Skip to main content

ಕನ್ನಡ ಕವಿಗಳ ನುಡಿಮುತ್ತು ಗಳು. ಕನ್ನಡ ಸುಭಾಷಿತಗಳು kannada kavigala nudimuttugalu

ಕನ್ನಡ ಕವಿಗಳ ನುಡಿಮುತ್ತುಗಳು


卐 ' ಮನುಜಮತ, ವಿಶ್ವಪಥ, ಸರ್ವೋದಯ,ಸಮನ್ವಯ,ಪೂರ್ಣದೃಷ್ಟಿ - ಈ ಪಂಚಮಂತ್ರ ಇನ್ನು ಮುಂದಿನ ದೃಷ್ಟಿಯಾಗಬೇಕಾಗಿದೆ.ಅಂದರೆ, ನಮಗೆ ಇನ್ನು ಬೇಕಾದುದು ಆ ಮತ ಈ ಮತ ಅಲ್ಲ; ಮನುಜಮತ. ಆ ಪಥ , ಈ ಪಥ ಅಲ್ಲ; ವಿಶ್ವಪಥ. ಆ ಒಬ್ಬರ ಈ ಒಬ್ಬರ ಉದಯ ಮಾತ್ರವಲ್ಲ ; ಸರ್ವರ ಸರ್ವಸ್ತರದ ಉದಯ. ಪರಸ್ಪರ ವಿಮುಖವಾಗಿ ಸಿಡಿದು ಹೋಗುವುದಲ್ಲ; ಸಮನ್ವಯಗೊಳ್ಳುವುದು.ಮಿತಮತದ ಆಂಶಿಕ ದೃಷ್ಟಿಯಲ್ಲ; ಭೌತಿಕ , ಪಾರಮಾರ್ಥಿಕ ಎಂಬ ಭಿನ್ನ ದೃಷ್ಟಿಯಲ್ಲ; ಎಲ್ಲವನ್ನೂ ಭಗವದ್ ದೃಷ್ಟಿಯಿಂದ ಕಾಣುವ ಪೂರ್ಣದೃಷ್ಟಿ. '
------------------------------------ ಕುವೆಂಪು.


卐 " ನನ್ನ ಪ್ರೌಢಶಾಲಾ ಶಿಕ್ಷಣ ಮುಗಿಯುವವರೆಗೂ ಕನ್ನಡ ಮಾಧ್ಯಮದಲ್ಲಿಯೇ ಓದಿದ್ದೇನೆ.ನಾನು ಕಾಲೇಜಿಗೆ ಹೋದಾಗ ಎಲ್ಲರಿಗಿಂತ ಉತ್ತಮವಾಗಿ ಇಂಗ್ಲೀಷ್ ಮಾತನಾಡುತ್ತಿದ್ದೆ.ನಾನು ಕನ್ನಡ ಮಾಧ್ಯಮದಲ್ಲಿಯೇ ಓದಬೇಕು , ಉತ್ತಮವಾಗಿ ಇಂಗ್ಲೀಷ್ ಮಾತನಾಡಬೇಕು ಎನ್ನುವುದು ತಂದೆಯ ಆಶಯವಾಗಿತ್ತು. ಆದರೆ ಇಂದು ಅತ್ತಕಡೆ ಇಂಗ್ಲೀಷ್ ಬಾರದೆ ಇತ್ತಕಡೆ ಕನ್ನಡವೂ ತಿಳಿಯದಿರುವ ಕಾಲದಲ್ಲಿ ನಾವಿದ್ದೇವೆ.ಉತ್ತಮ ಇಂಗ್ಲೀಷ್ ಹೇಳಿಕೊಡುವ , ಕನ್ನಡವನ್ನು ಕಲಿಸುವ ಶಿಕ್ಷಣ ನಮಗೆ ಬೇಕಾಗಿದೆ."
------------------------ಪ್ರೊಫೆಸರ್. ಸಿ.ಎನ್.ಆರ್.ರಾವ್.


卐 "ತನ್ನನ್ನು ತಾನು ಗುರುತಿಸಿಕೊಂಡು, ತನ್ನ ವಿಶೇಷವನ್ನು ಶಕ್ತಿಯ ಪರಿಮಿತಿಯನ್ನು ಅರಿತು, ತನ್ನ ತನದ ವೈಶಿಷ್ಟ್ಯವನ್ನು ಬೆಳೆಸಿಕೊಳ್ಳುತ್ತಾ ಉಳಿದವರ ಜೊತೆಗೆ ಸಮಭಾವದಿಂದ ಸಹಕರಿಸಲು ಕಲಿಸುವುದೇ ನಿಜವಾದ ಸಂಸ್ಕೃತಿಯ ಲಕ್ಷಣ. "
----------------------ಎಂ.ಗೋಪಾಲಕೃಷ್ಣ ಅಡಿಗ.

