Skip to main content

Posts

Showing posts from November, 2017

Kannada subhashitagalu/Kannada nudimuttugalu ಸುಭಾಷಿತಗಳು ಕನ್ನಡ ಸುಭಾಷಿತಗಳು ಕನ್ನಡ ನುಡಿಮುತ್ತುಗಳು

1. ಹಸಿದವರಿಗೆ ನಮ್ಮಿಂದ ಊಟ ಹಾಕಲು ಆಗದಿದ್ದಾಗ, ಊಟ ಹಾಕುವವರ ಮನೆಯನ್ನಾದರೂ ತೋರಿಸಬೇಕು.............................ಗಳಗನಾಥ. 2. ಸದ್ಗುಣ ಮತ್ತು ದುರ್ಗುಣಗಳ ವ್ಯತ್ಯಾಸ ತಿಳಿಯದಾದಾಗ ನಮ್ಮ ಬೆಳವಣಿಗೆ ನಿಲ್ಲುತ್ತದೆ. -------- ಮಹಾತ್ಮಾ ಗಾಂಧಿ. 3. ಹೆಚ್ಚು ಕಷ್ಟ ಪಟ್ಟು ದುಡಿದಷ್ಟೂ ಅದೃಷ್ಟ ಹೆಚ್ಚಾಗಿ ನಿಮ್ಮನ್ನು ಒಲಿಯುತ್ತದೆ. -------ಥಾಮಸ್ ಜಫರ್ಸನ್. 4. ಶಾಲೆಯಲ್ಲಿ ಕಲಿತದ್ದು ಮರೆತ ಬಳಿಕವೂ ನೆನಪಲ್ಲಿ ಉಳಿಯುವುದೇ ಶಿಕ್ಷಣ. ------ ಆಲ್ಬರ್ಟ್ ಐನ್ ಸ್ಟೀನ್. 5. ಬಹಳಷ್ಟು ಜನರಿಗೆ ಸ್ವಾತಂತ್ರ್ಯ ಬೇಕಿಲ್ಲ. ಏಕೆಂದರೆ ಸ್ವಾತಂತ್ರ್ಯದ ಜತೆಗೆ ಜವಾಬ್ದಾರಿಯು ಇರುತ್ತದೆ. ಬಹಳಷ್ಟು ಜನ ಜವಾಬ್ದಾರಿಯ ಬಗ್ಗೆ ಭಯ ಹೊಂದಿದ್ದಾರೆ. ------- ಸಿಗ್ಮಂಡ್ ಫ್ರಾಯ್ಡ್. 6. ಮುಗ್ಧರ ನಂಬಿಕೆಯೇ ಮೋಸಗಾರರ ಬಲವಾದ ಆಯುಧ. ----------ಸ್ಟೀಫನ್ ಕಿಂಗ್. 7. ಮಹತ್ವಾಕಾಂಕ್ಷೆ ಇಲ್ಲದ ಬುದ್ಧಿವಂತಿಕೆ ರೆಕ್ಕೆಗಳಿಲ್ಲದ ಹಕ್ಕಿಯಂತೆ. ------ಸಾಲ್ವಡೋರ್ ಡಾಲಿ. 8. ದುಃಖದ ಮೌನ ಭಾಷೆಯೇ ಕಣ್ಣೀರು. ------ವಾಲ್ಟೇರ್. 9. ಯಶಸ್ಸು ಸದಾ ಇರಬೇಕೆಂದರೆ ವಿನಯದಿಂದಿರಿ. ಕೀರ್ತಿ ಅಥವಾ ಹಣ ತಲೆಗೆ ಹತ್ತದಂತೆ ನೋಡಿಕೊಳ್ಳಿ. ------'ಎ.ಆರ್.ರೆಹಮಾನ್. 10. ನಿಷ್ಪ್ರಯೋಜಕ ವ್ಯಕ್ತಿ ಗಳು ಕೇವಲ ತಿನ್ನುವುದಕ್ಕಾಗಿ ಮತ್ತು ಕುಡಿಯುವುದಕ್ಕಾಗಿ ಬದುಕುತ್ತಾರೆ. ಪ್ರಯೋಜನಕಾರಿ ವ್ಯಕ್ತಿ ಗಳು ಬದುಕುವುದಕ್ಕಾಗಿ ತಿನ್ನುತ್ತಾರೆ ಮತ್ತು ಕ...

ಕನ್ನಡ ಸುಭಾಷಿತಗಳು. ಕನ್ನಡ ನುಡಿ ಮುತ್ತುಗಳು Kannada subhashitagalu Kannada nudi muttugalu

1. ಯಶಸ್ಸಿನ ಗುಟ್ಟು ಏನು ಗೊತ್ತೆ? ಹಿಡಿದ ಕೆಲಸವನ್ನು ಬಿಡದಿರುವುದು. ---------ಗ್ಲೇಡರ್. 2. ಪುಸ್ತಕ ಪಾಂಡಿತ್ಯಕ್ಕಿಂತ ,ಅನುಭವಕ್ಕೆ ಹೆಚ್ಚಿನ ಬೆಲೆ.-------ಕ್ಯಾಡ್ಮನ್. 3. ಅನುಭವವಿರುವಲ್ಲಿ ಅಮೃತ ವಿದೆ.----- ಭಾರತೀಯ ಗಾದೆ. 4. ಅನುಭವ ಎಂಬ ಗುರುವಿಗೆ ನಾವು ಸಲ್ಲಿಸಬೇಕಾಗಿರುವ ದಕ್ಷಿಣೆ ಅಪಾರವಿದೆ .----ಫ್ರಾಂಕ್ಲಿನ್. 5. ಅನುಭವವೊಂದು ಅಮೂಲ್ಯ ಅಪೂರ್ವ ವಜ್ರ. ಅದಕ್ಕಾಗಿ ಎಷ್ಟೋ ಜನರು ಬೆವರು, ರಕ್ತ ಸುರಿಸಿದ್ದಾರೆ. ---ಶೇಕ್ಸ್ ಪಿಯರ್. 6. ನಿನ್ನನ್ನು ಪ್ರೇಮಿಸುವವರನ್ನು ಪ್ರೇಮಿಸು. ---ವಾಲ್ಟೇರ್. 7. ಬಡವನಿಗೆ ಕನಸುಗಳೇ ಗತಿ.---ಯೇಟ್ಸ. 8. ಬಡವರಾಗಿದ್ದಲ್ಲಿ ಶ್ರೀಮಂತರಂತೆ ನಟಿಸಿ-----ಜನ್ನಿಗೇಜರ್ 9. ಪ್ರೇಮ ಕುರುಡು-----ಜಾಫ್ರಿ ಚಾನ್ಸರ್. 10. ಬಡತನವೇ ಅಪರಾಧದ ತಾಯಿ.---ಬ್ರೂಯಿಸ್. 11. ಬಡವರು ಧನ್ಯರು, ಏಕೆಂದರೆ ಸ್ವರ್ಗವೇ ಅವರದು----ಏಸುಕ್ರಿಸ್ತ. 12. ಪ್ರೇಮವು ಪಾಪಿಯನ್ನು ಸುಧಾರಿಸುತ್ತದೆ-----ಟಾಲ್ ಸ್ಟಾಯ್. 13. ಪ್ರೇಮ ಐಶ್ವರ್ಯದೊಂದಿಗೆ ಸಾಯುತ್ತದೆ. ----ಹಾರ್ವೆ. 14. ದಯವೇ ಧರ್ಮದ ಮೂಲ----- ಬಸವಣ್ಣ. 15. ಮಾನವ ಜನಾಂಗವನ್ನು ಬಂಧುಗಳೆಂದು ನೋಡಬೇಕು. ----ಕುರಾನ್ 16. ಹಸಿದವರಿಗೆ ನಮ್ಮಿಂದ ಊಟ ಹಾಕಲು ಆಗದಿದ್ದಾಗ, ಊಟ ಹಾಕುವವರ ಮನೆಯನ್ನಾದರೂ ತೋರಿಸಬೇಕು.............................ಗಳಗನಾಥ

Simple beauty tips in Kannada. ಸರಳ ಮತ್ತು ಸುಲಭ ಸೌಂದರ್ಯ ಸಲಹೆಗಳು. ತುಳಸಿ ಎಲೆಗಳ ಮಹತ್ವ

• ಒಂದೆರಡು ಹನಿ‌ ತುಳಸಿ ರಸವನ್ನು ಕಿವಿಯೊಳಗೆ ಬಿಟ್ಟರೆ ಕಿವಿನೋವು ಕಡಿಮೆಯಾಗುತ್ತದೆ. • ತುಳಸಿ ಮೊಡವೆಗಳನ್ನು ನಿವಾರಣೆ ಮಾಡುತ್ತದೆ. ತುಳಸಿ ರಸಕ್ಕೆ ಚಿಟಕಿಯಷ್ಷು ಅರಿಶಿನ ಹಾಕಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಸ್ವಲ್ಪ ಸಮಯ ಬಿಟ್ಟು ನೀರಿನಿಂದ ತೊಳೆಯಬೇಕು. • ಸ್ವಲ್ಪ ತುಳಸಿ ಎಲೆಗಳನ್ನು ತೆಗೆದುಕೊಂಡು ಅದನ್ನು ದಪ್ಪಗಿನ ಪೇಸ್ಟ್ ಮಾಡಿ ಅದಕ್ಕೆ ಒಂದು ಚಮಚ ಜೇನು ತುಪ್ಪ ,ಒಂದು ಚಮಚ ನಿಂಬೆ ರಸ ಹಾಕಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಸ್ವಲ್ಪ ಸಮಯ ಬಿಟ್ಟು ನೀರಿನಿಂದ ತೊಳೆಯಬೇಕು. • ತುಳಸಿ ಎಲೆಗಳನ್ನು ಪೇಸ್ಟ್ ಮಾಡಿ ಅರ್ಧ ಕಪ್ ಮೊಸರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಸ್ವಲ್ಪ ಸಮಯ ಬಿಟ್ಟು ನೀರಿನಿಂದ ತೊಳೆಯಬೇಕು. ಇದರಿಂದ ತ್ವಚೆ ಸ್ವಚ್ಛಗೊಳ್ಳುವುದರ ಜೊತೆಗೆ ಮುಖದ ಕಾಂತಿ ಹೆಚ್ಚುತ್ತದೆ. • ಕಡಲೆ ಹಿಟ್ಟು, ರೋಸ್ ವಾಟರ್ , ತುಳಸಿ ಎಲೆಗಳನ್ನು ಪೇಸ್ಟ್ ಮಾಡಿ ಮುಖ, ಕುತ್ತಿಗೆ, ಕೈಗೆ ಹಚ್ಚಿ ಅರ್ಧ ಗಂಟೆ ನಂತರ ತಣ್ಣೀರಿನಿಂದ ತೊಳೆಯಬೇಕು .ಇದರಿಂದ ಚರ್ಮದ ಸಮಸ್ಯೆಗಳು ನಿವಾರಣೆ ಆಗುವುದು. ಮತ್ತು ಚರ್ಮ ನಯವಾಗುತ್ತದೆ.

