Skip to main content

ನಾಲ್ವಡಿ ಕೃಷ್ಣ ರಾಜ ಒಡೆಯರ್ naalvadi krishnaraja vodeyar

ಮೈಸೂರಿನ ಅಶೋಕಪುರಂ ಮತ್ತು ನಾಲ್ವಡಿ



ಮೈಸೂರಿನಲ್ಲಿ ಅಶೋಕಪುರಂ ಎಂಬ ನಗರವಿದೆ. ಇಲ್ಲಿ ವಾಸಮಾಡುವ ಎಲ್ಲಾ ಜನರು ಮೂಲತಹ ದಲಿತರು. ಅಶೋಕಪುರಂ ನಲ್ಲಿ ಇಂದು ವಾಸ ಮಾಡುತ್ತಿರುವ ದಲಿತರು ಯಾರು ಕೂಡ ಅಲ್ಲಿಯವರಲ್ಲ, ಅವರೆಲ್ಲಾ ಮೂಲತಹ ಉತ್ತರ ಕರ್ನಾಟಕದವರು. ಬಹುಶ ಈ ಕಾರಣಕ್ಕೆ ಉತ್ತರ ಕರ್ನಟಕದವರಂತೆ ರಫ್ ಅಂಡ್ ಟಫ್ ಆಗಿರುವುದು ಎಂದು ಕ್ರಮೇಣ ನನಗನಿಸಿತು.

ಉತ್ತರ ಕರ್ನಾಟಕದಿಂದ ವಲಸೆ ಬಂದ ಈ ಜನಾಂಗ ಮೊದಲು ನೆಲೆಗೊಂಡದ್ದು ಮೈಸೂರಿನ ಅರಮನೆ ಮುಂಭಾಗದ ದೊಡ್ಡಕೆರೆ ಮೈದಾನದಲ್ಲಿ. ಆಗಿನ್ನೂ ಈಗಿನ ಹೊಸ ಅರಮನೆ ಇರಲಿಲ್ಲ. ಸಣ್ಣದೊಂದು ಗಂಧದ ಅರಮನೆ ಇತ್ತು. ದೊಡ್ಡಕೆರೆಯಲ್ಲಿ ಬೀಡುಬಿಟ್ಟಿದ್ದ ದಲಿತರನ್ನು ಅನಂತರ ಅಶೋಕಪುರಂ ಗೆ ಸ್ಥಳಾಂತರ ಮಾಡಲಾಯಿತು. ಆಗಿನ್ನು ಅದಕ್ಕೆ ಅಶೋಕಪುರಂ ಎಂಬ ಹೆಸರು ಬಂದಿರಲಿಲ್ಲ. ಸ್ಥಳಾಂತರಗೊಂಡ ಜನ ಅದಕ್ಕೆ ಆದಿ ಕರ್ನಾಟಕ ಪುರ ಎಂದು ನಾಮಕರಣ ಮಾಡಿಕೊಂಡಿದ್ದರು, ನಾಲ್ವಡಿ ಕೃಷ್ಣರಾಜ ಒಡೆಯರ್ ಒಮ್ಮೆ ಅಲ್ಲಿಗೆ ಭೇಟಿ ನೀಡಿ ಅಶೋಕ ಪುರಂ ಎಂದು ಮರು ನಾಮಕರಣ ಮಾಡಿದರು. ಅಂದಿನಿಂದ ಇಲ್ಲಿಯ ತನಕ ಅದು ಅಶೋಕ ಪುರಂ ಆಗಿಯೇ ಉಳಿದುಕೊಂಡಿದೆ. ಆದರು ಚರಿತ್ರೆಯನ್ನು ಹಾಗೆಯೇ ಉಳಿಸಿಕೊಂಡು ಬರಲಾಗಿದೆ.