卐 " ಲೋಕದಲ್ಲಿ ಎಷ್ಟು ಜನರಿದ್ದಾರೋ ಅಷ್ಟು ಅನುಭವಗಳಿವೆ.ಅವುಗಳಲ್ಲಿ ಕೆಲವು ಗ್ರಾಹ್ಯವಾದವು, ಕೆಲವು ತ್ಯಾಜ್ಯ ಎಂದು ನಿರ್ಧಾರ ಮಾಡುವ ಒರೆಗಲ್ಲು ಯಾವುದು ? ಅವರವರ ಸ್ವಂತ ಅನುಭವವೆ !"
----------------ಜಿ.ಪಿ.ರಾಜರತ್ನಂ.


卐 "ಪೆಣ್ಣಲ್ಲವೆ ತಮ್ಮನೆಲ್ಲ ಪಡೆದ ತಾಯಿ ।
ಪೆಣ್ಣಲ್ಲವೆ ಪೊರೆದವಳು ।
ಪೆಣ್ಣುಪೆಣ್ಣೆಂದೇತಕೆ ಬೀಳುಗಳೆವರು ।
ಕಣ್ಣು ಕಾಣದ ಗಾವಿಲರು ।"
----------------------- ಸಂಚಿಯ ಹೊನ್ನಮ್ಮ.

卐 " ಆಡದೇ ಮಾಡುವವ ರೂಢಿಯೊಳಗುತ್ತಮನು , ಆಡಿ ಮಾಡುವವ ಮಧ್ಯಮನು , ಆಡಿಯೂ ಮಾಡದವ ಅಧಮನು "
--------------------------ಸರ್ವಜ್ಞ.

卐 "ಇತಿಹಾಸವೆಂಬುದು ಕೇವಲ ರಾಜ ರಾಣಿಯರ ಕಥೆಯಲ್ಲ , ಕಾಲಕಾಲಕ್ಕೆ ಬದಲಾಗುತ್ತಾ ಬಂದ ಬದುಕು.ಅದರ ಕಾಲಧರ್ಮ , ಅದರಿಂದ ಪ್ರಭಾವಿತರಾದ ಜನರ ರೀತಿನೀತಿಗಳು , ಆ ಸಾಮಾಜಿಕ ವ್ಯವಸ್ಥೆಯ ಪ್ರಮುಖ ಶಕ್ತಿಗಳು - ಇವೆಲ್ಲಾ ಇತಿಹಾಸವನ್ನು ಬಿಂಬಿಸುವ ಮುಖ್ಯ ಅಂಶಗಳಾಗಿವೆ. ಸಾಮ್ರಾಜ್ಯಗಳು ಎದ್ದು ಬಿದ್ಧ ಉತ್ಕರ್ಷ - ಅಧಃಪತನಗಳಿಗೆ ಯಾವನೋ ರಾಜ , ಒಬ್ಬಳು ರಾಣಿ ಕಾರಣವೆನ್ನುವುದು ಸರಿಯಾಗದು. ಆ ಸೃಷ್ಟಿ , ಲಯದ ಹಿಂದೆ ಆಯಾ ಜನಾಂಗಗಳ ಕಥೆಯಿದೆ.ಈ ಘಟನೆಗಳ ಹಿಂದೆ ಜನಜೀವನ, ಕಲೆ , ಸಂಸ್ಕೃತಿಗಳ ಪ್ರೇರಕ ಶಕ್ತಿಗಳಿವೆ."
----------------------------ನಿರಂಜನ.


卐 ಕನ್ನಡದ ಸೊಗಸು
' ಮಲ್ಲಿಗೆಗೆ ಹುಳಿಯಕ್ಕು , ಕಲ್ಲಿಗೆ ಗಂಟಕ್ಕು
ಹಲ್ಲಿಗೆ ನೊಣವು ಸವಿಯಕ್ಕು - ಕನ್ನಡದ
ಸೊಲ್ಲುಗಳ ನೋಡಿ ಸರ್ವಜ್ಞ. '
--------------------------- ಸರ್ವಜ್ಞ.