ಕನ್ನಡ ಹನಿಗವನಗಳು ...ಹೆಣ್ಣನ್ನು ಕುರಿತ ಕನ್ನಡ ಕವನಗಳು

ಹೆಣ್ಣು ನಾನು ಶತಮಾನಗಳುರುಳಿದರೂ, ಶಪಥಗಳ ಮಾಡಿದರೂ , ಬದಲಾಗಲಿಲ್ಲ  ನಾನು. ಶತಶತಮಾನಗಳಿಂದ , ಶಪಥಗೈಯುತ್ತಲಿರುವ ನೀ , ಬದಲಾಗಬಾರದೆಂದು ನಾನು . ಏಕೆಂದರೆ ಹೆಣ್ಣು ನಾನು .                                 ಪೂರ್ಣಿಮಾ ವೇದವ್ಯಾಸ್                                  24/11/2017

Compulsory Kannada grammar notes for kas mains exam conducted by the kpsc in kannada medium

ಕನ್ನಡ ಶಬ್ದಕೋಶದಲ್ಲಿ ಸಂಸ್ಕೃತ ಭಾಷೆಯಿಂದ ಬಂದು ಸೇರಿಕೊಂಡಿರುವ ಸಾವಿರಾರು ಶಬ್ದಗಳಿವೆ.ಅವುಗಳನ್ನು ಈ ಕೆಳಕಂಡ ಮೂರು ವರ್ಗಗಳಲ್ಲಿ ವಿಂಗಡಿಸಲಾಗಿದೆ. 1)ತತ್ಸಮ 2)ತದ್ಬವ 3) ಸಮಸಂಸ್ಕೃತ. ತತ್ಸಮ (ತತ್+ಸಮ) _________________  ಯಾವುದೇ ವಿಕಾರವನ್ನು ತಾಳದೆ ಸಂಸ್ಕೃತ ಭಾಷೆಯಲ್ಲಿ ಹೇಗಿತ್ತೋ ಹಗೆಯೇ ಕನ್ನಡ ಕೋಶಕ್ಕೆ ಬಂದು ಸೇರಿಕೊಂಡರೆ ಅದನ್ನು ತತ್ಸಮ ಎಂದು ಕರೆಯಲಾಗುತ್ತದೆ. ಉದಾಹರಣೆಗೆ :ಸೂರ್ಯ, ಚಂದ್ರ, ನಕ್ಷತ್ರ, ಆಕಾಶ ಇತ್ಯಾದಿ. ತದ್ಬವ (ತತ್+ಭವ) ---------------------- ಸಾಕಷ್ಟು ವಿಕಾರಗೊಂಡು ಕನ್ನಡ ಕೋಶವನ್ನು ಸೇರಿಕೊಂಡಿರುವ ಶಬ್ದಗಳಿಗೆ ತದ್ಬವ ಎಂದು ಹೆಸರು. ಉದಾಹರಣೆಗೆ :ತ್ರಿಶೂಲಿ>ತಿಸೂಲಿ.                        ಪ್ರಗ್ರಹ > ಹಗ್ಗ                        ಸ್ನುಷಾ > ಸೊಸೆ                        ಆಕಾಶ >ಆಗಸ ಸಂಸ್ಕೃತ - - - - - - - ಕನ್ನಡ ------ಆ-------------------ಎ------- ■ಮಾಲಾ > ಮಾಲೆ ■ಬಾಲಾ  > ಬಾಲೆ ■ ಕ್ರೀಡಾ > ಕ್ರೀಡೆ ■ ಶಾಲಾ  > ಶಾಲೆ   ಊ - - - - - - - - - -...

Model question paper for exam conducted by lea pf pu college lecturer

1ಪುರಸ್ಕೃತ ಹಾ.ಮಾ.ನಾ ಅವರ ಕೃತಿ ----ಸಂಪ್ರತಿ. .ಅಂಕಣ ಬರಹ. 2)The Speaking of shiva ರಚಿಸಿದವರು -----ಎ .ಕೆ. ರಾಮಾನುಜನ್.)1989  ರಲ್ಲಿ  ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 3)"ಬಿಸಿಲ ಹೂ " ಕವನ ಸಂಕಲನ ----ಸೋಮಶೇಖರ ಇಮ್ರಾಪುರ. 4)"ಭುಜಂಗಯ್ಯನ  ದಶಾವತಾರಗಳು" ಕಾದಂಬರಿ ----ಇದನ್ನು ರಚಿಸಿದವರು ----ಶ್ರೀ ಕೃಷ್ಣ ಆಲನಹಳ್ಳಿ. 5)"ಕಾವ್ಯ ಬಂತು ಬೀದಿಗೆ "--ಕವನ ಸಂಕಲನ ---ರಚನೆ ---ರಂಜಾನ್ ದರ್ಗಾ. 6)2012 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ----ಹೆಚ್.ಎಸ್. ಶಿವಪ್ರಕಾಶ್ ---ಕೃತಿ -ಮಬ್ಬಿನ ಹಾಗೆ ಕಣಿವೆಯಾಸಿ. 7)ನಾಡೋಜ ಪ್ರಶಸ್ತಿ ಪ್ರದಾನ ಮಾಡುವ ವಿಶ್ವ ವಿದ್ಯಾಲಯ --ಹಂಪಿ ಕನ್ನಡ ವಿವಿ. 8) ಜಾನಕಿ ಶ್ರೀನಿವಾಸ ಮೂರ್ತಿ ಇವರ ಕಾವ್ಯ ನಾಮ ----ವೈದೇಹಿ. 9) ಕ್ರಿ.ಶ.4 ನೇ ಶತಮಾನದ ತಮಿಳು ಕೃತಿ ಶಿಲಪ್ಪದಿಗಾರಂ ನಲ್ಲಿ ಬಳಕೆಯಾದ ಕನ್ನಡ ಪದ ----ಕರುನಾಡರ್. 10) ಕ್ರಿ.ಪೂ.3ನೇ ಶತಮಾನದ ಅಶೋಕನ ಪ್ರಾಕೃತ ಶಾಸನವೊಂದರಲ್ಲಿ ಕಂಡುಬರುವ ಕನ್ನಡ ಪದ----ಇಸಿಲ.

simple beauty tips ಸರಳ ಸೌಂದರ್ಯ ಸಲಹೆಗಳು

ಸೌತೆಕಾಯಿ ತುರಿದಿಡಿ.ಅದಕ್ಕೆ ಗುಲಾಬಿ ಜಲ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ಅನ್ನು ಕಪ್ಪು ಕಲೆಗಳ ಮೇಲೆ ಹಚ್ಚುವುದರಿಂದ ಆ ಭಾಗ ತಿಳಿಯಾಗುತ್ತದೆ.ಜೊತೆಗೆ ಸುಸ್ತಾದ ಕಕಣ್ಣುಗಳಿಗೆ ಉತ್ತಮ ವಿಶ್ರಾಂತಿಯು ದೊರೆಯುತ್ತದೆ. ತುರಿದ ಶುಂಠಿಗೆ ಜೇನುತುಪ್ಪ ಮತ್ತು ಗುಲಾಬಿ ಜಲ ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ. ಈ ಪೇಸ್ಟ್ ಅನ್ನು ಪ್ರತಿದಿನ ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿನ ಕಲೆ ಹಾಗು ಸುಕ್ಕುಗಳು ಕಡಿಮೆಯಾಗುತ್ತವೆ. ■2 ಚಮಚ  ಜೇನುತುಪ್ಪ , 1 ಚಮಚ ನಿಂಬೆರಸ ಸ್ವಲ್ಪ ಗುಲಾಬಿ ಜಲ ಸೇರಿಸಿ ಪೇಸ್ಟ್ ಮಾಡಿಡಿ. ಪ್ರತಿದಿನ ಬೆಳಿಗ್ಗೆ ಅದನ್ನು ಮುಖಕ್ಕೆ ಹಚ್ಚಿ ಅದು ಒಣಗಿದ ನಂತರ ತಣ್ಣನೆಯ ನೀರಿನಿಂದ ತೊಳೆಯಿರಿ. ಕೆಲವು ದಿನಗಳ ನಂತರ ನಿಂಬೆರಸಕ್ಕೆ ಬದಲಾಗಿ ಮೊಸರನ್ನ ಬಳಸಿ  ಪೇಸ್ಟ್ ಮಾಡಿಕೊಂಡು ಹಚ್ಚಿಕೊಳ್ಳಿ. 15-20  ನಿಮಿಷಗಳ ನಂತರ ಮುಖ ತೊಳೆಯಿರಿ. ಇದು ಡ್ರೈ ಸ್ಕಿನ್ ಇರುವವರಿಗೆ ಅತ್ಯುತ್ತಮ ಫೇಸ್ ಫ್ಯಾಕ್ ಆಗಿ ಕೆಲಸ ಮಾಡುತ್ತದೆ. ಸೌತೆಕಾಯಿಯ ಸಿಪ್ಪೆ ತೆಗೆದು ಹೋಳು ಮಾಡಿ ತುರಿದುಕೊಳ್ಳಿ.ಅದಕ್ಕೆ ಕ್ಯಾರೆಟ್ ತುರಿ ಸೇರಿಸಿ ಮತ್ತು ಸ್ವಲ್ಪ ನಿಂಬೆರಸ ಸೇರಿಸಿ ಮುಖದಲ್ಲಿ ಕಪ್ಪುಕಲೆಗಳಿರುವ ಕಡೆ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಹಚ್ಚಿ..ರಾತ್ರಿ ಸಮಯದಲ್ಲಿ ತಪ್ಪದೇ ಈ ಮಿಶ್ರಣವನ್ನು  ಮುಖಕ್ಕೆ ಹಚ್ಚಿಕೊಂಡು ಮಲಗಿ ಬೆಳಿಗ್ಗೆ ತಣ್ಣನೆಯ ನೀರಿನಿಂದ ಮುಖ ತೊಳೆದರೆ ಮುಖ...

