1. ಹಸಿದವರಿಗೆ ನಮ್ಮಿಂದ ಊಟ ಹಾಕಲು ಆಗದಿದ್ದಾಗ, ಊಟ ಹಾಕುವವರ ಮನೆಯನ್ನಾದರೂ ತೋರಿಸಬೇಕು.............................ಗಳಗನಾಥ. 2. ಸದ್ಗುಣ ಮತ್ತು ದುರ್ಗುಣಗಳ ವ್ಯತ್ಯಾಸ ತಿಳಿಯದಾದಾಗ ನಮ್ಮ ಬೆಳವಣಿಗೆ ನಿಲ್ಲುತ್ತದೆ. -------- ಮಹಾತ್ಮಾ ಗಾಂಧಿ. 3. ಹೆಚ್ಚು ಕಷ್ಟ ಪಟ್ಟು ದುಡಿದಷ್ಟೂ ಅದೃಷ್ಟ ಹೆಚ್ಚಾಗಿ ನಿಮ್ಮನ್ನು ಒಲಿಯುತ್ತದೆ. -------ಥಾಮಸ್ ಜಫರ್ಸನ್. 4. ಶಾಲೆಯಲ್ಲಿ ಕಲಿತದ್ದು ಮರೆತ ಬಳಿಕವೂ ನೆನಪಲ್ಲಿ ಉಳಿಯುವುದೇ ಶಿಕ್ಷಣ. ------ ಆಲ್ಬರ್ಟ್ ಐನ್ ಸ್ಟೀನ್. 5. ಬಹಳಷ್ಟು ಜನರಿಗೆ ಸ್ವಾತಂತ್ರ್ಯ ಬೇಕಿಲ್ಲ. ಏಕೆಂದರೆ ಸ್ವಾತಂತ್ರ್ಯದ ಜತೆಗೆ ಜವಾಬ್ದಾರಿಯು ಇರುತ್ತದೆ. ಬಹಳಷ್ಟು ಜನ ಜವಾಬ್ದಾರಿಯ ಬಗ್ಗೆ ಭಯ ಹೊಂದಿದ್ದಾರೆ. ------- ಸಿಗ್ಮಂಡ್ ಫ್ರಾಯ್ಡ್. 6. ಮುಗ್ಧರ ನಂಬಿಕೆಯೇ ಮೋಸಗಾರರ ಬಲವಾದ ಆಯುಧ. ----------ಸ್ಟೀಫನ್ ಕಿಂಗ್. 7. ಮಹತ್ವಾಕಾಂಕ್ಷೆ ಇಲ್ಲದ ಬುದ್ಧಿವಂತಿಕೆ ರೆಕ್ಕೆಗಳಿಲ್ಲದ ಹಕ್ಕಿಯಂತೆ. ------ಸಾಲ್ವಡೋರ್ ಡಾಲಿ. 8. ದುಃಖದ ಮೌನ ಭಾಷೆಯೇ ಕಣ್ಣೀರು. ------ವಾಲ್ಟೇರ್. 9. ಯಶಸ್ಸು ಸದಾ ಇರಬೇಕೆಂದರೆ ವಿನಯದಿಂದಿರಿ. ಕೀರ್ತಿ ಅಥವಾ ಹಣ ತಲೆಗೆ ಹತ್ತದಂತೆ ನೋಡಿಕೊಳ್ಳಿ. ------'ಎ.ಆರ್.ರೆಹಮಾನ್. 10. ನಿಷ್ಪ್ರಯೋಜಕ ವ್ಯಕ್ತಿ ಗಳು ಕೇವಲ ತಿನ್ನುವುದಕ್ಕಾಗಿ ಮತ್ತು ಕುಡಿಯುವುದಕ್ಕಾಗಿ ಬದುಕುತ್ತಾರೆ. ಪ್ರಯೋಜನಕಾರಿ ವ್ಯಕ್ತಿ ಗಳು ಬದುಕುವುದಕ್ಕಾಗಿ ತಿನ್ನುತ್ತಾರೆ ಮತ್ತು ಕ...