卐 " ಹಲವು ಹಳ್ಳಗಳು ಹರಿದು ಬಂದು ಸಮುದ್ರವಾಗುವಂತೆ , ಕೆಲವನ್ನು ತಿಳಿದವರಿಂದ ಕಲಿತು , ಕೆಲವನ್ನು ಶಾಸ್ತ್ರಗಳನ್ನು ಕೇಳುತ್ತಾ , ಕೆಲವನ್ನು ಮಾಡುವವರನ್ನು ಕಂಡು, ಕೆಲವನ್ನು ಎಚ್ಚರದಿಂದ ನೋಡುತ್ತಾ , ಕೆಲವನ್ನು ಸಜ್ಜನರ ಸಹವಾಸದಿಂದ ತಿಳಿದರೆ ಮನುಷ್ಯ ಸರ್ವಜ್ಞನಾಗುತ್ತಾನೆ".
------------------------ಪುಲಿಗೆರೆ ಸೋಮೇಶ್ವರ.

卐 ತನ್ನ ಮರೆಯ ಕಂಪನರಿಯದದನೆ ಹೊರಗೆ ಹುಡುಕುವ
ಮೃಗದ ಸೇಡು ನಮ್ಮ ಪಾಡು ಪರರ ನುಡಿಗೆ ಮಿಡುಕುವ
ಕನ್ನಡ ಕಸ್ತೂರಿಯನ್ನ
ಹೊಸತುಸಿರಿಂ ತೀಡದನ್ನ
ಸುರಭಿ ಎಲ್ಲಿ ? ನೀನದನ್ನ
ನವಶಕ್ತಿಯನೆಬ್ಬಿಸು -
ಹೊಸಸುಗಂಧದೊಸಗೆಯಿಂದ ಜಗದಿ ಹೆಸರ ಹಬ್ಬಿಸು ॥
--------------------ಎಂ.ಗೋವಿಂದ ಪೈ.

卐 ಬೇರೆಯವರ ವಿಚಾರಗಳನ್ನು, ಬೇರೆಯವರ ಧರ್ಮವನ್ನು ಸಹಿಸಿಕೊಂಡು ಬಾಳಲು ಸಾಧ್ಯವಾದಲ್ಲಿ ಅದು ಕಸವರ ( ಚಿನ್ನ, ಸಂಪತ್ತು). ಹೀಗಲ್ಲದೆ ಕಸ ಮತ್ತು ಕಸವರ ಎರಡೂ ಒಂದೇ ಎಂದು ತಿಳಿದವರು ದುಃಖವನ್ನು ಅನುಭವಿಸುತ್ತಾರೆ.
-------------------ಶ್ರೀ ವಿಜಯ .


卐 ದುಃಖಕ್ಕೆ ಸಿಕ್ಕಷ್ಟು ಬೇಗ ಕಾರಣ ಸುಖಕ್ಕೆ ಸಿಗುವುದಿಲ್ಲ.
--------------------' ಪಿ.ಲಂಕೇಶ್.


卐 " ಬಂದ ಸುಖವ ಬಿಡಬೇಡ , ಬಾರದುದ ಬೇಕೆಂದು ಬಯಸಬೇಡ."
------------------------------ರತ್ನಾಕರ ವರ್ಣಿ.

卐 ಜೀವನ ಸುಂದರ ಸ್ವಪ್ನವೂ ಅಲ್ಲ, ಕಹಿ ಬೇವು ಅಲ್ಲ ; ಬೇವು - ಬೆಲ್ಲಗಳ ಮಿಶ್ರಣ ಅದು.ಅರೆ ಕಹಿ, ಅರೆ ಸಿಹಿ ,ಸ್ವಲ್ಪ ನಗು ,ಕೊಂಚ ಅಳು; ತುಸು ಕೋಪ , ನಸು ತಾಪ. ನೀನದನ್ನು ನಗುನಗುತ್ತ ನುಂಗಬೇಕು, ನೋವನ್ನು ನಗೆಯಾಗಿ ಪರಿವರ್ತಿಸಿಕೊಳ್ಳಬೇಕು.
-----------------------------ನಾಡಿಗೇರ್ ಕೃಷ್ಣರಾಯರು.



卐 " ನಡೆವವರು ಎಡವದೆ ಕುಳಿತವರು ಎಡವುತ್ತಾರೆಯೆ?"
------------------------ರಾಘವಾಂಕ.