ಸುಂದರ ಕೂದಲಿಗೆ ಸಲಹೆಗಳು.tips for beautiful hair

ಸುಂದರ ಕೂದಲನ್ನು ಹೊಂದುವುದು ಪ್ರತಿಯೊಂದು ಹೆಣ್ಣಿನ ಬಯಕೆ...ಆದರೆ ಇಂದಿನ ಒತ್ತಡದ ಜೀವನದಲ್ಲಿ ಕೂದಲಿನ ಕಾಳಜಿಯೂ ಸಹ ತುಂಬಾ ಕಷ್ಟದ ಕೆಲಸವಾಗಿದೆ..ಮನೆಯಲ್ಲಿ ದೊರೆಯುವ ಹಲವಾರು ಸರಳ ಸಾಮಗ್ರಿಗಳನ್ನು ಬಳಸಿ ಪ್ರತಿಯೊಬ್ಬರೂ ಸುಂದರವಾದ ಹಾಗೂ ಆರೋಗ್ಯಕರವಾದ ಕೂದಲನ್ನು ಪಡೆಯಬಹುದು...ಅದಕ್ಕೆ ಇಲ್ಲಿವೆ ಕೆಲವು ಸರಳ ಮನೆಮದ್ದುಗಳು. ●ಧೂಳು , ಬಿಸಿಲಿನಿಂದಾಗಿ ಕೂದಲು ಒರಟಾಗುವ ಜೊತೆಗೆ ಉದುರಲೂ ಪ್ರಾರಂಭವಾಗುತ್ತದೆ.ನೈಸರ್ಗಿಕವಾಗಿ ಸಿಗುವ ವಸ್ತುಗಳನ್ನು ಬಳಸಿ ಕೂದಲಿನ ಅಂದವನ್ನು ಹೆಚ್ಚಿಸಬಹುದು. ♡ ಮೊಸರು , ನಿಂಬೆಹಣ್ಣು , ಮೊಟ್ಟೆಯ ಬಿಳಿ ಭಾಗವನ್ನು ಚೆನ್ನಾಗಿ ಕಲಸಿ ಆ ಮಿಶ್ರಣವನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ನುಣುಪಾಗುತ್ತದೆ. ♤ಕಾಯಿಯ ಹಾಲಿಗೆ ನೆನೆಸಿದ ಮೆಂತ್ಯವನ್ನು ಮಿಶ್ರಣ ಮಾಡಿ ರುಬ್ಬಿ ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವುದನ್ನು ತಡೆಯಬಹುದು. ♤ದಾಸವಾಳದ ಸೊಪ್ಪು ,ಅಲೊವೆರಾ ಮತ್ತು ಮದರಂಗಿ ಸೊಪ್ಪುನ್ನು ರುಬ್ಬಿ ತಿಂಗಳಿಗೊಮ್ಮೆ ಕೂದಲಿಗೆ ಹಚ್ಚುವುದರಿಂದ ಸುಂದರ ಕೂದಲನ್ನು ಪಡೆಯಬಹುದು.

fruits face pack for beautiful skin ಸುಂದರ ತ್ವಚೆಗೆ ಹಣ್ಣಿನ ಫೇಸ್ ಫ್ಯಾಕ್

ಹಣ್ಣುಗಳು ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ ಅಷ್ಟೇ ಪ್ರಾಮುಖ್ಯತೆ ಅವುಗಳಿಗೆ ಸೌಂದರ್ಯವರ್ಧಕ ಗುಣಗಳಿಗೂ ಇದೆ.ಪ್ರತಿ ಮನೆಗಳಲ್ಲಿ ಸುಲಭವಾಗಿ ದೊರೆಯುವ ತಾಜಾ ಹಣ್ಣುಗಳನ್ನು ಬಳಸಿ ಮನೆಯಲ್ಲಿಯೇ ತ್ವಚೆಯ ಸೌಂದರ್ಯವನ್ನು ಅತೀ ಕಡಿಮೆ ಖರ್ಚಿನಲ್ಲಿ ಅಥವಾ ಖರ್ಚಿಲ್ಲದೆಯೇ ಪಡೆಯಬಹುದು. ಅವುಗಳ ಒಂದು ಸಣ್ಣ ಪರಿಚಯ ಈ ಲೇಖನದಲ್ಲಿ ನೀಡುವುದು ನಮ್ಮ ಉದ್ದೇಶ. ಕಿವಿ ಹಣ್ಣು ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ. ಇದು ಮುಖದ ಕಾಂತಿಯನ್ನು ಹೆಚ್ಚಿಸಲು ಸಹಕಾರಿ.ಮೊಟ್ಟೆಯ ಬಿಳಿ ಭಾಗವನ್ನು ಕಿವಿ ಹಣ್ಣಿನೊಂದಿಗೆ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಕಪ್ಪು ಕಲೆಗಳು ಕಡಿಮೆಯಾಗುತ್ತವೆ. ಬಾಳೆಹಣ್ಣು ●●●●●●●● ಬಾಳೆಹಣ್ಣಿನಲ್ಲಿ ವಿಟಮಿನ್ ಎ ಹೇರಳವಾಗಿರುತ್ತದೆ.ಬಾಳೆಹಣ್ಣಿನ್ನು ಜೇನುತುಪ್ಪದೊಂದಿಗೆ ಕಲಸಿ ಮುಖಕ್ಕೆ ಹಚ್ಚಿ ಇಪ್ಪತ್ತು ನಿಮಿಷದ ನಂತರ ತಣ್ಣೀರಿನಿಂದ ಮುಖ ತೊಳೆಯುವುದರಿಂದ ತ್ವಚೆ ಮೃದುವಾಗುತ್ತದೆ. ●●●●●●●● ಬಾಳೆಹಣ್ಣಿನ ಜೊತೆಗೆ ಬೆಣ್ಣೆ ಹಣ್ಣನ್ನು  ರುಬ್ಬಿಕೊಳ್ಳಿ.ರುಬ್ಬಿದ ಮಿಶ್ರಣವನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ.ಅದು ಒಣಗಿದ ನಂತರ ತಣ್ಣನೆಯ ನೀರಿನಿಂದ ತೊಳೆದುಕೊಳ್ಳಿ. ವಾರಕ್ಕೆ ಎರಡು ಬಾರಿ ಈ ರೀತಿ ಮಾಡುವುದರಿಂದ ಚರ್ಮದ ಹೊಳಪು ಹೆಚ್ಚುತ್ತದೆ. ಪಪ್ಪಾಯಿ ಹಣ್ಣು ●●●●●●●●●●●●●●●●● ಪಪ್ಪಾಯಿ ಹಣ್ಣು ಮತ್ತು...

fruits face pack for beautiful skin ಸುಂದರ ತ್ವಚೆಗೆ ಹಣ್ಣಿನ ಫೇಸ್ ಫ್ಯಾಕ್

ಹಣ್ಣುಗಳು ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ ಅಷ್ಟೇ ಪ್ರಾಮುಖ್ಯತೆ ಅವುಗಳಿಗೆ ಸೌಂದರ್ಯವರ್ಧಕ ಗುಣಗಳಿಗೂ ಇದೆ.ಪ್ರತಿ ಮನೆಗಳಲ್ಲಿ ಸುಲಭವಾಗಿ ದೊರೆಯುವ ತಾಜಾ ಹಣ್ಣುಗಳನ್ನು ಬಳಸಿ ಮನೆಯಲ್ಲಿಯೇ ತ್ವಚೆಯ ಸೌಂದರ್ಯವನ್ನು ಅತೀ ಕಡಿಮೆ ಖರ್ಚಿನಲ್ಲಿ ಅಥವಾ ಖರ್ಚಿಲ್ಲದೆಯೇ ಪಡೆಯಬಹುದು. ಅವುಗಳ ಒಂದು ಸಣ್ಣ ಪರಿಚಯ ಈ ಲೇಖನದಲ್ಲಿ ನೀಡುವುದು ನಮ್ಮ ಉದ್ದೇಶ. ಕಿವಿ ಹಣ್ಣು ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ. ಇದು ಮುಖದ ಕಾಂತಿಯನ್ನು ಹೆಚ್ಚಿಸಲು ಸಹಕಾರಿ.ಮೊಟ್ಟೆಯ ಬಿಳಿ ಭಾಗವನ್ನು ಕಿವಿ ಹಣ್ಣಿನೊಂದಿಗೆ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಕಪ್ಪು ಕಲೆಗಳು ಕಡಿಮೆಯಾಗುತ್ತವೆ. ಬಾಳೆಹಣ್ಣು ●●●●●●●● ಬಾಳೆಹಣ್ಣಿನಲ್ಲಿ ವಿಟಮಿನ್ ಎ ಹೇರಳವಾಗಿರುತ್ತದೆ.ಬಾಳೆಹಣ್ಣಿನ್ನು ಜೇನುತುಪ್ಪದೊಂದಿಗೆ ಕಲಸಿ ಮುಖಕ್ಕೆ ಹಚ್ಚಿ ಇಪ್ಪತ್ತು ನಿಮಿಷದ ನಂತರ ತಣ್ಣೀರಿನಿಂದ ಮುಖ ತೊಳೆಯುವುದರಿಂದ ತ್ವಚೆ ಮೃದುವಾಗುತ್ತದೆ. ●●●●●●●● ಬಾಳೆಹಣ್ಣಿನ ಜೊತೆಗೆ ಬೆಣ್ಣೆ ಹಣ್ಣನ್ನು  ರುಬ್ಬಿಕೊಳ್ಳಿ.ರುಬ್ಬಿದ ಮಿಶ್ರಣವನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ.ಅದು ಒಣಗಿದ ನಂತರ ತಣ್ಣನೆಯ ನೀರಿನಿಂದ ತೊಳೆದುಕೊಳ್ಳಿ. ವಾರಕ್ಕೆ ಎರಡು ಬಾರಿ ಈ ರೀತಿ ಮಾಡುವುದರಿಂದ ಚರ್ಮದ ಹೊಳಪು ಹೆಚ್ಚುತ್ತದೆ. ಪಪ್ಪಾಯಿ ಹಣ್ಣು ●●●●●●●●●●●●●●●●● ಪಪ್ಪಾಯಿ ಹಣ್ಣು ಮತ್ತು...

simple face pack for beautiful skin ಸುಂದರ ಮುಖಕ್ಕೆ ಸರಳ ಪೇಸ್ ಫ್ಯಾಕ್

ಧೂಳು ಮತ್ತು ಬಿಸಿಲಿನಿಂದ ಮುಖದ ಸೌಂದರ್ಯ ಮಾಸುತ್ತಾ ಹೋಗುತ್ತದೆ..ಇದನ್ನು ನಿರ್ಲಕ್ಷ್ಯ ಮಾಡಿದರೆ ತ್ವಚೆಗೆ ಹಾನಿಕರ.ಮುಖದ ಕಾಂತಿಯನ್ನು ಮರಳಿ ಪಡೆಯಲು ಮನೆಯಲ್ಲಿ ಸುಲಭವಾಗಿ ದೊರೆಯುವ ಕೆಲವು ಸಾಮಗ್ರಿಗಳಿಂದ ಸಾಧ್ಯ. ಇದಕ್ಕೆ ಸೂಕ್ತವಾದ ಸರಳ ಸಲಹೆ ಇದು.ಇದನ್ನು ಒಂದು ವಾರ ಅನುಸರಿಸಿದರೆ ನಿಮ್ಮ ಮುಖದ ಸೌಂದರ್ಯ ಚಮತ್ಕಾರದ ರೀತಿಯಲ್ಲಿ ಬದಲಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು ■  ಒಂದು ಕಳಿತ ಬಾಳೆಹಣ್ಣು ■ ಒಂದು ಚಮಚ ಜೇನುತುಪ್ಪ ■ ಒಂದು ಚಮಚ ನಿಂಬೆಹಣ್ಣಿನರಸ. ವಿಧಾನ ♤♤♤♤♤♤♤♤ ಮೂರೂ ಸಾಮಗ್ರಿಗಳನ್ನು ಚೆನ್ನಾಗಿ ಕಲಸಿ ಪೇಸ್ಟ್ ತಯಾರಿಸಿಕೊಳ್ಳಿ. ಅದನ್ನು ಮುಖಕ್ಕೆ ಹಚ್ಚಿ ಐದು ನಿಮಿಷ ಲಘುವಾಗಿ ಮಸಾಜ್ ಮಾಡಿ. ನಂತರ ಉಳಿದ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಅದು ಚೆನ್ನಾಗಿ ಒಣಗಲು ಬಿಡಿ. ನಂತರ ತಣ್ಣನೆಯ ನೀರಿನಿಂದ ಮುಖ ತೊಳೆಯಿರಿ.ಯಾವುದೇ ಸೋಪ್ ಅಥವಾ ಕ್ರೀಮ್ ಬಳಸಬೇಡಿ. ಪ್ರತಿದಿನ ಈ ರೀತಿ ಮಾಡಿದರೆ ಒಂದೇ ವಾರದಲ್ಲಿ ಮುಖದ ಕಪ್ಪು ಕಲೆ ಕಡಿಮೆಯಾಗಿ ಆರೋಗ್ಯಕರ ಹಾಗೂ ಕಾಂತಿಯುತ ತ್ವಚೆ ಪಡೆಯಬಹುದು.