ಇದರ ಜೊತೆಗೆ ಇನ್ನೊಂದು ಮುಖ್ಯವಾದ ವಿಚಾರವನ್ನು ನಾನು ಹೇಳಬೇಕಿದೆ. ನಾಲ್ವಡಿಯ ಅವರ ಗಂಧದ ಮರದ ಸಣ್ಣ ಅರಮನೆ ಅಗ್ನಿಗೆ ಆಹುತಿಯಾಗುತ್ತದೆ. ಇಡೀ ಅರಮನೆಯ ಸುಟ್ಟು ಹೋಗುತ್ತಿದ್ದ ಸಂದರ್ಭ. ಅಂತಹ ತುರ್ತಿನ ಸಂದರ್ಭದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದತ್ತು ಮಗ ಪುಟ್ಟಬಾಲಕ ಅರಮನೆಯ ಒಳಗೆ ಸಿಕ್ಕಿ ಹಾಕಿಕೊಂಡು ಕೂಗುತ್ತಿರುತ್ತದೆ. ಅಂತಹ ಸಂದಿಗ್ಧತೆಯ ಸ್ಥಿತಿಯಲ್ಲಿ ನಾಲ್ವಡಿ ಅವರ ಬೆಂಬಲಕ್ಕೆ ನಿಲ್ಲುವುದು ಒಬ್ಬರು ಮುಸಲ್ಮಾನರು, ಮತ್ತೊಬ್ಬರು ಅಶೋಕ ಪುರಂನ ದಲಿತರು. ಮುಸಲ್ಮಾನರು ಅರಮನೆಗಳ ಹೊತ್ತಿದ್ದ ಬೆಂಕಿ ಹಾರಿಸಲು ಮರಳು, ನೀರು ಇತ್ಯಾದಿ ವಸ್ತುಗಳ ಮೂಲಕ ಬೆಂಕಿಯನ್ನು ಹಾರಿಸಲು ಪ್ರಯತ್ನಿಸಿದರೆ, ದಲಿತರು ಅರಮನೆಗೆ ಹೊತ್ತಿದ್ದ ಬೆಂಕಿಯನ್ನು ಲೆಕ್ಕಿಸದೆ ತಮ್ಮ ಪ್ರಾಣವನ್ನು ಪಣವಿಟ್ಟು ನಾಲ್ವಡಿ ಅವರ ಮಗನನ್ನು ರಕ್ಷಿಸುತ್ತಾರೆ. ಅನಂತರ ಇಡೀ ಅರಮನೆಯೇ ಸುಟ್ಟು ಹೋಗಿ, ಹೊಸ ಅರಮನೆಯನ್ನು ಕಟ್ಟಿಸುತ್ತಾರೆ. ಅದೇ ಈಗಿರುವ ಅರಮನೆ.

ಈ ಘಟನೆಯ ನಂತರ ಕೃಷ್ಣರಾಜ ಓಡೆಯರ್ ಅವರು ಸುಮ್ಮನೆ ಕೂರಲಿಲ್ಲ. ನನ್ನ ಮಗನನ್ನು ಕಾಪಾಡಿದ ಮಹಾನುಭಾವರು ಯಾರು ಎಂದು ಹುಡುಕಿದರು, ಅನಂತರ ಅವರಿಗೆ ತಿಳಿದಿದ್ದು ಅಶೋಕಪುರಂ ನ ದಲಿತರು ನನ್ನ ಮಗನನ್ನು ಉಳಿಸಿದವರು ಎಂದು. ಆ ವಿಷಯ ತಿಳಿದ ತಕ್ಷಣ ನಾಲ್ವಡಿ ಅವರು ಕುದುರೆ ಏರಿ ಅಶೋಕಪುರಂ ಗೆ ತೆರಳಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕುದುರೆ ಏರಿ ಬರುತ್ತಿದ್ದನ್ನು ಕಂಡು ಅಶೋಕಪುರಂ ನ ದಲಿತರು, ರಾಜರ ಮಗನನ್ನು ಮುಟ್ಟಿದ ತಪ್ಪಿಗೆ ಶಿಕ್ಷೆ ಕೊಡಲು ಬರುತ್ತಿರಬಹುದೆಂದು ತಪ್ಪಾಗಿ ಊಹಿಸಿ ಎದುರಿ ಓಡುತ್ತಿದ್ದರು. ನಾಲ್ವಡಿಯ ಅವರು ಕುದುರೆಯಿಂದ ಇಳಿದು ದಯವಿಟ್ಟು ಯಾರು ಓಡಬೇಡಿ ನಾನು ನಿಮಗೆ ತೊಂದರೆ ಕೊಡಲು ಬಂದಿಲ್ಲ ಎಂದು ಹೇಳಿದ ತಕ್ಷಣ ಚದುರಿ ಹೋಗುತ್ತಿದ್ದ ಜನರೆಲ್ಲಾ ಅಲ್ಲಿಲ್ಲೇ ನಿಲ್ಲುತ್ತಾರೆ.