卐 " ಒಬ್ಬ ಮನುಷ್ಯ, ಆತನ ಸ್ನೇಹಿತರು ಹೊಗಳಿ ಹಾಡುವಷ್ಟು ಒಳ್ಳೆಯವನೂ ಇರುವುದಿಲ್ಲ,ಅವನಿಗಾಗದವರು ತೆಗಳಿ ತಿರಸ್ಕರಿಸುವಷ್ಟು ಕೆಟ್ಟವನೂ ಇರುವುದಿಲ್ಲ. "
---------------------ಮಾಸ್ತಿ ವೆಂಕಟೇಶ ಅಯ್ಯಂಗಾರ್ .

卐 ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದೊಡೆ ಎಂತಯ್ಯ ?
ಸಮುದ್ರದ ತಡಿಯಲೊಂದು ಮನೆಯಮಾಡಿ ನೊರೆತೆರೆಗಳಿಗೆ ಅಂಜಿದೊಡೆ ಎಂತಯ್ಯ ?
ಸಂತೆಯೊಳಗೆ ಒಂದು ಮನೆಯಮಾಡಿ ಶಬ್ದಕ್ಕೆ ನಾಚಿದೊಡೆ ಎಂತಯ್ಯ?
ಲೋಕದಲ್ಲಿ ಹುಟ್ಟಿಬಂದ ಬಳಿಕ ಸ್ತುತಿ - ನಿಂದೆಗಳು ಬಂದೊಡೆ
ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು.
----------------ಅಕ್ಕ ಮಹಾದೇವಿ.

卐 'ಎಲ್ಲರೂ ತಮ್ಮ ತಮ್ಮ ಬುದ್ಧಿಗೆ ತೋಚಿದ್ದನ್ನು , ತಮಗೆ ಉತ್ತಮವೆಂದು ತೋರಿದ ಕ್ರಮದಲ್ಲಿ ಚೆನ್ನಾಗಿಯೇ ಹೇಳುತ್ತಾರೆ.ವಿದ್ಯೆ ಲೋಕದಲ್ಲಿ ಯಾರೋ ಒಬ್ಬರಿಗಾಗಿ ಬಂದುದಲ್ಲ.ಲೋಕವನ್ನು ಮೆಚ್ಚಿಸಲು ಪರಮೇಶ್ವರನಿಗಾದರೂ ಸಾಧ್ಯವೆ ? ಆಡುವವರು ತಮ್ಮ ಹಮ್ಮಿಗಾಗಿ ಆಡುತ್ತಾರೆ. ಕೆಟ್ಟ ಮಾತಿನ ಭಯದಿಂದ ಕೆಟ್ಟವನ ಮೇಲೆ ಏಕೆ ಅನುಮಾನ ಪಡಬೇಕು ? '
----------------------ಚೌಂಡರಸ.

Comments

Post a Comment

Popular posts from this blog

ಸವರ್ಣ ದೀರ್ಘ ಸಂಧಿ. ಸವರ್ಣ ದೀರ್ಘ ಸಂಧಿ ಉದಾಹರಣೆಗಳು savarna dhirgha sandhi. Savarna dhirgha sandhi examples