carrot face pack ಕ್ಯಾರೆಟ್ ಪೇಸ್ ಫ್ಯಾಕ್

ಪ್ರತಿಯೊಂದು ಮನೆಯಲ್ಲಿಯೂ ಸುಲಭವಾಗಿ ದೊರೆಯುವ ಕೆಲವು ವಸ್ತುಗಳನ್ನು ಬಳಸಿ ಮಹಿಳೆ ತನ್ನ ಸೌಂದರ್ಯವನ್ನು ಹೆಚ್ಚು ಮಾಡಿಕೊಳ್ಳಬಹುದು. ಅದಕ್ಕೆ ಉತ್ತಮ ಉದಾಹರಣೆ ಈ ಕೆಳಗಿನ ಸರಳ ಹಾಗೂ ಪರಿಣಾಮಕಾರಿ ಪೇಸ್ ಫ್ಯಾಕ್. ಬೇಕಾಗುವ ಸಾಮಗ್ರಿಗಳು ♤ ಕ್ಯಾರೆಟ್ ತುರಿ ಒಂದು ಕಪ್ ♤ ಎರಡು ಚಮಚ ಜೇನುತುಪ್ಪ ■■■■■■■■ ಕ್ಯಾರೆಟ್ ತುರಿ ಮತ್ತು ಜೇನುತುಪ್ಪ ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ. ಅದನ್ನು ಸ್ವಚ್ಛಮಾಡಿದ ಮುಖಕ್ಕೆ ಹಚ್ಚಿ ಲಘುವಾಗಿ ಮಸಾಜ್ ಮಾಡಿ. ಐದು ನಿಮಿಷದ ಮಸಾಜ್ ನಂತರ ಉಳಿದ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಒಣಗಲು ಬಿಡಿ. ನಂತರ ತಣ್ಣನೆಯ ನೀರಿನಿಂದ ಮುಖ ತೊಳೆದು ಅದನ್ನು ಸಹಜವಾಗಿ ಒಣಗಲು ಬಿಡಿ. ■■■■■■■■■ ವಾರಕ್ಕೆ ಎರಡು ಬಾರಿ ಈ ರೀತಿ ಮಾಡಿದರೆ ಮುಖದ ಒಣ ಚರ್ಮ ಹೋಗಿ ಕಪ್ಪು ಕಲೆಗಳು ಕಡಿಮೆಯಾಗಿ ಮುಖ ಕಾಂತಿಯುತವಾಗಿ ನಳನಳಿಸುತ್ತದೆ.

curd face pack ಮೊಸರಿನ ಪೇಸ್ ಫ್ಯಾಕ್

ಅಡುಗೆ ಮನೆಯಲ್ಲಿ ದೊರೆಯುವ ಕೆಲವು ವಸ್ತುಗಳು ಸೌಂದರ್ಯ ವೃದ್ಧಿಯಲ್ಲಿ ಅತೀ ಪ್ರಮುಖ ಪಾತ್ರ ವಹಿಸುತ್ತವೆ. ಅವುಗಳಲ್ಲಿ ಮೊಸರು ಮತ್ತು ಅರಿಶಿನ ಅತಿ ಮುಖ್ಯ ಪಾತ್ರ ವಹಿಸುತ್ತವೆ. ಇವುಗಳಿಂದ ತಯಾರಿಸಿದ ಮಿಶ್ರಣವು ಸೌಂದರ್ಯ ವೃದ್ಧಿ ಹಾಗೂ ತ್ವಚೆಯ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಮೊಸರಿನ ಪೇಸ್ ಫ್ಯಾಕ್ ●●●●●●●●●●●●● ಬೇಕಾಗುವ ಸಾಮಗ್ರಿಗಳು ● ತಾಜಾ ಮೊಸರು 4 ಚಮಚ ● ಕಸ್ತೂರಿ ಅರಿಶಿಣ 1 ಚಮಚ ● ಕಡಲೆ ಹಿಟ್ಟು 2 ಚಮಚ ♤♤♤♤♤♤♤♤♤♡ ತಯಾರಿಸುವ ವಿಧಾನ ಮೊಸರು , ಕಡಲೆ ಹಿಟ್ಟು ಮತ್ತು ಅರಿಶಿನ ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ. ಅದನ್ನು ಸ್ವಚ್ಛಗೊಳಿಸಿದ ಮುಖ ಹಾಗೂ ಕುತ್ತಿಗೆಗೆ ಹಚ್ಚಿ ಲಘುವಾಗಿ ಮಸಾಜ್ ಮಾಡಿ. ನಂತರ ಉಳಿದ ಪೇಸ್ಟ್ ಅನ್ನು ಒಂದು ಪದರ ಮುಖಕ್ಕೆ ಹಚ್ಚಿ. ಅದು ಒಣಗಿದ ನಂತರ ತಣ್ಣನೆಯ ನೀರಿನಿಂದ ಮುಖ ತೂಳೆಯಿರಿ. ಇದು ಒಣ ತ್ವಚೆಗೆ ಬಹಳ ಉಪಯುಕ್ತವಾಗಿದ್ದು ಮುಖದ ಕಲೆಗಳು ಕಡಿಮೆಯಾಗುತ್ತವೆ. ಜೊತೆಗೆ ಗೌರವರ್ಣ ಮೂಡುತ್ತದೆ.

babana face pack ಬಾಳೆ ಹಣ್ಣಿನ ಪೇಸ್ ಫ್ಯಾಕ್

ಬಾಳೆ ಹಣ್ಣಿನ ಪೇಸ್ ಫ್ಯಾಕ್ ಗೆ ಬೇಕಾದ ಸಾಮಗ್ರಿಗಳು ● ಒಂದು ಕಳಿತ ಬಾಳೆಹಣ್ಣು ● ಒಂದು ಚಮಚ ಜೇನುತುಪ್ಪ ● ಒಂದು ಚಮಚ ನಿಂಬೆಹಣ್ಣಿನರಸ ತಯಾರಿಕೆ ವಿಧಾನ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ಚೆನ್ನಾಗಿ ಕಲೆಸಿ ಪೇಸ್ಟ್ ತಯಾರಿಸಿಕೊಳ್ಳಿ. ಅದನ್ನು ಸ್ವಚ್ಛಗೊಳಿಸಿದ ಮುಖಕ್ಕೆ ಹಚ್ಚಿ ಮಸಾಜ್ ಮಾಡಿ. ಉಳಿದ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಅದು ಒಣಗಿದ ನಂತರ ತಣ್ಣನೆಯ ನೀರಿನಿಂದ ಮುಖ ತೊಳೆದು ಒಣಗಲು ಬಿಡಿ.

beauty tips in kannada

● ಕಸ್ತೂರಿ ಅರಿಶಿನ ಬಹು ಉಪಯುಕ್ತ ಸೌಂದರ್ಯ ವರ್ಧಕ ವಸ್ತುವಾಗಿದೆ.ಬಹಳ ಸುಲಭವಾಗಿ ಇದರಿಂದ ಗರಿಷ್ಠ ಮಟ್ಟದ ಉಪಯೋಗ ಪಡೆಯಬಹುದು.ಅವುಗಳೆಂದರೆ °ಕಸ್ತೂರಿ ಅರಿಶಿನವನ್ನು ಕಡಲೆ ಹಿಟ್ಟು ಹಾಗೂ ಹಸಿ ಹಾಲಿನೊಂದಿಗೆ ಕಲೆಸಿ ಸೋಪಿನ ಬದಲು ಸ್ನಾನಕ್ಕೆ ಬಳಸುವುದರಿಂದ ಚರ್ಮದ ಮೇಲಿನ ಒಣ ಕೋಶಗಳು ಹೋಗುವುದರೊಂದಿಗೆ ತ್ವಚೆ ಕಾಂತಿಯುತವಾಗುತ್ತದೆ.ಗೌರವರ್ಣ ಪಡೆಯಬಹುದು.  ♤♤♤♤ಸೌತೆಕಾಯಿ♤♤♤♤ ● ಪ್ರತಿಯೊಂದು ಊಟದ ಜೊತೆಗೆ ಹಸಿ ತರಕಾರಿಯಾಗಿ ಉಪಯೋಗಿಸುವ ಸೌತೆಕಾಯಿ ಅದರ ಸೌಂದರ್ಯ ವರ್ಧಕ ಗುಣಗಳಿಗೂ ಪ್ರಸಿದ್ಧ. ಸೌತೆಕಾಯಿ ರಸವನ್ನು ನಿಂಬೆಯ ರಸದೊಂದಿಗೆ ಮಿಶ್ರಣ ಮಾಡಿ ಹಚ್ಚುವುದರಿಂದ ಮುಖದ ಮೇಲಿನ ಕಪ್ಪು ಕಲೆಗಳು ಕಡಿಮೆಯಾಗುತ್ತವೆ ಹಾಗೂ ಬಿಸಿಲಿನಿಂದಾಗಿ ಕಪ್ಪಾದ ಚರ್ಮದ ಬಣ್ಣ ತಿಳಿಯಾಗುತ್ತದೆ. •ಕತ್ತರಿಸಿದ ಸೌತೆಕಾಯಿ ಓಳುಗಳನ್ನು ರಾತ್ರಿವೇಳೆ ಕಣ್ಣುಗಳ ಮೇಲೆ ಇಟ್ಟುಕೊಂಡು ವಿಶ್ರಾಂತಿ ಪಡೆಯುವುದರಿಂದ  ಕಣ್ಣಿನ ಸುತ್ತ ಇರುವ ಕಪ್ಪು ವೃತ್ತ ಕಡಿಮೆಯಾಗುತ್ತದೆ. •ಸೌತೆಕಾಯಿ ರಸವನ್ನು ಹತ್ತಿಯಲ್ಲಿ ಅದ್ದಿ ಕಣ್ಣಿನ ಮೇಲೆ ಇಟ್ಟುಕೊಂಡು 20  ನಿಮಿಷದ ನಂತರ ತಣ್ಣನೆಯ ನೀರಿನಿಂದ ತೊಳೆಯುವುದರಿಂದ ಕಣ್ಣಿನ ಸುತ್ತ ಇರುವ ಕಪ್ಪು ವೃತ್ತ ಮಾಯವಾಗಿ ಕಣ್ಣುಗಳು ಆರೋಗ್ಯದಿಂದ ಹೊಳೆಯುತ್ತವೆ. ■■■■■■■■■■ಜೇನುತುಪ್ಪ■■■■■■■■■■■ ಮನೆ ಮನೆಯಲ್ಲೂ ಸುಲಭವಾಗಿ ಸಿಗುವ ಹಾಗೂ ಮಕ್ಕಳಿಂದ ಹಿಡಿದು ವೃದ್ಧರೂ ಕೂ...

