛಿದ್ರ ಮಾಡುವಷ್ಟು "ಶಕ್ತಿ" ಇದೆ.. ಈ ಎರಡು ಪದಗಳು ನಮ್ಮ ಜೀವನದಲ್ಲಿ ಬಾರದಂತೆ ನೋಡಿಕೊಳ್ಳಬೆಕು.✍ *💐


*ಬರೆದಿಟ್ಟಂತೆ ಜೀವನ ಮಾಡಲು ಯಾರಿಗೂ ಸಾಧ್ಯವಿಲ್ಲ.*

*ಆದರೆ........*

*ಬರೆದಿಡುವಂತಹ ಜೀವನ ಮಾಡಲು ಸಾಧ್ಯಇದೆ....*


ನಾವು ಚಿಕ್ಕವರಿದ್ದಾಗ ತಂದೆಯ ಹೆಗಲ ಮೇಲೆ ಕುಳಿತು ದೇವರನ್ನು ನೋಡಬೇಕಾದರೆ ಗೊತ್ತಾಗಲಿಲ್ಲ... ನಾ ಕೂತಿರೋದು ದೇವರ ಹೆಗಲ ಮೇಲೆಯೇ ಅಂತ!!!

*ಬದುಕಿನಲ್ಲಿ ಎಲ್ಲ ಕಷ್ಟಗಳಿಗೂ ಎರಡು ಔಷಧಗಳಿವೆ ಒಂದು ದುಡಿಮೆ ಇನ್ನೊಂದು ತಾಳ್ಮೆ. ಜೀವನದ ಅಂತ್ಯದವರೆಗೂ ಕಲಿಯುವುದು ಬೆಟ್ಟದಷ್ಟಿದೆ ಎನ್ನುವುದೇ 'ಬದುಕು ಕಲಿಸುವ ಪಾಠ'.*

No comments:

Post a Comment

Specialty in Kannada.. firsts in Kannada

 ಕನ್ನಡದ ವಿಶಿಷ್ಟ ಹಾಗೂ ವೈವಿಧ್ಯಮಯ ಸಂಗತಿಗಳು