ಸವರ್ಣ ದೀರ್ಘ ಸಂಧಿ. [ ] ಪೂರ್ವ ಪದದ ಅಂತ್ಯ ಸ್ವರ ಮತ್ತು ಉತ್ತರ ಪದದ ಆರಂಭದ ಸ್ವರ ಒಂದೇ ರೀತಿಯ ವರ್ಣವಾಗಿದ್ದರೆ , ಸಂಧಿಕಾರ್ಯ ನಡೆಯುವಾಗ ಅದೇ ಸ್ವರದ ದೀರ್ಘ ಸ್ವರವು ಆದೇಶವಾಗಿರುವುದು ಕಂಡು ಬರುತ್ತದೆ. [ ] ಸಂಧಿಕಾರ್ಯ ನಡೆಯುವಾಗ ಒಂದೇ ರೀತಿಯ ಸ್ವರಾಕ್ಷರಗಳು ಪರಸ್ಪರ ಸೇರಿ ದೀರ್ಘ ಸ್ವರ ಆದೇಶವಾದರೆ ಅಂತಹ ಸಂಧಿಯನ್ನು "ಸವರ್ಣ ದೀರ್ಘ ಸಂಧಿ "ಎಂದು ಕರೆಯುತ್ತಾರೆ. [ ] ಸವರ್ಣಾಕ್ಷರಗಳಿಗೆ ಸವರ್ಣಾಕ್ಷರಗಳ ಪರವಾಗಿ ಸವರ್ಣ ದೀರ್ಘಾಕ್ಷರಗಳು ಬಂದರೆ ಸವರ್ಣ ದೀರ್ಘ ಸಂಧಿ. [ ] ಉದಾಹರಣೆಗೆ ಪೂರ್ವ ಪದ + ಉತ್ತರ ಪದ = ಸಂಧಿಪದ 1. ರವಿ + ಇಂದ್ರ = ರವೀಂದ್ರ ( ಇ+ಇ= ಈ) 2. ದೇವ+ ಆಲಯ= ದೇವಾಲಯ. (ಅ+ಆ=ಆ) 3. ಗುರು+ ಉಪದೇಶ =ಗುರೂಪದೇಶ (ಉ+ಉ=ಊ) 4. ಮಹಾ+ ಆತ್ಮ = ಮಹಾತ್ಮ (ಆ+ಆ=ಆ) 5. ಗಿರಿ+ ಇಂದ್ರ = ಗಿರೀಂದ್ರ 6. ಮುನಿ+ ಇಂದ್ರ =ಮುನೀಂದ್ರ. 7. ಅಲ್ಪ + ಅಕ್ಷರ =ಅಲ್ಪಾಕ್ಷರ. 8. ವಿದ್ಯ+ ಅರ್ಜನೆ=ವಿದ್ಯಾರ್ಜನೆ. 9. ರಾಕ್ಷಸ + ಅಧಿಪತಿ= ರಾಕ್ಷಸಾಧಿಪತಿ. 10. ಸೀತ+ಅನ್ವೇಷಣೆ= ಸೀತಾನ್ವೇಷಣೆ. 11. ಪಂಚ+ಆಸ್ಯ=ಪಂಚಾಸ್ಯ. 12. ಶಾಸಕ+ಅಂಗ=ಶಾಸಕಾಂಗ. 13. ಅಭಯ+ಅರಣ್ಯ =ಅಭಯಾರಣ್ಯ. 14. ಉಭಯ+ಅರಣ್ಯ =ಉಭಯಾರಣ್ಯ 15. ವಸ್ರ್ತ + ಆಭರಣ= ವಸ್ತ್ರಾಭರಣ. 16. ಗೌರಿ+ಈಶ =ಗೌರೀಶ. 17. ಕಟು+ಉಕ್ತಿ=ಕಟೂಕ್ತಿ. 18. ಕೃಷ್ಣ +ಅಜಿನ=ಕೃಷ್ಣಾಜಿನ. 19. ಪೀತ+ಅಂಬರ=ಪೀತಾಂಬರ. 20. ಏಕ+ಆಸ...

ಡಾ.ಸತ್ಯಾನಂದ ಪಾತ್ರೋಟ Dr.satyananda patrota

• ಡಾ.ಸತ್ಯಾನಂದ ಪಾತ್ರೋಟ • ಜನನ- ಬಾಗಲಕೋಟೆ • ವಿದ್ಯಾಭ್ಯಾಸ ~ಎಂ.ಎ., ಪಿ.ಎಚ್.ಡಿ. • ಉದ್ಯೋಗ ~ ಬಾಗಲಕೋಟೆಯ ಎಸ್.ಬಿ.ಪಾಟೀಲ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಅಧ್ಯಾಪಕರು. • ಕವನ ಸಂಕಲನಗಳು 1. ಕರಿನೆಲದ ಕಲೆಗಳು 2. ಜಾಜಿ ಮಲ್ಲಿಗೆ 3. ಕಲ್ಲಿಗೂ ಗೊತ್ತಿರುವ ಕಥೆ. 4. ಕರಿಯ ಕಟ್ಟಿದ ಕವನ 5. ನನ್ನ ಕನಸಿನ ಹುಡುಗಿ 6. ನದಿಗೊಂದು ಕನಸು ಮತ್ತು ಅವಳು ನಾಟಕಗಳು 1. ನಮಗ ಯಾರು ಇಲ್ಲೋ ಎಪ್ಪಾ ಸಾಕ್ಷಿ 2. ಮತ್ತೊಬ್ಬ ಏಕಲವ್ಯ ಪ್ರಬಂಧ ಸಂಕಲನ 1. ಒಂದಿಷ್ಟು ಕ್ಷಣಗಳು ಕಾವ್ಯದ ಧ್ವನಿಸುರುಳಿ 1. ಎದೆಯ ಮಾತು ಪ್ರಶಸ್ತಿ- ಕನ್ನಡ ರಾಜ್ಯೋತ್ಸವ ಪ್ರಶಸ್ತಿ