model questions paper for kpsc non technical posts in kannada medium

2016 ನೇ ಸಾಲಿನಲ್ಲಿ ರಿಯೋ ಒಲಿಂಪಿಕ್ಸ್ ನಡೆದ ದೇಶ -ಬ್ರೆಜಿಲ್  2016 ನೇ ಸಾಲಿನ ಪುರುಷರ ಕಬಡ್ಡಿ ವಿಶ್ವಕಪ್ ಗೆದ್ದ ದೇಶ - ಭಾರತ. RBI ನ ನೂತನ ಗವರ್ನರ್-ಊರ್ಜಿತ್ ಪಟೇಲ್. ಪರಿಸರ ದಿನಾಚರಣೆ -ಜೂನ್ 05. 2017 ನೇ ಜನವರಿಯಲ್ಲಿ ಅನಿವಾಸಿ ಭಾರತೀಯ ದಿನಾಚರಣೆಯ ಆಚರಣೆಗೆ ಆಯ್ಕೆಯಾದ ನಗರ- ಬೆಂಗಳೂರು. 2016 ನೇ ಸಾಲಿನ ದಸರಾ ಮಹೋತ್ಸವ ಉದ್ಘಾಟಿಸಿದ ಗಣ್ಯರು-ಚನ್ನವೀರಕಣವಿ. 2016 ನೇ ಸಾಲಿನ ಮುಖ್ಯಮಂತ್ರಿ ರತ್ನ ಪ್ರಶಸ್ತಿ ಪಡೆದ ಸಂಸ್ಥೆ-ಮೈಸೂರು ಅರಗು ಮತ್ತು ಬಣ್ಣ ಕಾರ್ಖಾನೆ. ಗ್ರಾಹಕರಿಗೆ ಉತ್ತಮ ಸೇವೆ ನೀಡಲು "ಅನನ್ಯ ಯೋಜನೆ"(project ananya)ಎಂಬ ಯೋಜನೆಯನ್ನು ಆರಂಭಿಸಿದರ ಬ್ಯಾಂಕ್ - ಸಿಂಡಿಕೇಟ್ ಬ್ಯಾಂಕ್. ಅಂತರರಾಷ್ಟ್ರೀಯ ಯುವ ದಿನಾಚರಣೆInternational Youth Day  ಆಗಸ್ಟ್ 12. 2016 ನೇ ಸಾಲಿನ ಧ್ಯೇಯ ವಾಕ್ಯ The Road to 2030:Eradicating poverty and Achieving Sustainable Consumption and Production. ವಿದ್ಯಾರ್ಥಿಗಳು startup ಪ್ರಾರಂಭಿಸಲು ಅನುಕೂಲ ಮಾಡಿಕೊಡುವ SV.COಎಂಬ ಜಗತ್ತಿನ ಪ್ರಥಮ ಡಿಜಿಟಲ್ ಇನ್ ಕ್ಯೂಬೇಟರ್ (Digital Incubator)ಪ್ರಾರಂಭಿಸಿದ ರಾಜ್ಯ- ಕೇರಳ. ಸಾನಿಯಾ ಮಿರ್ಜಾ ಆತ್ಮಕಥೆಯ ಹೆಸರು- "ಏಸ್ ಅಗೇನೆಸ್ಟ್ ಆಡ್ಸ್"(Ace Against Odds). ಕೃಷ್ಣ-ಪುಷ್ಕರ ಮೇಳದ ವಿಶೇಷತೆಯೆಂದರೆ-ಗುರು ಗ್ರಹವು ಕನ್ಯಾ ರಾಶಿಯನ್ನು ಪ್ರವೇಶಿಸುವ ನಿಮಿತ...

kannada medium notes for sub registrar kpsc exam

☆ 2016 ನೇ ಆಗಸ್ಟ್ 8 ಮತ್ತು 9 ರಂದು ಮೈಸೂರಿನಲ್ಲಿ ಭಾರತ ಮತ್ತು ಜಪಾನ್ ನಡುವಿನ  7 ನೇ ಅಂತರರಾಷ್ಟ್ರೀಯ  ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನ ನಡೆಯಿತು. ಈ ಸಮ್ಮೇಳನದ ಕೇಂದ್ರ ವಿಷಯ "ಭವಿಷ್ಯದ ಸವಾಲುಗಳು ಮತ್ತು ಪರಿಹಾರಗಳು " ಎಂಬುದಾಗಿತ್ತು. ☆ಪ್ರವಾಸೋದ್ಯಮ ಅಭಿವೃದ್ಧಿ. ಪ್ರವಾಸೋದ್ಯಮಕ್ಕೆ ಸಮಗ್ರ ಅಭಿವೃದ್ಧಿ ಕಾರ್ಯಕ್ರಮಗಳನ್ನು ತೆಗೆದುಕೊಂಡ ಅತ್ಯುತ್ತಮ ರಾಜ್ಯಗಳಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ ಲಭಿಸಿದೆ. ಮೊದಲ ಸ್ಥಾನ ಪಡೆದ ರಾಜ್ಯ-ಮಧ್ಯಪ್ರದೇಶ ಎರಡನೇ ಸ್ಥಾನ ಪಡೆದ ರಾಜ್ಯ -ಗುಜರಾತ್ ಮೂರನೇ ಸ್ಥಾನ ಪಡೆದ ರಾಜ್ಯ- ಕರ್ನಾಟಕ.... ಇದಕ್ಕೆ ಸಂಬಂಧಿಸಿದಂತೆ ಪ್ರಮುಖ ಅಂಶಗಳೆಂದರೆ... •ಅತ್ಯುತ್ತಮ ಪ್ರವಾಸೋದ್ಯಮ ಸ್ನೇಹಿ ರೈಲು ನಿಲ್ದಾಣ-ರಾಜಸ್ತಾನದ ಸವಾಯ್ ಮಧೋಪುರ ರೈಲು ನಿಲ್ದಾಣ. •ಅತ್ಯುತ್ತಮ ವಿಮಾನ ನಿಲ್ದಾಣ-ಮುಂಬೈನ ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನನಿಲ್ದಾಣ. •ಅತ್ಯುತ್ತಮ ಪಾರಂಪರಿಕ ನಗರ-ತೆಲಂಗಾಣದ ವಾರಂಗಲ್. •ಅತ್ಯುತ್ತಮ ನಿರ್ವಹಣೆ ಸ್ಮಾರಕ- ಮಧ್ಯಪ್ರದೇಶದ ಅಮರ್ ಕಂಟಕ್ ಸ್ಮಾರಕ. •ಅತ್ಯುತ್ತಮ ಹೋಟೆಲ್- ಗೋವಾದ ತಾಜ್ ಎಕ್ಸೋಟಿಕ. ☆ಲೈಫ್ ಲೈನ್ ಎಕ್ಸ್ ಪ್ರೆಸ್ • ಭಾರತೀಯ ರೈಲ್ವೆ ಇಲಾಖೆ ಆರಂಭಿಸಿದ ವಿಶಿಷ್ಟವಾದ ರೈಲು ಇದು. • ವಿಶ್ವದ ಮೊಟ್ಟಮೊದಲ ರೈಲಿನಲ್ಲಿನ ಆಸ್ಪತ್ರೆ ಇದು. ಗ್ರಾಮೀಣ ಪ್ರದೇಶದ ಬಡ ಮತ್ತು ಅಶಕ್ತ ಸಮುದಾಯಕ್ಕೆ ಆರೋಗ್ಯ ಸೇವೆಯನ್ನು ಒದಗಿಸುತ...

ಕನ್ನಡ ಸುಭಾಷಿತಗಳು

ಮುಗುಳ್ನಗೆ ಎನ್ನುವುದು ದಯಾಳುತನದ ಜಾಗತಿಕ ಭಾಷೆ.---ವಿಲಿಯಂ ಆರ್ಥರ್ ವಾರ್ಡ. ಅಳಬೇಡಿ.ನೀವು ಯಾವುದಕ್ಕಾಗಿ ಅಳುತ್ತೀದ್ದೀರೋ ಅದು ಮುಗಿದುಹೋಗಿದೆ.-----ಡಾ.ಸಿಯಸ್. ಮಕ್ಕಳು ನಗುವುದನ್ನು ಅವರ ಹೆತ್ತವರಿಂದ ಕಲಿಯುತ್ತಾರೆ.-----ಸಿನಿಚಿ ಸುಜುಕಿ. ಜನರು ವಿಶ್ವಾಸದ ಕೊರತೆಯಿಂದಾಗಿ ಸವಾಲುಗಳನ್ನು ಎದುರಿಸಲು ಹೆದರುತ್ತಾರೆ.ನನಗೆ ನನ್ನ ಮೇಲೆ ಪೂರ್ಣ ವಿಶ್ವಾಸವಿದೆ.------'ಮಹಮ್ಮದ್ ಅಲಿ. ಪ್ರಯತ್ನಿಸುವವನಿಗೆ ಯಾವುದೂ ಅಸಾಧ್ಯವಲ್ಲ ----ಅಲೆಗ್ಸಾಂಡರ್ ದಿ ಗ್ರೇಟ್. ಯಾವುದೇ ಕೆಲಸ ಅದು ಮುಗಿಸುವವರೆಗೆ ಅಸಾಧ್ಯವೆಂದೇ ತೋರುತ್ತದೆ.-------ನೆಲ್ಸನ್ ಮಂಡೇಲಾ. ತಪ್ಪುಗಳನ್ನು ಹುಡುಕಬೇಡಿ, ಪರಿಹಾರಗಳನ್ನು ಹುಡುಕಿ.-----ಹೆನ್ರಿ ಫೋರ್ಡ್. ನಾವು ನಮ್ಮ ಮನೆಗಳನ್ನು ರೂಪಿಸುತ್ತೇವೆ. ಬಳಿಕ ಅವು ನಮ್ಮನ್ನು ರೂಪಿಸುತ್ತವೆ.-------ವಿನ್ ಸ್ಟನ್ ಚರ್ಚಿಲ್. ಅಪಾಯವನ್ನು ಎದುರಿಸುವಾಗ ನಾಯಕನಾದವನು ಗುಂಪನ್ನು ಎದುರಿನಿಂದ ಮುನ್ನಡೆಸಬೇಕು.ಸಂಭ್ರಮ ಆಚರಣೆಯ  ವೇಳೆಗೆ ಗುಂಪಿನ ಹಿಂದಿರಬೇಕು.-----ನೆಲ್ಸನ್ ಮಂಡೇಲಾ. ಅಪಾಯದಿಂದ ರಕ್ಷಣೆಗೆ ಪ್ರಾರ್ಥಿಸಿ.ಆದರೆ ಅಪಾಯಗಳನ್ನು ಎದುರಿಸುವಾಗ ಧೈರ್ಯದಿಂದಿರಿ.-----ರವೀಂದ್ರನಾಥಟ್ಯಾಗೋರ್. ಧೈರ್ಯ ಎಂದರೆ ಭಯವೇ ಇಲ್ಲದಿರುವುದಲ್ಲ.ಭಯದ ಮೇಲಿನ ನಿಯಂತ್ರಣ ಮತ್ತು ಭಯವನ್ನು ಎದುರಿಸುವುದೇ ಧೈರ್ಯ.------ಮಾರ್ಕ್ ಟೈನ್.