ನಾಲ್ವಡಿ ಅವರು, ಅಲ್ಲಿಯ ಜನರನ್ನು ಉದ್ದೇಶಿಸಿ. ನೋಡಿ ನೀವು ನನ್ನ ಮಗನನ್ನು ಉಳಿಸಿದವರು ಎಂದು ತಿಳಿಯಿತು. ಆ ಕಾರಣದಿಂದ ನಿಮಗೆ ನಾನು ಕೃತಜ್ಞತೆ ತಿಳಿಸಲು ಬಂದಿದ್ದೇನೆ. ಇಂತಹ ಸಂದರ್ಭದಲ್ಲಿ ನಿಮಗೇನು ಬೇಕು ಕೇಳಿ ನಾನು ಕೊಡುವೆ ಎಂದು ಹೇಳುತ್ತಾರೆ. ಅಲ್ಲಿದ್ದ ಕೆಲವು ಜನ ನಮಗೇನು ಬೇಡ ಎನ್ನುತ್ತಾರೆ. ಆದರೆ ಕೆಲವು ಮಂದಿ ನಮಗೆ ಯಾವುದೇ ಭೂ ಓಡೆತನವಿಲ್ಲ ಹಾಗಾಗಿ ನಮಗೆ ಕೊಟ್ಟರೆ ತುಂಡು ಭೂಮಿ ಕೊಡಿ ಸ್ವಾಮಿ ಎನ್ನುತ್ತಾರೆ. ಅವರಂತೆಯೇ ಓಡೆಯರ್ ಅವರು ಅಶೋಕಪುರಂ ನ ಪಕ್ಕದಲ್ಲೆ ಇರುವ ಇಡೀ ಎಲೆ ತೋಟವನ್ನೇ ಬರೆದು ಕೊಡುತ್ತಾರೆ. ಇಂದಿಗೂ ಅಶೋಕಪುರಂ ಪಕ್ಕದಲ್ಲಿರುವ ಕೋಟಿಗಟ್ಟಲೆ ಬೆಲೆ ಬಾಳುವ ಆ ಭೂಮಿ ಇಂದಿಗೂ ಅಲ್ಲಿನ ಜನರ ಕೈನಲ್ಲೆ ಇದೆ.