Kannada grammar for kpsc exams ಕೆ.ಪಿ.ಎಸ್. ಸಿ.ಪರೀಕ್ಷೆಗಳಿಗೆ ಕನ್ನಡ ವ್ಯಾಕರಣ

 ಕೆ.ಪಿ.ಎಸ್. ಸಿ ನಡೆಸುವ ಪ್ರತಿಯೊಂದು ಪರೀಕ್ಷೆಗಳಲ್ಲಿ ಕನ್ನಡಕ್ಕೆ ಸಂಬಂಧಪಟ್ಟಂತೆ 35 ಅಂಕಗಳನ್ನು ನಿಗದಿಪಡಿಸಲಾಗಿದೆ. ಪರೀಕ್ಷೆಗೆ ಅನಕೂಲವಾಗಲೆಂದು  ಕನ್ನಡ ವ್ಯಾಕರಣಕ್ಕೆ ಸಂಬಂಧಪಟ್ಟ ಕೆಲವು ಮಾಹಿತಿ ಸಂಗ್ರಹಿಸಿ ಸ್ಪರ್ಧಾರ್ಥಿಗಳ ಅನುಕೂಲಕ್ಕಾಗಿ ನೀಡಲಾಗಿದೆ.ಆಸಕ್ತರು ಇದರ ಸದುಪಯೋಗ ಪಡೆಯಬಹುದು. □  □ □ □ □ □ □ □ □ □ □ □ □ □ □     ತತ್ಸಮ - - - -  - - - - - - - - - ತದ್ಭವ (ಸಂಸ್ಕೃತ )                    (ಕನ್ನಡ ) ■ ನರ್ತಕಿ - ನಚ್ಚಣಿ ■ ಲಕ್ಷ್ಮಿ - ಲಕ್ಕಿ ,ಲಕುಮಿ ■ವೇಷ - ವೇಸ ■ಲೇಪ - ಲಪ್ಪ ■ವರ್ಧಮಾನ - ಬದ್ದವಣ ■ವಜ್ರ - ಬಜ್ಜರ ■ವತ್ಸಲಾ - ಬಚ್ಚಳೆ ■ವಿಸ್ತಾರ - ಬಿತ್ತರ ■ವೃದ್ಧ - ವಡ್ಡ ■ವೃದ್ಧಿ - ಬಡ್ಡಿ ■ವ್ಯಾಖ್ಯಾನ - ವಕ್ಕಣೆ ■ವ್ಯಾಘ್ರ - ಬಗ್ಗ ■ವರ್ಧಕಿ - ಬಡಗಿ ■ವಿದ್ಯೆ - ಬಿಜ್ಜೆ ■ವೈದ್ಯ - ಬೆಜ್ಜ ■ವಿಜ್ಞಾನ - ಬಿನ್ನಣ ■ಶಿಲ್ಪಕ,ಶಿಲ್ಪಿ - ಸಿಂಪಿಗ ,ಚಿಪ್ಪಿಗ ■ಶೂನ್ಯ - ಸೊನ್ನೆ ■ಅವಸ್ಥೆ - ಅವತೆ ■ಅರ್ಹ - ಅರುಹ ■ಅರ್ಗಲ,ಅರ್ಗಲೆ - ಅಗಳಿ,ಅಗುಳಿ (ಚಿಲಕ) ■ಅಂಗುಷ್ಠ - ಅಂಗುಟ ,ಉಂಗುಟ. ■ಆಲಸ್ಯ - ಆಲಸ ■ಆಜ್ಞಾ, ಆಜ್ಞೆ - ಆಣೆ ■ಕ್ರಕಚ - ಗರಗಸ ■ಕ್ಷಣ - ಚಣ ■ಗ್ರಹ - ಗರ ■ಗ್ರಹಣ - ಗರಣ ■ಗ್ರಾಮೀಣ - ಗಾವಿಲ ■ಲಕ್ಷ - ಲಕ್ಕ ■ ಶ್ರೇಷ್ಠಿ -...