Key points /model questions for assistant professor exam in kea karnataka

1ಪುರಸ್ಕೃತ ಹಾ.ಮಾ.ನಾ ಅವರ ಕೃತಿ ----ಸಂಪ್ರತಿ. .ಅಂಕಣ ಬರಹ. 2)The Speaking of shiva ರಚಿಸಿದವರು -----ಎ .ಕೆ. ರಾಮಾನುಜನ್.)1989  ರಲ್ಲಿ  ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 3)"ಬಿಸಿಲ ಹೂ " ಕವನ ಸಂಕಲನ ----ಸೋಮಶೇಖರ ಇಮ್ರಾಪುರ. 4)"ಭುಜಂಗಯ್ಯನ  ದಶಾವತಾರಗಳು" ಕಾದಂಬರಿ ----ಇದನ್ನು ರಚಿಸಿದವರು ----ಶ್ರೀ ಕೃಷ್ಣ ಆಲನಹಳ್ಳಿ. 5)"ಕಾವ್ಯ ಬಂತು ಬೀದಿಗೆ "--ಕವನ ಸಂಕಲನ ---ರಚನೆ ---ರಂಜಾನ್ ದರ್ಗಾ. 6)2012 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ----ಹೆಚ್.ಎಸ್. ಶಿವಪ್ರಕಾಶ್ ---ಕೃತಿ -ಮಬ್ಬಿನ ಹಾಗೆ ಕಣಿವೆಯಾಸಿ. 7)ನಾಡೋಜ ಪ್ರಶಸ್ತಿ ಪ್ರದಾನ ಮಾಡುವ ವಿಶ್ವ ವಿದ್ಯಾಲಯ --ಹಂಪಿ ಕನ್ನಡ ವಿವಿ. 8) ಜಾನಕಿ ಶ್ರೀನಿವಾಸ ಮೂರ್ತಿ ಇವರ ಕಾವ್ಯ ನಾಮ ----ವೈದೇಹಿ. 9) ಕ್ರಿ.ಶ.4 ನೇ ಶತಮಾನದ ತಮಿಳು ಕೃತಿ ಶಿಲಪ್ಪದಿಗಾರಂ ನಲ್ಲಿ ಬಳಕೆಯಾದ ಕನ್ನಡ ಪದ ----ಕರುನಾಡರ್. 10) ಕ್ರಿ.ಪೂ.3ನೇ ಶತಮಾನದ ಅಶೋಕನ ಪ್ರಾಕೃತ ಶಾಸನವೊಂದರಲ್ಲಿ ಕಂಡುಬರುವ ಕನ್ನಡ ಪದ----ಇಸಿಲ.

Key points /model questions for assistant professor exam in kea karnataka

1)1915 ರಲ್ಲಿ ರಚನೆಯಾದ   A History of Kanarese  Literature ರಚಿಸಿದವರು ----ಇ.ಪಿ.ರೈಸ್. 2)ಸಂಕ್ಷಿಪ್ತ ಕನ್ನಡ ಸಾಹಿತ್ಯ ಚರಿತ್ರೆ ರಚಿಸಿದವರು ----ಎಂ.ಮರಿಯಪ್ಪ ಭಟ್ಟರು. 3)ಚುಟುಕುಗಳ ಬ್ರಹ್ಮ ಎಂದು ಖ್ಯಾತರಾದವರು----ದಿನಕರ ದೇಸಾಯಿ . 4)'ಕೊನೆಯ ಗಿರಾಕಿ' ಕಥೆ ಬರೆದವರು ----ನಿರಂಜನ. 5)ಪಂಪ ನ ಆಶ್ರಯದಾತ ಅರಸ----ಅರಿಕೇಸರಿ. 6)"ಗೌರ್ಮೆಂಟ್ ಬ್ರಾಹ್ಮಣ "ಕೃತಿಯ ಕರ್ತೃ ----ಅರವಿಂದ ಮಾಲಗತ್ತಿ. 7)"ಮುದ್ರಾಮಂಜೂಷ" ಕೃತಿಗೆ ಮೂಲ ಆಕರ ----ಮುದ್ರಾರಾಕ್ಷಸ. 8) ಕೇಶಿರಾಜ ರಚಿಸಿದ ವ್ಯಾಕರಣ ಕೃತಿ ----"ಶಬ್ದಮಣಿದರ್ಪಣಂ". 9)ಕನ್ನಡದ ಕವಿ ರತ್ನತ್ರಯರು----- ಪಂಪ,ಪೊನ್ನ,ರನ್ನ. 10) "ಹದಿಬದೆಯ ಧರ್ಮ " ರಚಿಸಿದ ಕವಯಿತ್ರಿ ----ಸಂಚಿ ಹೊನ್ನಮ್ಮ.

Model question paper for non technical posts of kpsc karnataka

1) ಸ್ಮಾರ್ಟ್ ಸಿಟಿ ಯೋಜನೆ ವ್ಯಾಪ್ತಿಗೆ ರಾಜ್ಯದ ಈ ಕೆಳಕಂಡ ಯಾವ ಜಿಲ್ಲೆ ಸೇರಿಲ್ಲ? A. ದಾವಣಗೆರೆ B. ಶಿವಮೊಗ್ಗ C. ಬೆಳಗಾವಿ D. ಬೆಂಗಳೂರು ನಗರ 2) 2015 ನೇ ಸಾಲಿನ ಭೀಮಸೇನ ಜೋಷಿ ಪ್ರಶಸ್ತಿಗೆ ಆಯ್ಕೆಯಾದವರು ಯಾರು? A. ಡಾ. ರಾಧಾಕೃಷ್ಣ ---ಕೊಳಲು B. ಉಸ್ತಾದ್ ಅಲಿ ಖಾನ್ --- ತಬಲಾ C. ಪಂಡಿತ್. ರಾಮ್ ನಾರಾಯಣ್ ---- ಸಾರಂಗಿ D. ರಾಜಾರಾಮಣ್ಣ ---ವೀಣೆ 3) ಫೆಬ್ರವರಿ 2016 ರಲ್ಲಿ ಉಪರಾಷ್ಟ್ರಪತಿ ಭೇಟಿ ನೀಡಿದ ದೇಶ ಯಾವುದು  ? A. ಕಾಂಬೋಡಿಯಾ B. ಥೈಲ್ಯಾಂಡ್ C. ಜಪಾನ್ D. ಶ್ರೀಲಂಕಾ 4)  ಅಸ್ಸಾಂ ನಲ್ಲಿ ನಡೆದ 2016 ನೇ ಸಾಲಿನ ದಕ್ಷಿಣ ಏಷ್ಯಾ ಕ್ರೀಡಾಕೂಟ ಉದ್ಘಾಟಿಸಿದವರು ಯಾರು? A. ನರೇಂದ್ರ ಮೋದಿ B. ಪ್ರಣವ್ ಮುಖರ್ಜಿ C. ತರುಣ್ ಗೋಗಾಯಿ D. ಸ್ಮೃತಿ ಇರಾನಿ 5) 2015 ರಲ್ಲಿ ಯಾವ ದೇಶದಲ್ಲಿ ಹಿಂದು ವಿವಾಹ ಕಾಯ್ದೆಯನ್ನು ಜಾರಿಗೆ ತರಲಾಗಿದೆ. A. ಪಾಕಿಸ್ತಾನ B. ಬ್ರಿಟನ್ C. ಯುಎಇ D. ಚೀನಾ 6)  ಮೊದಲ ಜ್ಞಾನಪೀಠಪ್ರಶಸ್ತಿ ಪುರಸ್ಕೃತ ಸಾಹಿತಿ ಓ.ಎನ್.ವಿ.ಕುರುಪ್ ಫೆಬ್ರವರಿ 2016 ರಲ್ಲಿ ನಿಧನರಾದರು. ಇವರು ಯಾವ ಭಾಷೆಯ ಸಾಹಿತಿ? A. ಮಲೆಯಾಲಂ B. ತೆಲುಗು C. ತಮಿಳು D. ಕೊಂಕಣಿ 7) ಬಾಲಿವುಡ್ ಚಿತ್ರ ಸಾಹಿತಿ ಸಮೀರ್ ಅಂಜನ್  ಎಷ್ಟು ಗೀತೆಗಳನ್ನು ರಚನೆ ಮಾಡುವ ಮೂಲಕ ಗಿನ್ನಿಸ್ ದಾಖಲೆಗೆ ಪಾತ್ರ ರಾಗಿದ್ದಾರೆ? A. 3000 B. 3353 C. 3524 D. 3...

Notes for non technical posts of kpsc

1) ಜ್ಞಾನಪೀಠಪ್ರಶಸ್ತಿ ಪುರಸ್ಕೃತ ಕನ್ನಡದ ಮೊದಲ ಸಾಹಿತಿ ಯಾರು? A. ದ.ರಾ. ಬೇಂದ್ರೆ B. ಕುವೆಂಪು C. ವಿ.ಕೃ..ಗೋಕಾಕ D. ಡಿವಿಜಿ 2) ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ದೂರಕಿದ ವರ್ಷ ಯಾವುದು? A. 1966 B.  1967 C.  1968 D.  1969 3) ಬೇಂದ್ರೆಯವರಿಗೆ ಜ್ಞಾನಪೀಠಪ್ರಶಸ್ತಿ ತಂದುಕೊಟ್ಟ ಕೃತಿ ಯಾವುದು? A. ನಾದಲೀಲೆ B. ನಿರಾಭರಣ ಸುಂದರಿ C. ನಾಕುತಂತಿ D. ಗರಿ 4) ವಿ. ಕೃ. ಗೋಕಾಕ ರಿಗೆ ಜ್ಞಾನಪೀಠ ಪ್ರಶಸ್ತಿ  ತಂದುಕೊಟ್ಟ ಕೃತಿ  ಯಾವುದು? A. ಭಾರತ ಸಿಂಧುರಶ್ಮಿ B. ಭಾರತ ರಶ್ಮಿ ಸಿಂಧು C. ದ್ಯಾವಾಪೃಥ್ವಿ D. ಸಮರಸವೇ ಜೀವನ 5) ಚಂದ್ರಶೇಖರ ಕಂಬಾರ ರಿಗೆ ಜ್ಞಾನಪೀಠ ಪ್ರಶಸ್ತಿ ದೊರೆತ ವರ್ಷ A. 2009 B. 2010 C. 2011 D. 2008 Answer 1) B 2) B 3) C 4) A 5) B