ಭೂಮಿ ಕೊಟ್ಟ ತಕ್ಷಣ ನಾಲ್ವಡಿ ಅವರು ಸುಮ್ಮನಾಗಲಿಲ್ಲ. ಇನ್ನೂ ಏನಾದರು ಕೊಡಬೇಕೆನಿಸಿ ಬೇರೆ ಏನಾದರು ಕೇಳಿ ಎಂದರು. ಎಲ್ಲರೂ ಬೇಡ ಮಹರಾಜರೇ ನಮಗಷ್ಟೆ ಸಾಕು ಎಂದರು. ನಾಲ್ವಡಿ ಅವರು ಸ್ವಲ್ಪ ಯೋಚಿಸುತ್ತಾ, ಮಹಾರಾಷ್ಟ್ರದಲ್ಲಿ ಕೊಲ್ಲಾಪುರದ ಶಾಹು ಮಹಾರಾಜರು ಅಂತ ಇದ್ದಾರೆ. ಅವರು ನಿಮ್ಮ ಜಾತಿಗೆ ಸೇರಿರುವ ಅಂಬೇಡ್ಕರ್ ಎಂಬ ವಿದ್ಯಾರ್ಥಿಯನ್ನು ವಿದೇಶದ ವಿಶ್ವವಿದ್ಯಾನಿಲಯವೊಂದರಲ್ಲಿ ಅನುಧಾನ ಕೊಟ್ಟು ಓದಿಸುತ್ತಿದ್ದಾರೆ, ನಿಮ್ಮಲ್ಲಿ ಅಂತವರಿದ್ದರೆ ಹೇಳಿ ನಾನು ಕೂಡ ವಿದೇಶದಲ್ಲಿನ ವಿಶ್ವವಿದ್ಯಾನಿಲಯಕ್ಕೆ ಕಳುಹಿಸಿ ಓದಿಸುವೆ ಎನ್ನುತ್ತಾರೆ. ಒಂದಕ್ಷರವನ್ನು ಓದದ ಆ ಜನ ಹೇಗೆ ಹೋಗಲು ಸಾಧ್ಯ? ನಾಲ್ವಡಿ ಅವರ ಈ ಮಾತನ್ನು ಕೇಳಿದ ಅಶೋಕಪುರಂ ನ ಅನಕ್ಷರಸ್ಥನೊಬ್ಬ, ಅಲ್ಲಾ ಸ್ವಾಮಿ ನೀವು ಯಾವುದೋ ದೇಸುಕ್ಕ. ಅದ್ಯಾವುದೋ ಇಸ್ವ ಇದ್ಯಾಲಯಕ್ಕ ಕಳ್ಸ ಬದ್ಲು ಅದನ್ನೆ ನಮ್ ಮೈಸೂರ್ ನಲಿ ಮಾಡ್ಬುಡಿ ಅಂತ ಒಂದ್ ಮಾತು ಎಸೆದ. ಆತನ ಮಾತನ್ನು ಗಂಭೀರವಾಗಿ ಯೋಚಿಸಿ ಹೌದಲ್ವ ಎಂದು ಅದರ ನೆನಪಿನಾರ್ಥಕವಾಗಿ ಮೈಸೂರಿನಲ್ಲಿ ಒಂದು ವಿಶ್ವವಿದ್ಯಾನಿಲಯ ಸ್ಥಾಪಿಸಿದರು. ಅದೇ ನಮ್ಮ ಮೈಸೂರು ವಿಶ್ವವಿದ್ಯಾನಿಲಯ. ಆ ವಿಶ್ವವಿದ್ಯಾನಿಲಯದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ. ಇಂದಿಗೂ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಲೂ ಇದ್ದಾರೆ. ಅಂತಹ ವಿಶ್ವವಿದ್ಯಾನಿಲಯದಲ್ಲಿ ಓದಿದ ನಾನು ಕೂಡ ಧನ್ಯ. ಅವರ ಜನ್ಮ ದಿನದ ಸಂದರ್ಭದಲ್ಲಿ ಒಕ್ಕೋರಲಿ ವಿಶ್ವವಿದ್ಯಾನಿಲಯದ ಪ್ರತಿಯೊಬ್ಬ ವಿದ್ಯಾರ್ಥಿಯೂ ನೆನೆಯಬೇಕು. ನಮ್ಮೊಳಗೆ ನಾಲ್ವಡಿ ನೆಲೆಯಾಗಬೇಕು.

Comments

Popular posts from this blog

ಸವರ್ಣ ದೀರ್ಘ ಸಂಧಿ. ಸವರ್ಣ ದೀರ್ಘ ಸಂಧಿ ಉದಾಹರಣೆಗಳು savarna dhirgha sandhi. Savarna dhirgha sandhi examples