Model question paper for non technical post kpsc

 1)ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಯಾರು.? A.ಮನು ಬಳಿಗಾರ್ B. ಪುಂಡಲೀಕ ಹಾಲಂಬಿ C. ಆರ್ ಕೆ ನಲ್ಲೂರು ಪ್ರಸಾದ್  D. ಚಂದ್ರಶೇಖರ್ ಪಾಟೀಲ  2)2014 ರ ಫಿಫಾ  ಪುಟ್ಬಾಲ್ ವಿಶ್ವಕಪ್ ನಲ್ಲಿ ಭಾರತ ಯಾವ ಗುಂಪಿನಲ್ಲಿ ಸ್ಥಾನ ಪಡೆದಿತ್ತು.? A. ಗ್ರೂಪ್ ಎ B. ಗ್ರೂಪ್ ಡಿ C. ಗ್ರೂಪ್ ಎಚ್  D. ಯಾವುದು ಅಲ್ಲ  3) 2016 ರ  ಟಿ.20  ವಿಶ್ವಕಪ್ ನ ಅರ್ಹತಾ ಸುತ್ತಿನಲ್ಲಿ ಈ ಕೆಳಕಂಡ ಯಾವ ದೇಶಗಳು ಪ್ರಧಾನ ಸುತ್ತಿಗೆ ಪ್ರವೇಶ ಪಡೆದಿವೆ. ? A.  ಹಾಲೆಂಡ್ -ಒಮನ್ B.  ಹಾಂಕಾಂಗ್-ಕೀನ್ಯಾ  C.  ಅಫ್ಘಾನಿಸ್ತಾನ- ಬಾಂಗ್ಲಾದೇಶ  D. ಯು.ಎ.ಇ.- ನೆದರ್ ಲ್ಯಾಂಡ್ 

Model question paper for non technical post kpsc

 1)ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಯಾರು.? A.ಮನು ಬಳಿಗಾರ್ B. ಪುಂಡಲೀಕ ಹಾಲಂಬಿ C. ಆರ್ ಕೆ ನಲ್ಲೂರು ಪ್ರಸಾದ್  D. ಚಂದ್ರಶೇಖರ್ ಪಾಟೀಲ  2)2014 ರ ಫಿಫಾ  ಪುಟ್ಬಾಲ್ ವಿಶ್ವಕಪ್ ನಲ್ಲಿ ಭಾರತ ಯಾವ ಗುಂಪಿನಲ್ಲಿ ಸ್ಥಾನ ಪಡೆದಿತ್ತು.? A. ಗ್ರೂಪ್ ಎ B. ಗ್ರೂಪ್ ಡಿ C. ಗ್ರೂಪ್ ಎಚ್  D. ಯಾವುದು ಅಲ್ಲ  3) 2016 ರ  ಟಿ.20  ವಿಶ್ವಕಪ್ ನ ಅರ್ಹತಾ ಸುತ್ತಿನಲ್ಲಿ ಈ ಕೆಳಕಂಡ ಯಾವ ದೇಶಗಳು ಪ್ರಧಾನ ಸುತ್ತಿಗೆ ಪ್ರವೇಶ ಪಡೆದಿವೆ. ? A.  ಹಾಲೆಂಡ್ -ಒಮನ್ B.  ಹಾಂಕಾಂಗ್-ಕೀನ್ಯಾ  C.  ಅಫ್ಘಾನಿಸ್ತಾನ- ಬಾಂಗ್ಲಾದೇಶ  D. ಯು.ಎ.ಇ.- ನೆದರ್ ಲ್ಯಾಂಡ್ 

Notes for non technical posts of kpsc

1)ದೇಶದ ಮೂರನೆಯ ಅತಿ ಸ್ವಚ್ಛ ನಗರ ----ಮಂಗಳೂರು. 2) ವಾರಣಾಸಿಯ ಅಸ್ಸಿಘಾಟ್ ನಲ್ಲಿ ಸೌರಚಾಲಿತ ದೋಣಿಗಳಿಗೆ ಪ್ರಧಾನಿ ಮೋದಿ ಅವರಿಂದ ಚಾಲನೆ. 3)ಕಾಳೇಶ್ವರಂ ನೀರಾವರಿ ಯೋಜನೆ - ತೆಲಂಗಾಣ ರಾಜ್ಯ - ಗೋದಾವರಿ ನದಿಗೆ ಸಂಬಂದಿಸಿದೆ. 4)ವಿಶ್ವ ಭೂ ದಿನ - - ಏಪ್ರಿಲ್ 22. 5)ಪ್ರಾಕೃತಿಕ ವಿಕೋಪ ನಿರೋಧಕ ತಂತ್ರಜ್ಞಾನದ ವಿಶ್ವದ ಪ್ರಥಮ ರೈಲು - - ಚೀನ ದ ಹೈನನ್ ದ್ವೀಪ ದಿಂದ ಸಾನ್ಯಾ ಕ್ಕೆ 653 ಕಿ.ಮಿ.ದೂರ ಚಲನೆ. 6)ಪ್ರಧಾನ ಮಂತ್ರಿ ಉಜ್ವಲ ಯೋಜನೆ - - ಮೇ 01--2016 ರಿಂದ ಉತ್ತರ ಪ್ರದೇಶ ದ ' ಬಲ್ಲಿಯಾ ' ದಲ್ಲಿ ಪ್ರಾರಂಭ. 7)"ಡಾಂಗ್ ಫೆಂಗ್ 41" ಅರ್ಧ ಗಂಟೆಗೆ ಸುಮಾರು 14000 ಕಿ.ಮಿ. ದೂರದ ಗುರಿಯನ್ನು ತಲುಪಬಲ್ಲ  ಚೀನಾದ ಕ್ಷಿಪಣಿ. 8) heart of asia - - April 26 ರಂದು ನವದೆಹಲಿಯಲ್ಲಿ ಪ್ರಾರಂಭ. 9)"ಏಷ್ಯ ಫೆಸಿಫಿಕ್ ಪ್ರಾಪರ್ಟಿ " ಪ್ರಶಸ್ತಿ - - - ಬೆಂಗಳೂರು ಮೂಲದ ಪ್ರೆಸ್ಟೀಜ್ ಗ್ರೂಪ್ 16 ಪ್ರಶಸ್ತಿಗಳನ್ನು ಪಡೆದಿದೆ. 10)ICGS ಶೂರ್ - - ಭಾರತೀಯ ತಟ ರಕ್ಷಣಾ ದಳದ ನೂತನ ಅತ್ಯಾಧುನಿಕ ನೌಕೆ. 11)WHITEHOUSE ನ ಔತಣಕ್ಕೆ ಆಹ್ವಾನ ಪಡೆದ ಬಾಲಿವುಡ್ ನಟಿ - - ಪ್ರಿಯಾಂಕ ಛೋಪ್ರ. 12)  ಉದ್ದೀಪನ ಮದ್ದು ತಡೆ ಕಾಯ್ದೆ ಉಲ್ಲಂಘನೆ ಪಟ್ಟಿಯಲ್ಲಿ ಭಾರತಕ್ಕೆ 3 ನೇ ಸ್ಥಾನ. 13) ಗಡಿ ಭದ್ರತಾ ಪಡೆಯ ನೂತನ ಮುಖ್ಯಸ್ಥರು - - ಕೆ.ಕೆ.ಶರ್ಮ. 14) ಗುಜರಾತ್ ನಲ್ಲಿ ದೇ...

Notes for kpsc group c non technical posts

 1) 2015 ನೇ ಸಾಲಿನಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡದ ಸಾಹಿತಿ.- - - - - ಕೆ.ವಿ.ತಿರುಮಲೇಶ್. 2)ವಿಶ್ವ ವಲಸಿಗರ ದಿನ - - ಡಿಸೆಂಬರ್ 18 3) ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು ವಾಯುಮಾಲಿನ್ಯವಾದ ನಗರ ಎಂಬ ಕುಖ್ಯಾತಿ - - - ಬೆಂಗಳೂರು 4)WTO  ಸಮಾವೇಶ - - ಕೀನ್ಯ ದ ನೈರೋಬಿ 5)2015 ರ ಭುವನ ಸುಂದರಿ  - - ಫಿಲಿಪ್ಪೀನ್ಸ್ ನ ಪಿಯ ಅಲೊಂಜೊ ವುರ್ತಬಕ್. 6)  ರಾಷ್ಟ್ರೀಯ ಗ್ರಾಹಕರ ದಿನಾಚರಣೆ - - ಡಿಸೆಂಬರ್ 22

Model questions for kpsc group c non technical posts

CURRENT AFFAIRS 1)ಪ್ರಪಂಚದ ಮೊಟ್ಟ ಮೊದಲ ಸ್ಯ್ಕಾನಿಂಗ್ ಹೀಲಿಯಂ ಸೂಕ್ಷ್ಮ ದರ್ಶಕ ಕಂಡುಹಿಡಿದವರು - - - - - ಆಸ್ಟ್ರೇಲಿಯಾದ ಪೌಲ್ ದಸ್ತೂರ್. 2)  ಪಾದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲಿ ಶತಕ ಗಳಿಸಿದ ಕೀರ್ತಿ - - - - ದೀಪಕ್ ಶೋಧನ್ 3) ಫೀಫಾ ಗೆ ಉಪಾಧ್ಯಕ್ಷರಾಗಿ ಆಯ್ಕೆಯಾದ ಭಾರತೀಯ - - - - ನ್ಯಾಯಮೂರ್ತಿ ಮುಕುಲ್ ಮುದ್ಗಲ್. 4) ವಿಶ್ವ ಅರಣ್ಯ ದಿನ - - - ಮಾರ್ಚ್ 21...1971 ರಿಂದ ಆಚರಣೆ.  5)ಲಂಡನ್ ನಗರದ ಪ್ರಥಮ ಮುಸ್ಲಿಂ ಮೇಯರ್ ಆಗಿ ಆಯ್ಕೆಯಾದವರು.- - - - ಪಾಕಿಸ್ತಾನ ಮೂಲದ ಸಾದಿಕ್ ಖಾನ್.  6)ICC ಕ್ರಿಕೆಟ್ ಸಮಿತಿಯ ಮುಖ್ಯಸ್ಥರಾಗಿ ಆಯ್ಕೆ ಯಾದ ಕ- - - - - ಅನಿಲ್ ಕುಂಬ್ಳೆ.  2ನೇ ಅವಧಿಗೆ ಆಯ್ಕೆ.  7) ವಿಶ್ವದ ಅತಿ ಉದ್ದದ ರೈಲ್ವೆ ಸುರಂಗ ಮಾರ್ಗ ನಿರ್ಮಾಣವಾಗಿರುವುದು - - - - ಸ್ವಿಟ್ಜರ್ಲ್ಯಾಂಡ್ ನಲ್ಲಿ . 57.1 km ಉದ್ದ. 8)ವಿಶ್ವದ ಅತಿ ಹೆಚ್ಚು ಮಾಲಿನ್ಯ ಇರುವ ನಗರಗಳಳ ಪಟ್ಟಿಯಲ್ಲಿ ಭಾರತದ ನಗರಗಳು ಪಡೆದಿರುವ ಸ್ಥಾನಗಳು ಗ್ವಾಲಿಯರ್ - - 2 ಅಲಹಾಬಾದ್ - - 3 ಪಾಟ್ನಾ - - - 4 ರಾಯಪುರ - - - 5 ದೆಹಲಿ - - - 7 ಬೆಂಗಳೂರು - - - 118 9) ಅತಿ ಹೆಚ್ಚು ಮಾಲಿನ್ಯ ಹೊಂದಿರುವ ನಗರ - - - - ಇರಾನ್ ನ ಝಬೋಲ್. 10)ಜನಸಂಖ್ಯೆ ದೃಷ್ಟಿಯಿಂದ ವಿಸ್ತೀರ್ಣದಲ್ಲಿ ಪ್ರಪಂಚದ ಅತಿ ದೊಡ್ಡ ನಗರ - - - ಟೋಕಿ...

Model questions for kpsc group D non technical posts

Current events 1) 2015 ನೇ ಸಾಲಿನ ಜ್ಞಾನಪೀಠ ಪ್ರಶಸ್ತಿ ಪಡೆದವರು - - - - - ಗುಜರಾತ್ ಸಾಹಿತಿ  - - - ರಘುವೀರ್ ಚೌಧುರಿ. 2)  ಬರಾಕ್ - 8  ಇಸ್ರೇಲ್ ಮತ್ತು ಭಾರತ ಜಂಟಿಯಾಗಿ ಅಭಿವೃದ್ಧಿ ಪಡಿಸಿರುಮ ಕ್ಷಿಪಣಿ. 3)103ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶ ನಡೆದ ಸ್ಥಳ - - - ಮೈಸೂರು. 4) ನ್ಯಾ.ಆರ್. ಎಂ.ಲೋಧಾ ಸಮಿತಿ ಸಂಬಂಧಿಸಿರುವುದು - - -  BCCI ಆಡಳಿತದಲ್ಲಿ ಸುಧಾರಣೆ ತರುವ ಸಲುವಾಗಿ. 5) ಅಮೆರಿಕಾದ ಪೀಪಲ್ಸ್ ಚಾಯ್ಸ್  ಪ್ರಶಸ್ತಿ ಪಡೆದ ಪ್ರಥಮ ಭಾರತೀಯ ನಟಿ - - - - ಪ್ರಿಯಾಂಕ ಚೋಪ್ರಾ. 6)ರಾಷ್ಟ್ರೀಯ ಯುವ ದಿನ ಆಚರಣೆ ಮಾಡುವುದು - - ಜನವರಿ 12 ರಂದು. 7) ಪ್ರಧಾನ ಮಂತ್ರಿ ಫಸಲು ವಿಮಾ ಯೋಜನೆ ಜಾರಿಗೆ ಬಂದದ್ದು - - - ಜನವರಿ 15---2016 ರಿಂದ. 8)ವಿಶ್ವ ಸಂಸ್ಥೆ ತನ್ನ ಸದಸ್ಯ ದೇಶಗಳ  ಆರ್ಥಿಕತೆ ಸುಧಾರಿಸಲು 2016 ರಲ್ಲಿ ನಿರ್ಧರಿಸಿರುವ ಗುರಿಗಳು - - - ಸುಸ್ಥಿರ ಅಭಿವೃದ್ಧಿ ಗುರಿಗಳು - Sustainable Development Goals . 9)HAL  ಹೆಲಿಕಾಪ್ಟರ್ ಉತ್ಪಾದನಾ ಘಟಕ ಪ್ರಾರಂಭವಾದ ಸ್ಥಳ - - - ಬಿದರೆಹಳ್ಳಿ. 10)  ವಿಶ್ವ ಮಾನವ ದಿನಾಚರಣೆ ಆಚರಣೆ - - - ಡಿಸೆಂಬರ್ 29.

Models questions for kpsc group c non technical posts

Current events 1) ಫ್ರೀ ಬೇಸಿಕ್ಸ್ ವಿವಾದ ಸಂಬಂಧಿಸಿರುವುದು.- - - - ಫೇಸ್ ಬುಕ್. 2)TRAI- - - ಭಾರತೀಯ ದೂರವಾಣಿ ನಿಯಂತ್ರಣ ಪಪ್ರಾಧಿಕಾರ. 3)FACEBOOK ನ ಅಧ್ಯಕ್ಷರು ಹಾಗೂ C.E.O. ಮಾರ್ಕ ಜುಕರ್ ಬರ್ಗ. 4)103 ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ನ ಧ್ಯೇಯ ವಾಕ್ಯ - - - Science and Technology for Indigenous development in India. . 5) ದೇಶದ ಮೊದಲ ಸಂಪೂರ್ಣ ಸಾವಯವ ರಾಜ್ಯ - - ಸಿಕ್ಕಿಂ. 6) ಕೃಷಿಕರ ದಿನ - - - ಡಿಸೆಂಬರ್ 23. 7)ಉತ್ತರ ಭಾರತದ ಮೊದಲ ಕೇಬಲ್ ಆಧಾರಿತ ಸೇತುವೆ  - ಅಟಲ್ ಸೇತುವೆ . 8)MUDRA - - - Micro Units Development Refinance Agency. 9) ಕುವೆಂಪು ರಾಷ್ಟ್ರೀಯ ಪ್ರಶಸ್ತಿ 2015 - - ಮರಾಠಿ ಸಾಹಿತಿ ಶ್ಯಾಮಾ ಮನೋಹರ್. 

Model questions for kpsc group c non technical posts.

1)ಯಾವ  ರಾಜ್ಯದಲ್ಲಿ ಆರ್ಥಿಕ ದುರ್ಬಲರಿಗೆ ಉನ್ನತ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ 10 ರಷ್ಟು ಮೀಸಲಾತಿ ಕಲ್ಪಿಸಲಾಗಿದೆ.  - - - - - - - ಗುಜರಾತ್ 2) ಜಪಾನ್ ದೇಶದ ಪ್ರತಿಷ್ಠಿತ ನಾಗರಿಕ ಪ್ರಶಸ್ತಿಯಾದ " ಆರ್ಡರ್ ಆಫ್ ದಿ ರೈಸಿಂಗ್ ಸನ್ ಗೋಲ್ಡ್ ಅಂಡ್ ಸಿಲ್ವರ್ " 2015  ಪಡೆದವರು. - - - - ಎನ್. ಕೆ.ಸಿಂಗ್. 3) 2016ರ ಮೇ ತಿಂಗಳಳ ಮೊದಲ ವಾರದಲ್ಲಿ 1957 ರ ಕಾಯ್ದೆ ಯೊಂದಕ್ಕೆ ರಾಜ್ಯಸಭೆಯಲ್ಲಿ ತಿದ್ದುಪಡಿಗೆ ಒಪ್ಪಿಗೆ ನೀಡಲಾಯಿತು. ಅದು ಸಂಬಂಧಿಸಿರುವುದು - - - - - ಗಣಿ ಮತ್ತು ಖನಿಜ. 4) 2016 ನೇ ಸಾಲಿನ " ನೆಲ್ಸನ್ ಮಂಡೇಲಾ ಗ್ರೇಸ್ ಮಿಷೆಲ್ ಇನ್ನೋವೇಷನ್ " ಪ್ರಶಸ್ತಿ ಪಡೆದ ಪಾಕಿಪಾಕಿಸ್ತಾನದ ಮಾನವ ಹಕ್ಕು ಹೋರಾಟಗಾರ್ತಿ - - - - - ತಬಸ್ಸುಮ್ ಅದ್ನನ್ . 5) ಜುಲೈ ತಿಂಗಳಲ್ಲಿ ಬಿಡುಗಡೆಯಾಗುವ ಸಾನಿಯಾ ಮಿರ್ಜಾ ಅವರ ಆತ್ಮ ಚರಿತ್ರೆ - - - - - ' ACE AGAINST ODDS ' ಏಸ್ ಎಗನೆಸ್ಟ್ ಆಡ್ಸ. 6) 2016 ರ ವಿಶ್ವ ಸ್ನೂಕರ್ ಚಾಂಪಿಯನ್ ಶಿಪ್ ಗೆದ್ದ ಬ್ರಿಟಿಷ್ ಆಟಗಾರ - - - - ಆ ಮಾರ್ಕ ಶೆಲ್ಬಿ. 7) ಭಾರತ ಮತ್ತು ಇಟಲಿ ಗೆ ಸಂಬಂಧಪಟ್ಟ ಆಗಸ್ಟಾ ವೆಸ್ಟ್ ಲ್ಯಾಂಡ್ ಹಗರಣ ಸಂಬಂಧಿಸಿರುವುದು ವಿವಿಐಪಿ ಹೆಲಿಕಾಪ್ಟರ್ ಖರೀದಿ. 8)2016 ನೇ ಸಾಲಿನ ಕಾಮನ್ ವೆಲ್ತ್ ಸಣ್ಣ ಕಥಾ ಪ್ರಶಸ್ತಿ  (ಏಷ್ಯ ವಿಭಾಗ ) ಪಡೆದ ಪರಾಶರ ಕುಲಕರ್ಣಿ ಅವರ ಸಣ್ಣ ಕಥೆ - - - - ಕೌ ಅಂಡ...

THATSAMA-THADBHAVA

PÀ£ÀßqÀ ±À§ÝPÉÆÃ±ÀzÀ°è ¸ÀA¸ÀÌöÈvÀ ¨sÁµÉ¬ÄAzÀ §AzÀÄ ¸ÉÃjPÉÆArgÀĪÀ ¸Á«gÁgÀÄ ±À§ÝUÀ½ªÉ. CªÀÅUÀ¼À£ÀÄß F PɼÀPÀAqÀ ªÀÄÆgÀÄ ªÀUÀðUÀ¼À°è «AUÀr¸À¯ÁVzÉ. 1.    vÀvÀìªÀÄ 2.    vÀzÀãªÀ 3.    ¸ÀªÀÄ ¸ÀA¸ÀÌöÈvÀ vÀvÀìªÀÄ ( vÀvï + ¸ÀªÀÄ) AiÀiÁªÀÅzÉà «PÁgÀªÀ£ÀÄß vÁ¼ÀzÉà ¸ÀA¸ÀÌöÈvÀ ¨sÁµÉAiÀÄ°è ºÉÃVvÉÆÛà ºÁUÉAiÉÄà PÀ£ÀßqÀ PÉÆÃ±ÀPÉÌ §AzÀÄ ¸ÉÃjPÉÆAqÀgÉ CzÀ£ÀÄß vÀvÀìªÀÄ JAzÀÄ PÀgÉAiÀįÁUÀÄvÀÛzÉ. GzÁ:   ¸ÀÆAiÀÄð, £ÀPÀëvÀæ, ZÀAzÀæ, DPÁ±À EvÁå¢. vÀzÀãªÀ (vÀvï + ¨sÀªÀ) ¸ÁPÀµÀÄÖ «PÁgÀUÉÆAqÀÄ PÀ£ÀßqÀ PÉÆÃ±ÀªÀ£ÀÄß ¸ÉÃjPÉÆArgÀĪÀ ±À§ÝUÀ½UÉ vÀzÀãªÀ JAzÀÄ ºÉ¸ÀgÀÄ. GzÁ: wæ±Àư - w¸Àư        ¥ÀæUÀæºÀ   - ºÀUÀÎ        ¸ÀÄßµÁ   - ¸ÉÆ¸É        DPÁ±À   - DUÀ¸À vÀvÀìªÀÄ – vÀzÀãªÀ ¤AiÀĪÀÄUÀ¼ÀÄ: 1.      C) ¸ÀA¸ÀÌöÈvÀ¢AzÀ C®à §zÀ¯ÁªÀuÉ ºÉÆA¢zÀ ±À§ÝUÀ¼ÀÄ.     ªÀiÁ¯É, ¹ÃvÉ, ªÀĺÀvÀÄÛ, ®Që÷ä   D) ¸ÀA¸...