ಸವರ್ಣ ದೀರ್ಘ ಸಂಧಿ. [ ] ಪೂರ್ವ ಪದದ ಅಂತ್ಯ ಸ್ವರ ಮತ್ತು ಉತ್ತರ ಪದದ ಆರಂಭದ ಸ್ವರ ಒಂದೇ ರೀತಿಯ ವರ್ಣವಾಗಿದ್ದರೆ , ಸಂಧಿಕಾರ್ಯ ನಡೆಯುವಾಗ ಅದೇ ಸ್ವರದ ದೀರ್ಘ ಸ್ವರವು ಆದೇಶವಾಗಿರುವುದು ಕಂಡು ಬರುತ್ತದೆ. [ ] ಸಂಧಿಕಾರ್ಯ ನಡೆಯುವಾಗ ಒಂದೇ ರೀತಿಯ ಸ್ವರಾಕ್ಷರಗಳು ಪರಸ್ಪರ ಸೇರಿ ದೀರ್ಘ ಸ್ವರ ಆದೇಶವಾದರೆ ಅಂತಹ ಸಂಧಿಯನ್ನು "ಸವರ್ಣ ದೀರ್ಘ ಸಂಧಿ "ಎಂದು ಕರೆಯುತ್ತಾರೆ. [ ] ಸವರ್ಣಾಕ್ಷರಗಳಿಗೆ ಸವರ್ಣಾಕ್ಷರಗಳ ಪರವಾಗಿ ಸವರ್ಣ ದೀರ್ಘಾಕ್ಷರಗಳು ಬಂದರೆ ಸವರ್ಣ ದೀರ್ಘ ಸಂಧಿ. [ ] ಉದಾಹರಣೆಗೆ ಪೂರ್ವ ಪದ + ಉತ್ತರ ಪದ = ಸಂಧಿಪದ 1. ರವಿ + ಇಂದ್ರ = ರವೀಂದ್ರ ( ಇ+ಇ= ಈ) 2. ದೇವ+ ಆಲಯ= ದೇವಾಲಯ. (ಅ+ಆ=ಆ) 3. ಗುರು+ ಉಪದೇಶ =ಗುರೂಪದೇಶ (ಉ+ಉ=ಊ) 4. ಮಹಾ+ ಆತ್ಮ = ಮಹಾತ್ಮ (ಆ+ಆ=ಆ) 5. ಗಿರಿ+ ಇಂದ್ರ = ಗಿರೀಂದ್ರ 6. ಮುನಿ+ ಇಂದ್ರ =ಮುನೀಂದ್ರ. 7. ಅಲ್ಪ + ಅಕ್ಷರ =ಅಲ್ಪಾಕ್ಷರ. 8. ವಿದ್ಯ+ ಅರ್ಜನೆ=ವಿದ್ಯಾರ್ಜನೆ. 9. ರಾಕ್ಷಸ + ಅಧಿಪತಿ= ರಾಕ್ಷಸಾಧಿಪತಿ. 10. ಸೀತ+ಅನ್ವೇಷಣೆ= ಸೀತಾನ್ವೇಷಣೆ. 11. ಪಂಚ+ಆಸ್ಯ=ಪಂಚಾಸ್ಯ. 12. ಶಾಸಕ+ಅಂಗ=ಶಾಸಕಾಂಗ. 13. ಅಭಯ+ಅರಣ್ಯ =ಅಭಯಾರಣ್ಯ. 14. ಉಭಯ+ಅರಣ್ಯ =ಉಭಯಾರಣ್ಯ 15. ವಸ್ರ್ತ + ಆಭರಣ= ವಸ್ತ್ರಾಭರಣ. 16. ಗೌರಿ+ಈಶ =ಗೌರೀಶ. 17. ಕಟು+ಉಕ್ತಿ=ಕಟೂಕ್ತಿ. 18. ಕೃಷ್ಣ +ಅಜಿನ=ಕೃಷ್ಣಾಜಿನ. 19. ಪೀತ+ಅಂಬರ=ಪೀತಾಂಬರ. 20. ಏಕ+ಆಸ...

ಡಾ.ಸತ್ಯಾನಂದ ಪಾತ್ರೋಟ Dr.satyananda patrota

• ಡಾ.ಸತ್ಯಾನಂದ ಪಾತ್ರೋಟ • ಜನನ- ಬಾಗಲಕೋಟೆ • ವಿದ್ಯಾಭ್ಯಾಸ ~ಎಂ.ಎ., ಪಿ.ಎಚ್.ಡಿ. • ಉದ್ಯೋಗ ~ ಬಾಗಲಕೋಟೆಯ ಎಸ್.ಬಿ.ಪಾಟೀಲ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಅಧ್ಯಾಪಕರು. • ಕವನ ಸಂಕಲನಗಳು 1. ಕರಿನೆಲದ ಕಲೆಗಳು 2. ಜಾಜಿ ಮಲ್ಲಿಗೆ 3. ಕಲ್ಲಿಗೂ ಗೊತ್ತಿರುವ ಕಥೆ. 4. ಕರಿಯ ಕಟ್ಟಿದ ಕವನ 5. ನನ್ನ ಕನಸಿನ ಹುಡುಗಿ 6. ನದಿಗೊಂದು ಕನಸು ಮತ್ತು ಅವಳು ನಾಟಕಗಳು 1. ನಮಗ ಯಾರು ಇಲ್ಲೋ ಎಪ್ಪಾ ಸಾಕ್ಷಿ 2. ಮತ್ತೊಬ್ಬ ಏಕಲವ್ಯ ಪ್ರಬಂಧ ಸಂಕಲನ 1. ಒಂದಿಷ್ಟು ಕ್ಷಣಗಳು ಕಾವ್ಯದ ಧ್ವನಿಸುರುಳಿ 1. ಎದೆಯ ಮಾತು ಪ್ರಶಸ್ತಿ- ಕನ್ನಡ ರಾಜ್ಯೋತ್ಸವ ಪ್ರಶಸ್ತಿ

Kannada grammar for kpsc exams ಕೆ.ಪಿ.ಎಸ್. ಸಿ.ಪರೀಕ್ಷೆಗಳಿಗೆ ಕನ್ನಡ ವ್ಯಾಕರಣ

 ಕೆ.ಪಿ.ಎಸ್. ಸಿ ನಡೆಸುವ ಪ್ರತಿಯೊಂದು ಪರೀಕ್ಷೆಗಳಲ್ಲಿ ಕನ್ನಡಕ್ಕೆ ಸಂಬಂಧಪಟ್ಟಂತೆ 35 ಅಂಕಗಳನ್ನು ನಿಗದಿಪಡಿಸಲಾಗಿದೆ. ಪರೀಕ್ಷೆಗೆ ಅನಕೂಲವಾಗಲೆಂದು  ಕನ್ನಡ ವ್ಯಾಕರಣಕ್ಕೆ ಸಂಬಂಧಪಟ್ಟ ಕೆಲವು ಮಾಹಿತಿ ಸಂಗ್ರಹಿಸಿ ಸ್ಪರ್ಧಾರ್ಥಿಗಳ ಅನುಕೂಲಕ್ಕಾಗಿ ನೀಡಲಾಗಿದೆ.ಆಸಕ್ತರು ಇದರ ಸದುಪಯೋಗ ಪಡೆಯಬಹುದು. □  □ □ □ □ □ □ □ □ □ □ □ □ □ □     ತತ್ಸಮ - - - -  - - - - - - - - - ತದ್ಭವ (ಸಂಸ್ಕೃತ )                    (ಕನ್ನಡ ) ■ ನರ್ತಕಿ - ನಚ್ಚಣಿ ■ ಲಕ್ಷ್ಮಿ - ಲಕ್ಕಿ ,ಲಕುಮಿ ■ವೇಷ - ವೇಸ ■ಲೇಪ - ಲಪ್ಪ ■ವರ್ಧಮಾನ - ಬದ್ದವಣ ■ವಜ್ರ - ಬಜ್ಜರ ■ವತ್ಸಲಾ - ಬಚ್ಚಳೆ ■ವಿಸ್ತಾರ - ಬಿತ್ತರ ■ವೃದ್ಧ - ವಡ್ಡ ■ವೃದ್ಧಿ - ಬಡ್ಡಿ ■ವ್ಯಾಖ್ಯಾನ - ವಕ್ಕಣೆ ■ವ್ಯಾಘ್ರ - ಬಗ್ಗ ■ವರ್ಧಕಿ - ಬಡಗಿ ■ವಿದ್ಯೆ - ಬಿಜ್ಜೆ ■ವೈದ್ಯ - ಬೆಜ್ಜ ■ವಿಜ್ಞಾನ - ಬಿನ್ನಣ ■ಶಿಲ್ಪಕ,ಶಿಲ್ಪಿ - ಸಿಂಪಿಗ ,ಚಿಪ್ಪಿಗ ■ಶೂನ್ಯ - ಸೊನ್ನೆ ■ಅವಸ್ಥೆ - ಅವತೆ ■ಅರ್ಹ - ಅರುಹ ■ಅರ್ಗಲ,ಅರ್ಗಲೆ - ಅಗಳಿ,ಅಗುಳಿ (ಚಿಲಕ) ■ಅಂಗುಷ್ಠ - ಅಂಗುಟ ,ಉಂಗುಟ. ■ಆಲಸ್ಯ - ಆಲಸ ■ಆಜ್ಞಾ, ಆಜ್ಞೆ - ಆಣೆ ■ಕ್ರಕಚ - ಗರಗಸ ■ಕ್ಷಣ - ಚಣ ■ಗ್ರಹ - ಗರ ■ಗ್ರಹಣ - ಗರಣ ■ಗ್ರಾಮೀಣ - ಗಾವಿಲ ■ಲಕ್ಷ - ಲಕ್ಕ ■ ಶ್ರೇಷ್ಠಿ -...